ಕಲೆ ಅಂತರಂಗದ ಆರೋಗ್ಯ ಕಾಪಾಡುವ ಸಾಧನ


Team Udayavani, Feb 6, 2020, 4:14 AM IST

sam-23

ಉಡುಪಿಯ ಯು. ರಮೇಶ್‌ರಾವ್‌ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು. ಇತ್ತೀಚೆಗೆಷ್ಟೇ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಅವರಿಗೆ ಸಂದಿರುವುದು ವಿಶೇಷ. ತಮ್ಮ ಹೊಸತನದ ತುಡಿತ ವನ್ನು ಪ್ರಯತ್ನಿಸುತ್ತಾ ಸಮಕಾಲೀನ ಕಲೆಯ ಮೂಲಕ ಗುರುತಿಸಿ ಕೊಂಡವರು. ಕಲೆಯೆಂಬುದು ಅಂತರಂಗ ವನ್ನು ಸದಾ ಆರೋಗ್ಯಕರ ವಾಗಿ ಇಟ್ಟು ಕೊಳ್ಳಲು ಇರುವ ಒಂದು ಸಾಧನ ಎಂಬುದು ಅವರ ನಂಬಿಕೆ. ಸುದಿನದ ಮಾತು ಮಂದಾರ ಅಂಕಣದೊಂದಿಗೆ ಮಾತನಾಡಿದ್ದಾರೆ ಅವರು.

 ಹೊಸ ಕಲಾವಿದರಿಗೆ, ಚಟುವಟಿಕೆಗಳಿಗೆ ಸ್ಪಂದನೆ ಹೇಗೆ ಇದೆ?
ಅದೂ ಸಹ ಪರವಾಗಿಲ್ಲ. 1980ರ ಬಳಿಕ ಬಹಳಷ್ಟು ಬದಲಾವಣೆಯಾಗಿದೆ. ಯಾವುದೇ ಕಲೆ ಇರಲಿ, ಅದು ಚಿತ್ರಕಲೆಯಷ್ಟೇ ಅಲ್ಲ; ಲಲಿತಕಲೆ ಇರಬಹುದು. ಅದು ಬೆಳೆಯಲು ಜನರ ಸ್ಪಂದನೆ ತೀರಾ ಅವಶ್ಯ. ನಾವೂ ಸಂಘಟನೆಗಳು ಮತ್ತು ಕಲಾವಿದರೂ ಸಹ ಎಡವುತ್ತೇವೆ. ಜನರಿಗೆ ಒಮ್ಮೆಲೆ ಕಲೆಯ ಮೇಲೆ ಆಸಕ್ತಿ ಮೂಡುವುದಿಲ್ಲ. ಹಾಗೆಯೇ ಕಲಾಸಕ್ತರೂ ಒಮ್ಮೆಲೆ ಕಲಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಒಪ್ಪಿ ಬಿಡುವುದಿಲ್ಲ. ಅಂಥ ಸಂದರ್ಭದಲ್ಲಿ ನಾವೂ ಹಲವು ಬಾರಿ ಕಲಾಸಕ್ತರನ್ನು ಭೇಟಿ ಮಾಡಿ, ಅವರಲ್ಲೂ ಒಂದು ಪ್ರೋತ್ಸಾಹಿಸುವಂಥ ಅಭಿರುಚಿಯನ್ನು ಹೆಚ್ಚಿಸಬೇಕು. ಇದರರ್ಥ ಅವರಲ್ಲಿ ಅಭಿರುಚಿಯ ಕಿಡಿ ಇರುತ್ತದೆ, ಅದನ್ನು ದೊಡ್ಡದು ಮಾಡಬೇಕು. ಅದಕ್ಕೆ ನಮಗೂ ಸಹನೆ ಇರಬೇಕು. ಸತತವಾಗಿ ಪ್ರಯತ್ನಿಸಿದರೆ ಅವರು ನಮಗೆ ಸಹಕರಿಸುತ್ತಾರೆ. ಒಮ್ಮೆ ಅವರ ಸಹಕಾರ ಆರಂಭವಾದರೆ ಮತ್ತೆ ನಿಲ್ಲುವು ದಿಲ್ಲ. ಒಬ್ಬ ಕಲಾವಿದ ಅಥವಾ ಒಂದು ಸಂಘಟನೆಯಿಂದ ಏನೂ ಆಗದು. ಕಲಾಸಕ್ತರ ಪ್ರೋತ್ಸಾಹ ಬೇಕೇ ಬೇಕು. ಇದೇ ಸಂದರ್ಭದಲ್ಲಿ ಕಲಾ ಸಂಘಟನೆ ಗಳ ಮುನ್ನಡೆಸುವವರೂ ಬೇಕು.

 ಕಲೆಯನ್ನು ಪಸರಿಸಲು ಏನುಮಾಡಬೇಕು?
ಬಹಳ ವರ್ಷಗಳಿಂದ ಆಗ್ರಹಿಸುತ್ತಿರುವಂತೆ ಕಲಾ ಶಿಕ್ಷಕರ ನೇಮಕ ಸಾಧ್ಯವಾಗಬೇಕು. ಇಂದಿಗೂ ನಮ್ಮ ಶಾಲೆಗಳಲ್ಲಿ ಕಲಾ ಶಿಕ್ಷಕರು ಇಲ್ಲ. ಎಲ್ಲೋ ಕೆಲವೆಡೆ ಇರಬಹುದು. ಅದರೆ ಎಲ್ಲಾ ಕಡೆ ಇಲ್ಲ. ಮಕ್ಕಳಿಗೆ ಕಲಾಭಿರುಚಿ ಬೆಳೆಸುವ ವಯಸ್ಸಿನಲ್ಲಿ ಏನಾದರೂ ಮಾಡಬೇಕು. ಅದು ಸಾಧ್ಯವಾಗುತ್ತಿಲ್ಲ.

