ಇನ್ನೊಂದು ಸಿನೆಮಾ ಲೆಕ್ಕಾಚಾರದಲ್ಲಿ ಕಾಪಿಕಾಡ್‌


Team Udayavani, Apr 25, 2019, 6:00 AM IST

2404mlr3a-Devdas-Kapikad-

ತುಳು ರಂಗಭೂಮಿ ಹಾಗೂ ಸಿನೆಮಾ ಅಂದಾಗ ಪಕ್ಕನೆ ಕೇಳಿ ಬರುವ ಹೆಸರು ದೇವದಾಸ್‌ ಕಾಪಿಕಾಡ್‌. ತುಳು ಸಾಂಸ್ಕೃತಿಕ ಲೋಕದ ಬೆಳವಣಿಗೆಯಲ್ಲಿ ಕಾಪಿಕಾಡ್‌ ಶ್ರಮ ಅಷ್ಟರ ಮಟ್ಟಿಗೆ ಉಲ್ಲೇಖನೀಯ. ಸದ್ಯ “ಜಬರ್ದಸ್ತ್ ಶಂಕರ’ ಸಿನೆಮಾದ ಶೂಟಿಂಗ್‌ ಮುಗಿಸಿರುವ ಕಾಪಿಕಾಡ್‌ ಈಗ ಇನ್ನೊಂದು ಸಿನೆಮಾ ಮಾಡುವ ಬಗ್ಗೆ ಲೆಕ್ಕ ಹಾಕಿದ್ದಾರೆ.

ಕೋಸ್ಟಲ್‌ವುಡ್‌ಗೆ ಭರವಸೆಯ ಸಿನೆಮಾ ನೀಡಿರುವ ಕಾಪಿಕಾಡ್‌ ಈಗ ಇನ್ನೊಂದು ಸಿನೆಮಾ ಮಾಡುವ ಬಗ್ಗೆ ಪ್ಲ್ಯಾನಿಂಗ್‌ ಶುರು ಮಾಡಿದ್ದಾರೆ. ಅಂದಹಾಗೆ, ಸಿನೆಮಾ ಕನ್ನಡವಾ? ತುಳುವಾ? ಎಂದು ಇನ್ನೂ ಅವರು ಗುಟ್ಟುಬಿಟ್ಟುಕೊಟ್ಟಿಲ್ಲ. ಆದರೂ, ಹೊಸ ಸಿನೆಮಾದ ಬಗ್ಗೆ ಸಿದ್ಧತೆ ನಡೆಸುತ್ತಿರುವ ಅವರು ಕೆಲವೇ ತಿಂಗಳಿನಲ್ಲಿ ಹೊಸ ಸಿನೆಮಾ ಮಾಡುವ ತಯಾರಿಯಲ್ಲಿದ್ದಾರೆ.

ಒಂದು ಮೂಲದ ಪ್ರಕಾರ ಕರಾವಳಿಯ ಸಾಂಸ್ಕೃತಿಕ ಲೋಕವನ್ನು ಪರಿಚಯಿಸುವ ಜತೆಗೆ ತುಳುನಾಡಿನ ವಿಶೇಷತೆಯಲ್ಲಿ ಒಂದಾಗಿರುವ ಕಲಾ ಪ್ರಕಾರದ ಆಧಾರಿತವಾಗಿ ಸಿನೆಮಾ ಮಾಡಲಿದ್ದಾರೆ ಎಂಬುದು ಮಾಹಿತಿ. ಆದರೆ, ಯಾವ ಕಲಾ ಪ್ರಕಾರ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.

ಒಂದಕ್ಕಿಂತ ಒಂದು ವಿಭಿನ್ನ ಮ್ಯಾನರಿಸಂನ ಕಥೆಯ ಸಿನೆಮಾ ನೀಡಿದ ಕಾಪಿಕಾಡ್‌ ಅವರ ಮುಂದಿನ ಸಿನೆಮಾ ಯಾವುದು ಎಂಬುದು ಸದ್ಯದ ಕುತೂಹಲವಾಗಿತ್ತು.

