ಮಂಜಿನ ನಗರಿಯಲ್ಲಿ  ಮಳೆ ಹನಿಯ ನಿನಾದ 


Team Udayavani, Jul 26, 2018, 3:12 PM IST

26-july-11.jpg

ಮಳೆ ಜೋರಾಗಿತ್ತು. ಮನಸ್ಸು ಮಾತ್ರ ಮಳೆಯ ಜತೆಗೆ ಹಾಯಾಗಿ ಸುತ್ತಾಡುವ ಕನವರಿಕೆ ಮಾಡುತ್ತಿತ್ತು. ಬಿಟ್ಟು ಬಿಟ್ಟು ಬರುವ ಮಳೆ- ಒಮ್ಮೊಮ್ಮೆ ಜೋರು ಮಳೆಯ ಜತೆಗೆ ಜಾಲಿ ರೈಡ್‌ ಹೋದರೆ ಹೇಗೆ ಎಂಬ ಯೋಚನೆ ಆಯಿತು. ಆಫೀಸಲ್ಲಿ ಕುಳಿತು ಸ್ನೇಹಿತರ ಜತೆಗೆ ಹೀಗೆ ಒಂದು ಮಾತುಕತೆ ಮಾಡುವಾಗಲೇ ಮಳೆ ಹೊರಗಡೆ ಶಬ್ದ ಮಾಡಿದಂತಿತ್ತು. ಖುಷಿ ಹೆಚ್ಚಾಯಿತು. ಇನ್ನು ತಡ ಮಾಡುವುದು ಬೇಡ..ಮಳೆಯ ಮೂಡ್‌ನಲ್ಲಿ ಮಡಿಕೇರಿ ಸುತ್ತಿ ಬರೋಣ ಅಂದುಕೊಂಡು ದಿನ ಕೂಡ ಫಿಕ್ಸ್‌ ಮಾಡಿದೆವು. ಶನಿವಾರ ರವಿವಾರ ಡ್ನೂಟಿಗೆ ರಜೆ ಇರುವುದರಿಂದ ಟೂರ್‌ ಡೇಟ್‌ ಸುಲಭವಾಗಿ ಫಿಕ್ಸ್‌ ಆಯಿತು. ಒಟ್ಟು 9 ಮಂದಿಯ ತಂಡ ಸೇರಿ ಟೆಂಪೋ ಟ್ರಾವೆಲರ್‌ ಬುಕ್‌ ಕೂಡ ಮಾಡಿದೆವು. ನೋಡ ನೋಡುತ್ತಿದ್ದಂತೆ ಪ್ರವಾಸ ದಿನ ಹತ್ತಿರ ಬಂತು.

ಅಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರಿಂದ ಹೊರಟ ನಾವು, ಕಲ್ಲಡ್ಕದಲ್ಲಿ ಕೆ.ಟಿ. ಹೀರಿ, ಮನ ತಣಿಸಿದೆವು. ಅಲ್ಲಿಂದ ಸಂಪಾಜೆ ದಾಟಿ ನಮ್ಮ ವಾಹನ ಮೆಲ್ಲನೆ ಮಳೆಯ ಲಾಲಿತ್ಯವನ್ನು ಆಸ್ವಾಧಿಸಿ ರೊಂಯ್ಯನೆ ಸಾಗುತ್ತಿತ್ತು. ಚಳಿಯ ತಂಗಾಳಿ ಮನಸ್ಸಿಗೆ ಹಿತ ನೀಡುತ್ತಿತ್ತು. ಸ್ವಲ್ಪ ದೂರ ದಾಟುವಾಗಲೇ ಕಾಡಿನ ಮಧ್ಯೆ ಅರ್ಥಾತ್‌ ರಸ್ತೆ ಬದಿ ನೀರ ಜರಿ ನಮ್ಮನ್ನು ಬರಸೆಳೆಯಿತು. 

