ಸ್ಮಾರ್ಟ್‌ ಫೋನ್‌ ಎಂಬ ಸೂಪರ್‌ ಮಾರ್ಕೆಟ್‌


Team Udayavani, Jun 13, 2019, 5:00 AM IST

t-10

ಈ ಶತಮಾನವನ್ನು ಸ್ಮಾರ್ಟ್‌ ಯುಗ ಅಂದರೂ ತಪ್ಪಿಲ್ಲ. ಬಯಸಿದೆಲ್ಲವೂ ಕ್ಷಣಾರ್ಧದಲ್ಲಿ ಸಿಗಬೇಕು, ಆಗಿಬಿಡಬೇಕು ಎನ್ನುವ ಮನಸ್ಥಿತಿ ಇರುವ ಕಾಲಘಟ್ಟದಲ್ಲಿ ತಂತ್ರಜ್ಞಾನಾಧಾರಿತ ಪರಿಕರಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಹೆಚ್ಚು.

ಸಾವಧಾನದಿಂದ ಹೆಜ್ಜೆ ಇಡುತ್ತಿದ್ದ ಮನಸ್ಸನ್ನು ವೇಗದೂತವನ್ನಾಗಿ ಪರಿವರ್ತಿಸಿದ್ದು ಈ ಸ್ಮಾರ್ಟ್‌ ಯುಗ. ಒಂದಷ್ಟು ಅನನುಕೂಲತೆ, ಹೆಚ್ಚು ಅನುಕೂಲತೆ ಇರುವ ಈ ಯುಗವನ್ನು ನೆಚ್ಚಿಕೊಂಡವರೇ ಅಧಿಕ. ಶಿಕ್ಷಣ, ವ್ಯವಹಾರ, ಸಂಪರ್ಕ, ಸಂವಹನ ಹೀಗೆ ಬಹುತೇಕ ಎಲ್ಲ ಚಟುವಟಿಕೆಗಳಲ್ಲಿ ಸ್ಮಾರ್ಟ್‌ ತಂತ್ರಜ್ಞಾನ ಬಳಕೆಯಲ್ಲಿದೆ. ವ್ಯವಸ್ಥೆ ಹೇಗೆ ಬದಲಾಗುತ್ತಿದೆ ಅಂದರೆ ಸ್ಮಾರ್ಟ್‌ ತಂತ್ರಜ್ಞಾನದ ಅಬ್ಬರಕ್ಕೆ ಊರುಗಳೇ ಸ್ಮಾರ್ಟ್‌ ಸಿಟಿಗಳಾಗಿ ಬದಲಾಗುತ್ತಿವೆ.

ಕೆಲವು ವರ್ಷಗಳ ಹಿಂದಷ್ಟೇ ಕಾಲಿಟ್ಟ ಸ್ಮಾರ್ಟ್‌ ಆಧಾರಿತ ತಂತ್ರಜ್ಞಾನಗಳು ಸೃಷ್ಟಿಸಿದ ಅನಿವಾರ್ಯತೆ ಊಹಿಸಲು ಅಸಾಧ್ಯ. ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ಒಂದು ಕಾಲದಲ್ಲಿ ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸುವುದೇ ದೊಡ್ಡ ಸಂಗತಿ ಎನಿಸಿತ್ತು. ಈಗ ಆ ಜಾಗದಲ್ಲಿ ಇಮೇಲ್‌, ವಾಟ್ಸ್‌ ಆ್ಯಪ್‌, ಟೆಲಿಗ್ರಾಂ, ಫೇಸುಬುಕ್‌, ಟ್ವಿಟರ್‌ ಆಗಮಿಸಿ ಹೊಸ ಪ್ರಪ್ರಂಚವನ್ನೇ ಸೃಷ್ಟಿಸಿವೆ.

ಹೀಗೆ ಎಸ್‌ಎಂಎಸ್‌ ಮಾತ್ರ ಕಳೆದು ಹೋಗಿದ್ದಲ್ಲ. ಬದಲಿಗೆ ಆ ಸೌಲಭ್ಯ ಮಾತ್ರ ಇದ್ದ ಮೊಬೈಲ್‌ ಸೆಟ್‌ಗಳೂ ತೆರೆಮರೆಗೆ ಸರಿದಿವೆ. ಈಗ ಏನಿದ್ದರೂ ಸ್ಮಾರ್ಟ್‌ ಮೊಬೈಲ್‌. ಸ್ಮಾರ್ಟ್‌ ತಂತ್ರಾಂಶ ಬಳಸುವ ಸಂದರ್ಭ ಕಿರಿಕಿರಿ ಆಗಬಾರದು ಎನ್ನುವ ಕಾರಣದಿಂದ ಕರೆ ಮಾಡಲಷ್ಟೇ ಉಳಿದ ಫೋನ್‌ ಸೆಟ್‌ಗಳು ಸೀಮಿತ.

