ಕಾನನದ ನಡುವೆ ಸೀತೆಯ ಝರಿ ಕೂಡ್ಲುತೀರ್ಥ…


Team Udayavani, Jan 9, 2020, 4:37 AM IST

27

ಸುತ್ತಲೂ ದಟ್ಟವಾದ ಹಚ್ಚ ಹಸುರಿನಿಂದ ಕೂಡಿದ ಸೌಂದರ್ಯ ಲಹರಿ. ಕಾಡಿನ ನಡುವೆ ಜುಳು ಜುಳು ಹರಿವ ನೀರಿನ ನಿನಾದ. ಬೃಹದಾಕಾರದ ಮರಗಳ ಮೇಲೆ ಚಿಲಿಪಿಲಿ ಹಕ್ಕಿಗಳ ಕಲರವ. ಅಲ್ಲಲ್ಲಿ ಕಂಡು ಕಾಣದಂತೆ ಸರಸರ ಸದ್ದು ಮಾಡುತ್ತಾ ಹರಿದಾಡುವ ಸರೀಸೃಪಗಳು, ಕಾಡು ಪ್ರಾಣಿಗಳ ಕೂಗು.

ಮುಂದಿನ ಹಾದಿಯೇ ಕಾಣದಂತೆ ಒತ್ತೂತ್ತಾಗಿ ಬೆಳೆದು ನಿಂತ ವೃಕ್ಷರಾಶಿ. ಹೆಬ್ಬಂಡೆಗಳ ನಡುವೆ ಪುಟ್ಟದೊಂದು ಕಾಲುದಾರಿ. ನಡೆದಷ್ಟು ಮನಸ್ಸಿಗೆ ಮತ್ತಷ್ಟು ಉಲ್ಲಾಸ,ಉತ್ಸಾಹ ನೀಡುವ ತಣ್ಣನೆಯ ವಾತಾವರಣ. ಇಂಥಹ ಸೌಂದರ್ಯದ ನಡುವೆ ಧುತ್ತೆಂದು ಗಗನದೆತ್ತರದಿಂದ ತಿಳಿ ಹಾಲಿನಂತೆ ಧುಮ್ಮಿಕ್ಕುವ ಜಲಪಾತವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದೇ ಕೂಡ್ಲು ತೀರ್ಥ ಜಲಪಾತ. ಇದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿದೆ. ಇದಕ್ಕೆ ಸೀತಾ ಫಾಲ್ಸ್‌ ಎಂದೂ ಕರೆಯುತ್ತಾರೆ.

ಸಾಹಸ ಪ್ರವೃತ್ತಿ
ನಗರ ಜೀವನದ ಜಂಜಾಟಗಳಿಂದ ದೂರವಾಗುವುದಕ್ಕೆ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವುದು ಸಾಮಾನ್ಯ. ಆದರೆ ಚಾರಣವೆಂಬುದು ಸಾಹಸಿ ಪ್ರವೃತ್ತಿ. ಇದು ಯುವಕರನ್ನು ಅತಿಯಾಗಿ ಆಕರ್ಷಿಸುವಂತಹದ್ದು. ಚಾರಣ ಮುಗಿದ ಮೇಲೆ ಸಿಗುವ ಸಂತೋಷ, ಏನೋ ಸಾಧನೆ ಮಾಡಿದ ಅನುಭವ, ಮನಸ್ಸಿಗೆ ಮುದ ನೀಡುವ ಸಿಹಿ ನೆನಪುಗಳು ನಮ್ಮನ್ನು ಮತ್ತೆ ಮತ್ತೆ ಚಾರಣಕ್ಕೆ ಪ್ರೇರೇಪಿಸುತ್ತದೆ. ಚಾರಣದ ವೇಳೆ ಆಗುವ ಅನುಭವ ಹೇಳತೀರದು. ಅನನ್ಯ ಸಂತೋಷ, ಉಲ್ಲಾಸ ನೀಡುತ್ತದೆ.

