ಮ್ಯಾಂಗೋ ಮೂಡ್‌


Team Udayavani, Jul 14, 2018, 3:17 PM IST

14-july-15.jpg

ಮ್ಯಾಂಗೋ ಜ್ಯೂಸ್‌

ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ತುರಿ- 2 ಕಪ್‌, ಬೆಲ್ಲದ ತುರಿ- 2 ಕಪ್‌, ಏಲಕ್ಕಿ ಪುಡಿ- 1 ಚಮಚ, ಕಾಳುಮೆಣಸಿನ ಪುಡಿ- 1/2 ಚಮಚ, ಜಾಯಿಕಾಯಿ ಪುಡಿ- 1/4 ಚಮಚ, ಜೀರಿಗೆ ಪುಡಿ- 1 ಚಮಚ, ಉಪ್ಪು-1/2 ಚಮಚ.  
ಮಾಡುವ ವಿಧಾನ
ಮಾವಿನಕಾಯಿ ತುರಿಗೆ ಬೆಲ್ಲ, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಬೇಯಿಸಿ. ತಣಿದ ಮೇಲೆ, ಶೋಧಿಸಿ, ಏಲಕ್ಕಿ ಪುಡಿ, ಉಪ್ಪು ಹಾಕಿ, ಚೆನ್ನಾಗಿ ಕಲಕಿದರೆ ಮಾವಿನಕಾಯಿ ಜ್ಯೂಸ್‌ ತಯಾರು. 

ಸಲಾಡ್‌
ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ಹೋಳುಗಳು- 1/2 ಕಪ್‌, ಟೊಮೆಟೋ ಹೋಳುಗಳು- 1/2 ಕಪ್‌, ಸಣ್ಣಗೆ ಕತ್ತರಿಸಿದ ಸೌತೆಕಾಯಿ-
1/2 ಕಪ್‌, ಕತ್ತರಿಸಿದ ಈರುಳ್ಳಿ- 1/2 ಕಪ್‌, ತೆಂಗಿನಕಾಯಿ ತುರಿ- 1/2 ಕಪ್‌, ಹಸಿಮೆಣಸಿನಕಾಯಿ- 4- 5, ಶುಂಠಿ ತುರಿ- 1/2 ಚಮಚ, ಜೀರಿಗೆ- 1 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು- 4 ಚಮಚ.
ಮಾಡುವ ವಿಧಾನ
ಈರುಳ್ಳಿ ಹೋಳುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿ. ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ಶುಂಠಿ ತುರಿ, ಜೀರಿಗೆಗಳನ್ನು ಸೇರಿಸಿ ಅರೆದಿರಿಸಿ. ಮಾವಿನಕಾಯಿ ಹೋಳುಗಳು, ಟೊಮೆಟೋ, ಸೌತೆಕಾಯಿ ಹೋಳುಗಳು, ಈರುಳ್ಳಿ, ಉಪ್ಪು, ಅರೆದ ಮಿಶ್ರಣ ಸೇರಿಸಿ, ಚೆನ್ನಾಗಿ ಕಲಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಾವಿನಕಾಯಿ ಸಲಾಡ್‌ ರೆಡಿ.

ಗೊಜ್ಜು
ಬೇಕಾಗುವ ಸಾಮಗ್ರಿಗಳು
ಮಾವಿನಕಾಯಿ ತುರಿ- 2 ಕಪ್‌, ಖಾರದ ಪುಡಿ- 3 ಚಮಚ, ತೆಂಗಿನಕಾಯಿ ತುರಿ- 1/2 ಕಪ್‌, ಎಳ್ಳಿನ ಪುಡಿ- 3 ಚಮಚ, ಸಾಸಿವೆ- 1/2 ಚಮಚ, ಬೆಲ್ಲದ ತುರಿ- 4 ಚಮಚ, ಹುಣಸೆ ಹಣ್ಣು- 1 ಇಂಚಿನಷ್ಟು, ಉಪ್ಪು- ರುಚಿಗೆ ತಕ್ಕಷ್ಟು, ಒಗ್ಗರಣೆಗೆ- ಎಣ್ಣೆ- 4 ಚಮಚ, ಸಾಸಿವೆ- 1 ಚಮಚ, ಇಂಗು- 1/4 ಚಮಚ, ಅರಿಸಿನ- 1/2 ಚಮಚ, ಒಣಮೆಣಸಿನಕಾಯಿ ತುಂಡುಗಳು- 3- 4, ಕರಿಬೇವಿನ ಎಲೆಗಳು- 7-8. 
ಮಾಡುವ ವಿಧಾನ
ಮಾವಿನಕಾಯಿ ತುರಿಯನ್ನು ಸ್ವಲ್ಪ ಎಣ್ಣೆಯಲ್ಲಿ ಹುರಿದಿರಿಸಿ. ತೆಂಗಿನಕಾಯಿ ತುರಿ, ಹುಣಸೆ ಹಣ್ಣು, ಖಾರದ ಪುಡಿ, ಎಳ್ಳು ಪುಡಿ, ಸಾಸಿವೆ ಕಾಳುಗಳನ್ನು ಸೇರಿಸಿ ನುಣ್ಣಗೆ ಅರೆದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ- ಇಂಗು- ಅರಿಸಿನ- ಒಣಮೆಣಸಿನಕಾಯಿ- ಕರಿಬೇವಿನ ಎಲೆಗಳನ್ನು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಅರೆದ ಮಸಾಲೆ, ಮಾವಿನಕಾಯಿ ತುರಿ, ಉಪ್ಪು, ಬೆಲ್ಲ ಸೇರಿಸಿ ಕುದಿಸಿದರೆ ಮಾವಿನಕಾಯಿ ಗೊಜ್ಜು ರೆಡಿ.

