ಪ್ರವಾಸ ಸಿದ್ಧತೆ ಹೀಗಿರಲಿ
Team Udayavani, Feb 13, 2020, 5:29 AM IST
ದಿನನಿತ್ಯದ ಜೀವನದಿಂದ ಸ್ವಲ್ಪ ವಿರಾಮ, ಬದಲಾವಣೆ ಬೇಕೆನಿಸಿದಾ ಗ ಎಲ್ಲಾದರೂ ಪ್ರವಾಸ ಹೋಗೋಣ ವೆಂದು ಅನ್ನಿಸುತ್ತದೆ. ಆದರೆ ಪ್ರವಾಸ ಹೋಗುವಾಗ ಅದಕ್ಕೆ ಸೂಕ್ತ ಪೂರ್ವ ಸಿದ್ಧತೆ ಮಾಡಿ ಕೊಳ್ಳುವುದನ್ನು ಮಾತ್ರ ಮರೆತು ಬಿಡುತ್ತೇವೆ. ಗೊತ್ತಿರುವ ಊರಿನಲ್ಲೇ ಹತ್ತು-ಹಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳುವಾಗ, ಪರಿಚಯವೇ ಇಲ್ಲದ ಪರ ಊರಿಗೆ ಹೋದರೆ ಎಷ್ಟೆಲ್ಲಾ ತಾಪತ್ರ ಯಗಳು ಎದುರಾಗಬಹುದು. ಹಾಗಾಗಿ ಒಳ್ಳೆಯ ಟೂರ್ ಪ್ಲಾನ್ ಮಾಡೋದು ಹೇಗೆ, ಪ್ರವಾಸ ಹೋಗುವ ಮುನ್ನ ಏನೆಲ್ಲಾ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮಿತ ಬಜೆಟ್ನಲ್ಲಿ ಒಳ್ಳೆಯ ಸ್ಥಳಗಳನ್ನು ದರ್ಶನಮಾಡಿ ಬರುವುದು ಹೇಗೆ ಅನ್ನೋದಕ್ಕೆ ಇಲ್ಲಿದೆ ಟಿಪ್ಸ್.
ವಸತಿ ವ್ಯವಸ್ಥೆ: ಪ್ರವಾಸ ಹೋದಲ್ಲಿ ಸುರ ಕ್ಷಿತ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯ. ಸರಿಯಾದ ಹೊಟೇಲ್ ಪರಿಶೀಲಿಸಿ ಡಿಸ್ಕೌಂಟ್ ಲೆಕ್ಕಾಚಾರ ಹಾಕಿ ಹೊಟೇಲನ್ನು ಬುಕ್ ಮಾಡಿಕೊ ಳ್ಳುವುದು ಒಳ್ಳೆಯದು. ಸುರಕ್ಷಿತ ಮತ್ತು ಹಣ ಉಳಿತಾಯ ಎರಡು ದೃಷ್ಟಿಯಿಂದಲೂ ಉತ್ತಮ.
ಆಫ್ ಸೀಸನ್ ಉತ್ತಮ: ರಜಾ ದಿನಗಳಲ್ಲಿ, ಹಬ್ಬ ಹರಿದಿನಗಳ ಸಮಯದಲ್ಲಿ ಪ್ರವಾಸ ಹೋಗುವುದ ಕ್ಕಿಂತ ಆಫ್ ಸೀಸನ್ ಅಲ್ಲಿ ಹೋಗುವುದು ಉತ್ತಮ. ಆನ್ ಸೀಸನ್ಗೆ ಹೋಲಿಸಿದರೆ, ಆಫ್ ಸೀಸನ್ನಲ್ಲಿ ಬಸ್ಸು, ರೈಲು, ವಿಮಾನ ಟಿಕೆಟ್ ದರ ಕಡಿಮೆ ಇರಲಿದ್ದು, ಹಣ ಉಳಿತಾಯಕ್ಕೆ ಇದು ಸುಲಭ ಮಾರ್ಗ. ಆಫ್ಸೀಸನ್ನಲ್ಲಿ ಪ್ರವಾಸ ಕೈಗೊ ಳ್ಳುವುದರಿಂದ ತೀರಾ ಜನಸಂದಣಿ ಇರುವುದಿಲ್ಲ.
