ಮೊಬೈಲ್ ಆ್ಯಪ್‌ಗ್ಳು ಮಾರಕವಾಗದಿರಲಿ

ಮೊಬೈಲ್ ಆ್ಯಪ್‌ಗ್ಳು ಮಾರಕವಾಗದಿರಲಿ

Team Udayavani, Aug 8, 2019, 5:00 AM IST

p-23

ಇಂದು ಎಳೆಯರ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳು ನಲಿದಾಡುತ್ತಿವೆ. ಯಾವುದೋ ಅನಿರ್ವಾಯ ಕಾರಣಕ್ಕೆ ಮಕ್ಕಳಿಗೆ ಫೋನ್‌ ತೆಗೆದುಕೊಡುವ ಹೆತ್ತವರು, ಮಕ್ಕಳು ಯಾವ ರೀತಿಯಲ್ಲಿ ಅದನ್ನು ಬಳಸುತ್ತಿದ್ದಾರೆ ಎಂಬ ಬಗ್ಗೆ ಗಮನ ಹರಿಸುವುದಿಲ್ಲ. ಮಕ್ಕಳ್ಳೋ ಅಗತ್ಯಕ್ಕಿಂತಲೂ ಹೆಚ್ಚು ಈ ಮೊಬೈಲ್ ಫೋನ್‌ಗಳಲ್ಲಿ ಕಾಲ ಕಳೆದು ಬಿಡುತ್ತಾರೆ. ಯುವಜನಾಂಗವನ್ನು ಸೆಳೆಯಬೇಕೆಂಬ ಕಾರಣಕ್ಕೆ ಟಿಕ್‌ಟಾಕ್‌, ಮೊಬೈಲ್ ಗೇಮ್‌ ಆ್ಯಪ್‌ಗ್ಳು ಲೆಕ್ಕವಿಲ್ಲದಷ್ಟಿವೆ.

ಯುವಜನಾಂಗವನ್ನು ಬಹುಬೇಗನೇ ಸೆಳೆದಿರುವುದು ಸೆಲ್ಫಿ, ಮೊಬೈಲ್ ಗೇಮ್‌, ಟಿಕ್‌ ಟಾಕ್‌ ಆ್ಯಪ್‌ಗ್ಳು. ಆದರೆ ಇದು ಧನಾತ್ಮಕ ಸಂಗತಿ ಸೃಷ್ಟಿಸುವ ಪ್ರಮಾಣಕ್ಕಿಂತ ನಕರಾತ್ಮಕ ವಿದ್ಯಾಮಾನಗಳಿಗೆ ಕಾರಣವಾಗುತ್ತಿರುವುದು ಆತಂಕದ ಸಂಗತಿ. ಟ್ರೆಂಡ್‌ ಆಗುತ್ತಿರುವ ಈ ಟಿಕ್‌ ಟಾಕ್‌ ಇತ್ತೀಚೆಗೆ ಯುವಕರ ಸಾವಿಗೂ ಕಾರಣವಾಗಿದೆ. ಯಾವುದೋ ಸಿನೆಮಾದ ಡೈಲಾಗ್‌, ಹಾಡನ್ನು ಅನುಕರಣೆ ಮಾಡಿ ಅದರ ವೀಡಿಯೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಜನರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇನ್ನೊಬ್ಬರ ಟೀಕೆಗೂ ಈ ಟಿಕ್‌ಟಾಕ್‌ ಆ್ಯಪ್‌ಗ್ಳು ಸಹಕರಿಸುತ್ತಿವೆ. ಇವುಗಳು ಮನೋರಂಜನೆಗಾಗಿದ್ದರೂ, ಆ ಉದ್ದೇಶದಿಂದ ಬಳಕೆಯಾಗದೇ ಇರುವುದು ಖೇದಕರ ಸಂಗತಿ.

ಸಾಮಾಜಿಕ ಜಾಲ ತಾಣಗಳ ಅತಿ ಬಳಕೆಯಿಂದ ಮಕ್ಕಳ ವಿದ್ಯಾಭ್ಯಾಸ, ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಸಾಮಾಜಿಕ ಜಾಲತಾಣಗಳ ಅತಿ ಬಳಕೆಯಿಂದ ಮಕ್ಕಳನ್ನು ಹೇಗೆ ದೂರವಿಡಬಹುದು ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಜತೆಗೆ ಬಳಕೆ ವೇಳೆ ಅದರಲ್ಲಿನ ಧನಾತ್ಮಕ ಅಂಶಗಳ ಬಳಕೆಗೆ ಪ್ರೋತ್ಸಾಹ ನೀಡಬೇಕು.