ಉಸ್ಲಿ
ಬೇಕಾಗುವ ಸಾಮಗ್ರಿಗಳು ಮಾವಿನಕಾಯಿ ತುರಿ- 1 ಕಪ್‌, ಮೊಳಕೆ ತರಿಸಿದ ಹೆಸರುಕಾಳು- 2 ಕಪ್‌, ತೆಂಗಿನಕಾಯಿ ತುರಿ- 1/2 ಕಪ್‌, ಕಾಳುಮೆಣಸಿನ ಪುಡಿ- 1/2 ಚಮಚ, ಜೀರಿಗೆ ಪುಡಿ- 1 ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು- 3 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು- 3 ಚಮಚ, ಕತ್ತರಿಸಿದ ಹಸಿಮೆಣಸಿನಕಾಯಿ-5- 6, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 4 ಚಮಚ, ಸಾಸಿವೆ- 1 ಚಮಚ, ಉದ್ದಿನ ಬೇಳೆ- 3 ಚಮಚ, ಅರಿಸಿನ- 1/2 ಚಮಚ, ಇಂಗು- 1/4 ಚಮಚ. 
ಮಾಡುವ ವಿಧಾನ
ಮೊಳಕೆ ತರಿಸಿದ ಹೆಸರುಕಾಳುಗಳನ್ನು ಬೇಯಿಸಿ ನೀರು ಬಸಿದಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ- ಉದ್ದಿನಬೇಳೆ- ಅರಿಸಿನ- ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ, ಹಸಿಮೆಣಸಿನಕಾಯಿ, ಮಾವಿನಕಾಯಿ ತುರಿ, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿ, ಬೇಯಿಸಿದ ಹೆಸರು ಕಾಳು, ಜೀರಿಗೆ ಪುಡಿ, ಕಾಳುಮೆಣಸಿನಪುಡಿ, ಉಪ್ಪು ಸೇರಿಸಿ ಕಲಕಿ, ಒಲೆಯಿಂದ ಕೆಳಗಿರಿಸಿ, ತೆಂಗಿನಕಾಯಿ ತುರಿ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಪುಷ್ಟಿದಾಯಕ ಮಾವಿನಕಾಯಿ- ಹೆಸರು ಕಾಳಿನ ಉಸ್ಲಿ ತಯಾರು. ತಿಂಡಿಯಾಗಿ ಇಲ್ಲವೆ ಚಪಾತಿಯೊಂದಿಗೆ ತಿನ್ನಲು ಬಲು ರುಚಿ.

ಮುರಬ್ಬ
ಬೇಕಾಗುವ ಸಾಮಗ್ರಿಗಳು

ಸಿಪ್ಪೆ ತೆಗೆದು ಕತ್ತರಿಸಿದ ಮಾವಿನಕಾಯಿ ಹೋಳುಗಳು- 2 ಕಪ್‌, ಸಕ್ಕರೆ- 2 ಕಪ್‌, ಏಲಕ್ಕಿ ಪುಡಿ- 1/2 ಚಮಚ, ಕೇಸರಿ ದಳ-5- 6, ಲವಂಗದ ಪುಡಿ- 1/2 ಚಮಚ.
ಮಾಡುವ ವಿಧಾನ
ಮಾವಿನಕಾಯಿ ಹೋಳುಗಳನ್ನು ಹಬೆಯಲ್ಲಿ ಬೇಯಿಸಿ. ತಣಿದ ಮೇಲೆ, ಬಟ್ಟೆಯ ಮೇಲೆ ಹರಡಿ, ನೀರಿನ ಪಸೆ ಆರುವವರೆಗೆ ಒಣಗಿಸಿ. ಬಾಣಲೆಯಲ್ಲಿ, ಅರ್ಧ ಕಪ್‌ ನೀರು ಕಾಯಿಸಿ, ಸಕ್ಕರೆ ಹಾಕಿ ಗಟ್ಟಿಯಾಗುವರೆಗೆ ಕಲಕಿ. ಪಾಕ ಗಟ್ಟಿಯಾದ ಮೇಲೆ, ಮಾವಿನಕಾಯಿ ಹೋಳುಗಳು, ಏಲಕ್ಕಿ ಪುಡಿ, ಕೇಸರಿ ದಳ, ಲವಂಗದ ಪುಡಿ ಹಾಕಿ ಕಲಕಿ. ತಣಿದ ಮೇಲೆ, ಪಸೆ ಇಲ್ಲದ ಬಾಟಲಿಯಲ್ಲಿ ಶೇಖರಿಸಿ. 

ಜಯಶ್ರೀ ಕಾಲ್ಕುಂದ್ರಿ 

ಟಾಪ್ ನ್ಯೂಸ್

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.