ಮಕ್ಕಳ ಕೋಣೆಯಲ್ಲಿರಲಿ ಧನಾತ್ಮಕ ಶಕ್ತಿ


Team Udayavani, Nov 2, 2019, 4:01 AM IST

nov-24

ಆಧುನಿಕ ಮನೆಗಳಲ್ಲಿ ಒಬ್ಬೊಬ್ಬರಿಗೆ ಒಂದು ಒಂದು ಕೋಣೆಗಳಿರುವುದು ಸಾಮಾನ್ಯ. ಆಯಾ ಕೊಠಡಿಗಳನ್ನು ಅವುಗಳಿಗೆ ತಕ್ಕಂತೆ ಜೋಡಿಸಿಡುವುದರಿಂದ ಆ ರೂಮುಗಳಿಗೆ ಹೆಚ್ಚು ಮಹತ್ವ ಬರುತ್ತದೆ. ಮಕ್ಕಳಿಗಾಗಿಯೇ ಇಂದು ಪ್ರತ್ಯೇಕ ರೂಮ್‌ಗಳನ್ನು ಮಾಡಲು ಹೆತ್ತವರು ಜಾಸ್ತಿ ಇಷ್ಟಪಡುತ್ತಾರೆ. ಮಕ್ಕಳ ಕೋಣೆ ಬೇರೆ ರೂಮ್‌ಗಳಿಗಿಂತ ವಿಭಿನ್ನವಾಗಿರಬೇಕೆಂದು ಹೆತ್ತವರು ಬಯಸುತ್ತಾರೆ. ಮಕ್ಕಳ ಕೋಣೆ ಹೆಚ್ಚು ಆಕರ್ಷಕ, ವಿನೂತನ ಮತ್ತು ಕ್ರಿಯಾತ್ಮಕವಾಗಿರುವುದು ಅಗತ್ಯ. ಮಕ್ಕಳು ತಮ್ಮ ಆಟದ ಸಾಮಾನುಗಳನ್ನು, ಪುಸ್ತಕಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡವುದು ಸಾಮಾನ್ಯ. ಅದನ್ನು ಸರಿಯಾಗಿ ಜೋಡಿಸಿಡುವುದು ಅವಶ್ಯವಾದುದು.

ಮಕ್ಕಳ ಅಭಿರುಚಿಯಂತಿರಲಿ
ಮಕ್ಕಳ ಅಭರುಚಿ ಹೇಗಿದೆ ಎನ್ನುವುದನ್ನು ತಿಳಿದುಕೊಂಡು ಮಕ್ಕಳ ಕೋಣೆಯನ್ನು ಜೋಡಿಸಿಕೊಳ್ಳಿ. ಅವರಿಗೆ ಸಂಗೀತ ಪ್ರಿಯವಾಗಿದ್ದರೆ ಅದಕ್ಕೆ ಹೆಚ್ಚು ಆದ್ಯತೆ ಇರುವಂತಹ ವಸ್ತುಗಳನ್ನು ಕೋಣೆಯಲ್ಲಿ ಜೋಡಿಸಿ. ಹೀಗೆ ಅವರಿಗೆ ಯಾವುದರ ಮೇಲೆ ಹೆಚ್ಚು ಆಸಕ್ತಿ ಎನ್ನುವುದನ್ನು ತಿಳಿದುಕೊಂಡು ಅದಕ್ಕನುಸಾರ ಕೋಣೆಯನ್ನು ಸಿದ್ಧಪಡಿಸಿ. ಮಕ್ಕಳ ಭಾವನೆಗಳಿಗೂ ಬೆಲೆ ಕೊಡಿ.

ಮಕ್ಕಳ ಕೋಣೆ ಹೇಗಿರಬೇಕು?
ಮಕ್ಕಳ ಕೋಣೆ ಎಂದರೆ ಅದರ ಗೋಡೆಯ ಬಣ್ಣದಿಂದ ಹಿಡಿದು ಎಲ್ಲವೂ ಅಚ್ಚುಕಟ್ಟಾಗಿರಬೇಕು. ಮಕ್ಕಳ ಕೋಣೆಯನ್ನು ನೋಡಿಕೊಂಡರೆ ಮಕ್ಕಳು ಹೆಚ್ಚು ಚುರುಕಾಗಿರಲು ಸಾಧ್ಯ. ಮಕ್ಕಳಿಗೆ ಉತ್ತಮ ವಾತಾವರಣ ನೀಡುವ ಜತೆಗೆ ಹೆಚ್ಚು ಆಕರ್ಷಕವಾಗಿರುವಂತೆ ರೂಮ ಇದ್ದರೆ ಉತ್ತಮ. ಮಕ್ಕಳ ಹೆಚ್ಚು ಸಮಯ ರೂಮಿನಲ್ಲೇ ಕಳೆಯುವುದರಿಂದ ಮಕ್ಕಳ ಕೊಠಡಿಗಳನ್ನು ಕ್ರಿಯಾತ್ಮಕವಾಗಿ ಜೋಡಿಸುವುದು ಅಗತ್ಯ.