ಟಿಕ್‌ ಟಾಕ್‌ ವೀಡಿಯೋದಲ್ಲಿ ಒಳ್ಳೆಯ ಟ್ರೆಂಡಿಂಗ್‌ ಹ್ಯಾಶ್‌ ಟಾಗ್‌ಗಳು ಇವೆ. ಮಕ್ಕಳಿಗೆ ಜ್ಞಾನ ತುಂಬುವಂತಹ ನೀಡುವಂತಹ ವೀಡಿಯೊಗಳಿರುತ್ತವೆ. ಸುರಕ್ಷಿತ ವಿಧಾನವಾದ ಡಿಜಿಟಲ್ ವೆಲ್ಲ್ ಬೀಯಿಂಗ್‌ ಎಂಬ ಆ್ಯಪ್‌ ಇದ್ದು, ಈ ಮೂಲಕ ಪೋಷಕರು ಸಮಯ ಸೆಟ್ ಮಾಡಿ ಮಕ್ಕಳಿಗೆ ಮೊಬೈಲ್ ಬಳಸಲು ನೀಡಬೇಕು. ಅವಧಿ ಮುಗಿದರೆ ಮಕ್ಕಳು ಮುಂದುವರಿಯಲು ಪಾಸ್‌ ವರ್ಡ್‌ ನೀಡಬೇಕು.

ರಿಸ್ಟ್ರಿಕ್ಟೆಡ್‌ ಮೋಡ್‌, ಕಮೆಂಟ್ಸ್‌ ಫಿಲ್ಟರ್‌, ಡಿವೈಸ್‌ ಮ್ಯಾನೇಜ್‌ ಮೆಂಟ್ ಮೊದಲಾದ ಮಾರ್ಗಗಳ ಮೂಲಕ ಟಿಕ್‌ಟಾಕ್‌ ಅತಿ ಬಳಕೆಗೆ ಕಡಿವಾಣ ಹಾಕಲು ಸಾಧ್ಯವಿದೆ. ಇಂತಹ ನಿಯಂತ್ರಣ ಮಾರ್ಗಗಳು ಮೊಬೈಲ್ ಗೇಮ್‌, ಸೆಲ್ಪಿ ಮೊದಲಾದವುಗಳಲ್ಲಿಯೂ ಇವೆ.

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸೆಲ್ಫಿ ಅಪ್‌ಲೋಡ್‌ ಮಾಡಿ ಲೈಕ್‌, ಕಮೆಂಟ್ ಎಂಬ ಪ್ರಚಾರದ ಗೀಳಿಗೆ ಕಡಿವಾಣ ಅಗತ್ಯ. ಪೋಟೋ ದುರ್ಬಳಕೆ ಆಗಿ ಭವಿಷ್ಯವನ್ನೇ ಕಳೆದುಕೊಂಡ ಉದಾಹರಣೆಗಳಿವೆ. ಇಂತಹ ಗೀಳು ನಿಯಂತ್ರಣಕ್ಕೆ ಮನೆಯೇ ಪಾಠ ಶಾಲೆಯಾಗಬೇಕು.

ಮುಖ ಪರಿಚಯ ಇರದ ಮಿತ್ರರ ಗೆಳೆತನ, ಪ್ರಶಂಸೆಗಿಂತ ಹತ್ತಿರದ ಬಂಧುಮಿತ್ರರ ಗೆಳೆತನ, ಪ್ರಶಂಸೆಗಳು ಮುಖ್ಯ ಎನ್ನುವ ಬುದ್ಧಿವಾದವನ್ನು ಮಕ್ಕಳಿಗೆ ತಿಳಿ ಹೇಳಬೇಕು. ಮೊಬೈಲ್ ಮಾತ್ರ ಜೀವನ ಎಂದೆನಿಸದೆ ಸೃಜನಾತ್ಮಕ ಗುಣಗಳಿಗೆ ಪೂರಕವಾಗುವ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವುದು. ಕಲೆಯಾಧಾರಿತ ಚಟುವಟಿಕೆಗಳಿಗೆ ಉತ್ಸಾಹಿಸಬೇಕು. ಸ್ಮಾರ್ಟ್‌ಫೋನ್‌ ಮತ್ತು ನೆಟ್ನಿಂದ ಆಗುವ ಅನಾಹುತಗಳ ಬಗ್ಗೆ ಗಮನ ಹರಿಸಬೇಕು. ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಜಾರಿಗೊಳ್ಳಲು ಪೋಷಕರು ಕೈ ಜೋಡಿಸಬೇಕು.

ಟಾಪ್ ನ್ಯೂಸ್

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.