ಹಚ್ಚಹಸುರಿನ ಮಧ್ಯೆ ಧ್ಯಾನದಲ್ಲಿ ರಾಮೇಶ್ವರ


Team Udayavani, Apr 18, 2019, 6:22 AM IST

TOUR1

ದಾವಣಗೆರೆಯ ಜಿಲ್ಲೆ, ಹೊನ್ನಾಳಿ ತಾಲೂಕಿನಲ್ಲಿರುವ ತೀರ್ಥ ರಾಮೇಶ್ವರ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳ. ಶ್ರೀರಾಮನಿಂದ ತೀರ್ಥ ಮತ್ತು ಈಶ್ವರನ ಮೂರ್ತಿ ಉದ್ಭವವಾಗಿದ್ದರಿಂದ ಈ ಕ್ಷೇತ್ರಕ್ಕೆ ತೀರ್ಥರಾಮೇಶ್ವರ ಎಂದು ಹೆಸರು ಬಂದಿದೆ ಎನ್ನಲಾಗಿದೆ.

ಹಚ್ಚ ಹಸುರಿನ ಚಾದರವನ್ನು ಹೊದ್ದ ಬೆಟ್ಟ- ಗುಡ್ಡಗಳು, ದಾರಿಯುದ್ದಕ್ಕೂ ಹಸಿರ ಝರಿಯಂತೆ ಕಾಣುವ ಗದ್ದೆಗಳು, ಕಾಯಕದಲ್ಲಿಯೇ ತಲ್ಲೀನರಾಗಿ ಉಳುಮೆ ಮಾಡುತ್ತಿರುವ ರೈತಾಪಿ ಜನರು. ತಣ್ಣಗೆ ಬೀಸುವ ಕುಳಿರ್ಗಾಳಿ ಇವೆಲ್ಲ ಕಾಣಸಿಗುವುದು ತೀರ್ಥ ರಾಮೇಶ್ವರಕ್ಕೆ ತೆರಳಬೇಕಾದ ದಾರಿಯಲ್ಲಿ.

ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮವನ್ನು ಹಾಯ್ದು ಅದರ ಅಂಚಿಗೆ ಬಂದು ನಿಂತಾಗ ಕಣ್ಣೆದುರು ದೈತ್ಯಾಕಾರದ ಹಸಿರು ಬೆಟ್ಟ, ಅದರುದ್ದಕ್ಕೂ ದಟ್ಟವಾದ ಕಾಡು ತಡೆದು ನಿಲ್ಲಿಸುತ್ತದೆ. ಅನತಿ ದೂರ ಕೃತಕ ಮೆಟ್ಟಿಲುಗಳನ್ನು ಏರುತ್ತ ಹೋಗುತ್ತಿದ್ದಂತೆ ಏದುಸಿರು ಆರಂಭವಾಗುತ್ತದೆ. ಗಮ್ಯವನ್ನು ತಲುಪಿದೊಡನೆ ತೀರ್ಥ ರಾಮೇಶ್ವರ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಶಾಂತ, ಸುಂದರ ನಿಸರ್ಗ ದಣಿವನ್ನೆಲ್ಲ ಮರೆಸಿಬಿಡುತ್ತದೆ.

ದೇವಸ್ಥಾನದ ಆವರಣದಲ್ಲಿ ಸಿಗುವ ಪುಟ್ಟ ನೀರಿನ ಹೊಂಡ ಇಲ್ಲಿನ ವಿಶೇಷ. ಈ ಹೊಂಡಕ್ಕೆ ನೀರು ಗುಪ್ತವಾಗಿ ಕಾಶಿಯಿಂದ ಹರಿದು ಬರುತ್ತದೆ ಎಂಬ ನಂಬಿಕೆ ಇದೆ. ಈ ನೀರು ಚಲನಶೀಲವಲ್ಲದಿದ್ದರೂ ಎಷ್ಟೇ ದಿನಗಳಾದರೂ ಮಲಿನವಾಗುವುದಿಲ್ಲ. ಇಲ್ಲಿನ ನೀರಿಗೆ ವಿಶಿಷ್ಟವಾದ ರುಚಿ ಇದ್ದು, ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಅದು ಹೊಂದಿದೆ ಎಂಬುದು ನಂಬಿಕೆ. ಈ ಪುಟ್ಟ ಹೊಂಡ ಯಾವತ್ತೂ ತುಂಬಿ ನೀರು ಹೊರ ಚೆಲ್ಲುವುದಿಲ್ಲ. ಇದರಲ್ಲಿನ ನೀರನ್ನು ಯಾವುದೇ ಪ್ರಮಾಣದಲ್ಲಿ ಮೇಲೆತ್ತಿಕೊಂಡಾಗಲೂ ನೀರಿನ ಮಟ್ಟದಲ್ಲಿ ವ್ಯತ್ಯಾಸವಾಗುವುದಿಲ್ಲವೆಂದು ಈ ದೇವಸ್ಥಾನದ ಅರ್ಚಕರಾದ ಶಿವಕುಮಾರ್‌ ಹೇಳುತ್ತಾರೆ.

