ಕೆಲವೇ ದಿನದಲ್ಲಿ ದರ್ಬಾರ್ ಶೂಟಿಂಗ್
Team Udayavani, Mar 5, 2020, 4:01 AM IST
ಕೋಸ್ಟಲ್ವುಡ್ನಲ್ಲಿ ಹೊಸಬರ ತಂಡ ನಿರ್ಮಿಸಲಿರುವ “ದರ್ಬಾರ್’ ಸಿನೆಮಾ ಈ ತಿಂಗಳೊಳಗೆ ಶೂಟಿಂಗ್ ಆರಂಭಿಸಲಿದೆ. ಗೆಜ್ಜೆಗಿರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಿನೆಮಾದ ಟೈಟಲ್ ಬಿಡುಗಡೆ ನಡೆದಿದೆ.
ಹೊಸ ಸಿನೆಮಾ ತಂಡ ರೆಡಿ ಮಾಡಲಿರುವ ಈ ಸಿನೆಮಾದಲ್ಲಿ ಅರವಿಂದ ಬೋಳಾರ್ ಹಾಗೂ ಭೋಜರಾಜ್ ವಾಮಂಜೂರು ಮುಖ್ಯ ಭೂಮಿಕೆ ಯಲ್ಲಿದ್ದಾರೆ. ನಾಗತಿಹಳ್ಳಿ ಚಂದ್ರ ಶೇಖರ್ ಅವರ ಗರಡಿಯಲ್ಲಿ ಪಳಗಿದ ಅರ್ಜುನ್ ಬಿ. ಅವರು “ದರ್ಬಾರ್’ ಸಿನೆಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬೆಂಗಳೂರಿನ ರಾಜು, ತಮ್ಮಣ್ಣ ಸಿನೆಮಾ ನಿರ್ಮಾಣದ ಜವಾಬ್ದಾರಿ ವಹಿಸಿದ್ದಾರೆ.
ಧಾರಾವಾಹಿಯಲ್ಲಿ ನಟಿಸಿದ್ದ ಕಲಾ ವಿದ ಪ್ರೀತಮ್ ಪುತ್ತೂರು ಮುಖ್ಯ ಭೂಮಿಕೆ ಯಲ್ಲಿದ್ದರೆ, ವಿನುತ್ ಪುತ್ತೂರು, ಪ್ರಕಾಶ್ ಗಟ್ಟಿ, ವಾಸುದೇವ ಕೊಣಾಜೆ ಸೇರಿದಂತೆ ಕಲಾವಿದರು ಸಿನೆಮಾದಲ್ಲಿದ್ದಾರೆ. ಸಂಗೀತ ಆ್ಯಲೆನ್ ಕ್ರಾಸ್ತಾ ಪುತ್ತೂರು ನೀಡಲಿದ್ದು, ನವೀನ್ ಕುಡ್ಲ ಸಂಭಾಷಣೆಯ ಹೊಣೆ ಹೊತ್ತಿ ದ್ದಾರೆ. ಪಾಣೆಮಂಗಳೂರು ಸಮೀಪದ ಮೊಗರ್ನಾಡು ವ್ಯಾಪ್ತಿಯಲ್ಲಿಯೇ ಶೂಟಿಂಗ್ ನಡೆಯ ಲಿದೆ. ಹಾಡಿನ ಚಿತ್ರೀ ಕರಣಕ್ಕೆ ಮಡಿಕೇರಿ, ಚಿಕ್ಕಮಗಳೂರು ಪ್ಲ್ಯಾನ್ ಹಾಕ ಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಎರಡು ತಿಂಗಳೊಳಗೆ “ದರ್ಬಾರ್’ ರೆಡಿ ಆಗಲಿದೆ.