ಆ ಪ್ರಶಾಂತತೆಯನ್ನು ತುಂಬಿಕೊಂಡು ಬರೋಣ


Team Udayavani, Feb 3, 2020, 5:23 AM IST

Chamundi

ನನಗೆ ಮೈಸೂರಿನ ಚಾಮುಂಡಿ ಬೆಟ್ಟ ಹೊಸದೇನೂ ಅಲ್ಲ. ಮೈಸೂರಿಗೆ ಹೋದಾಗಲೆಲ್ಲಾ ಒಮ್ಮೆ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆಯುವುದು ನನ್ನ ಅಭ್ಯಾಸ. ಹಾಗಾಗಿ ಇದು ವರೆಗೆ ಸುಮಾರು ಹದಿನೈದು ಇಪ್ಪತ್ತು ಬಾರಿ ಅಲ್ಲಿಗೆ ಭೇಟಿ ನೀಡಿರಬಹುದು.

ಬೆಳಗ್ಗೆ ಚುಮು ಚುಮು ಚಳಿಯಿತ್ತು. ಅಷ್ಟೇನೂ ಜನರೂ ಇರಲಿಲ್ಲ. ದೇವಿ ದರ್ಶನ ಬಹಳ ಸುಲಭವೆನ್ನುವಂತಿತ್ತು. ಮೆಟ್ಟಿಲು ಹತ್ತಿ ದೇವಿಯ ಎದುರು ನಿಂತೆ. ಒಂದೈದು ನಿಮಿಷ ಅಲ್ಲಿಯೇ ನಿಲ್ಲೋಣ ಎನಿಸಿತು. ನಿಂತುಕೊಂಡು ದೇವಿಯನ್ನು ನೋಡ ತೊಡಗಿದೆ. ಅದ್ಭುತ ಮೂರ್ತಿ. ಅವಳಿಗೆ ಮಾಡಲಾದ ಸಿಂಗಾರ ಎಲ್ಲವನ್ನೂ ಕಂಡು ಖುಷಿ ಯಾಯಿತು. ಮೂರ್ತಿಯಲ್ಲಿನ ಕಳೆ ಬಹಳ ಆಕ ರ್ಷಣೀಯ ಎನಿಸಿತು. ಚಾಮುಂಡಿ ಎಂದರೆ ಉಗ್ರ ಸ್ವರೂಪಿ, ಅದೂ ಮಹಿಷಾಸುರನ ಕೊಂದವಳು ಬೇರೆ. ಆದರೆ, ಆ ಮೂರ್ತಿಯ ಶಾಂತತೆ ಕಂಡು ಬೆರಗಾದೆ. ಸುಮಾರು ಹತ್ತು ನಿಮಿ ಷ ಹೋದದ್ದೇ ತಿಳಿಯಲಿಲ್ಲ. ಅಷ್ಟರಲ್ಲಿ ಹಿಂದೆ ಬಂದ ಮಗುವೊಂದು ನನ್ನನ್ನು ಮುಟ್ಟಿದಾಗಲೇ ಈ ಲೋಕ ಕ್ಕೆ ಬಂದದ್ದು. ಆ ದರ್ಶನ ನನಗೆ ಕೊಟ್ಟ ಖುಷಿಗೆ ಹೋಲಿಕೆ ಇಲ್ಲ.

ಹಾಗಾದರೆ, ಅದಕ್ಕಿಂತ ಮೊದಲು ಹಲವು ಬಾರಿ ಹೋದಾಗಲೂ ಇಂಥದೊಂದು ಅನುಭವ ಯಾಕಾಗಲಿಲ್ಲ ಎನಿಸಿತು?

ಪ್ರತಿ ಬಾರಿ ಹೋದಾಗಲೂ, ದೇವಸ್ಥಾನ ದಲ್ಲಿ ಜನರು ತುಂಬಿರುತ್ತಿದ್ದರು. ನಾನೂ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದೆ. ಹಲವರ ಗಮನ ಎಲ್ಲೆಲ್ಲೋ ಇರುತ್ತಿತ್ತು. ಎಲ್ಲರೂ ಯಂತ್ರ ದಂತೆ ಮೆಟ್ಟಿಲು ಹತ್ತುತ್ತಿದ್ದರು, ದೇವರ ಎದುರು ನಿಲ್ಲುತ್ತಿದ್ದರು. ಪೊಲೀಸರೂ ಯಾಂತ್ರಿಕರಾಗಿ ಹೋಗಿ..ಮುಂದಕ್ಕೆ ಎನ್ನುತ್ತಿ ದ್ದರು. ಅರ್ಚಕರು ಆರತಿ ತಂದು ಕೊಟ್ಟರೂ ಮುಂದೆ ಹೋಗುವ ಭರದಲ್ಲಿ ನಮ್ಮ ದೇಹಗಳು ಚಲಿಸುತ್ತಿದ್ದವು. ನಾನೂ ಅದರಲ್ಲಿ ಒಬ್ಬ ನಾಗಿರುತ್ತಿದ್ದೆ. ದೇವರನ್ನು ನೋಡಲು ಹೋದ ನಾನು ಅದನ್ನು ಬಿಟ್ಟು ಮತ್ತೆ ಮನುಷ್ಯ ಲೋಕವನ್ನೇ ಕಂಡು ಬರುತ್ತಿದ್ದೆ,. ಈ ಬಾರಿ ಹಾಗಾಗಲಿಲ್ಲ.

ಬಹುಶಃ ನಾವು ಪ್ರತಿ ತೀರ್ಥ ಕ್ಷೇತ್ರಕ್ಕೆ ಹೋದಾಗಲೂ ಮಾಡುವುದು ಅದನ್ನೇ. ಒಂದು ಕ್ಷಣ ಶಾಂತತೆಯಿಂದ ಅಲ್ಲಿನ ಪ್ರಶಾಂತತೆ ಯನ್ನು ನಮ್ಮೊಳಗೆ ತುಂಬಿಕೊಳ್ಳಲು ಪ್ರಯತ್ನಿಸುವುದಿಲ್ಲ. ಆಗೆಲ್ಲಾ ನಾವು ಬರಿದೇ ದೇವಸ್ಥಾನವನ್ನು ಸುತ್ತಿ ಬಂದಿರುತ್ತೇವೆ; ದೇವರನ್ನು ಕಂಡು ಬರುವುದಿಲ್ಲ. ಈ ಮಾತು ನನಗೆ ಹಲವು ಬಾರಿ ಅನಿಸಿದೆ.
-ಮನಸ್ವಿನಿ,ಉಡುಪಿ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.