ಸಿನೆಮಾ ಶೂಟಿಂಗ್‌ ಅನುಮತಿ ಇನ್ನು ಸುಲಭ!


Team Udayavani, Feb 7, 2019, 7:55 AM IST

february-10.jpg

ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದ ತುಳು ಚಿತ್ರಗಳು ಬರುತ್ತಿರುವ ಜತೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳು ದೇಶದ ಮೂಲೆ ಮೂಲೆಯಲ್ಲಿರುವವರಿಗೆ ಇಷ್ಟವಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರೀಕರಣ ಮಾಡುವ ಯೋಜನೆಯಲ್ಲಿ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಗೆ ಬಂದಾಗ ಪ್ರವಾಸಿ ತಾಣಗಳಿಗೆ ನೀಡಬೇಕಾದ ದುಬಾರಿ ಹಣದ ವಿವರ ಕೇಳಿದಾಗಲೇ ಚಿತ್ರತಂಡಕ್ಕೆ ಶಾಕ್‌..!

ಯಾಕೆಂದರೆ ಸುಲ್ತಾನ್‌ಬತ್ತೇರಿ ಸೇರಿದಂತೆ ಇಲ್ಲಿನ ಒಂದೊಂದು ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ನಡೆಸಬೇಕಾದರೆ ಸಂಬಂಧಪಟ್ಟ ಇಲಾಖೆಗಳಿಗೆ ಅನುಮತಿಗಾಗಿ ದುಬಾರಿ ಹಣ ನೀಡಬೇಕಾಗಿದೆ. ಜತೆಗೆ ಹಣಕೊಟ್ಟರೂ ಅನುಮತಿಗಾಗಿ ದಿನಗಟ್ಟಲೇ ಕಾಯಬೇಕಾಗಿದೆ..!

ಇಂತಹ ಸಮಸ್ಯೆಗಳಿಂದ ನಲುಗುತ್ತಿದ್ದ ತುಳು ಸಿನೆಮಾ ಲೋಕಕ್ಕೆ ಇದೀಗ ಕೇಂದ್ರ ಸರಕಾರದ ಬಜೆಟ್ ಹೊಸ ಆಶಾಭಾವನೆ ಮೂಡಿಸಿದೆ. ಸಿನೆಮಾ ಶೂಟಿಂಗ್‌ ಮಾಡಲು ಒಂದೇ ಅನುಮತಿ ನೀಡುವ ಏಕಗವಾಕ್ಷಿ ನಿಯಮ ಜಾರಿಗೆ ತರಲು ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ. ಹೊರದೇಶದವರು ಭಾರತಕ್ಕೆ ಬಂದು ಶೂಟಿಂಗ್‌ ಮಾಡುವು ದಾದರೆ ಸದ್ಯ ಈ ನಿಯಮ ಜಾರಿಯಲ್ಲಿದೆ. ಇದನ್ನು ಭಾರತದೊಳಗೆ ಶೂಟಿಂಗ್‌ ಮಾಡುವವರಿಗೆ ಅನ್ವಯ ಮಾಡುವುದು ಕೇಂದ್ರ ಬಜೆಟ್‌ನ ಆಸಕ್ತಿ.

