ಶೂಟಿಂಗ್ ಮುಗಿಸಿ ಎದ್ದು ನಿಂತ ಬೆಲ್ಚಪ್ಪ !
Team Udayavani, Mar 7, 2019, 7:45 AM IST
ರಜನೀಶ್ ದೇವಾಡಿಗ ಅವರ ‘ಬೆಲ್ಚಪ್ಪ’ ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದೆ. ಚಿತ್ರದ ತಯಾರಿ ಕುರಿತ ಅಂತಿಮ ಸಿದ್ಧತೆಯಲ್ಲಿರುವ ಚಿತ್ರತಂಡ ಆದಷ್ಟು ಬೇಗೆ ತೆರೆಯ ಮೇಲೆ ಬರುವ ಕುತೂಹಲದಲ್ಲಿದೆ. ಅಂದಹಾಗೆ, ಇದೊಂದು ವಿಭಿನ್ನ ಕಥಾನಕವನ್ನು ಹೊಂದಿರುವ ಸಿನೆಮಾ. ರಜನೀಶ್ ದೇವಾಡಿಗ ಮತ್ತು ಯಶಸ್ವಿ ದೇವಾಡಿಗ ಅವರು ಪ್ರಧಾನ ಭೂಮಿಕೆಯಲ್ಲಿ ಈ ಸಿನೆಮಾದಲ್ಲಿದ್ದಾರೆ. ಹಾಸ್ಯ ಪ್ರಧಾನವಾಗಿರುವ ಈ ಚಿತ್ರದಲ್ಲಿ ಅರವಿಂದ ಬೋಳಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಕಾಮಿಡಿಗೇನು ಇಲ್ಲಿ ಕೊರತೆ ಇಲ್ಲ ಎಂದೇ ಸ್ಪಷ್ಟವಾದಂತಾಗಿದೆ. ತುಳುವಿನಲ್ಲಿ ‘ಬೆಲ್ಚಪ್ಪ’ ಅಂದರೆ ಬೆದರು ರೂಪ ಎಂದು ಕೂಡ ಹೇಳುತ್ತಾರೆ.
ಗದ್ದೆ- ತೋಟ ಇರುವವರಿಗೆ ಅಥವಾ ತರಕಾರಿ ಮಾಡುವವರಿಗೆ ಬೆಲ್ಚಪ್ಪನ ಬಗ್ಗೆ ಪರಿಚಯ ಇದೆ. ಪ್ರಾಣಿಗಳು ತಮ್ಮ ಕೃಷಿಯನ್ನು ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂಬ ಕಾರಣದಿಂದ ಬೆಲ್ಚಪ್ಪನನ್ನು ಇರಿಸಲಾಗುತ್ತದೆ. ಹಾಗೆಂದು ‘ಬೆಲ್ಚಪ್ಪ’ ಪ್ರಾಣಿಗಳ ವಿರುದ್ಧ ಹೋರಾಡಲು ಆಗುವುದಿಲ್ಲ. ಅಂದರೆ ಕೇವಲ ಹೆದರಿಕೆಗಾಗಿ ಮಾತ್ರ ಬಳಕೆಯಾಗುವ ವಸ್ತು ಎಂಬುದು ಸಾಮಾನ್ಯ ಅರ್ಥ. ಇದೇ ಸಿನೆಮಾದ ಕಥೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಈಗಾಗಲೇ ‘ಕೋರಿ ರೊಟ್ಟಿ’ ಸಿನೆಮಾದ ಮೂಲಕ ಗಮನ ಸೆಳೆದಿರುವ ರಜನೀಶ್ ದೇವಾಡಿಗ ಅವರಿಗೆ ಇದು ಎರಡನೇ ಅಗ್ನಿ ಪರೀಕ್ಷೆಯೂ ಹೌದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್