ಚಿತ್ರಪಟಗಳ ಸಂರಕ್ಷಣೆ ತಿಳಿದಿರಲಿ


Team Udayavani, Jul 6, 2019, 5:00 AM IST

q-60

ಚೆಂದದ ಚಿತ್ರವೊಂದು ಕಂಡರೆ ಸಾಕು ಅದನ್ನು ಎಷ್ಟು ಹಣ ಕೊಟ್ಟಾದರೂ ಕೊಂಡುಕೊಳ್ಳಬೇಕು ಎನ್ನುವುದು ಹಲವರ ಮನಸ್ಥಿತಿ. ಚೆಂದದ ಚಿತ್ರಕಲೆಗಳನ್ನು ಸಂಗ್ರಹಿಸುವುದು ಒಂದು ಉತ್ತಮ ಹವ್ಯಾಸವೆ. ಆದರೆ ಇವುಗಳು ಹಾಳಾಗದಂತೆ ಜೋಪಾನವಾಗಿ ಕಾಯ್ದಿಟ್ಟುಕೊಳ್ಳುವುದಿದೆಯಲ್ಲ ಅದೇ ಕೊಂಚ ಕಷ್ಟ.

ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಮಾತ್ರ ಇವುಗಳ ಸಂರಕ್ಷಣೆ ಸಾಧ್ಯ. ಈ ಕುರಿತು ಕೆಲವು ಸಲಹೆಗಳು ಇಲ್ಲಿವೆ.

•ಗೋಡೆಗಳಿಗೆ ಚಿತ್ರಗಳನ್ನು ತೂಗು ಬಿಡುವಾಗ ಕೇವಲ ಫ್ರೇಮ್‌ನ ಮೇಲ್ಭಾಗದಲ್ಲಿ ಮಾತ್ರ ಮೊಳೆಗಳನ್ನು ಹೊಡೆಯಬೇಡಿ. ಬದಲಾಗಿ ಫ್ರೇಮ್‌ನ ಕೆಳಭಾಗದಲ್ಲಿಯೂ ಒಂದು ಮೊಳೆ ಹೊಡೆಯಿರಿ. ಹೀಗೆ ಮಾಡುವುದರಿಂದ ಚಿತ್ರ ಪಠದ ಭಾರಕ್ಕೆ ಫ್ರೇಮ್‌ ಬಿರುಕು ಬಿಡುವುದನ್ನು ತಪ್ಪಿಸಬಹುದು.

•ಚಿತ್ರಪಟಗಳ ಮೇಲೆ ಕುಳಿತಿರುವ ಧೂಳು, ಬಲೆ ಮುಂತಾದವುಗಳನ್ನು ಆಗಾಗ ಸ್ವಚ್ಛಗೊಳಿಸಿ. ಸ್ವಚ್ಛಗೊಳಿಸಲು ಯಾವುದೇ ಕಾರಣಕ್ಕೂ ಬ್ರಶ್‌ಗಳನ್ನು ಬಳಸಬೇಡಿ. ಬ್ರಶ್‌ಗಳು ಚಿತ್ರಗಳ ಮೇಲೆ ಗೆರೆ ಬೀಳಲು ಕಾರಣವಾಗುತ್ತವೆ. ಹಾಗಾಗಿ ಚಿಕ್ಕದಾದ ವೆಲ್ವೆಟ್ ಮಾದರಿಯ ಬಟ್ಟೆಗಳನ್ನೇ ಬಳಸಿ.

•ಯಾವುದೇ ಕಾರಣಕ್ಕೂ ಚಿತ್ರಪಟಗಳನ್ನು ಮನೆಯ ಹೊರ ಭಾಗದಲ್ಲಿ ತೂಗು ಹಾಕಬೇಡಿ. ಮನೆಯ ಒಳವಾತಾವರಣಕ್ಕಿಂತ ಹೊರ ಪ್ರದೇಶ ಹೆಚ್ಚು ತೇವಾಂಶದಿಂದ ಕೂಡಿರುವ ಕಾರಣ ಚಿತ್ರಗಳು ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ.

• ಹಾಗೆಯೇ ಮನೆಯ ಮೇಲಂತಸ್ತಿನಲ್ಲಿಯೂ ಚಿತ್ರಪಟಗಳನ್ನು ಇಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಅತಿಯಾದ ಬಿಸಿಯಿಂದಲೂ ಚಿತ್ರ ಪಟದ ಬಣ್ಣಗಳು ಮತ್ತು ಕ್ಯಾನ್ವಾಸ್‌ ಹಾಳಾಗುತ್ತವೆ.

•ಕನಿಷ್ಠ ಎರಡು ವರ್ಷಗಳಿಗಾದರೂ ಒಮ್ಮೆ ಗೋಡೆಗೆ ತೂಗು ಹಾಕಿರುವ ಚಿತ್ರಪಟಗಳನ್ನು ತೆಗೆದು ಅವುಗಳ ಸದ್ಯದ ಸ್ಥಿತಿಯನ್ನು ಪರೀಕ್ಷಿಸಿ.

•ಚಿತ್ರಗಳನ್ನು ಸಂಗ್ರಹಿಸುವುದಾದರೆ ಅವುಗಳನ್ನು ಪ್ಲಾಸ್ಟಿಕ್‌ ಶೀಟ್‌ನಲ್ಲಿ ಕವರ್‌ ಮಾಡಬೇಡಿ. ಬದಲಾಗಿ ಹತ್ತಿಯ ಬಟ್ಟೆಗಳಲ್ಲಿ ಅವುಗಳನ್ನು ಸುತ್ತಿಡಿ. ಈ ಕ್ರಮ ಚಿತ್ರದ ಗುಣಮಟ್ಟ ಉಳಿಸಲು ಸಹಕಾರಿ.

•ಮಳೆಗಾಲದ ಸಂದರ್ಭದಲ್ಲಿ ಚಿತ್ರಪಟಗಳಿಗೆ ಫ‌ಂಗಸ್‌ ಬರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಅವುಗಳನ್ನು ನೀವು ಸ್ವಚ್ಛ ಮಾಡದೇ ಪರಿಣತರನ್ನು ಕರೆಸಿ ಮಾಡಿಸಿ.

•ಚಿತ್ರಪಟಗಳನ್ನು ಯಾವುದೇ ಕಾರಣಕ್ಕೂ ಬರಿಗೈಯಿಂದ ಮುಟ್ಟಬೇಡಿ. ನಮ್ಮ ದೇಹದಲ್ಲಿನ ಎಣ್ಣೆ ಅಂಶಗಳಿಂದಲೂ ಕೆಲವು ಪೈಂಟಿಂಗ್‌ಗಳು ಹಾಳಾಗುವುದುಂಟು.

•ಬಾತ್‌ರೂಮ್‌ ಮತ್ತು ಅಡುಗೆ ಕೋಣೆಗಳಲ್ಲಿ ಚಿತ್ರಪಟಗಳನ್ನು ತೂಗುಹಾಕಬೇಡಿ. ನೀರು ಮತ್ತು ಹೊಗೆಯ ಸಂಪರ್ಕದಲ್ಲಿ ಚಿತ್ರಪಟಗಳು ಬೇಗ ಹಾಳಾಗುತ್ತವೆ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.