ಅಂದಹಾಗೆ, ಸದ್ಯ ಕರ್ನಾಟಕದಲ್ಲಿ ವಾರ್ತಾ ಇಲಾಖೆಯ ಮೂಲಕ ಏಕ ಅನುಮತಿ ನೀಡಲಾಗುತ್ತಿದೆ. ಅಂದರೆ ಒಂದು ಸಿನೆಮಾ ಶೂಟಿಂಗ್‌ ಮಾಡಬೇಕಾದರೆ ವಾರ್ತಾ ಇಲಾಖೆಯಲ್ಲಿ ನಿಗದಿತ ಹಣವನ್ನು ಪಾವತಿಸಿ, ಅನುಮತಿ ಪಡೆಯಬೇಕಾಗುತ್ತದೆ. ಆ ಬಳಿಕ ಶೂಟಿಂಗ್‌ ಮಾಡಬಹುದು. ಬೆಂಗಳೂರಿನಲ್ಲಿ ಇದರ ಕೇಂದ್ರ ಕಚೇರಿಯಿದೆ. ಅನುಮತಿ ಪಡೆದ ಬಳಿಕ ಶೂಟಿಂಗ್‌ ಮಾಡಬಹುದು. ಆದರೆ, ತುಳು ಸಿನೆಮಾದವರು ಹೀಗೆ ಅನುಮತಿ ಪಡೆದ ಬಳಿಕ ಮಂಗಳೂರಿನ ರಸ್ತೆಯಲ್ಲಿ ಶೂಟಿಂಗ್‌ ಮಾಡಬೇಕಾದರೆ ಮಂಗಳೂರು ಪಾಲಿಕೆ, ಸಂಚಾರಿ ಪೊಲೀಸರು ಸೇರಿದಂತೆ ಬೇರೆ ಬೇರೆ ವಿಭಾಗ, ಇಲಾಖೆಯಿಂದ ಅನುಮತಿ ಪಡೆಯಬೇಕು. ಇದು ತುಳು ಸಿನೆಮಾ ಮಾಡುವವರಿಗೆ ದೊಡ್ಡ ತಲೆನೋವು.

ಒಂದೊಂದು ಪ್ರವಾಸಿ ತಾಣದ ಉಸ್ತುವಾರಿಯನ್ನು ಪ್ರತ್ಯೇಕವಾದ ಇಲಾಖೆಗಳು ನೋಡಿಕೊಳ್ಳುತ್ತವೆ. ಅಲ್ಲಿ ಚಿತ್ರೀಕರಣ ನಡೆಸಬೇಕಾದರೆ ಸಂಬಂಧಪಟ್ಟ ಇಲಾಖೆಯ ಮೂಲಕವೇ ಅನುಮತಿ ಹಾಗೂ ದರ ನಿಗದಿಯಾಗುತ್ತದೆ. ದೇವಸ್ಥಾನಗಳ ಶೂಟಿಂಗ್‌ ಸಮಯದಲ್ಲಿ ಮುಜರಾಯಿ, ಅರಣ್ಯದಲ್ಲಿ ಶೂಟಿಂಗ್‌ ಆದರೆ ಅರಣ್ಯ ಇಲಾಖೆ, ಪ್ರಾಚೀನ ಸೌಂದರ್ಯದ ಸ್ಥಳದ ಚಿತ್ರೀಕರಣಕ್ಕೆ ಪ್ರಾಚ್ಯ ಇಲಾಖೆ… ಹೀಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಆದರೆ, ಅನುಮತಿಗಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಇರುವುದರಿಂದ ತುಳು ಚಿತ್ರತಂಡಗಳು ಸಮಸ್ಯೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಬಜೆಟ್ ಆಶಾಭಾವನೆ ಮೂಡಿಸಿದೆ. ಆದರೆ, ಇದರಲ್ಲಿ ಇನ್ನು ಯಾವ ನಿಯಮಾವಳಿ ಸೇರಲಿದೆ ಎಂಬುದನ್ನು ಇನ್ನಷ್ಟೇ ತಿಳಿದುಕೊಳ್ಳಬೇಕಿದೆ.