ಚಳಿಗಾಳಿಯ ನಡುವೆಯೂ ನೀರಲ್ಲಿ ಮಿಂದು ನೆಲ್ಲಿಕಾಯಿ ಬಾಯಲ್ಲಿಟ್ಟು ಗಾಡಿ ಹತ್ತಿದೆವು. ಅದೇ ಸ್ಪೀಡಲ್ಲಿ ವಾಹನ ದುಬಾರೆ ತಲುಪಿದಾಗ ಬೆಳಗ್ಗೆ ಸುಮಾರು 10 ಗಂಟೆ. ನೀರಿಗೆ ಇಳಿದು ಆಡೋಣ ಎಂಬ ಮನಸ್ಸಾದರು ಮಳೆ ನೀರು ವಿಪರೀತ ಇರುವುದರಿಂದ ‘ಯಾರೂ ನೀರಿಗೆ ಇಳಿಯಬೇಡಿ’ ಎಂಬ ಸೂಚನೆ ಕೇಳಿ ಸುಮ್ಮನಾದೆವು. ಅಲ್ಲೇ ಒಂದಿಷ್ಟು ಫೋಟೋ ಸೆಷನ್‌ ಮುಗಿಸಿ, ಹತ್ತಿರದಲ್ಲೇ ಇರುವ ಚಿಕ್ಲಿಹೊಳೆ ಡ್ಯಾಂ ನೋಡಲು ಹೊರಟೆವು. ನೀರರಾಶಿ ಕಣ್ತುಂಬಿಸಿ, ಗೋಲ್ಡನ್‌ ಟೆಂಪಲ್‌ಗೆ ಬಂದು ಅಲ್ಲೊಂದಿಷ್ಟು ಸಮಯ ಕಳೆದೆವು. 

ಮಳೆ ಚಳಿಯ ನಡುವೆ ಮಾವಿನಕಾಯಿ ರುಚಿ ನೋಡಿದೆವು. ಅಲ್ಲಿಂದ ಮತ್ತೆ ನಮ್ಮ ವಾಹನ ಹಾರಂಗಿ ಡ್ಯಾಂನತ್ತ ಹೊರಟಿತು. ಅಲ್ಲಿಯೂ ಜಲರಾಶಿ ಕಂಡು ಮೂಕವಿಸ್ಮಿತ ಭಾವನೆ. ಹತ್ತಿರದಲ್ಲೇ ಇದ್ದ ಪಾರ್ಕ್‌ನ ಜೋಕಾಲಿಯಲ್ಲೆಲ್ಲ ಮಕ್ಕಳಂತೆ ಆಡಿ ಕುಣಿದಾಡಿದೆವು.

ಕುಶಾಲನಗರಕ್ಕೆ ತಲುಪುವಾಗ ಹಸಿವಿನಿಂದ ಹೊಟ್ಟೆ ಜುರುಗುಟ್ಟಲಾರಂಬಿಸಿತು. ಎಲ್ಲರೂ ಒಂದು ಹೊಟೇಲ್‌ನಲ್ಲಿ ಭರ್ಜರಿ ಊಟ ಮುಗಿಸಿ ಮತ್ತೆ ಕಾವೇರಿ ನಿಸರ್ಗಧಾಮಕ್ಕೆ ಪ್ರಯಾಣ ಆರಂಭ. ಮರದ ಮೇಲಿನ ಮನೆಯ ಕಂಡು ಅಲ್ಲೊಂದಿಷ್ಟು ಫೋಟೊ ತೆಗೆಸಿ, ಅಲ್ಲೇ ಓಡಾಡುತ್ತಿದ್ದ ಜಿಂಕೆಗಳನ್ನು ಕಂಡು ಖುಷಿಪಟ್ಟೆವು. ಅಲ್ಲಿಂದ ಸಂಜೆ ವೇಳೆ ರಾಜಾಶೀಟ್‌ಗೆ ಬಂದಾಗ ಮುಂಗಾರು ಮಳೆಯ ನರ್ತನ ಮನಸ್ಸಿಗೆ ಮುದ ನೀಡಿದರೂ ಸೂರ್ಯಾಸ್ತಮಾನ ಕಾಣಲಾಗದೆ ನಿರಾಶೆಯಾಯಿತು.

