ಪ್ರಕೃತಿಪ್ರಿಯರ ಮನಸೂರೆಗೊಳ್ಳುವ ಚಾರ್ಮಾಡಿಯ ಚೆಲುವು


Team Udayavani, Oct 1, 2019, 7:15 PM IST

charmadi

ಬದುಕಿನ ದಿನನಿತ್ಯದ ಜಂಜಾಟದಲ್ಲಿ ಸ್ವಲ್ಪ ರಿಲಾಕ್ಸ್ ಆಗಬೇಕು. ಜೀವನದಲ್ಲಿ ನಾನಾ ತರದ ಒತ್ತಡಗಳ ಮದ್ಯೆ ಸ್ವಲ್ಪ ರಿಲಾಕ್ಸ್ ಆಗೋಣ ಎಂಬ ಬಯಕೆಯಿಂದ ಹಚ್ಚ ಹಸಿರಿನಿಂದ ಕೂಡಿದ ಪ್ರದೇಶಗಳಿಗೆ ತೆರಳಲು ಮನಸ್ಸು ಕಾಡುತ್ತದೆ. ನಮ್ಮ ಮನಸ್ಸಿನ ಒತ್ತಡವನ್ನು ತಣಿಸುವ ಅಘೋಘ ಶಕ್ತಿ ಪರಿಸರಕ್ಕೆ ಇದೆ.

ಹಾಗಿದ್ದರೆ ನೀವು ಎಲ್ಲಾದರೂ ಹಚ್ಚ ಹಸುರಿನ ತಾಣಕ್ಕೆ ಹೋಗಬೇಕನಿಸಿದರೆ ಚಾರ್ಮಾಡಿಗೆ ಹೋಗಿ ಬನ್ನಿ. ಮೈ ಮನಸ್ಸು ರಿಲಾಕ್ಸ್ ಆಗುತ್ತದೆ. ಅಂದ ಹಾಗೆ ಈ ಚಾರ್ಮಾಡಿ ಅನ್ನೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಹಳ್ಳಿ. ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ತೆರಳುವ ರಸ್ತೆಯ ಮದ್ಯೆ ಈ ಚಾರ್ಮಾಡಿ ಘಾಟ್ ಸಿಗುತ್ತದೆ.

ಎಲ್ಲಾ ಸಮಯದಲ್ಲಿ ಈ ಚಾರ್ಮಾಡಿ ಘಾಟ್ ನಮ್ಮನ್ನು ಸೆಳೆಯುತ್ತದೆ ಯಾದರೂ ಮಳೆಗಾಲದಲ್ಲಿ ವಿಶೇಷವಾಗಿ ಈ ಘಟ್ಟ ಪ್ರದೇಶಕ್ಕೆ ವಿಶೇಷ ಜೀವ ಕಳೆ ಬಂದಿರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ಕೊಡುವುದು ಸೂಕ್ತ. ಅಲ್ಲಲ್ಲಿ ಹರಿಯುವ ಪುಟ್ಟ ಪುಟ್ಟ ಜಲಪಾತಗಳು ನೀವು ಸಾಗುವಾಗ ನಿಮ್ಮನ್ನು ಆನಂದಮಯಗೊಳಿಸಲು ತಯಾರಾಗಿರುತ್ತದೆ. ಬೆಟ್ಟದಾಚೆ ಕಣ್ಣು ಹಾಯಿಸಿದರೆ ಹಾಲಿನಂತೆ ನೊರೆ ನೊರೆಯಾಗಿ ಹರಿಯುತ್ತಿರುವ ಜಲಪಾತಗಳು ಕಣ್ಣಿಗೆ ಆನಂದಮಯ. ಚಾರ್ಮಾಡಿ ಘಾಟ್ಗೆ ನೀವು ಜೀಪ್ ಅಥವಾ ಬೈಕ್ ಮೂಲಕ ಹೋಗುವುದು ಉತ್ತಮ. ಸೈಕಲಿಂಗ್ ಮಾಡಲು ಈ ತಾಣ ಅದ್ಭುತವಾಗಿದೆ. ಆದರೆ ಸ್ವಲ್ಪ ಜಾಗೃತೆ ಇರಬೇಕು. ಮಳೆಗಾಲದಲ್ಲಿ ನೀವು ಈ ತಾಣಕ್ಕೆ ಹೋಗುವಾಗ ಅಲ್ಲಿನ ಪರಿಸ್ಥಿಯನ್ನು ತಿಳಿದುಕೊಂಡು ಹೋಗುವುದು ಉತ್ತಮ. ಏಕೆಂದರೆ ಕೆಲವೊಮ್ಮೆ ಭಾರಿ ಮಳೆಯಿಂದ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ.

