ಜಲಲ ಜಲಧಾರೆ.. ಮಾಳದ ಹಸಿರ ಧರೆ


Team Udayavani, Jul 18, 2019, 5:00 AM IST

u-23

ಮಾಳ ಸಹ್ಯಾದ್ರಿಯ ಮಡಿಲಲಲ್ಲಿ ಇರುವ ಚಿಕ್ಕ ಊರು.. ಕೆಲವು ನದಿಗಳು ಹಾಗೂ ಅದರಲ್ಲೇ ಸೃಷ್ಟಿ ಆದ ಜಲಪಾತಗಳ ಪ್ರಕೃತಿ ರಮಣೀಯ ತಾಣ.. ಇದರೊಂದಿಗೆ ಬೆಸೆದು ಕೊಂಡಿರುವ ಇಲ್ಲಿನ ಜನಜೀವನ ಅಷ್ಟೇ ಸ್ವಾರಸ್ಯ.. ಮಾಳವೆಂಬ ಊರಿನ ಕಲ್ಪನೆಯೇ ಇರದ ನಾವು ಅಲ್ಲಿನ ಪ್ರಕೃತಿಯ ರಮಣೀಯ ದೃಶ್ಯವನ್ನು ಸವಿಯಲು ಹೊರಟೆವು.. ಬಸ್ಸಿನಿಂದ ಇಳಿದೊಡನೆಯೆ ಕಡಿದಾದ ರಸ್ತೆ..ಕಾಡಿನೊಳಗೆ ಸಾಗಿದಂತೆ ಪಕ್ಷಿಗಳ ಕಲರವ..

ಮಾರ್ಚ್‌ ತಿಂಗಳಿನಲ್ಲಿ ಪ್ರವಾಸದ ಯೋಜನೆ ಹಾಕಿದ್ದ ಪದವಿ ಗೆಳೆಯರ ಗಣಕ್ಕೆ ಜೂನ್‌ ತಿಂಗಳಿನವರೆಗೂ ಕಾರ್ಯಗತಗೊಳಿಸೋದು ಸಾಧ್ಯ ಆಗಿರಲಿಲ್ಲ ..ಅದ್ಹೇಗೋ ಜುಲೈ ಮೊದಲ ವಾರದಲ್ಲಿ ಪರ್ಯಟನೆಗೆ ದಿನ ನಿಗದಿ ಮಾಡಿದ್ದಾಗಿತ್ತು..ಅದಾಗಷ್ಟೆ ಮುಂಬೈನಿಂದ ಬಂದಿದ್ದ ನನಗೆ ಪ್ಲಾನ್‌ ಬಗ್ಗೆ ಸ್ಪಷ್ಟತೆ ಅಷ್ಟಾಗಿ ಇದ್ದಿರಲಿಲ್ಲ. ಕೊನೆಗೂ ಅಳೆದು ತೂಗಿ ಕಾರ್ಕಳದ ಬಳಿಯ ಮಾಳ ಎಂಬಲ್ಲಿಯ ಜೋಯಿಸರ ಗುಂಡಿ ಜಲಪಾತಕ್ಕೆ ತೆರಳುವುದು ಎಂಬ ನಿರ್ಧಾರ ಮಾಡಿದೆವು.

ಕಾಯುವ ಕರ್ತವ್ಯ
ನಾವು ಹೊರಟಿದ್ದು ಭಾನುವಾರ ಆದ ಕಾರಣವೋ ಏನೋ ಮಾಳಕ್ಕೆ ತೆರಳುವ ಬಸ್‌ಗಳು ಹೆಚ್ಚಾಗಿ ಲಭ್ಯ ಇರಲಿಲ್ಲ. ನಮ್ಮ ಪದವಿ ದಿನಗಳ ಸಹಾಪಾಠಿ ಓರ್ವಳು ಅದೇ ಊರಿನ ವಳಾಗಿದ್ದ ಕಾರಣ, ನಮ್ಮ ಪ್ರವಾಸದ ರೂಪುರೇಷೆ ತಯಾರಿಸಿದ್ದಳು. ಕಾದು ಸುಸ್ತಾದ ನಮಗೆ ಬಸ್‌ ಸಿಕ್ಕಿದ್ದು 12 ರ ಅಂಚಿಗೆ. ನಾವು ಬರೋ ಹಿಂದಿನ ವಿಪರೀತ ಸುರಿದ ತುಹಿನಧಾರೆ ನಾವು ಬಂದ ದಿನ ಸ್ವಲ್ಪ ವಿರಾಮ ತೆಗೆದುಕೊಂಡಿತ್ತು. ಆಕೆಯ ಮನೆಯಲ್ಲೇ ಮಧ್ಯಾಹ್ನದ ಭೋಜನ ಸವಿದು, ಜಲಪಾತದ ಜಲಕ್‌ ಪಡೆಯಲು ತೆರಳಿದೆವು. ನಮ್ಮ ಜತೆಗೆ ದಾರಿ ತೋರಿಸುವ ಸಲುವಾಗಿ ಸ್ಥಳೀಯ ಯುವಕರೀರ್ವರು ಸೇರಿಕೊಂಡರು.