ಜಬರ್ದಸ್ತ್ ಸಿನೆಮಾವನ್ನು ಜಬರ್ದಸ್ತಾಗಿ ಶೂಟಿಂಗ್‌ ಮುಗಿಸಿದ ಬಳಿಕ ಅವರು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಹಜವಾಗಿ ಕೋಸ್ಟಲ್‌ವುಡ್‌ ಅಂಗಳದಲ್ಲಿ ಕೇಳಿಬಂದಿತ್ತು. ಇದಕ್ಕೆ ಉತ್ತರವಾಗಿ ಈಗ ಹೊಸ ಸಿನೆಮಾದ ಮಾತು ಕಾಪಿಕಾಡ್‌ ವಲಯದಿಂದ ಕೇಳಿಬರುತ್ತಿದೆ.

ಅಂತೂ ಕಾಪಿಕಾಡ್‌ ಸದ್ಯ ಫುಲ್‌ ಬ್ಯುಸಿ ಆಗಿದ್ದಾರೆ. ಜಬರ್ದಸ್ತ್ ಶಂಕರ ರಿಲೀಸ್‌ನ ಹೊಸ್ತಿಲ್ಲಿರುವಾಗಲೇ ಹೊಸ ಸಿನೆಮಾ ಮಾಡಲು ಕಾಪಿಕಾಡ್‌ ಹೆಜ್ಜೆ ಇರಿಸಿದ್ದು, ಈ ಸಿನೆಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಎಂಬಿತ್ಯಾದಿ ಸಂಗತಿಗಳು ಸದ್ಯಕ್ಕಿಲ್ಲ.

ಬರ್ಸ, ಚಂಡಿ ಕೋರಿ, ಅರೆ ಮರ್ಲೆರ್‌, ಏರಾ ಉಲ್ಲೆರ್‌ಗೆ ಸಿನೆಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ ಕಾಪಿಕಾಡ್‌ ಇನ್ನೂ ಹಲವು ಸಿನೆಮಾದ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದವರು. ತುಳುವಿನ ಹಲವು ಸಿನೆಮಾದಲ್ಲಿ ಬಣ್ಣಹಚ್ಚಿ, ನಗುವಿನ ಜತೆಗೆ ಮೋಡಿಮಾಡಿದವರು. ಜತೆಗೆ, ರಮೇಶ್‌ ಅರವಿಂದ್‌ ಜತೆಗೆ ವೆಂಕಟ ಇನ್‌ ಸಂಕಟ, ಯಶ್‌ ಜತೆಗೆ ತೂಫಾನ್‌ ಹಾಗೂ ಕಾರ್ತಿಕ್‌ ಎಂಬ ಸಿನೆಮಾದಲ್ಲಿ ಬಣ್ಣಹಚ್ಚಿದ ದೇವದಾಸ್‌ ಕಾಪಿಕಾಡ್‌ ಅವರಿಗೆ ಹೆಚ್ಚಾ ಕಡಿಮೆ 38ರಷ್ಟು ಕನ್ನಡ ಚಿತ್ರಗಳ ಆಫರ್‌ ಬಂದಿತ್ತು. ಆದರೆ, ತುಳು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕರಾವಳಿ ಭಾಗದಲ್ಲಿಯೇ ಸಮಯ ಬೇಕಾಗಿರು ವುದರಿಂದ ಸ್ಯಾಂಡಲ್‌ವುಡ್‌ನ‌ ಆಫರ್‌ಗಳನ್ನು ಕಾಪಿಕಾಡ್‌ ನಯವಾಗಿ ನಿರಾಕರಿಸಿ ದ್ದರು. ವಿಶೇಷ ವೆಂದರೆ
ತಮಿಳು, ಮಲಯಾಳಂ ನಲ್ಲೂ ಇಂತಹುದೇ ಆಫರ್‌ ಬಂದಿದ್ದು, ಕಾಪಿಕಾಡ್‌ಗೆ ಸಮಯ ಸಾಕಾಗದೆ, ಅತ್ತ ಗಮನಹರಿಸಿಲ್ಲ.ಅಂದಹಾಗೆ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದ “ಜಬರ್‌ದಸ್ತ್ ಶಂಕರ’ ಸಿನೆಮಾ ಇನ್ನೇನು ಕೆಲವೇ ದಿನದಲ್ಲಿ ತೆರೆಕಾಣಲಿದೆ.