ರಿಯಾಯಿತಿ ನೀಡಿದರೆ ಉತ್ತಮ
ಸದ್ಯ ಒಂದೊಂದು ಇಲಾಖೆಯಿಂದ ಅನುಮತಿ ಪಡೆದುಕೊಂಡು ಸಿನೆಮಾ ಶೂಟಿಂಗ್‌ ಮಾಡಬೇಕಾಗುತ್ತದೆ. ಇದೆಲ್ಲವನ್ನು ಒಂದೇ ಕಡೆ ಮಾಡಿ ಅನುಮತಿ ಸುಲಭ ನೆಲೆಯಲ್ಲಿ ಸಿಗುವಂತಾದರೆ ಉತ್ತಮ. ತುಳು ಪ್ರಾದೇಶಿಕ ಆಗಿರುವ ನೆಲೆಯಲ್ಲಿ ಸ್ವಲ್ಪ ರಿಯಾಯಿತಿ ನೀಡಿದರೆ ಉತ್ತಮ ಎನ್ನುತ್ತಾರೆ ತುಳು ಚಿತ್ರ ನಿರ್ದೇಶಕ ದೇವದಾಸ್‌ ಕಾಪಿಕಾಡ್‌.

ಹಲವು ಇಲಾಖೆಗಳ ಅನುಮತಿ ಅಗತ್ಯ
ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಶೂಟಿಂಗ್‌ ಮಾಡುವವರಿಗೆ ಈ ನಿಯಮ ಸುಲಭವಾಗಬಹುದು. ರಾಜ್ಯದಲ್ಲಿ ಸದ್ಯಕ್ಕೆ ಏಕಗವಾಕ್ಷಿ ನಿಯಮವಿದೆ. ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ. ವಾರ್ತಾ ಇಲಾಖೆಯಿಂದ ಅನುಮತಿ ಪಡೆದರೆ ಸಾಕು ಎಂದು ಹೇಳಿದ್ದರೂ ಈಗ ಬೇರೆ ಬೇರೆ ಇಲಾಖೆಗಳಿಂದ ಅನುಮತಿ ಪಡೆಯಲೇಬೇಕಾದ ಅಗತ್ಯ ಇದೆ.
 – ರಾಜೇಶ್‌ ಬ್ರಹ್ಮಾವರ,
 ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ

ನಿಯಮಾವಳಿ ಅರಿಯಬೇಕಷ್ಟೆ
ಏಕಗವಾಕ್ಷಿ ನೆಲೆಯಲ್ಲಿ ವಾರ್ತಾ ಇಲಾಖೆಯ ಮೂಲಕ ಅನುಮತಿ ಸದ್ಯ ಕರ್ನಾಟಕದಲ್ಲಿ ನೀಡಲಾಗುತ್ತಿದೆ. ಇದೀಗ ಕೇಂದ್ರ ಸರಕಾರವು ಬಜೆಟ್‌ನಲ್ಲಿ ಏಕಗವಾಕ್ಷಿ ನಿಯಮಾವಳಿ ಬಗ್ಗೆ ಉಲ್ಲೇಖೀಸಿದೆ. ಇದರಲ್ಲಿ ಯಾವೆಲ್ಲ ವಿಚಾರಗಳಿವೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
– ಅಭಯಸಿಂಹ, ಖ್ಯಾತ ನಿರ್ದೇಶಕ

ಚಿತ್ರೀಕರಣಕ್ಕೆ ನಿಯಮ ಸುಲಭವಾಗಲಿ
ವಾರ್ತಾ ಇಲಾಖೆಯಿಂದ ಅನುಮತಿ ಪಡೆದ ಅನಂತರವೂ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗಿದೆ. ಇದೀಗ ಕೇಂದ್ರ ಬಜೆಟ್‌ನಲ್ಲಿ ಏಕಗವಾಕ್ಷಿ ನಿಯಮಾವಳಿಯನ್ನು ಪ್ರಕಟಿಸಿದ ಕಾರಣದಿಂದ ಯಾವೆಲ್ಲ ಬದಲಾವಣೆ ಇರಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ, ಚಿತ್ರೀಕರಣಕ್ಕೆ ಸುಲಭವಾಗಲು ಈ ನಿಯಮ ಅನುವಾಗಲಿದೆ.
– ತಮ್ಮ ಲಕ್ಷ್ಮಣ, ಕಲಾ ನಿರ್ದೇಶಕ

ದಿನೇಶ್‌ ಇರಾ 

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.