ಕೃಷ್ಣಾಷ್ಟಮಿಗೆ ಕೋಸ್ಟಲ್ವುಡ್‌ ಶೈನಿಂಗ್‌!

ತುಳುವಿನಲ್ಲಿ 'ಗಿರಿಗಿಟ್'-ಕೊಂಕಣಿಯಲ್ಲಿ 'ನಿರ್ಮಿಲ್ಲೆಂ ನಿರ್ಮೋಣೆಂ'

Team Udayavani, Aug 22, 2019, 5:28 AM IST

g-37

ಈ ಬಾರಿಯ ಶ್ರೀಕೃಷ್ಣಾಷ್ಟಮಿಯ ಸಡಗರಕ್ಕೆ ಕೋಸ್ಟಲ್ವುಡ್‌ ಕೂಡ ಶೈನಿಂಗ್‌ ಆಗಲಿದೆ. ತುಳು, ಕೊಂಕಣಿಯಲ್ಲಿ ತಲಾ ಒಂದೊಂದು ಸಿನೆಮಾಗಳು ತೆರೆಕಾಣಲಿರುವ ಹಿನ್ನೆಲೆಯಲ್ಲಿ ಕರಾವಳಿಯ ಸಿನೆಮಾಲೋಕದಲ್ಲಿ ಅದ್ವಿತೀಯ ಕ್ಷಣಕ್ಕೆ ಕ್ಷಣಗಣನೆ ಶುರುವಾಗಿದೆ.

ತುಳು ಸಿನೆಮಾಗಳ ಪಾಲಿಗೆ ಭವಿಷ್ಯ ರೂಪಿಸಲಿರುವ ಹಾಗೂ ಭರವಸೆ ಮೂಡಿಸಿರುವ ರೂಪೇಶ್‌ ಶೆಟ್ಟಿ ಅವರ ‘ಗಿರಿಗಿಟ್’ ಒಂದೆಡೆಯಾದರೆ; ಕೊಂಕಣಿ ಸಿನೆಮಾ ಕ್ಷೇತ್ರದಲ್ಲಿ ಬಹುನಿರೀಕ್ಷೆ ಮೂಡಿಸಿರುವ ‘ನಿರ್ಮಿಲ್ಲೆಂ ನಿರ್ಮೋಣೆಂ’ ಸಿನೆಮಾ ಕೂಡ ಕೃಷ್ಣಾಷ್ಟಮಿ ದಿನದಂದೇ ತೆರೆಕಾಣಲಿದೆ.

ನಗಿಸಲಿದೆ ‘ಗಿರಿಗಿಟ್’
ಕೋಸ್ಟಲ್ವುಡ್‌ನ‌ಲ್ಲಿ ಸದ್ಯ ಭರವಸೆ ಮೂಡಿಸಿದ ಸಿನೆಮಾ ‘ಗಿರಿಗಿಟ್’. ಪೋಸ್ಟರ್‌, ಡೈಲಾಗ್‌, ಹಾಡು, ಟ್ರೇಲರ್‌ ಮೂಲಕವೇ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಯಲ್ಲಿರುವ ಈ ಸಿನೆಮಾ ಕೃಷ್ಣಾಷ್ಟಮಿಯ ದಿನ ರಿಲೀಸ್‌ ಆಗಲಿದೆ.

ನವೀನ್‌ ಡಿ ಪಡೀಲ್, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್‌ ಮಿಜಾರ್‌, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಸೇರಿದಂತೆ ಪ್ರಬುದ್ಧ ಕಲಾವಿದರು ಇರುವ ಕಾರಣದಿಂದ ಗಿರಿಗಿಟ್ ಮೇಲೆ ಎಲ್ಲರಿಗೂ ಬಹುನಿರೀಕ್ಷೆ. ಸದ್ಯ ಕೊಂಚ ಸಪ್ಪೆಯಾಗಿರುವ ತುಳು ಸಿನೆಮಾ ಲೋಕಕ್ಕೆ ಸ್ಫೂರ್ತಿ ನೀಡಲು ತಾಕತ್ತಿರುವ ಸಿನೆಮಾ ಇದು ಎಂದೇ ಬಣ್ಣಿಸಲಾಗುತ್ತಿದೆ.

50,000 ಗೆಲ್ಲಿ!
ವಿವಿಧ ಕಾರಣಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಗಿರಿಗಿಟ್ ಸಿನೆಮಾ ಪ್ರಚಾರದ ನೆಲೆಯಲ್ಲಿ ಇನ್ನೊಂದು ವಿಶೇಷತೆಗೆ ಕೈಹಾಕಿದೆ. ಮೊದಲ ಮೂರು ದಿನಗಳೊಗೆ (ಆ.23, 24, 25) ಸಿನೆಮಾ ನೋಡಿದ ಅದೃಷ್ಟಶಾಲಿ ಐವರಿಗೆ ತಲಾ 10,000 ರೂ.ಗಳಂತೆ ಒಟ್ಟು 50,000 ರೂ. ನಗದು ಬಹುಮಾನವಿರುತ್ತದೆ. ಇದರ ಲಕ್ಕಿಕೂಪನ್‌ ಅನ್ನು ತಂದು ಚಿತ್ರಮಂದಿರದಲ್ಲಿ ಇಟ್ಟಿರುವ ಬಾಕ್ಸ್‌ ನಲ್ಲಿ ಹಾಕಿದರೆ ಅದೃಷ್ಟಶಾಲಿಗಳ ಆಯ್ಕೆ ನಡೆಯಲಿದೆ.