ಆಹಾರ: ಪ್ರವಾಸ ಹೋದಾಗ ಆಹಾರದ ಕಡೆ ಗಮನ ಹರಿಸುವುದು ಅಗತ್ಯ. ಪ್ರಮುಖ ಪ್ರವಾಸಿ ಸ್ಥಳದ ಸುತ್ತಮುತ್ತ ಇರುವ ಹೊಟೇಲ್ಗಳು ದುಬಾರಿ. ಸಾಧ್ಯವಾದಷ್ಟು ಕೆಲವು ಆಹಾರ ತಿನಿಸು, ನೀರುಕೊಂಡು ಹೋಗಬಹುದು.
ಸ್ಥಳ ವೀಕ್ಷಣೆ: ಇರುವ ಸಮಯದಲ್ಲಿ, ಕಡಿಮೆ ವೆಚ್ಚ ದಲ್ಲಿ ಪ್ರವಾಸಿ ತಾಣದ ಇತರ ಆಕರ್ಷಣೆಗಳನ್ನು ನೋಡಿಕೊಂಡು ಬನ್ನಿ.
ಸಾರಿಗೆ: ಪ್ರವಾಸ ಹೋದಲ್ಲಿ ಅಲ್ಲಿನ ಸುತ್ತ ಮುತ್ತ ಸ್ಥಳ ವೀಕ್ಷಿಸಲು ಟ್ಯಾಕ್ಸಿ, ಆಟೋ ಹಿಡಿಯುವ ಬದಲು ಸ್ಥಳೀಯ ಬಸ್ಸು, ರೈಲನ್ನು ಹತ್ತಬಹುದು. ಇದರಿಂದ ಖರ್ಚು ಕಡಿಮೆ ಮಾಡಬಹುದು.
ಮೊಬೈಲ್ ಬಳಕೆ: ಬೇರೆ ರಾಜ್ಯ, ಬೇರೆ ದೇಶಕ್ಕೆ ಹೋದರೆ ಮೊಬೈಲ್ ಕರೆನ್ಸಿ ಚಾರ್ಜ್ ದುಪ್ಪಟ್ಟಾ ಗುತ್ತದೆ. ಈ ಸಂದರ್ಭ ಸ್ಥಳೀಯ ಸಿಮ್ ಬಳ ಸಬಹುದು.
ಮಕ್ಕಳ ಸುರಕ್ಷೆ: ಪ್ರವಾಸದಲ್ಲಿ ಮಕ್ಕಳನ್ನು ಕರೆದು ಕೊಂಡು ಹೋಗುವುದಿದ್ದರೆ ಅವರ ಆಹಾರ, ಆಟಿಕೆ, ಬಟ್ಟೆಬರೆಗಳನ್ನು ಮನೆಯಿಂದಲೇ ಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ಹೋದಲ್ಲಿ ತೆಗೆದುಕೊಂಡರೆ ದುಬಾರಿ ಎನಿಸುತ್ತದೆ.
ಆನ್ ಲೈನ್ ಬುಕ್ಕಿಂಗ್: ಡಿಜಿಟಲ್ ಲೋಕದಲ್ಲಿ ಬದುಕ ಬಂಡಿಯನ್ನು ಓಡಿಸುತ್ತಿರುವ ನಮಗೆ ಕೈ ಬೆರಳಿನ ತುದಿಯಲ್ಲಿ ಎಲ್ಲ ಸೌಲಭ್ಯಗಳು ಲಭ್ಯ ವಾಗುತ್ತವೆ. ಹಿಂದೆ ಎಲ್ಲ ಗಂಟೆ ಗಟ್ಟಲೆ ಸರದಿ ಸಾಲಿ ನಲ್ಲಿ ನಿಲ್ಲುವ ಗೋಜಲು 4ಜಿ-5ಜಿ ಕಾಲದಲ್ಲಿಲ್ಲ. ಆದ ಕಾರಣ ಎಲ್ಲಿಗೆ, ಯಾವಾಗ ಹೋಗುವುದು ಎಂದು ನಿರ್ಧರಿಸಿ ಏಜೆಂಟರ ಬಳಿ ಹೋಗಿ ಟಿಕೆಟ್ ಬುಕ್ ಮಾಡುವ ಬದಲು ಇಂಟರ್ನೆಟ್ನಲ್ಲಿ ಬುಕ್ಕಿಂಗ್ ಮಾಡುವುದು ಸುಲಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