ಸೋಲಾರ್ ಬೀದಿ ದೀಪ ಅಳವಡಿಕೆಯಾಗಲಿ
Team Udayavani, Aug 26, 2018, 2:22 PM IST
ಕತ್ತಲಿನಲ್ಲಿ ಸಂಚರಿಸುವುದು ಎಲ್ಲರಿಗೂ ಭಯ. ಪಾದಚಾರಿಗಳು ಎಡವಿ ಬೀಳುವ ಅಪಾಯದ ಜತೆಗೆ ಅಪರಾಧ ಚಟುವಟಿಕೆಗಳಿಗೂ ಇದು ಪ್ರೇರಣೆ ನೀಡುತ್ತದೆ. ಇನ್ನು ವಾಹನ ಸಂಚಾರ ಇಲ್ಲಿ ದುಸ್ಸಾಹಸವೇ ಸರಿ. ವಾಹನ ಸಂಚಾರ ಮಾಡುವಾಗ ಕೇವಲ ವಾಹನದ ಬೆಳಕು ಸಾಕಾಗುವುದಿಲ್ಲ. ಬೀದಿದೀಪಗಳ ಅಗತ್ಯ ನಗರಗಳಲ್ಲಂತೂ ಬಹಳವಾಗಿರುತ್ತದೆ. ಆದರೆ ದುರದೃಷ್ಟ ಎಂದರೆ ನಗರದ ಕೆಲವು ಮುಖ್ಯರಸ್ತೆಗಳಲ್ಲೇ ಬೀದಿ ದೀಪ ಇಲ್ಲದೆ ಕತ್ತಲಿನಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ.
ಕುಂಟಿಕಾನದಿಂದ ನಂತೂರು, ನಂತೂರಿನಿಂದ ಯೆಯ್ನಾಡಿ ಮುಂತಾದೆಡೆಗಳಿಗೆ ಸಂಚರಿಸುವಾಗ ಬೀದಿ ದೀಪಗಳೇ ಇಲ್ಲದೆ, ಕತ್ತಲಿನಲ್ಲೇ ವಾಹನ ಸಂಚಾರ ನಡೆಸಬೇಕಾಗುತ್ತದೆ. ಅಲ್ಲದೆ ಹೆದ್ದಾರಿಯಲ್ಲಿ ಹೀಗೆ ಕತ್ತಲಿನಲ್ಲಿ ಸಂಚಾರ ಮಾಡುವುದರಿಂದ ಅಪಘಾತವಾಗುವ ಸಂದರ್ಭಗಳೂ ಹೆಚ್ಚು. ಅದಕ್ಕಾಗಿ ಇಂತಹ ಕಡೆಗಳಲ್ಲಿ ಬೀದಿ ದೀಪ ಅಗತ್ಯವಾಗಿ ಬೇಕಾಗುತ್ತದೆ. ಆದರೆ ವಿದ್ಯುತ್ ಚಾಲಿತ ಬೀದಿದೀಪಗಳಿಂದ ವಿದ್ಯುತ್ ನಷ್ಟದೊಂದಿಗೆ ವಿದ್ಯುತ್ ಕೈಕೊಟ್ಟ ಸಂದರ್ಭಗಳಲ್ಲಿ ಮತ್ತೆ ಕತ್ತಲಿನಲ್ಲೇ ಸಂಚರಿಸಬೇಕಾಗುತ್ತದೆ. ಅದಕ್ಕಾಗಿ ಸೋಲಾರ್ ಬೀದಿದೀಪಗಳೇ ದೊಡ್ಡ ಮಟ್ಟದ ನಗರಗಳಿಗೆ ಉತ್ತಮ ವ್ಯವಸ್ಥೆಯಾಗಿರುತ್ತವೆ.
ಸೋಲಾರ್ಚಾಲಿತ ಬೀದಿದೀಪಗಳಿಗೆ ಒಮ್ಮೆ ಮಾತ್ರ ಖರ್ಚು ಮಾಡಿದರಾಯಿತು. ಉಳಿದಂತೆ ಯಾವುದೇ ಖರ್ಚು ವೆಚ್ಚಗಳು ಇರುವುದಿಲ್ಲ. ಇದರಿಂದ ಪಾಲಿಕೆಯ ಬೊಕ್ಕಸಕ್ಕೂ ಲಾಭವಾಗುವುದರಲ್ಲಿ ಸಂದೇಹವಿಲ್ಲ. ವಿದ್ಯುತ್ನಲ್ಲಿ ಬೆಳಗುವ ದೀಪದಿಂದಾಗಿ ನಷ್ಟವಾಗುವ ಆದಾಯವನ್ನು ಸೋಲಾರ್ ದೀಪದ ಮೂಲಕ ಭರಿಸಿಕೊಂಡು ಅದೇ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದು.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !