ಒಂದು ದಿನದ ಗಡಾಯಿಕಲ್‌ ಚಾರಣ


Team Udayavani, Nov 15, 2018, 1:48 PM IST

15-november-10.gif

ನಮ್ಮ ತುಳುನಾಡು ಐತಿಹಾಸಿ ಧಾರ್ಮಿಕ, ಸಂಸ್ಕೃತಿಕವಾಗಿ ಅಪಾರ ಕೀರ್ತಿ ಹಿರಿಮೆಯನ್ನು ಜಗತ್ತಿಗೆ ಸಾರಿದಂತಹ ನಾಡು. ಕಲೆ ಸಾಹಿತ್ಯ ಶಿಕ್ಷಣ ಹೀಗೆ ಎಲ್ಲದರಲ್ಲೂ ಸೈ ಏನಿಸಿಕೊಂಡಿದೆ. ಇನ್ನೂ ನಮ್ಮ ಕರಾವಳಿ ಭಾಗವು ಒಂದೆಡೆ ಪಶ್ಚಿಮಗಟ್ಟಗಳ ಸಾಲಿನಿಂದ ಇನ್ನೊಂದೆಡೆ ಅರಬ್ಬಿಸಮುದ್ರಗಳ ನಡುವೆ ಸುಂದರವಾಗಿ ನೆಲೆನಿಂತಿದ್ದು ಇಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತೆ ಅನೇಕ ಪ್ರವಾಸಿ ತಾಣಗಳನ್ನು ಕಾಣಬಹುದು. ಅಂತಹ ಸ್ಥಳಗಳ ಪೈಕಿ ಜಮಾಲಾಬಾದ್‌ ಕೋಟೆ ಒಂದು, ಆದರೆ ಜಮಾಲಾಬಾದ್‌ ಕೋಟೆ ಎಂದರೆ ಯಾರಿಗೆ ತಿಳಿಯದು ಎಲ್ಲರೂ ಈ ಚಾರಣ ಸ್ಥಳವನ್ನು ಗಡಾಯಿಕಲ್ಲು ಎಂದೇ ಗುರುತಿಸುತ್ತಾರೆ. ಈ ಬಾರಿ ನಮ್ಮ ಹಳೆ ವಿದ್ಯಾರ್ಥಿಗಳು ಮತ್ತು ಸಹಪಾಠಿಗಳನ್ನು ಒಳಗೊಂಡ ಹನ್ನೊಂದು ಮಂದಿಯ ತಂಡ ಗಡಾಯಿಕಲ್ಲಿಗೆ ಒಂದು ದಿನದ ಚಾರಣಕ್ಕೆ ತೆರಳುವ ಯೋಜನೆ ರೂಪಿಸಿದೆವು.

ಈ ಕೋಟೆಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ 6 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಈ ಕೋಟೆಯು, ಬೃಹದಾಕಾರದ ಗ್ರಾನೈಟ್‌ ಕಲ್ಲಿನ ತುದಿಯಲ್ಲಿದೆ. ಹಿಂದೆ ಇಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕೋಟೆ ಇತ್ತಂತೆ. 1794ರಲ್ಲಿ, ಟಿಪ್ಪು ಸುಲ್ತಾನನು ಇದನ್ನು ನವೀಕರಿಸಿ ತನ್ನ ತಾಯಿಯಾದ ಜಮಾಲಬಿಯ ನೆನಪಿಗಾಗಿ ‘ಜಮಾಲಾಬಾದ್‌’ ಎಂಬ ಹೆಸರಿಟ್ಟಂತೆ.

ಸ್ವಲ್ಪ ವಿಶ್ರಾಂತಿ
ಅಲ್ಲಿ ಸ್ವಲ್ಪ ವಿಶ್ರಾಮಿಸಿ ಮತ್ತೆ ಚಾರಣ ಮುಂದುವರೆಸಿದೆವು. ಅಲ್ಲಿ ನಮ್ಮಗೇ ಎಡ ಹಾಗೇ ಬಲಕ್ಕೆ ಎರಡು ದಾರಿಯ ಸೂಚನ ಫ‌ಲಕವಿತ್ತು. ನಮ್ಮ ತಂಡ ಎಡ ಭಾಗವಗಿ ಮುನ್ನಡೆಯಿತು. ಎಡಕ್ಕೆ ಸ್ವಲ್ಪ ಕಾಡಿದಾದ ದಾರಿ ಹಾಗೇ ಬಲಕ್ಕೆ ಸುಲಭವಾಗಿ ಹತ್ತಬಹುದಾದ ಅಗಲವಾದ ಮೆಟ್ಟಿಲುಗಳ ದಾರಿ ನಮ್ಮ ಆಯ್ಕೆ ಕಡಿದಾದ ದಾರಿಯಾಗಿತ್ತು. ಎಡ ಭಾಗವಾಗಿ ತೆರಳಿದ ಮಾರ್ಗ ಸ್ವಲ್ಪ ಅಪಾಯಕಾರಿಯಾಗಿದ್ದರು ನಿಧಾನವಾಗಿ ಮುಂದುವರೆದವೆ. ಹೀಗೆ ಕ್ರಮಿಸಿದ ನಮ್ಮಗೇ ಸ್ವಲ್ಪದರಲ್ಲೇ ವಿಶಾಲವಾದ ಭೂ ಪ್ರದೇಶ ಕಣ್ಣಸಿದ್ದರಿಂತ ಸ್ವಲ್ಪ ಮಟ್ಟಿಗೆ ನಿಟ್ಟಿಸುರು. ಅಲ್ಲೇ ಪಕ್ಕದಲ್ಲಿ ಆ ಸಮಯದಲ್ಲಿ ಇದ್ದ ಬೃಹದ್‌ ಗಾತ್ರದ ಮುರಿದು ಬಿದ್ದ ಫಿರಂಗಿ ಕಂಡುಬಂತು. ಇತಿಹಾಸಗಳ ಮಾಹಿತಿ ಪ್ರಕಾರ ಕೋಟೆಯ ಮೇಲೆ ಮದ್ದುಗುಂಡುಗಳನ್ನು ಇಡುತ್ತಿದ್ದ ಕೋಣೆ ಇದೆ ಎಂಬ ಮಾಹಿತಿ ಇವೆ.

