ಕ್ವಿಕ್‌ ಕುಕ್‌


Team Udayavani, Sep 18, 2019, 5:00 AM IST

e-20

“ಅಮ್ಮಾ, ಬೇಗ ಏನಾದ್ರೂ ತಿನ್ನೋಕೆ ಕೊಡು. ನಿನ್ನೆ ಕೊಟ್ಟ ಸ್ನ್ಯಾಕ್ಸ್‌ ಬೇಡ’…ಮಕ್ಕಳದ್ದು ದಿನಾ ಇದೇ ರಾಗ. ತಿನ್ನಲು ಕೊಡುವುದೇನೋ ಸರಿ, ಆದರೆ ಬೇಗ ಕೊಡು, ನಿನ್ನೆ ಕೊಟ್ಟದ್ದು ಬೇಡ ಅಂದರೆ ಹೇಗೆ ಅನ್ನುವುದು ಅಮ್ಮಂದಿರ ಗೋಳು. ಅಂಥ ಅಮ್ಮಂದಿರಿಗಾಗಿ ಕ್ವಿಕ್‌ ಆಗಿ ತಯಾರಿಸಬಹುದಾದ ರೆಸಿಪಿಗಳು ಇಲ್ಲಿವೆ.

1. ಹುರಿಗಡಲೆ ಉಂಡಿ
ಬೇಕಾಗುವ ಸಾಮಗ್ರಿ: ಹುರಿಗಡಲೆ (ಪುಟಾಣಿ)- 2 ಲೋಟ, ಬೆಲ್ಲದ ಪುಡಿ- ಒಂದು ಕಪ್‌, ಒಣಕೊಬ್ಬರಿ- ಕಾಲು/ಅರ್ಧ ಕಪ್‌,
ಏಲಕ್ಕಿ ಪುಡಿ, ತುಪ್ಪ- ಮೂರು ಚಮಚ.

ಮಾಡುವ ವಿಧಾನ: ಹುರಿಗಡಲೆಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಬೆಲ್ಲದ ಪುಡಿ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ಬೆಲ್ಲ ಪೂರ್ತಿಯಾಗಿ ಕರಗಿದ ನಂತರ ಹುರಿಗಡಲೆ ಪುಡಿ, ಒಣಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿ ಹಾಕಿ ಮಗುಚಿ, ಗ್ಯಾಸ್‌ ಆಫ್ ಮಾಡಿ. ಬಿಸಿ ಇರುವಾಗಲೇ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿ. ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಈ ತಿನಿಸು ಹಿತಕರ.

2. ಭೇಲ್‌ಪುರಿ
ಬೇಕಾಗುವ ಸಾಮಗ್ರಿ: ಮಂಡಕ್ಕಿ, ಅಚ್ಚಖಾರದ ಪುಡಿ, ಅರಿಶಿನ ಪುಡಿ, ಚಾಟ್‌ ಮಸಾಲೆ, ಉಪ್ಪು, ಎಣ್ಣೆ, ಲಿಂಬೆಹಣ್ಣು, ಓಂಪುಡಿ, ಖಾರಸೇವು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಅರಿಶಿನ ಪುಡಿ, ಖಾರದ ಪುಡಿ ಹಾಕಿ ಸ್ಟೌ ಆರಿಸಿ. ನಂತರ ಮಂಡಕ್ಕಿ, ಉಪ್ಪು, ಲಿಂಬೆರಸ, ಚಾಟ್‌ ಮಸಾಲೆ, ಖಾರಸೇವು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪು ಮತ್ತು ಓಂಪುಡಿಯಿಂದ ಅಲಂಕರಿಸಿ. (ಬೇಕಿದ್ದರೆ ಈರುಳ್ಳಿ ಮತ್ತು ಟೊಮೇಟೊವನ್ನು ಕೂಡ ಸೇರಿಸಬಹುದು)

3. ಅವಲಕ್ಕಿ ಪುಳಿಯೋಗರೆ
ಬೇಕಾಗುವ ಸಾಮಗ್ರಿ: ಮೀಡಿಯಂ ಅವಲಕ್ಕಿ – ಎರಡು ಬಟ್ಟಲು, ಹುಣಸೆ ಹಣ್ಣಿನ ರಸ- ಮೂರು ಚಮಚ, ಕಡ್ಲೆಬೀಜ (ನೆಲಗಡಲೆ), ಕರಿಬೇವು, ಉಪ್ಪು, ಅರಿಶಿನ ಪುಡಿ, ಇಂಗು, ಪುಳಿಯೋಗರೆ ಮಸಾಲೆ- ಮೂರು ಚಮಚ, ಕೊತ್ತಂಬರಿ ಸೊಪ್ಪು, ಎಣ್ಣೆ, ಸಾಸಿವೆ.

