ಕುಡ್ಲದ ಕಾಮಿಡಿ ಸ್ಟಾರ್‌ಗಳಿಂದ ನೋ ಪಾಲಿಟಿಕ್ಸ್‌ !


Team Udayavani, Apr 11, 2019, 6:00 AM IST

Kudla!

ಮಂಡ್ಯದಲ್ಲಿ ಎಲೆಕ್ಷನ್‌ ಮಧ್ಯೆಯೇ ಸ್ಟಾರ್‌ ವಾರ್‌ ಜೋರಾಗಿದೆ. ಸ್ಯಾಂಡಲ್‌ವುಡ್‌ನ‌ ದರ್ಶನ್‌ ಹಾಗೂ ಯಶ್‌ ಅವರು ಸುಮಲತಾ ಅಂಬರೀಶ್‌ ಅವರ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಉಳಿದ ಕೆಲವು ಕಡೆಗಳಲ್ಲಿ ಕೂಡ ಹೀಗೆ ಸ್ಟಾರ್‌ ಪ್ರಚಾರ ಜೋರಾಗಿದೆ. ಆದರೆ, ಕರಾವಳಿ ಮಾತ್ರ ಇದಕ್ಕೆ ತದ್ವಿರುದ್ದ !

ಕೋಸ್ಟಲ್‌ವುಡ್‌ನ‌ಲ್ಲಿ ದಿನದಿಂದ ದಿನಕ್ಕೆ ತುಳು ಸಿನೆಮಾಗಳ ಸಂಖ್ಯೆ ಅಧಿಕಗೊಳ್ಳುತ್ತ ಕುಡ್ಲದ ಕಲಾವಿದರು ಕರಾವಳಿ ಭಾಗದಲ್ಲಿ ಸಖತ್‌ ಫೇಮಸ್‌ ಆಗುತ್ತಿದ್ದಾರೆ. ಅದರಲ್ಲಿಯೂ ಕುಡ್ಲದಲ್ಲಿ ಕಾಮಿಡಿ ಗೆಟಪ್‌ಗೆ ಜಾಸ್ತಿ ಒತ್ತು ನೀಡುವ ಕಾರಣದಿಂದ ಕಾಮಿಡಿ ಕಲಾವಿದರು ಕುಡ್ಲದ ಬಹುದೊಡ್ಡ ಆಸ್ತಿ.

ತುಳು ನಾಟಕ- ಸಿನೆಮಾದಲ್ಲಿ ಅಭಿನಯಿಸಿ ಎಲ್ಲರ ಮನಗೆದ್ದ ತುಳುವಿನ ಕಾಮಿಡಿ ಸ್ಟಾರ್‌ಗಳ ಬಗ್ಗೆ ಕರಾವಳಿ ಭಾಗದಲ್ಲಿ ಬಹುದೊಡ್ಡ ಗೌರವ. ಜಾತಿ ಮತ, ಧರ್ಮ ಪಕ್ಷ ಮೀರಿ ಎಲ್ಲರೂ ಇವರನ್ನು ಪ್ರೀತಿಸುವ ಕಾರಣದಿಂದ ಇವರು ರಾಜಕೀಯದತ್ತ ಕಣ್ಣಿಟ್ಟಿಲ್ಲ ಎಂಬುದು ವಿಶೇಷ.

ಬೇರೆ ಬೇರೆ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವಂತೆ ಆಹ್ವಾನ ಬಂದಿದ್ದರೂ ಕೂಡ ತುಳು ಸಿನೆಮಾ ಕಲಾವಿದರು ನಯವಾಗಿ ನಿರಾಕರಿಸುವ ಮೂಲಕ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬಂದಿದ್ದಾರೆ. ತಾನು ಅಭಿನಯಿಸುವ ಸಿನೆಮಾವನ್ನು ಎಲ್ಲ ಪಕ್ಷದವರು ನೋಡುವಾಗ ನಾನು ಮಾತ್ರ ಒಂದು ಪಕ್ಷದ ಅಡಿಯಲ್ಲಿ ನಿಂತು ಪ್ರಚಾರ ಮಾಡುವುದು ಸರಿ ಕಾಣಿಸುವುದಿಲ್ಲ ಎಂಬುದು ಇವರ ವಾದ.