ಅನುಭವವೇ ಅದ್ಭುತ
ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಸೀತಾ ನದಿ ಹರಿದು, ಎತ್ತರದಿಂದ ಧುಮ್ಮಿಕ್ಕಿ ಕೂಡ್ಲು ಜಲಪಾತವಾಗಿದೆ. ಹಾಗೆಯೇ ಧುಮ್ಮಿಕ್ಕುವ ಕೂಡ್ಲು, ಆಗುಂಬೆ ಕಾಡಿನತ್ತ ಇನ್ನಷ್ಟು ಜಲಧಾರೆಯಾಗಿ ಚಿಮ್ಮುತ್ತದೆ. ಸುಮಾರು 180 ಅಡಿ ಎತ್ತರದಿಂದ ಸುರಿದು ನೀಳವಾಗಿ ಇಳೆಗೆ ಉದುರಿ ಸ್ವರ್ಗವಾಗುವ ಕೂಡ್ಲುವಿನ ನೋಟ ಹಬ್ಬದೂಟ. ಜಲಪಾತದ ಸೌಂದರ್ಯದಷ್ಟೇ. ಅದನ್ನು ಕಾಣಲು ಹೋಗುವ ಚಾರಣದ ದಾರಿ ಸುಂದರವಾಗಿದೆ. ಮುಗಿಲೆತ್ತರದ ಮರಗಳ ಸಮೂಹದ ನಡುವೆ ಹೆಜ್ಜೆ ಹಾಕುವಾಗ ಸಿಗುವ ಅನುಭವವೇ ಅದ್ಭುತ.

ನೈಸರ್ಗಿಕ ಕೊಳ
ನೀರು ಧುಮ್ಮಿಕ್ಕುವ ಶಬ್ಧ ಅನುಸರಿಸುತ್ತಾ ಹೆಜ್ಜೆ ಹಾಕಿದರೆ, ತುದಿಯಲ್ಲಿ ವಿಶಾಲವಾದ ನೈಸರ್ಗಿಕ ಕೊಳವೊಂದು ಕಾಣುತ್ತದೆ. ಆ ಕೊಳಕ್ಕೆ ಮೇಲಿನಿಂದ ಹಾಲು ಸುರಿದಂತೆ ನೀರು ಧುಮ್ಮಿಕ್ಕುತ್ತಿರುತ್ತದೆ. ಅಲ್ಲಿಗೆ ನಾವು ಕೂಡ್ಲುತೀರ್ಥ ಜಲಪಾತದ ಎದುರು ನಿಂತಿರುತ್ತೇವೆ. ಆ ಜಲಧಾರೆಯನ್ನು ಕಂಡಾಕ್ಷಣ ಮೈ-ಮನದ ದಣಿವೆಲ್ಲ ಮಂಗಮಾಯ. ದಬ ದಬನೆ ಸುರಿಯುವ ಜಲ ರಾಶಿ ಪ್ರವಾಸಿಗರನ್ನು ವಿಸ್ಮಯ ಲೋಕಕ್ಕೆ ಕರೆದೊಯ್ದಂತೆ ಭಾಸವಾಗುತ್ತದೆ.

ಅಪಾಯವೂ ಇದೆ
ಮನಸ್ಸಿಗೆ ಮಂದಹಾಸವನ್ನು ನೀಡುವ ಸೀತಾ ಫಾಲ್ಸ್‌ಗೆ ಚಾರಣಪ್ರಿಯರಷ್ಟೇ ಅಲ್ಲ, ಸಾಹಸ ಪಟ್ಟು ಕಾಡಿನೊಳಗೆ ಹೆಜ್ಜೆ ಹಾಕುತ್ತೇನೆ ಎನ್ನುವ ಆಸಕ್ತಿ ಇದ್ದವರೆಲ್ಲರೂ ಕುಟುಂಬ ಸಹಿತ ಹೋಗಬಹುದು. ಆದರೆ ಕಡಿದಾದ ದಾರಿಯಲ್ಲಿ ಚಾರಣ ಮಾಡಬೇಕಿರುವುದರಿಂದ ಸ್ವಲ್ಪ ಎಚ್ಚರ ವಹಿಸಬೇಕು. ತುಸು ಆಯ ತಪ್ಪಿದರೂ ಅಪಾಯ.

ರೂಟ್‌ ಮ್ಯಾಪ್‌
ಉಡುಪಿಯಿಂದ ಹೆಬ್ರಿ ಮಾರ್ಗವಾಗಿ ಸಾಗಬೇಕು.
ಸೀತಾನದಿಯ ದಾರಿಯಲ್ಲಿ ಹೆಬ್ಬಂಡೆಗಳ ಮಧ್ಯೆ ನಡೆದು ಹೋಗಬೇಕು.

– ಸುಶಾಂತ್‌

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.