ಇನ್ನೊಂದು ಮಗ್ಗುಲನ್ನು ಗಮನಿಸಿದರೆ, ಇಂಟರ್‌ನೆಟ್‌ ಮೊಬೈಲ್‌ನೊಳಗೆ ಜಾಗ ಪಡೆದು ಸರ್ವವ್ಯಾಪ್ತಿಯಾದ ಅನಂತರ ಕಂಪ್ಯೂಟರ್‌ ಅನ್ನು ಅನಿವಾರ್ಯ ಎಂಬ ನೆಲೆಯಲ್ಲಿ ಅವಲಂಬಿಸುವ ಪ್ರಮೇಯ ತಪ್ಪಿತ್ತು. ಸೈಬರ್‌ ಕೇಂದ್ರಗಳಿಗೆ ಹೊಕ್ಕಿ, ಅಲ್ಲಿ ಕಂಪ್ಯೂಟರ್‌ ಮುಂದೆ ಕುಳಿತ ಶೋಧಿಸುವ ಬದಲು ಸ್ಮಾರ್ಟ್‌ ಪೋನ್‌ ಕ್ಷಣಮಾತ್ರದಲ್ಲಿ ಈ ಕೆಲಸ ಮಾಡುವಷ್ಟು ವೇಗವಾಗಿ ಬೆಳೆದಿದೆ. ಕಂಪ್ಯೂಟರ್‌ ಮಾಡುವ ಕೆಲಸವನ್ನು, ಟಿ.ವಿ. ಎಂಬ ಪೆಟ್ಟಿಗೆ ತೋರಿಸುವ ಕ್ರಿಕೆಟ್‌ ಮ್ಯಾಚ್‌ ಅನ್ನು ಸ್ಮಾರ್ಟ್‌ಫೋನ್‌ ಎಂಬ ಸಣ್ಣ ಸಾಧನ ಬಳಕೆದಾರರಿಗೆ ಒದಗಿಸಬಲ್ಲುದು. ಹತ್ತಾರು ಪರಿಕರಗಳನ್ನು ಅವಲಂಬಿಸಬೇಕಿದ್ದ ಕಾಲ ಬದಲಾಗಿ ಎಲ್ಲವೂ ಏಕ ತಂತ್ರಜ್ಞಾನದಲ್ಲಿ ದೊರೆಯುತ್ತಿದೆ. ಎಲ್ಲವೂ ಒಂದೇ ಸೂರಿನಡಿ ಕೈಗೆಟುಕುವ ಸೂಪರ್‌ ಮಾರ್ಕೆಟ್‌ ತರಹ.

ಶೇ. 99ಕ್ಕಿಂತ ಮಿಕ್ಕಿ ಯುವ ಸಮುದಾಯ ಸ್ಮಾರ್ಟ್‌ ತಂತ್ರಜ್ಞಾನ ಒಪ್ಪಿಕೊಂಡಿದೆ. ಶೇ. 60ಕ್ಕಿಂತ ಅಧಿಕ ವಯಸ್ಕರ ಕೈಯಲ್ಲೂ ಸ್ಮಾರ್ಟ್‌ ಫೋನ್‌ ಓಡಾಡುತ್ತಿದೆ. ಇದು ಮೊಬೈಲ್‌ ಎಂಬ ಸಂಪರ್ಕ ಸಂವಹನ ಮಾಧ್ಯಮವೊಂದು ಎಸ್‌ಎಂಎಸ್‌ ಅನಿವಾರ್ಯತೆ ಕಳೆದುಕೊಂಡು ಸ್ಮಾರ್ಟ್‌ ಆಗಿ ಬದಲಾದ ಸಣ್ಣ ಕಥೆಯಷ್ಟೆ. ಇಂತಹ ಸಾವಿರಾರು ಕಥೆಗಳು ಇನ್ನುಳಿದ ಪರಿಕರಗಳಲ್ಲಿ ಇವೆ.

-   ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.