 ಬೇರೆ ಮಾರ್ಗಗಳು ಇವೆಯೇ?
ಒಂದು ಮಕ್ಕಳಿಗೆ ಕಲಾಭಿರುಚಿ ಬೆಳೆಸುವುದು. ಮತ್ತೂಂದು- ಜನರಲ್ಲಿ ಕಲಾಭಿರುಚಿ ಬೆಳೆಸಬೇಕು. ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ ಎರಡು ಕಲಾಕೃತಿಗಳು ಇಟ್ಟುಕೊಳ್ಳುವಂತಾಗಬೇಕು. ಅದು ಬರೀ ಚಿತ್ರಕೃತಿಯೆಂದೇ ಅಲ್ಲ, ಶಿಲ್ಪ ಕೃತಿ ಇರಬಹುದು..ಏನೂ ಆಗಬಹುದು. ಒಬ್ಬ ಕಲಾವಿದನ ಹೊಸ ಬೆಳಕಿನಲ್ಲಿ ಮೂಡಿದ ದೇವರ ಚಿತ್ರವೂ ಒಂದು ಕಲಾಕೃತಿ. ಅಂಥದೊಂದು ಪ್ರೇರಣೆಯನ್ನು ಮೂಡಿಸಲು ನಮ್ಮಿಂದ ಸಾಧ್ಯವಾಗಬೇಕು. ಸೌಂದರ್ಯ ಪ್ರಜೆ ಇರುವ ಪ್ರತಿಯೊಬ್ಬರ ಮನೆಯಲ್ಲೂ ಇದು ಸಾಧ್ಯ. ಅದರರ್ಥ ಸೌಂದರ್ಯ ಪ್ರಜ್ಞೆ ಕೆಲವರಿಗಷ್ಟೇ ಇರುತ್ತದೆಂದಲ್ಲ; ನಾವೂ ಎಲ್ಲರಲ್ಲೂ ಮೂಡಿಸಲು ಪ್ರಯತ್ನಿಸಬೇಕು.

 ಕಲಾಕೃತಿ ಎಂಬುದು ಯಾವಾಗ ಇಷ್ಟವಾಗುತ್ತದೆ?
ಯಾವಾಗ ಅದರಲ್ಲಿ ಹೊಸತನವಿರುತ್ತದೋ ಆಗ ಎಲ್ಲರಿಗೂ ರುಚಿಸುತ್ತದೆ. ಅದು ದೇವರ ಕಲಾಕೃತಿ ಇರಲಿ, ಪ್ರಾಣಿ ಚಿತ್ರವಿರಲಿ, ಪ್ರಕೃತಿ ಇರಲಿ..ಯಾವುದೇ ಇದ್ದರೂ ಅದರಲ್ಲಿ ಹೊಸತನ ಇರಬೇಕು. ಹೊಸ ದೃಷ್ಟಿ ಇರಬೇಕು. ಯಾರಿಗೇ ಆಗಲಿ ಕುತೂಹಲ ಮೂಡಬೇಕಾದರೆ ಹೊಸತನ ಇರಲೇಬೇಕು. ಉದಾಹರಣೆಗೆ ರವಿವರ್ಮನ ಕಲಾಕೃತಿಯನ್ನೇ ಮತ್ತೂಬ್ಬ ಬಿಡಿಸಿದರೆ ಅದರಲ್ಲಿ ಹೊಸತನ ಏನು? ಅದು ಹೇಗೆ ಹೊಸತನ? ಹಾಗಾಗಿ, ಹೊಸತನವಿದ್ದರೆ ಆ ಕಲಾಕೃತಿ ಎಲ್ಲರಿಗೂ ಇಷ್ಟವಾಗುತ್ತದೆ.

 ಒಂದು ಕಲಾಕೃತಿಯಲ್ಲಿ ಪರಿಪೂರ್ಣತೆ ಎಂಬುದು ಇದೆಯೇ?
ನನ್ನ ದೃಷ್ಟಿಯಲ್ಲಿ ಇಲ್ಲ. ಒಬ್ಬ ಕಲಾವಿದ ಬಿಡಿಸುವ ಚಿತ್ರ ಅದು ಅವನ ಅನುಭವದಲ್ಲಿ ಸಿಕ್ಕದ್ದರ ಅಭಿವ್ಯಕ್ತಿಯೇ ಹೊರತು ಅದು ಎಲ್ಲರ ಅಭಿವ್ಯಕ್ತಿಯಲ್ಲ. ಅವನು ಕಂಡ ಭಾವವನ್ನು ಬಿಡಿಸುತ್ತಾನೆ ; ಅದು ಉಳಿದವರಿಗೆ ಬೇರೆ ಬಗೆಯಲ್ಲೇ ತೋರಬಹುದು, ಅರ್ಥೈಸಬಹುದು. ಹಾಗಾಗಿ ಒಬ್ಬ ಕಲಾವಿದನ ಅಭಿವ್ಯಕ್ತಿ ಸಾಮೂಹಿಕ ಅಭಿವ್ಯಕ್ತಿಯಾಗದ ಕಾರಣ ಪರಿಪೂರ್ಣತೆ ಇರಲು ಸಾಧ್ಯವಿಲ್ಲ. ಜತೆಗೆ ನನ್ನ ದೃಷ್ಟಿಯಲ್ಲಿ ಪರಿಪೂರ್ಣತೆ ಎಂಬುದೂ ಇರಬಾರದು.

ಟಾಪ್ ನ್ಯೂಸ್

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.