ಸರಿಯಾಗಿರಲಿ ನಿರ್ಧಾರ ಸುಂದರವಾಗಲಿ ಬದುಕು


Team Udayavani, Jun 24, 2019, 5:39 AM IST

sariyagi

ಇಲ್ಲಿ ಎಲ್ಲವೂ ಶಾಶ್ವತವಲ್ಲ. ಸದಾ ಸಮತ್ವದಲ್ಲಿರುವ ಗಣಿತವೂ ಅಲ್ಲ. ಬದುಕುವ ಭರವಸೆ ಇದ್ದರಷ್ಟೇ ಇಲ್ಲಿ ಗೆಲುವು ಸಾಧ್ಯ. ನಮ್ಮೊಳಗೆ ಆತ್ಮವಿಶ್ವಾಸದ ಬೆಂಕಿ ಜಾಗೃತವಾಗಿರದೇ ಹೋದ ಪಕ್ಷ ಇಲ್ಲಿ ಯಾವ ಸಾಧನೆಯೂ ಅಸಾಧ್ಯ. ಇನ್ನೂ ಸರಳವಾಗಿ ಹೇಳುವುದಾದರೆ ನಮ್ಮಲ್ಲಿ ನಾವು ನಂಬಿಕೆ ಹೊಂದಿದಲ್ಲಿ ಮಾತ್ರವೇ ನಿರೀಕ್ಷಿತ ಗುರಿ ನಮ್ಮದಾಗುವುದು ಸಾಧ್ಯ.
ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನಿಗೆ ಮೂವರು ಗಂಡು ಮಕ್ಕಳು. ಮಕ್ಕಳು ಬೆಳೆದು ವಿದ್ಯಾವಂತರಾಗುತ್ತಾರೆ. ಮದುವೆಯ ವಯಸ್ಸಿಗೂ ಬರುತ್ತಾರೆ.

ಮೂರು ಮಕ್ಕಳಿಗೂ ರೈತ ಮದುವೆಯನ್ನೂ ಮಾಡುತ್ತಾನೆ. ರೈತನಿಗೆ ತನ್ನ ಮೂವರು ಸೊಸೆಯಂದಿರಲ್ಲಿ ಹೆಚ್ಚು ಬುದ್ಧಿವಂತರು ಎಂದು ತಿಳಿದು, ಅವರಿಗೆ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಕೊಡುವ ಆಸೆ. ಅದಕ್ಕಾಗಿ ಆತ ಒಂದು ಉಪಾಯವನ್ನು ಮಾಡುತ್ತಾನೆ.

ಒಂದು ದಿನ ರೈತ ತನ್ನ ಮೂವರು ಸೊಸೆಯರನ್ನು ಕೆರದು ಅವರ ಕೈಗೆ ಸಮ ಪ್ರಮಾಣದ ಭತ್ತದ ಕಾಳುಗಳನ್ನು ನೀಡುತ್ತಾನೆ ಮತ್ತು ತಾನು ಯಾತ್ರೆ ಮುಗಿಸಿ ಬರುವಲ್ಲಿಯವರೆಗೆ ಅದನ್ನು ಸಂರಕ್ಷಣೆ ಮಾಡುವಂತೆ ತಿಳಿಸುತ್ತಾನೆ.

ಮಾವ ಹೋದ ತತ್‌ಕ್ಷಣವೇ ಮೊದಲನೇ ಸೊಸೆ ಮಾವ ಕೇಳಿದಾಗ ಭತ್ತ ಚೀಲದಿಂದ ತೆಗೆದುಕೊಟ್ಟರಾಯಿತು ಎಂದುಕೊಂಡು ಕೊಟ್ಟ ಕಾಳುಗಳನ್ನು ತಿಂದು ಬಿಡುತ್ತಾಳೆ. ಇನ್ನು ಎರಡನೇ ಸೊಸೆ ಅದನ್ನು ಕಟ್ಟಿ ಜೋಪಾನವಾಗಿ ತೆಗೆದಿರಿಸುತ್ತಾಳೆ. ಆದರೆ ಮೂರನೆ ಸೊಸೆ ಭತ್ತದ ಕಾಳುಗಳನ್ನು ಬಿತ್ತಿ ಬಂದ ಪೈರುಗಳನ್ನು ತೆಗೆದಿರಿಸುತ್ತಾಳೆ. ಹೀಗೆ ಕೆಲವು ತಿಂಗಳುಗಳು ಕಳೆಯುತ್ತವೆ.

ಯಾತ್ರೆಗೆ ಹೋದ ಮಾವ ಹಿಂದಿರುಗಿ ಬಂದು ಕೊಟ್ಟ ಕಾಳುಗಳನ್ನು ಏನು ಮಾಡಿದಿರಿ ಎಂದು ಸೊಸೆಯಂದಿರಲ್ಲಿ ಪ್ರಶ್ನಿಸುತ್ತಾನೆ. ಅವರು ಅದನ್ನು ಬಳಕೆ ಮಾಡಿದ ರೀತಿಯನ್ನು ಕೇಳಿ ಕೊನೆಯ ಸೊಸೆಗೆ ಮನೆಯ ಜವಾಬ್ದಾರಿ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರುತ್ತಾನೆ.

ಈ ಕಥೆಯ ಸಾರವಿಷ್ಟೇ ಯಾವುದೋ ಒಂದು ಜವಾಬ್ದಾರಿಯನ್ನು ನಮ್ಮ ಹೆಗಲಿಗೇರಿಸಿದ ಪಕ್ಷದಲ್ಲಿ ನಾವದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದರಲ್ಲಿಯೇ ನಾವು ನಿರೀಕ್ಷಿತ ಗುರಿಯನ್ನು ಹೇಗೆ ತಲುಪಬಹುದು ಎಂಬ ಅಂಶ ಅಡಗಿದೆ.

- ಭುವನಾಬಾಬು ಪುತ್ತೂರು

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.