ಕಾನನದ ನಡುವೆ ಕವಳಗುಹೆಯ ಬಿನ್ನಾಣ


Team Udayavani, Jan 30, 2020, 5:51 AM IST

kavala-caves-1

ಒಂದು ಕಡೆ ಬಿದಿರಿನ ಮೆಳೆಗಳ ಓಲಾಟ, ಇನ್ನೊಂದೆಡೆ ಕಾಳಿ ನದಿಯ ಜುಳುಜುಳು ನಿನಾದ, ಅಲ್ಲೇ ಹತ್ತಿರದಲ್ಲಿ ಪಕ್ಷಿಗಳ ಕಲರವ, ಆ ಅರಣ್ಯದಲ್ಲಿ ಅಪರೂಪಕ್ಕೆ ಕಾಣ ಸಿಗುವ ವನ್ಯ ಜೀವಿಗಳು… ಇಂಥ ಪ್ರಾಕೃತಿಕ ಚಿತ್ರಣವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡ ದಾಂಡೇಲಿ ಪ್ರಕೃತಿ ಸೊಬಗನ್ನು ಸವಿಯಲೇಬೇಕು. ಸಾಹಸಮಯ ತಾಣ ವಾದ ದಾಂಡೇಲಿಯಲ್ಲಿರುವ ಸುಂದರ ಚಾರಣ ಸ್ಥಳವೇ ಕವಳ ಗುಹೆ.

ರೋಮಾಂಚನಕಾರಿ ಅನುಭವ ಬೆಟ್ಟ ಕಣಿವೆಗಳ ಅಂಚಿನಲ್ಲಿ ಕಡಿದಾದ ಮಾರ್ಗ ದಲ್ಲಿ ಮೂರು ಕಿ.ಮೀ.ಸಾಗಿದರೆ ದಟ್ಟವಾದ ಅರಣ್ಯ ಸಿಗುತ್ತದೆ. ಈ ಮಾರ್ಗವಾಗಿ ಚಾರಣ ಪ್ರಾರಂಭ ವಾಗಲಿದ್ದು, ಕವಳಗುಹೆ ತಲುಪಲು 2 ಮಾರ್ಗಗಳಿವೆ. ಬೆಟ್ಟದ (ಹಿಂಬದಿ) ಮೇಲಿನ ಮಾರ್ಗವಾಗಿ ತೆರಳಿದರೆ 3 ಕಿ.ಮೀ. ಕಾಲು ದಾರಿ ತುಳಿದು ಸಾಗಿದರೆ 540 ಮೆಟ್ಟಿಲುಗಳನ್ನು ಹತ್ತಬೇಕು. 2 ಮಾರ್ಗಗಳು ರೋಮಾಂಚನಕಾರಿ ಅನುಭವ ನೀಡಲಿದ್ದು, ಆಯಾಸವೆನ್ನಿಸಿ ದಾಗ ವಿರಮಿಸುವುದಕ್ಕೂ ಅವಕಾಶವಿದೆ.

ಶಿವಲಿಂಗ ದರ್ಶನ
ಹೀಗೆ ಕಾಲುದಾರಿಯಾಗಿ ಸಾಗಿದವ ರಿಗೆ ನಾಗಝರಿ ಹಳ್ಳ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ತಂಪಾದ ವಾತಾವರಣ ಜತೆಗೆ ಪ್ರಶಾಂತತೆಯ ಅನುಭವವನ್ನು ಬಾನೆತ್ತರಕ್ಕೆ ನಿಂತ ಗುಹೆಗಳು ನೀಡುತ್ತವೆ. ಹೀಗೆ ಕತ್ತಿಯಂತೆ ಜೋತುಬಿದ್ದ ಚೂಪಾದ ಶಿಲೆಗಳು ತಲೆಗೆ ಬಡಿಯದಂತೆ ಎಚ್ಚರಿಕೆ ಯಿಂದ 8 ಮೀಟರ್‌ ಒಳಗೆ ಸಾಗಿದರೆ ಬೃಹತ್‌ ಶಿವಲಿಂಗದ ದರ್ಶನವಾಗುತ್ತದೆ. ಗುಹೆಯೊಳಗೆ ಗೋವಿನ ಕೆಚ್ಚಲಿನಂತೆ ಜೋತು ಬಿದ್ದ ಶಿಲೆಯಿಂದ ಬಸಿಯುತ್ತಿದ್ದ ದ್ರವ್ಯ ಶಿವಲಿಂಗಕ್ಕೆ ಅಭಿಷೇಕ ಮಾಡಿದಂತೆ ಭಾಸವಾಗುವಂತಿದ್ದು, ಇದನ್ನು ಕಣ್ತುಂಬಿಸಿಕೊಂಡವರ ಮನದಲ್ಲಿ ಧನ್ಯತಾ ಅನುಭಾವ ಮೂಡುವುದು ಸುಳ್ಳಲ್ಲ.

ಅನುಮತಿ ಖಡ್ಡಾಯ
ಕವಳಗುಹೆ ಚಾರಣಕ್ಕೆ ಅಲ್ಲಿನ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಚಾರಣಆರಂಭಕ್ಕೆ ಮುನ್ನ 3 ಚೆಕ್‌ಪೋಸ್ಟ್‌ ಗಳಲ್ಲಿ ತಪಾಸಣೆ ನಡೆಯುತ್ತದೆ. ಅಲ್ಲಿನ ಮೇಲಧಿ ಕಾರಿಗಳಿಂದ ಅನುಮತಿ ಖಾತ್ರಿ ಆದ ಅನಂತರವೇ ಚಾರಣದ ಮುಂದಿನ ಮಾರ್ಗ ತೆರವುಗೊಳ್ಳುತ್ತದೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.