ಬಳಿಕ ಅಲ್ಲೇ ಹತ್ತಿರದಲ್ಲಿ ಹೋಮ್‌ ಸ್ಟೇಗೆ ಹೋಗಿ ಒಂದಷ್ಟು ಕುಣಿತ, ಪಾರ್ಟಿ ನಡೆಸಿ ರಾತ್ರಿ ಉಳಿದು ಮರುದಿನ ಬೆಳಗ್ಗೆ ಅಲ್ಲೇ ಒಂದಿಷ್ಟು ಕಡೆ ಸುತ್ತಾಡಿದೆವು. ರಾಜಾಟೋಂಬ್‌ಗ ಹೋಗಿ ಅಲ್ಲಿ ರಾಜರ ಕಾಲದ ವಿಷಯ ತಿಳಿದು, ಮಡಿಕೇರಿಯ ಮೈನ್‌ ಪಾಯಿಂಟ್‌ ಅಬ್ಬಿ ಫಾಲ್ಸ್‌ಗೆ ಬಂದಾಗ ಸುಮಾರು 11 ಗಂಟೆಯಾಗಿತ್ತು. ಜನಜಾತ್ರೆಯಲ್ಲಿ ಮಿಂದಿದ್ದ ಅಬ್ಬಿ ಮಳೆಯ ಲಾಲಿತ್ಯದೊಂದಿಗೆ ಬಿಳಿಯ ನೊರೆಯ ಹಾಲನ್ನು ಚೆಲ್ಲುತ್ತಾ ಬಿತ್ತರಿಸಿದ ಸೊಬಗು ರೋಮಾಂಚನಗೊಳಿಸಿತು. ಈ ಆಹ್ಲಾದಕತೆಗೆ ಚಳಿ ಗೊತ್ತೇ ಆಗಿಲ್ಲ. ಮತ್ತೆ ನಮ್ಮ ವಾಹನ ಸಾಗಿದ್ದು ಚೇಳಾವರ ಫಾಲ್ಸ್‌ ಗೆ. ಅದೂ ಕೂಡ ನೀರಿನ ವೈಯ್ನಾರ ಪ್ರತಿಧ್ವನಿಸುತ್ತಿತ್ತು. ಅಲ್ಲಿಂದ ಭಾಗಮಂಡಲಕ್ಕೆ ಬಂದು ಊಟ ಮುಗಿಸಿ ತಲಕಾವೇರಿಗೆ ಬಂದೆವು. ಮಂಜು ಮುಸುಕಿದ ಅಲ್ಲಿನ ಚೆಲುವು ವರ್ಣಿಸಲು ಅಸಾಧ್ಯ.

ವಾಹನ ಹೀಗೆ ಹೋದಲ್ಲೆಲ್ಲ ಮಳೆಯ ರಾಗ ಕೇಳುತ್ತಲೇ ಇತ್ತು. ಚಟ ಪಟ ಸದ್ದು ಕಿವಿ ತಣಿಸುತ್ತಿತ್ತು. ಚಳಿಯು ಮನದ ಭಾವನೆಗೆ ಹೊಸ ರೂಪ ನೀಡುತ್ತಿತ್ತು. ಹನಿಹನಿ ಇಬ್ಬನಿಗೆ ತೊಯ್ದ ಮನವು ಮಡಿಕೇರಿಯನ್ನೇ ಬಯಸುತ್ತಿತ್ತು. ಆದರೆ, ನಮ್ಮ ವಾಹನ ನಾವು ಬಂದ ರಸ್ತೆಯಲ್ಲೇ ವಾಪಾಸು ಬರುತ್ತಿತ್ತು. ನೂರಾರು ನೆನಪುಗಳನ್ನು ಕಟ್ಟಿಕೊಂಡು ಬಂದಾಗ ಮೆಲ್ಲನೆ ವಾಹ ನದ ಕಿಟಕಿಯ ಮೂಲಕ ಹೊರಗೆ ದೃಷ್ಟಿ ಹಾಯಿಸಿದರೆ ಸಂಪಾಜೆ ಬಂದಾಗಿತ್ತು. 

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಮಡಿಕೇರಿಗೆ 138 ಕಿ.ಮೀ. ದೂರ.
· ಬಸ್‌, ಖಾಸಗಿ ವಾಹನ ಸೌಲಭ್ಯಗಳಿವೆ.
· ಕುಶಾಲನಗರ, ಮಡಿಕೇರಿಯಲ್ಲಿ ಹಲವು ಪ್ರವಾಸಿ ತಾಣಗಳಿವೆ.
· ಮೊದಲೇ ಬುಕ್ಕಿಂಗ್‌ ಮಾಡಿದರೆ ಊಟ, ವಸತಿ ವ್ಯವಸ್ಥೆಗೆ ಸಮಸ್ಯೆಯಿಲ್ಲ.
· ಸ್ಥಳೀಯವಾಗಿಸುತ್ತಾಡಲು ಖಾಸಗಿ ವಾಹನ ಸೌಲಭ್ಯಗಳು ಸಾಕಷ್ಟಿವೆ.

ಸ್ಟಾಲನ್‌ ಫಿಡಲ್‌ ಡಿ’ಸೋಜಾ,
ಮಂಗಳೂರು

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.