ಗಾಳಿ,ಬೆಳಕು ಬರುವಂತೆ ಜೋಡಿಸಿ
ಮಕ್ಕಳ ರೂಮುಗಳಲ್ಲಿ ಬೇಕಾದಷ್ಟು ಬೆಳಕು ಇರಲಿ. ಗಾಳಿ , ಬೆಳಕು ಚೆನ್ನಾಗಿ ಬರುವಂತೆ ಮಾಡುವುದು ಅವಶ್ಯಕ.

ಪುಟ್ಟ ಗ್ರಂಥಾಲಯವಿರಲಿ
ಮಕ್ಕಳಿಗೆ ಕುತೂಹಲ ಹುಟ್ಟಿಸುವಂತಹ, ಜತೆಗೆ ಅವರ ಬುದ್ಧಿಶಕ್ತಿ ಹೆಚ್ಚುಸುವಂತಹ ಪುಸ್ತಕಗಳನ್ನು ಮಕ್ಕಳ ಕೋಣೆಯಲ್ಲಿ ಸುಂದರವಾಗಿ ಜೋಡಿಸಿಡಿ. ಇದರಿಂದ ಮಕ್ಕಳಿಗೆ ಪುಸ್ತಕಗಳ ಮೇಲೆ ಆಸಕ್ತಿ ಮೂಡುವ ಸಾಧ್ಯತೆ ಇದೆ.

ಧನಾತ್ಮಕ ಶಕ್ತಿ ಇರಲಿ
ಕೊಠಡಿಯೊಳಗಡೆ ಮಕ್ಕಳಿಗೆ ಮನೋರಂಜನೆ, ಅವರ ಅಭಿರುಚಿ ತಕ್ಕಂತೆ ಇರುವುದರ ಜತೆಗೆ ಧನಾತ್ಮಕ ಶಕ್ತಿ ಇರುವಂತೆ ಮಾಡಿ. ಸಕರಾತ್ಮಕ ಕೋಟ್‌ಗಳು, ಚಿತ್ರಗಳು, ಹಾಡು ಮುಂತಾದವುಗಳನ್ನು ಅಳವಡಿಸಿಕೊಳ್ಳಬಹುದು. ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬುವಂತಹ ವಾತಾವರಣ ರೂಪಿಸುವುದು ಇಂದು ಅಗತ್ಯವಾಗಿದೆ. ಮಕ್ಕಳ ಕೋಣೆ ಎಂದ ಮೇಲೆ ಅಲ್ಲಿರುವ ಎಲ್ಲ ವಸ್ತುಗಳ ಮೇಲೂ ಮನೆಯವರಿಗೆ ನಿಗಾ ಇರಬೇಕು. ಮಕ್ಕಳ ಬೇಕು ಬೇಡಗಳನ್ನು ಚೆನ್ನಾಗಿ ಅರಿತುಕೊಂಡಿರಬೇಕು. ಮಕ್ಕಳಿಗೆ ಒಂಟಿತನ ಕಾಡದಂತೆ, ಮಾನಸಿಕವಾಗಿ ಬಲಗೊಳ್ಳವಂತೆ ಮಾಡುವ ಪ್ರಯತ್ನ ಅವರ ಕೋಣೆಯಿಂದಲೇ ನಡೆಯಬೇಕು.

ವಸ್ತುಗಳು ಕೈಗೆಟಕುವಂತಿರಲಿ
ಮಕ್ಕಳಿಗೆ ಕೈಗೆ ದೊರಕುವಂತೆ ಪುಸ್ತಕ, ಆಟದ ಸಾಮಗ್ರಿಗಳನ್ನು ಜೋಡಿಸಿಡಿ. ಪ್ರತಿಯೊಂದಕ್ಕೂ ದೊಡ್ಡವರನ್ನು ಕೇಳವಂತೆ ಮಾಡುವುದರಿಂದ ಅವರಿಗೆ ಕಿರಿಕಿರಿಯೆನಿಸಬಹದು, ಜತೆಗೆ ಆಸಕ್ತಿಯೂ ಕಡಿಮೆಯಾಗಬಹುದು.

-   ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.