ಹಲಸು ಎಂಥಾ ಸೊಗಸು
Team Udayavani, Jun 17, 2019, 12:14 PM IST
ಮಳೆಗಾಲ ಆರಂಭವಾಯಿತೆಂದರೆ ಸಾಕು ಎಲ್ಲ ಮನೆಗಳಲ್ಲಿಯೂ ಹಲಸಿನ ವೈವಿಧ್ಯಮಯ ಖಾದ್ಯಗಳು ಸಾಮಾನ್ಯ. ತರಹೇವಾರಿ ತಿಂಡಿಗಳ ಮೂಲಕ ಎಲ್ಲರ ಮನ ಸೆಳೆಯುವ ಹಣ್ಣು, ಹಿಂದಿನ ಕಾಲದಲ್ಲಿ ಬಡವರ ಹೊಟ್ಟೆ ತುಂಬುವುದಕ್ಕೆ ಕಾರಣವಾಗುತ್ತಿದ್ದ ಬಂಧು ಎಂದರೂ ತಪ್ಪಾಗಲಾರದು. ಇನ್ನು ರುಚಿಯ ವಿಚಾರಕ್ಕೆ ಬಂದಾಗಲಂತೂ ಹಲಸಿನ ಹಣ್ಣು ಬಾಯಿ ಚಪ್ಪರಿಸುವಂತೆ ಮಾಡಿ ಬಿಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆ ಈ ಪೀಠಿಕೆ ಎಂದ ರೆ ಇಂದಿನ ನಮ್ಮ ಮೆನು ಕಾರ್ಡ್ನ ವಿಶೇಷ ಹಲಸಿನ ಖಾಧ್ಯಗಳು.
ದೋಸೆ
ಬೇಕಾಗುವ ಸಾಮಗ್ರಿಗಳು
ಹಲಸಿನ ಸೊಳೆ
(ಕಾಯಿ/ ಹಣ್ಣು)
ಅಕ್ಕಿ 2 ಕಪ್
(ಹಿಂದಿನ ರಾತ್ರಿ ನೆನೆಸಿಡಬೇಕು)
ಕಾಯಿ ತುರಿ
ಉಪ್ಪು (ರುಚಿಗೆ ತಕ್ಕಷ್ಟು)
ಮಾಡುವ ವಿಧಾನ
ಹಲಸಿನ ಹಣ್ಣನು °(ಕಾಯಿಯನ್ನು) ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಬೇಕು. ನೆನೆಸಿಟ್ಟ ಅಕ್ಕಿಯನ್ನು ಒಂದು ಮಿಕ್ಸರ್ ಜಾರ್ಗೆ ಹಾಕಿ ನಂತರ ಅದಕ್ಕೆ ತುಂಡರಿಸಿದ ಹಲಸಿನ ಹಣ್ಣು ಅಥವಾ ಕಾಯಿಯನ್ನು ಸೇರಿಸಿ ಅದಕ್ಕೆ ಕಾಯಿತುರಿ, ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ದೋಸೆ ಹೆಚ್ಚು ಸಿಹಿಯಾಗಿರಬೇಕು ಎಂದಾದಲ್ಲಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅನಂತರ ಗ್ಯಾಸ್ ಹಚ್ಚಿ ದೋಸೆ ಹೆಂಚು ಕಾದ ನಂತರ ಅದಕ್ಕೆ ಕೊಬ್ಬರಿ ಎಣ್ಣೆ ಸವರಿ ರುಬ್ಬಿಟ್ಟ ಹಿಟ್ಟನ್ನು ತೆಳುವಾಗಿ ಸವರಬೇಕು. ಅನಂತರ ಅದನ್ನು ಮದ್ಯಮ ಉರಿಯಲ್ಲಿ ಬೇಯಿಸಿ ಒಂದೆರಡು ನಿಮಿಷಗಳ ಬಳಿಕ ತೆಗೆದರೆ ಗರಿ ಗರಿಯಾದ ಹಲಸಿನ ದೋಸ ಸವಿಯಲು ಸಿದ್ದ. ಈ ದೋಸೆಗೆ ಕೆಂಪು ಚಟ್ನಿ , ಜೇನು ಸೂಪರ್ ಕಾಂಬಿನೇಷನ್. ಟ್ರೈ ಮಾಡಿ ನೋಡಿ.
