ಸೆನ್ಸಾರ್ ಪಾಸಾದ “ಬೆಲ್ಚಪ್ಪ’
Team Udayavani, May 23, 2019, 6:00 AM IST
“ಕೋರಿರೊಟ್ಟಿ’ ಮೂಲಕ ಮನೆ ಮಾತಾದ ಉಡುಪಿಯ ರಜನೀಶ್ ನಿರ್ದೇಶನದ “ಬೆಲ್ಚಪ್ಪ’ ಸಿನೆಮಾ ಬಿಡುಗಡೆಯ ಹಂತದಲ್ಲಿದೆ. ನಟನಾಗಿ ಬೆಳೆದರೂ ಕೂಡ ಅವರಿಗೆ ಮುಖ್ಯ ಗುರಿ ಇದ್ದದ್ದು ನಿರ್ದೇಶಕನಾಗಬೇಕೆಂದು. ತಾನು ಪರದೆಯಲ್ಲಿ ಕಾಣುವ ಬದಲು ಹಲವು ಪ್ರತಿಭೆಗಳನ್ನು ಪರದೆಯಲ್ಲಿ ತೋರಿಸಬೇಕು ಎಂಬುದು ಅವರ ಕನಸಾಗಿತ್ತು.
ಇಂತಹ ಸಂದರ್ಭದಲ್ಲಿಯೇ ಈಗ ಅವರ ಬೆಲ್ಚಪ್ಪ ರೆಡಿಯಾಗಿದೆ. ಸೆನ್ಸಾರ್ನಲ್ಲಿ ಯು ಸರ್ಟಿಫಿಕೇಟ್ ಪಡೆದಿದೆ. ರೋಗದ ವಿರುದ್ಧದ ಕಥೆಯನ್ನು ಹೊಂದಿದೆ. ಇಲ್ಲಿ ಹಾಸ್ಯ, ಕಥೆ, ಸಂದೇಶ ಹೀಗೆ ಎಲ್ಲವೂ ಇದೆ.
ತುಳು ಸಂಸ್ಕೃತಿ ಮತ್ತು ಕೃಷಿಗೆ ಹತ್ತಿರವಿರುವ “ಬೆಲ್ಚಪ್ಪ’ ಶಬ್ದ ಕೇಳಲು ತಮಾಷೆಯಂತೆ ಕಂಡರೂ ಇದರ ಹಿಂದೆ ಉತ್ತಮ ಕಥೆಯಿದೆ ಮತ್ತು ನೋವಿನ ಎಳೆಯಿದೆ. ಇದರಲ್ಲಿ ಕಥೆಯೇ ನಾಯಕನೇ ಹೊರತು ಯಾವುದೇ ಒಂದು ಪಾತ್ರವಲ್ಲ. ಅರವಿಂದ ಬೋಳಾರ್ ಪ್ರಮುಖ ಪಾತ್ರದಲ್ಲಿದ್ದು, ಪೋಷಕ ಪಾತ್ರ ನಾನು ಮಾಡಿದ್ದೇನೆ. ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಸುಕನ್ಯಾ ಮುಂತಾದವರು ಸಿನೆಮಾದಲ್ಲಿದ್ದಾರೆ ಎನ್ನುತ್ತಾರೆ ರಜನೀಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