5 ಮಾಗಣೆಯ ನಾಗಲಾಡಿಯ ನಾಗದೇವರಿಗೆ ‘ಪುಂಡಿ ಪಣವು’!
Team Udayavani, Jan 31, 2019, 7:22 AM IST
ಮಾಲಾಡಿ, ಪೇಜಾವರ, ಬಂಗಾಡಿ, ಮುಗೇರ ಪಾಲೆ ಮಾರ್ ಈ ಐದು ಮಾಗಣೆಗಳಿಗೆ ನಾಗಲಾಡಿಯ ನಾಗದೇವರು, ದೈವ ಪಂಜುರ್ಲಿ ಮೂಲ ಶಕ್ತಿಗಳು. ಇದಕ್ಕೆ ಸಂಬಂಧಪಟ್ಟ ಜಾಗದಲ್ಲಿ ಯಾರೇ ವಾಸವಾಗಿದ್ದರೂ ಅವರು ಬಾಡಿಗೆ ರೂಪದಲ್ಲಿ ಪ್ರತಿವರ್ಷ ಸೋಣ ಸಂಕ್ರಮಣದಂದು ಪುಂಡಿಪಣವು ದೈವ ದೇವರಿಗೆ ಸಲ್ಲಿಸಬೇಕು. ಒಂದು ವೇಳೆ ಏನಾದರೂ ತೊಂದರೆಗಳಿಂದ ಪುಂಡಿಪಣವು ಸಲ್ಲಿಸಲು ಅಸಾಧ್ಯವಾದಾಗ ದೈವ ದೇವರ ಕ್ಷಮೆ ಇದೆ. ಅನ್ಯಾಯ ಅಹಂಕಾರದಿಂದ ಸಲ್ಲಿಸದೇ ಹೋದಾಗ ಅವರಿಗೆ ಮಹಾಶಕ್ತಿಗಳಿಂದ ಸಿಗುವ ಶಿಕ್ಷೆಯಿಂದ ಬುದ್ಧಿ ಕಲಿತು ದೈವ ದೇವರಿಗೆ ಶರಣಾಗುವ ಕಥೆ ಇದೀಗ ತುಳು ಸಿನೆಮಾ ರೂಪದಲ್ಲಿ ಮೂಡಿಬರಲಿದೆ. ‘ಪುಂಡಿ ಪಣವು’ ಎಂಬ ಟೈಟಲ್ನಲ್ಲಿ ಸಿನೆಮಾ ರೆಡಿಯಾಗಲಿದೆ.
ತವಿಷ್ ಎಂಟರ್ಪ್ರೈಸಸ್ ಲಾಂಛನದಲ್ಲಿ ರಾಮಕೃಷ್ಣ ಶೆಟ್ಟಿ ನಿರ್ಮಿಸಿದ ಗಂಗಾಧರ ಕಿರೋಡಿಯನ್ ನಿರ್ದೇಶನದ ‘ಪುಂಡಿ ಪಣವು’ ತುಳು ಚಿತ್ರ ನಾಳೆ ಕರಾವಳಿ ಯಾದ್ಯಂತ ತೆರೆಕಾಣಲಿದೆ. ಸಿನೆಮಾದಲ್ಲಿ ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಸೊಬಗಿದೆ. ಜನಪದೀಯ ವಿಷಯಗಳನ್ನು ಹೊಂದಿರುವ ಈ ಚಿತ್ರದಲ್ಲಿ ತುಳುನಾಡಿನ ಮಣ್ಣಿನ ಪರಿಮಳ ಇದೆ. ಮರೆಯಾಗುತ್ತಿರುವ ಕೆಲವು ವಿಚಾರಗಳನ್ನು ‘ಪುಂಡಿಪಣವು’ ಸಿನೆಮಾ ಹೊಸ ತಲೆಮಾರಿನ ಯುವ ಜನತೆಗೆ ತಿಳಿಸಿಕೊಡುವ ಪ್ರಯತ್ನ ಎಂದೇ ಹೇಳಲಾಗುತ್ತಿದೆ.
ಗೋಪಿನಾಥ್ ಭಟ್, ರಘುರಾಮ ಶೆಟ್ಟಿ, ಸತೀಶ್ ಶೆಟ್ಟಿ, ಸುಂದರ ಹೆಗ್ಡೆ, ಸೂರಜ್ ಸನಿಲ್, ಪ್ರೀತಂ ಶೆಟ್ಟಿ, ರಾಘವೇಂದ್ರ ರಾವ್, ಎಸ್.ವಿ. ಆಚಾರ್, ಆರ್.ಎನ್. ಶೆಟ್ಟಿ, ಮೋಹನ್ ಬೋಳಾರ್, ಹರೀಶ್ ಪಂಚಮಿ, ಶಶಿ ಶಿರ್ಲಾಲ್, ತಾರಾನಾಥ್ ಉರ್ವ, ಸುರೇಶ್, ಯೋಗೀಶ್, ಉದಯ್, ಸೌರಭ ಹೆಗ್ಡೆ, ಅರ್ಥ್ ಶೆಟ್ಟಿ, ಭಾಸ್ಕರ್ ಮಣಿಪಾಲ, ಶಶಿರಾಜ್ ಶೆಟ್ಟಿ, ಅಮಿನ್ ಮುಲ್ಲಕಾಡ್, ತುಳಸಿದಾಸ್, ಪ್ರಕಾಶ್ ನಾಯಕ್, ಸುವರ್ಣ ಶೆಟ್ಟಿ, ಹರಿಣಿ, ಪವಿತ್ರ ಶೆಟ್ಟಿ, ಜಲಜಾ ಶೇಖರ್, ಪ್ರತಿಮಾ ನಾಯ್ಕ, ಅಕ್ಷತಾ, ರಕ್ಷಿತಾ, ಅಕ್ಷಿತಾ, ಮಮತಾ ಶೆಟ್ಟಿ, ಕಾಮಾಕ್ಷಿ, ಜಯಶೀಲ ಶೋಭಾ ಶೇಖರ್ ಶೆಟ್ಟಿ ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ.