ಬೋಹಿಮಿಯನ್‌ ಹೊಸತನದ ಶೃಂಗಾರ 


Team Udayavani, Jun 22, 2019, 5:00 AM IST

8

ಮನೆ ಸದಾ ಹೊಸತನದಿಂದ ಕೂಡಿರಬೇಕು ಎನ್ನುವುದು ಬಹುತೇಕರ ಕನಸು. ಆದರೆ ಮನೆಯನ್ನು ನಿರಂತರವಾಗಿ ನೀಟಾಗಿ, ನವೀನತೆಯಿಂದ ಕೂಡಿರುವಂತೆ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಆಕಸ್ಮಿಕವಾಗಿ ಅತಿಥಿಗಳು ಬಂದಾಗ ಕೆಲವೊಮ್ಮೆ ಮುಜುಗರ ಅನುಭವಿಸುವಂತಾಗುತ್ತದೆ.

ಇದನ್ನು ತಪ್ಪಿಸಲು ಬೋಹಿಮಿಯನ್‌ ಶೈಲಿಯನ್ನು ಬಳಸಬಹುದು. ಇದಕ್ಕಾಗಿ ನೀವು ಮೊದಲು ಮಾಡಬೇಕಾದುದು ಇಷ್ಟೇ. ದುಬಾರಿ ಲೆದರ್‌ ಸೋಫಾಗಳನ್ನು ಬದಿಗಿಟ್ಟು ಹಗುರವಾದ, ಗಟ್ಟಿಮುಟ್ಟಾದ ಮತ್ತು ಪರಿಸರ ಸ್ನೇಹಿ ಕುರ್ಚಿ, ಸೋಫಾಗಳನ್ನು ಆಯ್ಕೆ ಮಾಡಿ. ಇದು ಹೆಚ್ಚು ಆರಾಮದಾಯಕ. ಮಾತ್ರವಲ್ಲಿ ಈಗ ಟ್ರೆಂಡ್‌ ಕೂಡ ಆಗಿದೆ.

ವರ್ಣಮಯ ದಿಂಬು
ಸೋಫಾ, ಕುರ್ಚಿ ಮೇಲಿರುವ ಹಳೆಯದಾದ, ಬಣ್ಣ ಮಾಸಿರುವ ದಿಂಬನ್ನು ಬದಲಾಯಿಸಿ. ಮೆತ್ತನೆ ಹಾಗೂ ವೈವಿಧ್ಯಮಯ ಬಣ್ಣಗಳನ್ನು ಒಳಗೊಂಡ ದಿಂಬನ್ನು ಆರಿಸಿ. ಗೋಡೆಗೆ ಹೊಂದಿಕೆಯಾಗುವ ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳಲು ಎಚ್ಚರವಹಿಸಿ.

ವೃತ್ತಾಕಾರದ ಟೇಬಲ್‌
ವೃತ್ತಾಕಾರ ಮನೆ ಅಲಂಕಾರದ ಸದ್ಯದ ಟ್ರೆಂಡ್‌. ಆದ್ದರಿಂದ ಟೇಬಲ್‌ ಆಯ್ಕೆ ಮಾಡುವಾಗ ನಿಮ್ಮ ಗಮನ ವೃತ್ತಾಕಾರದ ಮರದ ಟೇಬಲ್‌ ಕಡೆಗಿರಲಿ. ಟೇಬಲ್‌ ಮೇಲೆ ಅತಿ ಎನಿಸುವ ಆಲಂಕಾರಿಕ ವಸ್ತುಗಳನ್ನು ಜೋಡಿಸಬೇಡಿ. ಡೈನಿಂಗ್‌ ಟೇಬಲ್‌ ಮಧ್ಯದಲ್ಲಿ ಗ್ಲಾಸ್‌ ಅಳವಡಿಸಿ ಅದರೊಳಗೆ ಬಣ್ಣ ಬಣ್ಣದ ಚಿಕ್ಕ ಚಿಕ್ಕ ಕಲ್ಲುಗಳನ್ನು ತುಂಬಿದರೆ ಆಕರ್ಷಕವಾಗಿರುತ್ತದೆ.

ಮಣಿಗಳಿಂದ ಕೂಡಿದ ಕರ್ಟನ್‌
ಗೋಡೆ, ಕಲಾಕೃತಿ, ಟೇಬಲ್‌, ಕುರ್ಚಿಗಳು ಮಾತ್ರವಲ್ಲದೆ ಕರ್ಟನ್‌ಗಳೂ ಕೂಡಾ ಮನೆಯ ಅಂದವನ್ನು ಹೆಚ್ಚಿಸಬಲ್ಲವು. ಅವಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಪ್ರಸ್ತುತ ಮಣಿಗಳಿಂದ ಕೂಡಿದ ವಿವಿಧ ರೀತಿಯ ಕರ್ಟನ್‌ಗಳು ಮಾರುಕಟ್ಟೆಯಲ್ಲಿದ್ದು, ಬೇಗ ಕೊಳೆಯಾಗದಂತಹ, ಆಕರ್ಷಕ ಬಣ್ಣದ ಪರದೆಗಳನ್ನು ಆರಿಸಿ.

ಆಕರ್ಷಕ ದೀಪಗಳು
ಮನೆಯ ಅಂದ ಹೆಚ್ಚಿಸಲು ದುಬಾರಿ ಬೆಲೆಯ ದೀಪಗಳ ಗೊಂಚಲುಗಳೇ ಆಗಬೇಕೆಂದಿಲ್ಲ. ಚಿಕ್ಕ ಚಿಕ್ಕ ದೀಪಗಳಲ್ಲಿ ನಿಮ್ಮ ಸೃಜನಾತ್ಮಕ ಕಲೆಯನ್ನು ಅರಳಿಸಿಬಿಟ್ಟರೆ ಸಾಕು. ಅವುಗಳು ಅತಿಥಿಗಳ ಗಮನ ಸೆಳೆಯುತ್ತವೆ. ದೇವರ ಕೋಣೆಗಳಲ್ಲಿ ಸಾಂಪ್ರದಾಯಿಕ ಶೈಲಿಯ ದೀಪಗಳನ್ನೇ ಬಳಸಿ. ಹಣತೆ, ಕಂಚಿನ ದೀಪಗಳು ನಿಮ್ಮ ಆದ್ಯತೆಯಾಗಿರಲಿ. ಲ್ಯಾಂಪ್‌, ಲಾಟೀನು ಮಾದರಿ ದೀಪಗಳನ್ನು ಕೋಣೆಗಳಲ್ಲಿ ತೂಗು ಹಾಕಿ ಮನೆಯನ್ನು ಇನ್ನಷ್ಟು ಅಂದವಾಗಿಸಬಹುದು.

ಒಟ್ಟಿನಲ್ಲಿ ವಿಭಿನ್ನವಾಗಿ, ಸೃಜನಾತ್ಮಕವಾಗಿ ಆಲೋಚಿಸುವುದರಿಂದ ಹೆಚ್ಚಿನ ಖರ್ಚಿಲ್ಲದೆ ಮನೆಯನ್ನು ಸಿಂಗರಿಸಬಹುದು. ವಸ್ತುಗಳ ಆಯ್ಕೆಯಲ್ಲಿ ಜಾಣತನ ತೋರಿದರೆ ಸಾಕು.

- ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.