ಹಚ್ಚ ಹಸುರು
ಅಂತು ನಾವು ಗಾಡಾಯಿ ಕಲ್ಲಿನ ಶೀರ ಭಾಗಕ್ಕೆ ಲಗ್ಗೆ ಇಟ್ಟಾಯಿತು. ಈ ಕೋಟೆಯ ಮೇಲ್ಪಾಗವು ಸುತ್ತಲು ಹಸಿರಿನಿಂದ ಕಂಗೊಳಿಸುವ ಪ್ರದೇಶದಿಂದ ಕೂಡಿದೆ. ಒಟ್ಟಾರೆಯಾಗಿ ಈ ಕೋಟೆ ಹತ್ತಲು ಶ್ರಮ ಹಾಗೂ 3-4 ತಾಸು ಸಮಯ ತೆಗೆದುಕೊಂಡೆವು. ಬಳಿಕ ಸ್ನೇಹಿತ ತಂದಿದ್ದ ಜೋಳದ ರೋಟ್ಟಿ ಚಟ್ನಿ ಹುಡಿಯೆ ಮಧ್ಯಾಹ್ನದ ಊಟ. ಒಟ್ಟಾರೆ ಕೈಕಾಲು ನೋವಿನ ಮಧ್ಯವು ಈ ಪರ್ವತ ಏರಿದಾಗ ಅಲ್ಲಿನ ಸುಂದರ ಪರಿಸರ ನೋಡಿದಾಗ ಎಲ್ಲವೂ ಮರೆಯಾಗಿ ಪ್ರಕೃತಿಯ ಸೋಬಗೆ ನಲಿವಾಯಿತು. ಕೋಟೆಯ ಕೆಳಭಾಗದಲ್ಲಿ ಒಂದು ಸಣ್ಣ ಅಂಗಡಿ ಇದ್ದು, ಅದರಲ್ಲಿ ನೀರು, ಜ್ಯೂಸ್‌ ಇತ್ಯಾದಿ ಸಿಗುತ್ತದೆ. ಆದರೆ ಊಟ ಸಿಗುವುದಿಲ್ಲ. ಹಾಗಾಗಿ, ನಮಗೆ ಊಟ ಬೇಕಿದ್ದರೆ ನಾವೇ ಒಯ್ಯಬೇಕು ಅಥವಾ ಬೆಳ್ತಂಗಡಿ -ಉಜಿರೆಗೆ ಹೋಗಬೇಕು.

ಬೆಳಗ್ಗಿನ ಪ್ರಯಾಣ
ಗಡಾಯಿಕಲ್ಲು ಬೆಳಗಿನ ಜಾವ ಅಥವಾ ಸಂಜೆ ಸೂಕ್ತವಾದ ಸಮಯ ಹಾಗೇ ನಮ್ಮ ತಂಡ ಬೆಳ್ಳಂಬೆಳಗೆ ಬಂಟ್ವಾಳ ಬೆಳ್ತಂಗಡಿ ಮಾರ್ಗವಾಗಿ ಹೊರಟಿತು. ಸರಿಸುಮಾರು 61 ಕಿ.ಮೀ. ದೂರ ಜಮಾಲಾಬಾದ್‌ ಕೋಟೆಯನ್ನೇರಲು 1876 ಮೆಟ್ಟಿಲು ಹತ್ತಬೇಕು. ಹೀಗಾಗಿ ಸೂರ್ಯನ ತಾಪ ಏರುವ ಮೊದಲೇ ಕೋಟೆ ಏರುವ ಯೋಜನೆ ಮೊದಲೇ ಮಾಡಿಕೊಂಡೇ ಹೊರಟಿದ್ದೆವು. ಆರಂಭದಲ್ಲಿ ಸುಲಭವಾಗಿ ಹತ್ತಬಹುದಾದ ಕಾಲು ದಾರಿ. ಕಾಲು ದಾರಿಯನ್ನು ಮುಗಿಯುತ್ತಿದಂತೆ ನಮ್ಮ ತಂಡದ ಅರ್ಧಕ್ಕೆ ಅರ್ಧ ಬೇವತು ವಿಶ್ರಾಂತಿ ಸ್ಥಿತಿಗೆ ತಲುಪಿತ್ತು. ಗ್ಲೂ ಕೋಸ್‌ಗಳ ಪ್ಯಾಕೆಟ್‌ ಒಂದೊಂದೇ ಖಾಲಿಯಾಯಿತು. 

 ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.