ಇರುವೈಲ್‌, ಉಲಾಯಿಬೆಟ್ಟು, ಎಡಪದವು, ಬೆಂಜನಪದವು, ಕೊಡಾ¾ಣ್‌, ಮೆಲ್ಕಾರ್‌, ಪಣೋಲಿಬೈಲ್‌ ಬಳಿಯ ಕೇಶವನಗರ ಮುಂತಾದೆಡೆ ಜಬರ್‌ದಸ್ತ್ ಶಂಕರ ಸಿನೆಮಾಕ್ಕೆ ಚಿತ್ರೀಕರಣ ನಡೆದಿದೆ. ಸಿನೆಮಾದಲ್ಲಿ ನಾಲ್ಕು ಸಾಹಸ ದೃಶ್ಯಗಳಿದ್ದು ಮಾಸ್‌ ಮಾದ ಸಾಹಸದ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

-  ದಿನೇಶ್‌ ಇರಾ

ಟಾಪ್ ನ್ಯೂಸ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

4-radio

Radio: ಪ್ರಿಯ ಕೇಳುಗರೆ ನನ್ನನ್ನು ಮರೆಯದಿರಿ

Puneeth Rajkumar; ಇಂದು ‘ಜಾಕಿ’ ರೀ ರಿಲೀಸ್

Puneeth Rajkumar; ಇಂದು ‘ಜಾಕಿ’ ರೀ ರಿಲೀಸ್

ಹಣೆಗೆ ಗಾಯವಾಗಿ ಚಿಕಿತ್ಸೆಗೊಳಗಾಗಿದ್ದ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಹಣೆಗೆ ಗಾಯವಾಗಿ ಚಿಕಿತ್ಸೆಗೊಳಗಾಗಿದ್ದ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಡಿಸ್ಚಾರ್ಜ್

Tragedy: ಕಂದಕಕ್ಕೆ ಬಿದ್ದ ಕಾರು… ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ, ಬದುಕುಳಿದ ಮಗು

Tragedy: ಕಂದಕಕ್ಕೆ ಬಿದ್ದ ಕಾರು… ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ, ಬದುಕುಳಿದ ಮಗು

Hospitalized: ಮಾಜಿ ಸಚಿವ ಪ್ರಭು ಚವ್ಹಾಣ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Hospitalized: ಮಾಜಿ ಸಚಿವ ಪ್ರಭು ಚವ್ಹಾಣ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

B. S. Yediyurappa: ಮತ್ತೆ ಶಕ್ತಿ ಕೇಂದ್ರವಾದ ಯಡಿಯೂರಪ್ಪ ನಿವಾಸ

B. S. Yediyurappa: ಮತ್ತೆ ಶಕ್ತಿ ಕೇಂದ್ರವಾದ ಯಡಿಯೂರಪ್ಪ ನಿವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

UV Fusion: ಎಳೆಯರೊಂಗಿಗೆ ಗೆಳೆಯರಾಗಿ

4-radio

Radio: ಪ್ರಿಯ ಕೇಳುಗರೆ ನನ್ನನ್ನು ಮರೆಯದಿರಿ

3-uv-fusion

UV Fusion: ಹೆತ್ತಬ್ಬೆಯ ಕುರಿತು ಹತ್ತು ಸಾಲು

12-uv-fusion

UV Fusion: ಯಾವ ಕಾಲದ ಶಾಸ್ತ್ರ..?

10-uv-fusion

UV Fusion: ನೋಡಬನ್ನಿ ಹೂ ತುಂಬಿದ ಮಾಗೋಡು ಜಾತ್ರೆಯನ್ನ

MUST WATCH

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

udayavani youtube

ಒಳ್ಳೆ ಬಟ್ಟೆ ಹಾಕಿಲ್ಲಾ ಅಂತ ರೈತನಿಗೆ ಅವಮಾನ ಮಾಡಿದ ಮೆಟ್ರೋ ಸಿಬ್ಬಂದಿ

ಹೊಸ ಸೇರ್ಪಡೆ

5-uv-fusion

UV Fusion: ಎಳೆಯರೊಂಗಿಗೆ ಗೆಳೆಯರಾಗಿ

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

4-radio

Radio: ಪ್ರಿಯ ಕೇಳುಗರೆ ನನ್ನನ್ನು ಮರೆಯದಿರಿ

3-uv-fusion

UV Fusion: ಹೆತ್ತಬ್ಬೆಯ ಕುರಿತು ಹತ್ತು ಸಾಲು

Puneeth Rajkumar; ಇಂದು ‘ಜಾಕಿ’ ರೀ ರಿಲೀಸ್

Puneeth Rajkumar; ಇಂದು ‘ಜಾಕಿ’ ರೀ ರಿಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.