ಜು. 13ಕ್ಕೆ ಪಡ್ಡಾಯಿ; 20ಕ್ಕೆ ‘ದಗಲ್ಬಾಜಿಲು’
Team Udayavani, Jul 5, 2018, 12:18 PM IST
ಕಾರ್ಕಳದ ನಿತ್ಯಾನಂದ ಪೈ ನಿರ್ಮಾಣ ಹಾಗೂ ಖ್ಯಾತ ನಿರ್ದೇಶಕ ಅಭಯಸಿಂಹ ಅವರ ನಿರ್ದೇಶನದ ‘ಪಡ್ಡಾಯಿ’ ತುಳು ಸಿನೆಮಾ ಜು. 13ಕ್ಕೆ ರಿಲೀಸ್ ಆಗಲಿದೆ. ಬಿಡುಗಡೆಗೆ ಮೊದಲೇ ಈ ಸಿನೆಮಾ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವುದರಿಂದ ಸಿನಿ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿನೆಮಾದ ಬಹುಪಾಲು ದೃಶ್ಯಗಳನ್ನು ಮಲ್ಪೆಯ ಪಡುಕರೆಯಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.
ಮಂಗಳೂರು ಹಾಗೂ ಉಡುಪಿಯ ಇತರ ಕೆಲವು ಭಾಗಗಳಲ್ಲೂ ಈ ಸಿನೆಮಾದ ಚಿತ್ರೀಕರಣ ಸಾಗಿದೆ. ಸಿಂಕ್ ಸೌಂಡ್ನಲ್ಲಿ ನಿರ್ಮಾಣವಾದ ಮೊದಲ ತುಳು ಸಿನೆಮಾ ಎಂಬ ಖ್ಯಾತಿಗೂ ಪಾತ್ರವಾಗಿದೆ. ಕುಂಬ್ಳೆ ಸಂತೋಷ್ ಶೆಟ್ಟಿ ಮತ್ತು ಸ್ನೇಹಿತರು ನಿರ್ಮಿಸಿರುವ ಎ. ಪ್ರಶಾಂತ್ ನಿರ್ದೇಶಿಸಿರುವ ‘ದಗಲ್ಬಾಜಿಲು’ ಸಿನೆಮಾ ಜು. 20ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ. ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಸುರೇಶ್ ಅಂಚನ್ ಒದಗಿಸಿದ್ದಾರೆ. ಖ್ಯಾತ ನಿರ್ದೇಶಕ ಎಂ.ಡಿ. ಶ್ರೀಧರ್ ಗರಡಿಯಲ್ಲಿ ಪಳಗಿರುವ ಎ.ಎಸ್. ಪ್ರಶಾಂತ್ ಸಿನೆಮಾವನ್ನು ನಿರ್ದೇಶಿಸಿದ್ದಾರೆ ಎಂದರು.
ದಿನೇಶ್ ಇರಾ/ ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