ಹೀಗಾಗಿಯೇ ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸಹಿತ ಕೋಸ್ಟಲ್‌ವುಡ್‌ನ‌ ಪ್ರಮುಖ ಕಲಾವಿದರು ಪ್ರಚಾರದತ್ತ ಮುಖ ಮಾಡಿಲ್ಲ. ಬೇರೆ ಬೇರೆ ಪಕ್ಷದವರು ಮನೆಗೆ ಆಗಮಿಸಿ ಪ್ರಚಾರದಲ್ಲಿ ಒಮ್ಮೆ ಬನ್ನಿ ಎಂದು ಕರೆದಾಗಲೂ ಪ್ರೀತಿಯಿಂದಲೇ ಅದನ್ನು ನಿರಾಕರಿಸಿದ್ದಾರೆ.
“ರಾಜಕೀಯ ಎಲ್ಲ ನಮಗೆ ಆಗಿ ಬರಲ್ಲ’ ಎನ್ನುತ್ತ ರಾಜಕೀಯ ದಿಂದ ಅಂತರ ಕಾಯ್ದುಕೊಂಡೇ
ಇದ್ದಾರೆ.

ಹಾಗೆಂದು ಚುನಾವಣೆ ಪ್ರಕ್ರಿಯೆಯಿಂದ ಇವರು ದೂರ ನಿಂತಿಲ್ಲ. ಹೇಗೆಂದರೆ ಎ. 18ರಂದು ನಡೆಯುವ ಲೋಕಸಭಾ ಚುನಾವಣೆಗೆ ನಾವೆಲ್ಲ ಮತದಾನ ಮಾಡೋಣ ಎನ್ನುವ ಜಾಗೃತ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

“ಮತದಾನ ಮಾಡಿ; ಭವ್ಯ ಭಾರತ ನಿರ್ಮಿಸಿ’ ಎಂಬ ಸಂಕಲ್ಪವನ್ನು ಉಲ್ಲೇಖೀಸಿ ಮತದಾನ ಮಾಡುವಂತೆ ಅವರು ಸಾಮಾಜಿಕ ಜಾಲತಾಣದ ಮುಖೇನ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷಗಳ ಪರವಾಗಿ ಮತ ಕೇಳುವ ಬದಲು ಎಲ್ಲರೂ ಮತದಾನ ಮಾಡಿ ಎಂದು ಕರೆ ನೀಡುತ್ತಿದ್ದಾರೆ.

ಅಂದಹಾಗೆ, ಸಿನೆಮಾದವರು ಪ್ರಚಾರಕ್ಕೆ ಹೋಗಿಲ್ಲ ಎಂಬ ಸಂಗತಿ ಇದ್ದರೂ ಕುಡ್ಲ ಭಾಗದಲ್ಲಿದ್ದ ಹಲವು ರಾಜಕೀಯ ನೇತಾರರು ಸಿನೆಮಾದ ನೆರಳಿನಲ್ಲಿದ್ದರು ಎಂಬುದು ಕೂಡ ಉಲ್ಲೇಖನೀಯ.

ಕೆಲವರು ಸಿನೆಮಾ ಮಾಡಿದ ಅನಂತರ ರಾಜಕೀಯಕ್ಕೆ ಬಂದಿದ್ದರೆ, ಇನ್ನೂ ಕೆಲವರು ರಾಜಕೀಯದಲ್ಲಿದ್ದು ಸಿನೆಮಾ ಮಾಡಿದವರಿದ್ದಾರೆ ಎಂಬುದು ವಿಶೇಷ.

– ದಿನೇಶ್‌ ಇರಾ

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.