ಪ್ರೀತಿಯ ಹೃದಯದಲ್ಲಿ ‘ನಿರ್ಮಿಲ್ಲೆಂ ನಿರ್ಮೋಣೆಂ’
ಕೊಂಕಣಿ ಸಿನೆಮಾ ಕ್ಷೇತ್ರದಲ್ಲಿ ಬಹುನಿರೀಕ್ಷೆ ಮೂಡಿಸಿರುವ ‘ನಿರ್ಮಿಲ್ಲೆಂ ನಿರ್ರ್ಮೊಣೆಂ’ ಸಿನೆಮಾ ಸದ್ಯ ಹಾಡಿನ ಮೂಲಕ ಮೋಡಿ ಮಾಡಿದೆ. ‘ನಿರ್ಮಿಲ್ಲೆಂ ನಿರ್ಮೋಣೆಂ’ ಆ.23ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ.ಮೆಲ್ವಿನ್‌ ಎಲ್ಪೆಲ್ ಅವರ ನಿರ್ದೇಶನದಲ್ಲಿ ಈ ಸಿನೆಮಾ ತಯಾರಾಗಿದೆ. 42 ದಿನಗಳ ಕಾಲ ಒಟ್ಟು ನಾಲ್ಕು ಹಂತಗಳಲ್ಲಿ ಈ ಸಿನೆಮಾ ಬೆಂಗಳೂರು, ಮಂಗಳೂರು, ಕುಂದಾಪುರ, ಕಾರ್ಕಳ ಮುಂತಾದೆಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಸಿನೆಮಾದ ನಾಯಕರಾಗಿ ಪ್ರತಾಪ್‌ ಮಿನೇಜಸ್‌, ಗೋಡ್ವಿನ್‌, ನಾಯಕಿಯರಾಗಿ ಸೀಮಾ ಬೊತೇಲೋ, ವೀರಾ ಪಿಂಟೋ ಅವರು ನಟಿಸುತ್ತಿದ್ದಾರೆ. ಮೀನಾಕ್ಷಿ ಮಾರ್ಟಿನ್‌, ಹ್ಯಾಂಬರ್ಟ್‌ ಗೋವಾ, ರೋನಿ ಸುರತ್ಕಲ್, ಚಾಲ್ಸ್ ರ್ಗೋಮ್ಸ್‌, ವಿನ್ನಿ ಫೆರ್ನಾಂಡಿಸ್‌, ನೋಬರ್ಟ್‌ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಸಂತೋಷ್‌, ಮಿಲನ್‌ ಮರ್ಕಂಜ, ಜೆರಾಲ್ಡ್ ಮತ್ತು ರಾಯನ್‌ ಅವರು ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಚಿತ್ರಕಥೆಯನ್ನು ನೋಬರ್ಟ್‌ ಜಾನ್‌ ಅವರು ಬರೆದಿದ್ದಾರೆ. ಅವರು ಸಹ ನಿರ್ದೇಶಕರು. ಕೆಮರಾದಲ್ಲಿ ಮಂಜುನಾಥ್‌ ಅವರು ದುಡಿದಿದ್ದಾರೆ. ರೆಂಬಿಬಸ್‌ ಮತ್ತು ಆರ್‌. ಪಾಪನ್‌ ಜೋಸ್ವಿನ್‌ ಅವರ ಸಾಹಿತ್ಯ ಚಿತ್ರಕ್ಕಿದೆ.

ಪಡೀಲ್ಗೆ ಡಬಲ್ ಧಮಾಕ!
ಪಡೀಲ್ ಅಭಿನಯದ ‘ಗಿರಿಗಿಟ್’ ಸಿನೆಮಾ ರಿಲೀಸ್‌ ಆಗುವ ದಿನವೇ ಪಡೀಲ್ ಅಭಿನಯಿಸುವ ಕನ್ನಡ ಸಿನೆಮಾ ‘ಫ್ಯಾನ್‌’ ಕೂಡ ಬಿಡುಗಡೆಯಾಗಲಿರುವುದು ವಿಶೇಷ. ಹೀಗಾಗಿ ಈ ಬಾರಿಯ ಶ್ರೀ ಕೃಷ್ಣಾಷ್ಟಮಿ ಪಡೀಲ್ ಪಾಲಿಗೆ ಮಹತ್ವದ ದಿನ. ಸಿನೆಮಾದಲ್ಲಿ ನಾಯಕ ಆರ್ಯನ್‌, ನಾಯಕಿ ಅದ್ವಿತಿ ಶೆಟ್ಟಿ, ಸಲೆಬ್ರಿಟಿ ನಾಯಕಿ ಸಮೀಕ್ಷಾ, ವಿಜಯ್‌ ಕಾಶಿ, ಮಂಡ್ಯ ರಮೇಶ್‌, ರವಿ ಭಟ್, ರಘು ಪಾಂಡೇಶ್ವರ್‌, ಸ್ವಾತಿ ವಿಟ್ಲ, ಮಂಗೇಶ್‌ ಭಟ್, ವಿಜಯಲಕ್ಷ್ಮೀ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಪೃಥ್ವಿ ಸಾಗರ್‌, ಗಣೇಶ್‌ ಗೌಡ ಕೊಂಡಾಣಿ, ಪ್ರಣತಿ ಗಾಣಿಗ ತಾರಾಗಣದಲ್ಲಿದ್ದಾರೆ.

-ದಿನೇಶ್‌ ಇರಾ

ಟಾಪ್ ನ್ಯೂಸ್

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.