ಕಬಡ್ಡಿಗೆ ರೆಡಿಯಾಗಿದೆ ಕೋಸ್ಟಲ್‌ವುಡ್‌!


Team Udayavani, Aug 30, 2018, 12:05 PM IST

30-agust-10.jpg

ಕೆಮರಾ, ರೋಲಿಂಗ್‌, ಆ್ಯಕ್ಷನ್‌ ಎನ್ನುತ್ತ ಸಿನೆಮಾದಲ್ಲೇ ಬ್ಯುಸಿಯಾಗಿದ್ದ ತುಳು ಸಿನೆಮಾ ಕಲಾವಿದರು ರಿಲ್ಯಾಕ್ಸ್‌ ಮೂಡ್‌ನ‌ಲ್ಲಿ ಒಂದಿಷ್ಟು ಕೂಲ್‌ ಆಗಲು ಕಬಡ್ಡಿ ಆಡಲು ರೆಡಿಯಾಗಿದ್ದಾರೆ. ತುಳು ಕಲಾವಿದರನ್ನು ಜತೆಯಾಗಿಸಿಕೊಂಡು ಮಂಗಳೂರಿನಲ್ಲಿಯೇ ಕಬಡ್ಡಿ ಆಡುವ ಪ್ಲ್ಯಾನ್‌ ಮಾಡಲಾಗಿದೆ. ಈಗಾಗಲೇ ಮಂಗಳೂರಿನಲ್ಲಿ ತುಳು ಚಲನಚಿತ್ರ ಕಲಾವಿದರಿಗಾಗಿ ಕ್ರಿಕೆಟ್‌ ಪಂದ್ಯ ನಡೆದಿತ್ತು. ಕೆಲವು ಟೀಮ್‌ ಮಾಡಿ ನೆಹರೂ ಮೈದಾನದಲ್ಲಿ ಕ್ರಿಕೆಟ್‌ ಆಯೋಜಿಸಲಾಗಿತ್ತು. ಜತೆಗೆ ಕೆಸರಿನಲ್ಲಿಯೂ ಕೆಲವು ಕ್ರೀಡಾಕೂಟಗಳು ನಡೆದಿತ್ತು. ಆದರೆ, ಈ ಬಾರಿ ಕಬಡ್ಡಿ ಪಂದ್ಯಾಟಕ್ಕೆ ಕೋಸ್ಟಲ್‌ವುಡ್‌ನ‌ಲ್ಲಿ ಸಿದ್ಧತೆ ನಡೆಸಲಾಗಿದೆ. ರಾಜೇಶ್‌ ಬ್ರಹ್ಮಾವರ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳ ಸಹಯೋಗ ದೊಂದಿಗೆ ಕಬಡ್ಡಿ ಆಯೋಜಿಸಲಾಗಿದೆ.

ಹೀರೋ/ ಹೀರೋಯಿನ್‌ ಎಂಬಂತೆ ಎರಡು ಪ್ರತ್ಯೇಕ ವಿಭಾಗದಲ್ಲಿ ತಂಡಗಳ ಆಯ್ಕೆ ಈಗಾಗಲೇ ನಡೆದಿದೆ. ಕೋಸ್ಟಲ್‌ವುಡ್‌ನ‌ ಖ್ಯಾತ ಕಲಾವಿದರಾದ ಅರ್ಜುನ್‌ ಕಾಪಿಕಾಡ್‌, ಸೌರಭ್‌ ಭಂಡಾರಿ, ಉದಯ್‌ ಪೂಜಾರಿ, ಪೃಥ್ವಿ ಅಂಬರ್‌, ರೂಪೇಶ್‌ ಶೆಟ್ಟಿ, ಸಂದೀಪ್‌ ಭಕ್ತ, ಅನೂಪ್‌ ಸಾಗರ್‌, ಪ್ರತೀಕ್‌ ಶೆಟ್ಟಿ, ವೀರೇಂದ್ರ ಶೆಟ್ಟಿ ನೇತೃತ್ವದಲ್ಲಿ ತಂಡಗಳು ಸಿದ್ಧವಾಗಿದೆ. ಜತೆಗೆ ಶ್ರೇಯಾ ಅಂಚನ್‌, ಕರಿಷ್ಮಾ ಅಮೀನ್‌, ಪೂಜಾ ಶೆಟ್ಟಿ, ರೇಶ್ಮಾ ಶೆಟ್ಟಿ, ಲಲಿತಾಶ್ರೀ ಹಾಗೂ ಅನ್ವಿತಾ ಸಾಗರ್‌ ನೇತೃತ್ವದಲ್ಲಿ ಹೀರೋಯಿನ್‌ ಟೀಮ್‌ ಸಿದ್ಧಗೊಂಡಿದೆ. ಹೆಚ್ಚಾ ಕಡಿಮೆ ಅಕ್ಟೋಬರ್‌ 6 ಹಾಗೂ 7ರಂದು ಮಂಗಳೂರು ನೆಹರೂ ಮೈದಾನ ಅಥವಾ ಇತರ ಭಾಗದಲ್ಲಿ ಈ ಸ್ಪರ್ಧೆ ಆಯೋಜನೆಗೆ ಉದ್ದೇಶಿಸಲಾಗಿದೆ.

