ಕಾರಿನ ಗಾಜು ನಿರ್ವಹಣೆ ,ರಕ್ಷಣೆ


Team Udayavani, May 10, 2019, 6:00 AM IST

CAR

ಕಾರಿನ ಒಳಗೆ ಪ್ರಯಾಣಿಸುವವರನ್ನು ಮಳೆ, ಗಾಳಿ, ಧೂಳಿನಿಂದ ರಕ್ಷಿಸಲು ಮತ್ತು ಕಾರು ವೇಗ ಕಾಯ್ದುಕೊಳ್ಳಲು ಗಾಜು ಆವಶ್ಯಕ. ಕಾರಿನಲ್ಲಿ ಸಾಮಾನ್ಯವಾಗಿ 6 ಗಾಜುಗಳು ಇರುತ್ತವೆ. ಇವುಗಳಲ್ಲಿ ಮುಂಭಾಗದ ಮತ್ತು ಹಿಂಭಾಗದ ಗಾಜು ಹೆಚ್ಚು ಮಹತ್ವದ್ದು. ಆದ್ದರಿಂದ ಗಾಜಿನ ನಿರ್ವಹಣೆ ವಿಧಾನ ನೋಡೋಣ.

ಪ್ರಯಾಣಕ್ಕೆ ಮುನ್ನ ಚೆನ್ನಾಗಿ ಒರೆಸಿ
ಯಾವುದೇ ಪ್ರಯಾಣಕ್ಕೆ ಮುನ್ನ ಕಾರಿನ ಗಾಜಿಗೆ ತುಸು ನೀರು ಹಾಕಿ ಮೆದುವಾದ ಸ್ಪಾಂಜ್‌ನಿಂದ ಅಥವಾ ನೀರು ಹೀರಿಕೊಳ್ಳುವ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಿಂದ ಗಾಜಿನಲ್ಲಿರುವ ಕಲೆಗಳು ಹೋಗುತ್ತವೆ. ಕೆಸರು, ಮರಳಿನ ಕಣಗಳು ಇಲ್ಲವಾಗುತ್ತವೆ. ಚಾಲಕನಿಗೆ ಸ್ಪಷ್ಟವಾಗಿ ಹೊರಗಡೆ ಕಾಣುತ್ತದೆ.

ದಢಾರನೆ ಬಾಗಿಲು ಹಾಕದಿರಿ
ಕಾರಿನ ಡೋರ್‌ ದಢಾರನೆ ಹಾಕುವ ಅಭ್ಯಾಸ ನಮಗಿದೆ. ಆದರೆ ಈಗಿನ ಕಾರುಗಳಲ್ಲಿ ಅಷ್ಟು ಬಲಯುತವಾಗಿ ಡೋರ್‌ ಹಾಕಬೇಕಾದ್ದಿಲ್ಲ. ಡೋರ್‌ ಬೀಳಲ್ಲ ಎಂಬ ಸಂಶಯದಿಂದಲೂ ಹೀಗೆ ಮಾಡಬಹುದು. ಆದರೆ ಅಷ್ಟು ಬಲಯುತವಾಗಿ ಡೋರ್‌ ಹಾಕುವುದರಿಂದ ಡೋರ್‌ ಅದುರಿ ಕಾರಿನ ಕಿಟಕಿಗಳ ಗಾಜಿನ ರಬ್ಬರ್‌ ಸಡಿಲವಾಗುತ್ತದೆ. ಇದರಿಂದ ಕ್ರಮೇಣ ಗಾಜು ಸಡಿಲವಾಗಿ ಹಾನಿಯಾಗಬಹುದು.

ಸರಿಯಾದ ಕ್ಲೀನರ್‌ ಬಳಸಿ
ಕಾರಿನ ಗಾಜು ಒರೆಸಲು ಸರಿಯಾದ ರೀತಿಯ ಬಟ್ಟೆ, ಕ್ಲೀನರ್‌, ಸ್ಪಾಂಜ್‌ ಅನ್ನು ಉಪಯೋಗಿಸಿ. ಮಣ್ಣು, ಮರಳಿನ ಕಣ ಸೇರಿದ ಕೊಳೆಯಾದ ಬಟ್ಟೆ, ಅತಿ ಹಾನಿಕರ ರಾಸಾಯನಿಕ ಇತ್ಯಾದಿಗಳನ್ನು ಶುಚಿಗೊಳಿಸಲು ಬಳಸದಿರಿ. ಗಾಜು ಶುಚಿಗೊಳಿಸಲು ಶ್ಯಾಂಪೂ ಅತಿ ಕಡಿಮೆ ಖರ್ಚಿನ ಸುಲಭ ಉಪಾಯವಾಗಿದೆ.

ಮರಳು ಲಾರಿ ಹಿಂದೆ ಜಾಗ್ರತೆ!
ರಸ್ತೆಯಲ್ಲಿ ನಿಮ್ಮ ಕಾರು ಚಾಲನೆ ವೇಳೆ ಮುಂದೆ ಮರಳು/ಕಲ್ಲಿನ ಲಾರಿ ಹೋಗುತ್ತಿದ್ದರೆ ಜಾಗ್ರತೆಯಾಗಿರಿ. ಅವುಗಳಿಂದ ಸಣ್ಣ ಕಲ್ಲಿನ ಕಣಗಳು, ಮರಳಿನ ಕಣಗಳು ಗಾಜಿಗೆ ಬೀಳುವ ಅಪಾಯವಿರುತ್ತದೆ. ನಿರಂತರವಾಗಿ ಮರಳು ಗಾಜಿಗೆ ಬಿದ್ದರೆ ಗಾಜು ಒಡೆದು ಹೋಗುವ, ಬಿರುಕುಗಳು ಸೃಷ್ಟಿಯಾಗುವ ಅಪಾಯಗಳೂ ಇವೆ.

ವೈಪರ್‌ಬ್ಲೇಡ್‌ ಬದಲಾಯಿಸಿ
ವೈಪರ್‌ಬ್ಲೇಡ್‌ಗಳು ಹಳತಾದಂತೆ ಗಡುಸಾಗುತ್ತವೆ. ಇದರಿಂದ ಗಾಜಿನ ಮೇಲೆ ಶಾಶ್ವತ ಕಲೆಗಳನ್ನು ಉಂಟು ಮಾಡುತ್ತವೆ. ಹೋಗದಿದ್ದರೆ, ಕೂಡಲೇ ಬದಲಾಯಿಸಿ.

-  ಈಶ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.