ಉಂಡಲ ಕಾಳು
ಬೇಕಾಗುವ ಸಾಮಗ್ರಿಗಳು
ಉಪ್ಪಿನಲ್ಲಿ ಹಾಕಿಟ್ಟ ಕಾಯಿ ಸೊಳೆ 20
ಅಕ್ಕಿ 1 ಕಪ್
ಎಳ್ಳು 2 ಟೀ ಸ್ಫೂನ್
ತೆಂಗಿನ ತುರಿ ಅರ್ಧ ಕಪ್
ಜೀರಿಗೆ 1 ಟೀ ಸ್ಫೂನ್
ತೆಂಗಿನೆಣ್ಣೆ
ಮುಳ್ಕ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ 1 ಕಪ್
ಹಲಸಿನ ಹಣ್ಣು 15 ಸೋಳೆ(ಸಿಹಿಯಾಗಿರುವುದನ್ನು ಆರಿಸಿ ಹಾಕಿದಲ್ಲಿ ಬೆಲ್ಲದ ಅವಶ್ಯಕತೆ ಇರುವುದಿಲ್ಲ.
ಉಪ್ಪು ಸ್ವಲ್ಪ
ಜೀರಿಗೆ 1 ಚಮಚ
ಎಣ್ಣೆ
ಮಾಡುವ ವಿಧಾನ
ಉಪ್ಪಿನ ಸೋಳೆಯನ್ನು ಎರಡು ಬಾರಿ ನೀರಿನಲ್ಲಿ ತೊಳೆದು ಅದಕ್ಕೆ ಅಕ್ಕಿಯನ್ನು ಹಾಕಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ನಂತರದಕ್ಕೆ ತೆಂಗಿನ ತುರಿ, ಎಳ್ಳು, ಜೀರಿಗೆ ಹಾಕಿ ಚೆನ್ನಾಗಿ ಕಲಸಿ ಕೊಂಚ ಹೊತ್ತು ಬಿಡಬೇಕು. ನಂತರ ನಿಮಗೆ ಬೇಕಾದ ಆಕಾರದಲ್ಲಿ ಉಂಡೆ ಕಟ್ಟಿ, ಕಾದ ತೆಂಗಿನೆಣ್ಣೆಯಲ್ಲಿ ಹುರಿದರೆ ಘಮ ಘಮಿಸುವ ಉಂಡಲ ಕಾಳು ಬಿಸಿ ಬಿಸಿ ಕಾಫಿ ಜತೆ ಸವಿಯಲು ಸಿದ್ಧ.
ಹಲಸಿನ ಪೋಳ್ದ್ಯ
ಬೇಕಾಗುವ ಸಾಮಗ್ರಿಗಳು
ಹಲಸಿನ ಸೊಳೆ 15 – 20
ಹಲಸಿನ ಬೀಜ- 10
ಹಸಿ ಮೆಣಸು- 8
ಲಿಂಬೆ ಹಣ್ಣಿನ ರಸ- 5 ಟೇಬಲ್ ಸ್ಪೂನ್
ತೆಂಗಿನ ತುರಿ 3 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ
ತೆಂಗಿನ ಎಣ್ಣೆ
ಸಾಸಿವೆ
ಬೆಳ್ಳುಳ್ಳಿ
ಕರಿಬೇವು
ಕೆಂಪು ಮೆಣಸು 3
ಮಾಡುವ ವಿಧಾನ
ಬಿಡಿಸಿಟ್ಟ ಅರ್ಧ ಹಲಸಿನ ಸೊಳೆಯನ್ನು ಹಸಿ ಮೆಣಸು, ತೆಂಗಿನ ಕಾಯಿಯ ತುರಿಯನ್ನು ಸೇರಿಸಿ ರುಬ್ಬಿಕೊಳ್ಳಬೇಕು. ಇನ್ನರ್ಧವನ್ನು ಹಲಸಿನ ಬೀಜದೊಂದಿಗೆ ಸೇರಿಸಿ ನೀರು, ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಅದಕ್ಕೆ ರುಬ್ಬಿಕೊಂಡ ಮಿಶ್ರಣ, ಲಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಎಣ್ಣೆಗೆ ಜಜ್ಜಿಕೊಂಡ ಬೆಳ್ಳುಳ್ಳಿ, ಕೆಂಪು ಮೆಣಸು , ಸಾಸಿವೆ, ಕರಿಬೇವನ್ನು ಒಗ್ಗರಣೆ ತಯಾರಿಸಿ ಕುದಿಸಿಟ್ಟ ಪೋಳ್ದ್ಯಕ್ಕೆ ಸೇರಿಸಬೇಕು. ಬಿಸಿ ಬಿಸಿ ಅನ್ನದ ಜತೆಗೆ ರುಚಿ ರುಚಿ ಪೋಳ್ದ್ಯ ಎಲ್ಲರ ಮನಸೂರೆಗೊಳ್ಳುವುರಲ್ಲಿ ಯಾವುದೇ ಸಂದೇಹವಿಲ್ಲ.
- ಭುವನ ಬಾಬು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು