ಉನ್ನಕಾಯ
Team Udayavani, Aug 29, 2019, 5:41 PM IST
ದೇವರ ಸ್ವಂತ ನಾಡು ಎಂದೇ ಪ್ರಸಿದ್ಧವಾದ ಕೇರಳದಲ್ಲಿ ನೇಂದ್ರ ಬಾಳೆ ಹಣ್ಣಿನಿಂದ ರುಚಿರುಚಿಯಾದ ತಿಂಡಿ ತಿನಸುಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಉನ್ನಕಾಯ ಒಂದು.
ಬೇಕಾಗುವ ಸಾಮಗ್ರಿಗಳು
– ನೇಂದ್ರ ಬಾಳೆ ಹಣ್ಣು -2
– ಒಣದ್ರಾಕ್ಷಿ -10ರಿಂದ 12
– ಏಲಕ್ಕಿ ಸ್ವಲ್ಪ
– ತೆಂಗಿನ ತುರಿ -1 ಕಪ್
– ಸಕ್ಕರೆ -2 ಚಮಚ
– ತೆಂಗಿನ ಎಣ್ಣೆ -1 ಕಪ್
ತಯಾರಿಸುವ ವಿಧಾನ: ಬಾಳೆ ಹಣ್ಣನ್ನ ಕುಕ್ಕರ್ನಲ್ಲಿ ಬೇಯಿಸಿ. ಬಾಣಲೆ ಬಿಸಿ ಮಾಡಿ ಅದಕ್ಕೆ ಸಕ್ಕರೆ ಮತ್ತು ಅದು ಮುಳುಗವಷ್ಟು ನೀರು ಹಾಕಿ ಸಕ್ಕರೆ ಪಾಕ ತಯಾರಿಸಿ. ಅದಕ್ಕೆ ಕಾಯಿತುರಿ, ಒಣದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಹೂರಣ ಸಿದ್ಧ ಪಡಿಸಿ. ಬೇಯಿಸಿದ ಬಾಳೆಹಣ್ಣನ್ನು ತೆಗೆದು ಚೆನ್ನಾಗಿ ಹಿಚುಕಿ ಪೇಸ್ಟ್ ಮಾಡಿ ಸಾಧಾರಣ ಗಾತ್ರದ ಉಂಡೆ ತಯಾರಿಸಿ. ಒಂದೊಂದೇ ಉಂಡೆ ಅಂಗೈಯಲ್ಲಿ ಇಟ್ಟು ತಟ್ಟಿ. ಸ್ವಲ್ಪ ಹೂರಣ ತೆಗೆದು ತಟ್ಟಿದ ಹಣ್ಣಿನ ಪೇಸ್ಟ್ ಮೇಲಿಟ್ಟು ರೋಲ್ ಮಾಡಿ. ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದಾಗ ರೋಲ್ಗಳನ್ನು ಅದಕ್ಕೆ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ.
– ಗಣೇಶ ಕುಳಮರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