ಮಾಡುವ ವಿಧಾನ: ಅವಲಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಕರಿಬೇವು, ನೆಲಗಡಲೆ, ಇಂಗು ಹಾಕಿ ನಂತರ ಹುಣಸೆಹಣ್ಣಿನ ರಸ, ಅರಿಶಿನಪುಡಿ ಹಾಕಿ ಒಂದು ನಿಮಿಷದ ನಂತರ ಪುಳಿಯೋಗರೆ ಮಸಾಲೆ ಹಾಕಿ. ಆ ಮಿಶ್ರಣಕ್ಕೆ ಅವಲಕ್ಕಿ ಮತ್ತು ಉಪ್ಪು ಹಾಕಿ ಕೈಯಾಡಿಸಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಕಾಯಿತುರಿ ಹಾಕಿದರೆ ವಿಶಿಷ್ಟ ಬಗೆಯ ಅವಲಕ್ಕಿ ಪುಳಿಯೋಗರೆ ರೆಡಿ. ಹುಣಸೆಹಣ್ಣಿನ ಬದಲು ಲಿಂಬೆಹಣ್ಣಿನ ರಸ ಬಳಸಬಹುದು.

4. ಚಪಾತಿ ಉಪ್ಪಿಟ್ಟು
ಬೇಕಾಗುವ ಸಾಮಗ್ರಿ: ಚಪಾತಿ- 3, ಈರುಳ್ಳಿ-1, ಹಸಿ ಮೆಣಸು-2, ಟೊಮೇಟೊ-1, ಒಗ್ಗರಣೆಗೆ-ಉದ್ದಿನ ಬೇಳೆ, ಜೀರಿಗೆ, ಕಡಲೇ ಬೇಳೆ, ಕರಿಬೇವು, ಕೊತ್ತಂಬರಿ ಸೊಪ್ಪು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಚಪಾತಿಗಳನ್ನು ಚಿಕ್ಕದಾಗಿ ಮುರಿದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕರಿಬೇವು, ಜೀರಿಗೆ, ಹಸಿಮೆಣಸು, ಉದ್ದು, ಕಡಲೇಬೇಳೆ ಹಾಕಿ ಒಗ್ಗರಣೆ ಮಾಡಿ. ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊ ಸೇರಿಸಿ ಹುರಿಯಿರಿ. ನಂತರ ನೀರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಇದಕ್ಕೆ ಚಪಾತಿ ತುಂಡುಗಳನ್ನು ಹಾಕಿ, ಉಪ್ಪಿಟ್ಟಿನ ಹದಕ್ಕೆ ಗಟ್ಟಿಯಾಗುವವರೆಗೆ ಸಣ್ಣ ಉರಿಯಲ್ಲಿ ಕುದಿಸಿದರೆ ಚಪಾತಿ ಉಪ್ಪಿಟ್ಟು ರೆಡಿ. ಬೇಕಿದ್ದರೆ ಬೀನ್ಸ್‌, ಬಟಾಣಿ, ಕ್ಯಾರೆಟ್‌ಗಳನ್ನು ಕೂಡಾ ಸೇರಿಸಬಹುದು. (ಅಕ್ಕಿರೊಟ್ಟಿಯಿಂದಲೂ ಉಪ್ಪಿಟ್ಟು ಮಾಡಬಹುದು)
-ಅಕ್ಷದ ಅನಂತ್‌ ಜೋಶಿ, ಗೋವಾ

-ಅಕ್ಷದ ಅನಂತ್‌ ಜೋಶಿ, ಗೋವಾ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.