ಮನಕ್ಕೆ ಮುದ ನೀಡುವಂತಿರಲಿ ಬೆಡ್‌ರೂಮ್‌


Team Udayavani, Aug 4, 2018, 2:22 PM IST

4-agust-13.jpg

ಬೆಡ್‌ರೂಮ್‌ ಮನಸ್ಸು ಮತ್ತು ದೇಹದ ದಣಿವಾರಿಸಿಕೊಳ್ಳುವ ಸ್ಥಳ. ಆದ್ದರಿಂದ ಅದು ಪ್ರತಿ ದಿನದ ಜಂಜಾಟದ ಬದುಕಿನಿಂದ ಸುಸ್ತಾದಾಗ ವಿಶ್ರಾಂತಿ ಪಡೆದು, ಮರು ದಿನದ ಕೆಲಸಕಾರ್ಯಗಳಿಗೆ ನವ ಚೈತನ್ಯದೊಂದಿಗೆ ಸಿದ್ಧಗೊಳ್ಳಲು ಪ್ರೇರಣೆ ನೀಡುವಂತಿರಬೇಕು.

ಬೆಡ್‌ ರೂಮ್‌ ಸ್ವಚ್ಛ, ಪ್ರಶಾಂತ, ಆಕರ್ಷಕವಾಗಿ ಮನಕ್ಕೆ ಮುದ ನೀಡುವ ಜತೆಗೆ ಚೆನ್ನಾಗಿ ಗಾಳಿ, ಬೆಳಕು ಇದ್ದು ನೆಮ್ಮದಿಯಿಂದ ನಿದ್ರಿಸಲು ಅನುಕೂಲಕರವಾಗಿದ್ದರೆ ಉತ್ತಮ. ಇದರ ವಿನ್ಯಾಸ, ಅಲಂಕಾರ ಮನೆ ಮಂದಿಯ ಅಭಿರುಚಿಯ ದ್ಯೋತಕದಂತಿರಬೇಕು. ಆಗ ಮಾತ್ರ ಬೆಡ್‌ ರೂಮ್‌ ಕಂಫ‌ರ್ಟ್‌ ಆಗಿರುತ್ತದೆ.

ಅಹ್ಲಾದಕರವಾಗಿರಲಿ
ಬೆಡ್‌ ರೂಮ್‌ ವಿನ್ಯಾಸ ಸಾಫ್ಟ್  ಆಗಿ ಮನಸ್ಸಿಗೆ ಅಹಲ್ಲಾದಕರವಾಗುವಂತಿದ್ದರೆ ನಮ್ಮ ಮೂಡ್‌ ಚೆನ್ನಾಗಿರುತ್ತದೆ. ಇದಕ್ಕಾಗಿ ಮೆತ್ತ ನೆಯವೆಲ್ವೆಟ್‌ ಬಟ್ಟೆಯಿಂದ ತಯಾರಿಸಿದ ಬೆಡ್‌ ಕವರ್‌, ಪಿಲ್ಲೋ  ಕವರ್‌ ಗಳು ಬಳಸುವುದು ಸಹಕಾರಿ. ಹಾಗೆ ಕುಶನ್‌, ವಿಂಡೋ ಕರ್ಟನ್‌ ಕೂಡ ಅವರ ಅಭಿರುಚಿಗೆ ತಕ್ಕಂತ ಡಿಸೈನ್‌ ಮತ್ತು ಚಿತ್ರಗಳಿಂದ ಕೂಡಿದ್ದು, ರೂಮ್‌ ಗೋಡೆಯ ಬಣ್ಣಕ್ಕೆ ಮ್ಯಾಚ್‌ ಆಗುವಂತಿದ್ದರೆ ಕೋಣೆಯ ಸೌಂದರ್ಯ ಇಮ್ಮಡಿಯಾಗುತ್ತದೆ.

ಮಂಚಕ್ಕೆ ವಿಲಾಸಿ ಲುಕ್‌
ಮಂಚ ಕೇವಲ ಮಲಗಲು ಆರಾಮದಾಯಕವಾಗಿದ್ದರೆ ಸಾಲದು. ಅದು ಬೆಡ್‌ ರೂಮ್‌ನ ಅಲಂಕಾರದಲ್ಲಿ ಪ್ರಮುಖವಾಗಿರುವುದರಿಂದ ಆಕರ್ಷಕ ವಿನ್ಯಾಸ ಹೊಂದಿರಬೇಕು. ಮಂಚದ ಹೆಡ್‌ ಬೋರ್ಡ್‌ನಲ್ಲಿ ಆಕರ್ಷಕ ಪ್ರಕೃತಿ ಚಿತ್ರ, ಕುಟುಂಬದ ಚಿತ್ರ ಅಥವಾ ವಿವಿಧ ಕಲಾಕೃತಿಗಳನ್ನು ಬಳಸುವುದರಿಂದ ಅದು ರೂಮ್‌ಗೆ ವಿಲಾಸಿ ಲುಕ್‌ ನೀಡುವುದು. ಮಂಚದ ಎರಡೂ ಪಕ್ಕದಿಂದ ಮಲಗಿದವರು ಇಳಿಯಲು ಸ್ಥಳಾವಕಾಶ ಬಿಟ್ಟು ರೂಮ್‌ನ ಮಧ್ಯ ಭಾಗದಲ್ಲಿ ಮಂಚ ಅಳವಡಿಸುವುದು ಉತ್ತಮ.