ಜಲಲ ಜಲಧಾರೆ
ಜನ ಸಂಪರ್ಕ ಅಷ್ಟಾಗಿ ಇಲ್ಲದ ನಿರ್ಮಲ, ಸಲಿಲ ನರ್ತನ ಮನಸ್ಸಿಗೆ ತಂಪನ್ನೆರೆದಿತ್ತು. ಜಿಟಿ ಜಿಟಿ ಮಳೆ, ಹಾಲ್ನೊರೆಯಂಥಾ ಝರಿಯ ಧುಮ್ಮಿಕ್ಕುವ ದನಿ ಕಿವಿಗೆ ಇಂಪೆರೆದಿತ್ತು. ಸ್ಫಟಿಕ ಬಣ್ಣದ ನೀರು ಕಾಲನ್ನು ತೊಯ್ದರೆ, ತುಂತುರು ಮಳೆ ತಲೆಯನ್ನು ತೊಯ್ದು ಇಡೀ ವಾತಾವರಣ ಆಹ್ಲಾದಮಯ ಎನಿಸಿತ್ತು. ನಿಸರ್ಗದ ರಮಣೀಯ ದೃಶ್ಯಕ್ಕೆ ಫೋಟೋಶೂಟ್, ಸೆಲ್ಫಿ ಹಪಹಪಿಕೆಯೂ ನಡೆಯಿತು. ಜತೆಗೆ ಪ್ರವಾಸಿಗರು ನೀರಾಟ ಆಡೋವಾಗ ಎಚ್ಚರ ವಹಿಸೋದೂ ಅತ್ಯಗತ್ಯ. ಪಾಚಿ ಹಿಡಿದ ಬಂಡೆಗಳ ಮೇಲೆ ಓಡಾಡೋವಾಗ ಜಾರುವ ಸಾಧ್ಯತೆಯೂ ಇದೆ. ಜಲಪಾತದ ಸನಿಹದಲ್ಲಿ ಪರಶುರಾಮ ದೇವರ ಆಲಯ ಇದ್ದು, ಸ್ಥಳದ ಮೆರುಗು ಇನ್ನಷ್ಟು ಹೆಚ್ಚಿಸಿದೆ.

ನೆನಪಿಗೆ ಹೊಳಪೆರೆದ ಜಾಗ
ಕಳೆದ ಬಾರಿ ಇದೇ ಸಮಯದಲ್ಲಿ ಗೆಳೆಯರ ಗಣ ಕಾರಿಂಜ ಪ್ರವಾಸ ಮಾಡಿದ್ದೆವು. ಈ ಬಾರಿ ಮಾಳ ಎಂಬ ದೂರದೂರಿಗೆ ಬಂದು ಸಮಯ ಕಳೆದಿದ್ದು, ಮನಸ್ಸಿಗೆ ಮುದ ನೀಡಿತ್ತು. ಸದಾ ಸಿಗದಿರುವ ಪದವಿ ಮಿತ್ರರ ಸಮ್ಮಿಲನ ಇನ್ನಷ್ಟು ವಿಶಿಷ್ಟ ಎನಿಸಿತ್ತು. ಗೆಳತಿ ಮನೆ ಊಟ ,ಮಾಳದ ಗ್ರಾಮದ ಹಸಿರೈಸಿರಿಯ ನೋಟ, ಪ್ರಕೃತಿಯ ಅನೂಹ್ಯ ಜಲಪಾತದ ಓಟ ನಗರದ ದಿನನಿತ್ಯದ ಜಂಜಾಟದ ನೋವು ಮರೆಸಿತ್ತು. ಮನ ಉಲ್ಲಸಿತಗೊಂಡಿತ್ತು.

ರೂಟ್ ಮ್ಯಾಪ್‌

·ಪುತ್ತೂರಿನಿಂದ ಕಾರ್ಕಳಕ್ಕೆ 76.7 ಕಿ.ಮೀ., ಮಂಗಳೂರಿನಿಂದ ಕಾರ್ಕಳ 52.7 ಕಿ.ಮೀ.

·ಕಾರ್ಕಳದಿಂದ ಮಾಳಕ್ಕೆ 16.7 ಕಿ.ಮೀ.

·ಕಾರ್ಕಳದಿಂದ ಮಾಳ ಕಡೆಗೆ ಹೋಗಲು ಖಾಸಗಿ ಬಸ್‌ ಗಳು ಲಭ್ಯ ಇವೆ.

·ಅದಲ್ಲದಿದ್ದರೆ ಕಾರ್ಕಳದಿಂದ ಕಳಸದ ಕಡೆ ಹೋಗುವ ಬಸ್‌ ಮೂಲಕ ತೆರಳಿ, ಚೆಕ್‌ಪೋಸ್ಟ್‌ ಬಳಿ ಇಳಿಯಬಹುದು.

••ಸುಭಾಸ್‌ ಮಂಚಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.