ಚಾರ್ಮಾಡಿ ಕಣ್ಣಿಗೆ ಮುದ ನೀಡುವ ಪ್ರದೇಶ ಮಾತ್ರವಲ್ಲ ಬದಲಾಗಿ ಆನೇಕ ವೈವಿಧ್ಯ ಜೀವರಾಶಿಗಳು ಅಪರೂಪದ ಸಸ್ಯಗಳು, ಜೌಷಧೀಯ ಗುಣವುಳ್ಳ ಸಸ್ಯಗಳನ್ನು ಹೊಂದಿದ ಶ್ರೀಮಂತ ಸಂಪತ್ತಿನ ತಾಣವಾಗಿದೆ. ಒಂದು ವೇಳೆ ನೀವು ಚಾರ್ಮಾಡಿ ಮಾರ್ಗವಾಗಿ ಲ್ಲಿಗಾದರೂ ಪ್ರಯಾಣ ಬೆಳೆಸುತ್ತಿದ್ದೀರಿ ಅಂದರೆ ನಿಮ್ಮ ವಾಹನಗಳನ್ನು ಸ್ವಲ್ಪ ಬದಿಗೆ ಹಾಕಿ. ಚಾರ್ಮಾಡಿಯ ಸೊಬಗನ್ನು ಕಣ್ತುಂಬಿಕೊಳ್ಳಿ.

ಚಾರ್ಮಾಡಿ ಘಾಟ್ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಚಿಕ್ಕಮಗಳೂರುಗಳಿಂದ 280, 205, 95 ಹಾಗೂ 60 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರಿನಿಂದ ಹಾಸನ, ಬೇಲೂರು, ಮೂಡಿಗೆರೆ, ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ತಲುಪಿದರೆ, ಮಂಗಳೂರಿನಿಂದ ಬಂಟ್ವಾಳ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಮಾರ್ಗವಾಗಿ ಚಾರ್ಮಾಡಿ ಘಾಟನನ್ನು ತಲುಪಬಹುದು.

ಇನ್ನು ನೀವು ಚಾರ್ಮಾಡಿಯಲ್ಲಿ ಮುಂದಕ್ಕೆ ಹೋದರೆ ಕೊಟ್ಟಿಗೆ ಹಾರ ಎಂಬ ಹಳ್ಳಿ ಸಿಗುತ್ತದೆ. ಈ ಘಟ್ಟ ಪ್ರದೇಶದಲ್ಲಿ ಒಂದು ರೀತಿಯ ಹಿತವಾದ ತಂಪು ವಾತಾರಣ ನಿಮ್ಮ ಮೈ ಮನಗಳಲ್ಲಿ ರೋಮಾಂಚನಗೊಳಿಸುವುದನ್ನು ನೀವು ಅನುಭವಿಸಲೇ ಬೇಕು. ಕೊಟ್ಟಿಗೆ ಹಾರದಲ್ಲಿ ನೀರು ದೋಸೆ ಸ್ಪೆಶಾಲಿಟಿ. ಅಲ್ಲಿನ ಹಿತವಾದ ಚಳಿಗೆ ಬೆಚ್ಚಗಿನ ನೀರು ದೋಸೆ ನನಿಮ್ಮ ನಾಲಿಗೆಗೆ ಮತ್ತಷ್ಟು ರುಚಿಕರವನ್ನಾಗಿಸುತ್ತದೆ. ಅಲ್ಲಿ ನೀವು ನೀರು ದೋಸೆಯ ರುಚಿಯನ್ನು ಸವಿಯಲೇ ಬೇಕು. ಒಟ್ಟಿನಲ್ಲಿ ನಿಮ್ಮ ಮನದ ಹಸಿವವನ್ನು ಕಳೆಯಲು ಚಾರ್ಮಾಡಿ ಘಾಟ್ ಹೊಟ್ಟೆಯ ಹಸಿವನ್ನು ತಣಿಸಲು ಕೊಟ್ಟಿಗೆಹಾರದ ನೀರು ದೋಸೆ ಹೇಳಿಮಾಡಿಸಿದ್ದು.

ಪೂರ್ಣಿಮಾ ಪೆರ್ಣಂಕಿಲ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.