ಮುಖ್ಯ ದೇಗುಲದಲ್ಲಿ ಕಂಡು ಬರುವ ಲಿಂಗವು ಉದ್ಭವ ಮೂರ್ತಿಯಾಗಿದೆ. ರಾಮ ಸೀತೆಯರು ವನವಾಸದಲ್ಲಿದ್ದಾಗ ಈ ಸ್ಥಳಕ್ಕೆ ಬಂದಿದ್ದರು. ಸೀತೆಗೆ ಬಾಯಾರಿಕೆಯಾಗಿ ನೀರಿಗಾಗಿ ರಾಮನನ್ನು ಯಾಚಿಸುತ್ತಾಳೆ. ಆಗ ರಾಮನು ಯಾವ ಸ್ಥಳದ ನೀರು ಬೇಕೆಂದಾಗ ಕಾಶಿಯ ನೀರನ್ನು ಕೇಳುತ್ತಾಳೆ. ಆಗ ರಾಮನು ಈಗಿರುವ ಹೊಂಡವನ್ನು ಕಟ್ಟಿ ಅಲ್ಲಿಗೆ ಕಾಶಿಯಿಂದ ನೀರು ಹರಿದು ಬರುವಂತೆ ಮಾಡುತ್ತಾನೆ. ಅನಂತರ ಸೀತೆ ಪೂಜಿಸಲು ಮೂರ್ತಿಯನ್ನು ಬೇಡಿದಾಗ ಲಿಂಗೋದ್ಭವವನ್ನು ಮಾಡಿದನೆಂದು ಪೂರ್ವಜರು ಹೇಳುತ್ತಾರೆ.

ನಮ್ಮಲ್ಲಿ ಬ್ರಹ್ಮನ ದೇವಾಲಯಗಳು ಅತೀ ವಿರಳವಾಗಿ ಕಂಡು ಬರುತ್ತವೆ. ದೇವಸ್ಥಾನದ ಎಡ ಪಾರ್ಶ್ವದಲ್ಲಿ ಚತುರ್ಮುಖ ಬ್ರಹ್ಮನ ಪುಟ್ಟ ದೇವಾಲಯವೊಂದಿದ್ದು, ಮೂರು ಮುಖಗಳನ್ನು ಎದುರಿನಿಂದ ನೋಡಬಹುದು. ನಾಲ್ಕನೇ ಮುಖವು ಹಿಂದೆ ಇರುವ ದರ್ಪಣದಲ್ಲಿ ಗೋಚರಿಸುತ್ತದೆ.
ವಿಜಯನಗರದ ಅರಸರು 1339ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದರು. ಅನಂತರ ಬಹಮನಿ ಸುಲ್ತಾನರ ಆಡಳಿತದಲ್ಲಿ ಈ ದೇಗುಲವು ದಾಳಿಗೆ ಒಳಗಾಯಿತು. ಪುನಃ ಮೈಸೂರು ಅರಸರ ಆಡಳಿತಾವಧಿಯಲ್ಲಿ ಪುನರುಜ್ಜೀವನಗೊಂಡಿತು ಈ ತೀರ್ಥ ರಾಮೇಶ್ವರ ಎನ್ನುತ್ತದೆ ಇತಿಹಾಸ. ರಾಮನಿಂದ ತೀರ್ಥ ಮತ್ತು ಈಶ್ವರ ಉದ್ಭವಗೊಂಡ ಕಾರಣಕ್ಕೆ ಈ ಕ್ಷೇತ್ರಕ್ಕೆ ತೀರ್ಥ ರಾಮೇಶ್ವರ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ದೀಪಾವಳಿ, ದಸರಾ, ಸಂಕ್ರಾಂತಿಯಂಥ ವಿಶೇಷ ದಿನಗಳಲ್ಲಿ ಅದ್ದೂರಿ ಪೂಜೆ ನಡೆಯುತ್ತದೆ.

ತೀರ್ಥ ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಆಡಳಿತವನ್ನು ಸ್ಥಳೀಯ ಟ್ರಸ್ಟ್‌ ನೋಡಿಕೊಳ್ಳುತ್ತದೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ದೈವಿಕ ತಾಣವಾದ ಈ ಕ್ಷೇತ್ರವು ಸೂಕ್ತ ನಿರ್ವಹಣೆ ಇಲ್ಲದೆ ಕಡೆಗಣಿಸಲ್ಪಟ್ಟಿರುವುದು ಇಲ್ಲಿಗೆ ಬರುವ ಪ್ರವಾಸಿಗರ ಮನಕಲಕುವಂತೆ ಮಾಡುತ್ತದೆ.

ರೂಟ್‌ ಮ್ಯಾಪ್‌

– ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿದೆ ದೇವಸ್ಥಾನ.
– ಶಿವಮೊಗ್ಗದಿಂದ 39 ಕಿ.ಮೀ. ಶಿಕಾರಿಪುರ ಮಾರ್ಗವಾಗಿ ಹೋಗಬಹುದು.
– ಮಂಗಳೂರಿನಿಂದ ಹೊನ್ನಾಳಿಗೆ ಸುಮಾರು 245 ಕಿ.ಮೀ. ಆಗುತ್ತದೆ.
– ಹತ್ತಿರದಲ್ಲಿ ನೀರು, ಆಹಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿಗೆ ಬರುವಾಗ ಇದಕ್ಕೆ ವ್ಯವಸ್ಥೆ ಮಾಡಿಕೊಂಡು ಬರಬೇಕು.
– ಗ್ರಾಮೀಣ ಪ್ರದೇಶವಾದ್ದರಿಂದ ವಾಹನ ಸೌಲಭ್ಯಗಳೂ ಸರಿಯಾಗಿಲ್ಲ. ಸ್ವಂತ ಅಥವಾ ಬಾಡಿಗೆ ವಾಹನದ ಮೂಲಕ ತೆರಳಬಹುದು.

-  ಗೌರಿ ಚಂದ್ರ ಕೇಸರಿ

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.