ಭಿತ್ತಿಯಲ್ಲಿ ಚಿತ್ರಗಳದ್ದೇ ಕಾರುಬಾರು


Team Udayavani, Apr 20, 2019, 6:23 AM IST

WALL2

ಮನೆಯ ಗೋಡೆಗಳಿಗೆ ಯಾವುದೋ ಒಂದು ಬಣ್ಣ ಬಳಿದು ಬಿಟ್ಟರೆ ಸಾಕು ಮನೆ ಅಂದವಾಗಲು ಎಂಬ ಮಾತೊಂದಿತ್ತು . ಆದರೆ ಈಗ ಹಾಗಲ್ಲ. ಭಿತ್ತಿಗಳಿಗೆ ನಮ್ಮ ಇಷ್ಟದ ಬಣ್ಣವನ್ನು ಕಲಾತ್ಮಕ ರೀತಿಯಲ್ಲಿ ಬಳಿದರೂ ಸಾಕಾಗುವುದಿಲ್ಲ. ಖಾಲಿ ಖಾಲಿ ಕಾಣಿಸುತ್ತದೆಂಬುದು ಸಮಸ್ಯೆ. ಈ ತೊಂದರೆ ತಪ್ಪಿಸಿ ಮನೆಯನ್ನು ಇನ್ನಷ್ಟು ಹೆಚ್ಚು ಅಲಂಕರಿಸಲು ಸುಲಭ ವಿಧಾನವೆಂದರೆ ಗೋಡೆಯಲ್ಲಿ ಫೋಟೋಗಳನ್ನು ನೇತು ಹಾಕುವುದು. ಇದು ಲೇಟೆಸ್ಟ್‌ ಟ್ರೆಂಡ್‌ ಕೂಡ ಹೌದು.

ಕಲೆಯಲ್ಲಿ ಆಸಕ್ಕಿ ಇರುವ ಹೆಚ್ಚಿನವರಿಗೂ ಮನೆ ಅಲಂಕಾರಕ್ಕೆ ಇದು ಸಹಕಾರಿ ಅಥವಾ ನಿಮ್ಮದೇ ಒಂದಷ್ಟು ನೆನಪಿನ ಫೋಟೋಗಳು ವಾರ್ಡ್‌ ರೋಬ್‌ನಲ್ಲಿ ಸುಮ್ಮನೆ ಕುಳಿತಿದ್ದರೆ ಅದಕ್ಕೊಂದು ಆಕೃತಿ ಕೊಟ್ಟು ಮನೆಯನ್ನು ಅಲಂಕರಿಸಬಹುದು. ಆದರೆ ಕೆಲವೊಂದು ಭಾರಿ ಯಾವ ಫೋಟೋಗಳನ್ನು ಎಲ್ಲಿ ಹಾಕಬೇಕೆಂದು ತಿಳಿಯದೆ ಅಭಾಸವಾಗಿ ಬಿಡುವುದಿದೆ. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್‌ಗಳುಯಾವ ಕೋಣೆಗೆ ಯಾವ ಫೋಟೋ ?

ನಿಮ್ಮಲ್ಲಿ ಒಂದಷ್ಟು ರಾಶಿ ಫೋಟೋಗಳಿದ್ದರೆ ಅದನ್ನು ಮನೆಯ ಗೋಡೆಗಳಲ್ಲಿ ಎಲ್ಲೆಂದರಲ್ಲಿ ಜೋಡಿಸಬೇಡಿ. ಇದರಿಂದ ಮನೆ ಅಂದವಾಗುವುದಕ್ಕಿಂತ ಕೆಡುವ ಸಂಭವವೇ ಜಾಸ್ತಿ. ಆದುದರಿಂದ ಮೊದಲು ಮನೆಯ ಯಾವ ಕೋಣೆಯ ಗೋಡೆಗೆ ಫೋಟೋ ಹಾಖಬೇಕು ಎಂಬುದನ್ನು ನಿರ್ಧರಿಸಬೇಕು.