ಮಂಗಳೂರಿನ ಓಶಿಯನ್‌ ಪರ್ಲ್ ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಮಂಗಳೂರು ಹಾಗೂ ಬೆಂಗಳೂರಿನ ಉದ್ಯಮಿಗಳು ತಂಡಗಳನ್ನು ಖರೀದಿ ನಡೆಸಿದ್ದಾರೆ. ಆ ಬಳಿಕ ಕಲಾವಿದರು ಅರ್ಥಾತ್‌ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಒಂದೊಂದು ತಂಡದಲ್ಲಿ ಕಲಾವಿದರ ಜತೆಗೆ, ನಾಲ್ಕು ಜನ ಕಬಡ್ಡಿ ಆಟಗಾರರನ್ನೇ ಬಳಸಲಾಗುತ್ತದೆ. ಅದರಲ್ಲೂ ಅವರು ಕಾಲೇಜು ಹುಡುಗರಾಗಿರುತ್ತಾರೆ. ಇದಕ್ಕಾಗಿ ಕರಾವಳಿಯ 13 ಕಾಲೇಜಿನ ಕಬಡ್ಡಿ ಆಟಗಾರರನ್ನು ಕರೆಸಲಾಗಿದೆ.

ತುಳುವಿನಲ್ಲಿ ಸೆಲೆಬ್ರಿಟಿ ಕಬಡ್ಡಿ ಹೊಸ ಕಾನ್ಸೆಪ್ಟ್. ಚಲನಚಿತ್ರ ಕಲಾವಿದರು ಹಾಗೂ ತಂತ್ರಜ್ಞರಿಗೆ ದುಡಿಮೆಯ ಜತೆಗೆ ಒಂದಷ್ಟು ಮನರಂಜನೆ ಸಿಗಬೇಕು ಎನ್ನುವ ಉದ್ದೇಶದಿಂದ ಕಬಡ್ಡಿ ಆಯೋಜಿಸಲಾಗಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಆಯಾಯ ಕಲಾವಿದರಿಗೆ ಬೇರೆ ಬೇರೆ ರೀತಿಯ ಆಟೋಟ ಸ್ಪರ್ಧೆಗಳನ್ನು ಅಥವಾ ಇತರ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಂತಹ ಪ್ರಕ್ರಿಯೆ ಕೋಸ್ಟಲ್‌ ವುಡ್‌ನ‌ಲ್ಲೂ ಜಾರಿಯಾಗಬೇಕು ಎಂಬ ನೆಲೆಯಿಂದ ಈಗ ಈ ಬಾರಿ ಕಬಡ್ಡಿ ಆಯೋಜಿಸಲಾಗಿದೆ. ಕೋಸ್ಟಲ್‌ ವುಡ್‌ ಕಲಾವಿದರನ್ನು ಇದರಲ್ಲಿ ಜೋಡಿಸುವ ಮೂಲಕ ಹೊಸತನ ಮೂಡುವಂತೆ ಮಾಡುವಲ್ಲಿ ಇದೊಂದು ಸಣ್ಣ ಪ್ರಯತ್ನ ಎನ್ನುತ್ತಾರೆ ರಾಜೇಶ್‌ ಬ್ರಹ್ಮಾವರ. 

ದಿನೇಶ್‌ ಇರಾ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.