ವಾಲ್‌ ಪೇಪರ್‌  ಟ್ರೆಂಡ್‌
ಗೋಡೆಗಳಿಗೆ ಅಳವಡಿಸುವ ಆಧುನಿಕ ರೀತಿಯ ವಿವಿಧ ಆಲಂಕಾರಿಕ ವಸ್ತುಗಳು ಬೆಡ್‌ ರೂಮ್‌ಗೆ ಹೊಸ ರೂಪ ನೀಡುತ್ತವೆ. ಈಗಂತೂ ವೈವಿಧ್ಯಮಯ 3ಡಿ ಇಫೆಕ್ಟ್‌ನ ವಾಲ್‌ ಪೇಪರ್‌ ಗಳನ್ನು ಬಳಸುವುದು ಟ್ರೆಂಡ್‌ ಆಗಿದೆ. ಬೆಡ್‌ರೂಮ್‌ಗೆ ಅಟ್ಯಾಚ್ಡ್  ಬಾತ್‌ ರೂಮ್‌ ಅತೀ ಅಗತ್ಯ. ಆ ಬಾತ್‌ ರೂಮ್‌ನಲ್ಲಿ ಗಾಳಿ ಸುಳಿದಾಡಲು ಪುಟ್ಟ ಕಿಟಕಿ ಅಥವಾ ವೆಂಟಿಲೇಟರ್‌ ಮುಖ್ಯ ವಾಗಿಬೇಕು. ಜತೆಗೆ ಎಕ್ಸಾಸ್ಟ್  ಫ್ಯಾನ್‌ ಇರಲೇಬೇಕು. ಕಿಟಕಿ ಇದ್ದರೂ ಬಾತ್‌ ರೂಮ್‌ ನಲ್ಲಿ ಹೆಚ್ಚಾಗಿ ತೇವಾಂಶ ಇರುವುದರಿಂದ, ಅಲ್ಲದೇ ಅಲ್ಲಿನ ವಾಸನೆ ಹೊರಗೆ ಹೋಗಲು ಇದು ಸಹಾಯಕಾರಿಯಾಗುತ್ತದೆ. ಬೆಡ್‌ರೂಮ್‌ನ ಕಿಟಕಿ ಮೂಲಕ ಪ್ರಕೃತಿಯ ಹಸುರು ವಾತಾವರಣ ಕಾಣುವ ಹಾಗಿದ್ದರೆ ಮನಸ್ಸಿಗೆ ಬೇಸರವಾದಾಗ ಅದನ್ನು ನೋಡುತ್ತಾ ನೋವು ಮರೆಯಬಹುದು.

ನಿರ್ವಹಣೆ ಮುಖ್ಯ
ಬೆಚ್ಚನೆಯ ಭಾವ ಮೂಡಿಸುವುದರ ಜತೆಗೆ ಕೋಣೆಗೆ ಬಂದೊಡನೆಯೇ ಸಂತಸ ತರುವ, ತೃಪ್ತಿ ನೀಡುವ ತಾಣವಾಗಿರಲಿ ಬೆಡ್‌ರೂಮ್‌ ಎಂದು ಆಶಿಸುವವರೆ ಹೆಚ್ಚು. ಇದಕ್ಕೆ ಬೆಡ್‌ರೂಮ್‌ನ ನಿರ್ವಹಣೆ ಬಹುಮುಖ್ಯವಾಗಿದೆ. ಪ್ರತಿ ದಿನ ಸಾಧ್ಯವಾಗದಿದ್ದರೂ ಎರಡು ದಿನಗಳಿಗೊಮ್ಮೆ ಬೆಡ್‌ ರೂಮ್‌, ಬಾತ್‌ ರೂಮ್‌ ಸ್ವಚ್ಛಗೊಳಿಸಬೇಕು. ಬಟ್ಟೆಬರೆಗಳನ್ನು ನೀಟಾಗಿ ಮಡಚಿ ಇಡಬೇಕು. ಬಟ್ಟೆಗಳನ್ನು ಬೆಡ್‌ ರೂಮ್‌ ನಲ್ಲಿ ನೇತಾಡಿಸುವುದರಿಂದ ಸೊಳ್ಳೆ , ಜಿರಳೆಗಳು ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅವುಗಳನ್ನು ಕಪಾಟಿನಲ್ಲಿ ಅಥವಾ ಹೊರಗಡೆ ವರ್ಕ್‌ ಏರಿಯಾದಲ್ಲಿ ಹಾಕುವುದು ಸೂಕ್ತ. ಕಿಟಿಕಿಗಳಿಗೆ ಸೊಳ್ಳೆ ಪರದೆ ಅಳವಡಿಸುವುದು, ರೂಮ್‌ ಫ್ರೆಶ್‌ನರ್‌ ಬಳಸುವುದು. ಹೊರಗಡೆಯಿಂದ ಸ್ವಚ್ಛ ಗಾಳಿ, ಬೆಳಕು ಒಳಬರಲು ಕಿಟಿಕಿ, ಕರ್ಟ್‌ ನ್‌ ಗಳನ್ನು ತೆರೆದಿಡುವುದು ಒಳ್ಳೆಯದು. ಬಾತ್‌ ರೂಮ್‌, ಬಾಗಿಲು ಪಕ್ಕ ಮ್ಯಾಟ್‌ ಗಳನ್ನು ಹಾಕು ವುದು ಸ್ವಚ್ಛತೆ ದೃಷ್ಟಿಯಿಂದ ಉತ್ತಮ.

 ಗಣೇಶ ಕುಳಮರ್ವ

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.