ಹಾಲ್‌, ಆಫೀಸ್‌ ರೂಮ್‌ಗಳಲ್ಲಿ ನಿಮ್ಮ ವೈಯುಕ್ತಿಕ
ಫೋಟೋಗಳ ಹೆಚ್ಚು ಪ್ರದರ್ಶನ ಬೇಡ. ಒಂದೆರೆಡು ಅವಿಸ್ಮರಣೀಯ ನೆನಪುಗಳಿಗೆ ಫ್ರೆàಮ್‌ ಹಾಕಿ ಈ ಕೋಣೆಗಳಲ್ಲಿಡಿ. ಉಳಿದಂತೆ ನಿಮ್ಮ ಪ್ರವಾಸದ ಸಮಯದಲ್ಲಿ ಕ್ಲಿಕ್ಕಿಸಿದ ಪ್ರಕೃತಿ ರಮಣೀಯ ದೃಶ್ಯ ಹಾಗೂ ಕಲಾವಿದರ ಪೈಂಟಿಂಗ್ಸ್‌ಗಳನ್ನು ಹಾಲ್‌ ಮತ್ತು ಆಫೀಸ್‌ ರೂಮ್‌ನ ಗೋಡೆಗಳಲ್ಲಿ ಜೋಡಿಸಿ. ಗೆಸ್ಟ್‌ ರೂಂ ಹಾಗೂ ಬೆಡ್‌ರೂಮ್‌ಗಳಲ್ಲಿ ಕುಟುಂಬ ಭಾವಚಿತ್ರಗಳಿಗೆ ಆದ್ಯತೆ ನೀಡಿ. ಮಕ್ಕಳ ಕಾಟೂìನ್‌ ಅಥವಾ ಅವರ ಮೊದಲ ಚಿತ್ರಗಳನ್ನು ಫ್ರೆàಮ್‌ ಹಾಕಿಡಬಹುದು.

ಫೋಟೋ ಫ್ರೆàಮ್‌ನ
ಆಯ್ಕೆಯಲ್ಲಿ ಎಚ್ಚರವಿರಲಿ
ಫೋಟೋ ಆಕರ್ಷಕವಾಗಿ ಕಾಣಲು ಫ್ರೆàಮ್‌ ಕೂಡ ಒಂದು ಕಾರಣ. ಇಂದು ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳ, ವಿವಿಧ ಶೈಲಿಯ ಫೋಟೋ ಫ್ರೆàಮ್‌ಗಳು ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಬೇಕು.

ಫ್ರೆàಮ್‌ ಹಾಗೂ ನಿಮ್ಮ ಗೋಡೆಯ ಬಣ್ಣಗಳು ಪರಸ್ಪರ ಹೊಂದಿಕೆಯಾಗಿರಬೇಕು. ಗೋಡೆಯ ಬಣ್ಣದಲ್ಲಿ ಫೋಟೋ ಫ್ರೆàಮ್‌ ಗ ಳು ಎದ್ದು ಕಾಣಬೇಕೇ ಹೊರತು ಅದರಲ್ಲಿ ಕಳೆದು ಹೋಗಬಾರದು. ಸಿಂಪಲ್‌ ಗೋಡೆಗೆ ಸ್ವಲ್ಪ ಗ್ರ್ಯಾಂಡ್‌ ಫ್ರೆàಮ್‌ಗಳು ಹೆಚ್ಚು ಸೂಕ್ತ. ಅದೇ ರೀತಿ ಗೋಡೆಗೆ ಜೋಡಿಸುವಾಗಲೂ ಎಚ್ಚರಿಕೆ ವಹಿಸಿ. ಯಾವುದೇ ಕಾರಣಕ್ಕೂ ಗೋಡೆಯ ಬಣ್ಣ ಹಾನಿಯಾಗಬಾರದು,ಪ್ರತಿಯೊಂದು ಒಳ್ಳೆಯ ಘಟನೆಗಳಲ್ಲೂ ಫೋಟೋ ಕ್ಲಿಕ್ಕಿಸುವುದು ಆ ನೆನಪು ಮಾಸದಿರಲೆಂದು. ಅದೇ ನೆನಪುಗಳನ್ನು ನಮ್ಮ ಕನಸಿನ ಮನೆಗೆ ಅಲಂಕಾರವಾಗಿ ಬಳಸುವುದೆಂದರೆ ತುಂಬಾ ಆಸಕ್ತಿದಾಯಕ ವಿಷಯ. ಮನೆಯಲ್ಲಿ ಖುಷಿ ನೆನಪುಗಳೊಂದಿಗೆ ಬದುಕಲು ಒಂದಷ್ಟು ಫೋಟೋಗಳನ್ನು ಮನೆಯಲ್ಲಿ ಜೋಡಿಸಿ.

–  ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

Pan India: ಯಶ್‌ ʼಟಾಕ್ಸಿಕ್‌ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ

ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

12-malpe

Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.