ಉಳಿತಾಯವೆಂಬ ದಿನ ನಿತ್ಯದ ಜಪ
Team Udayavani, Oct 8, 2018, 3:15 PM IST
ನಾನು ಓದಲಿಲ್ಲ ಹಾಗಾಗಿ ನನ್ನ ಮಕ್ಕಳಾದರೂ ಓದಬೇಕು. ನಾನೇನೋ ಒಂದು ಚಿಕ್ಕ ಕೆಲಸ ಮಾಡಿಕೊಂಡು ಇದ್ದೇನೆ. ಆದರೆ ನನ್ನ ಮಗ ಹಾಗಿರಬಾರದು ಎಂದು ಯೋಚಿಸುವ ಹಾಗೆ, ಕುಡಿತದ ಚಟ ಇರುವ ತಂದೆಗೆ ತನ್ನ ಮಗ ಕುಡುಕನಾಗಬಾರದು ಎಂಬ ಮಹತ್ವದ ಬಯಕೆ ಇರುತ್ತದೆ. ತಮ್ಮ ಜೀವನವನ್ನು ಕೇವಲ ಖರ್ಚು ಮಾಡುವುದಲ್ಲೇ ಕಳೆಯುವವರು, ಮಕ್ಕಳಿಗೆ ನಮ್ಮ ಹಾಗೆ ಖರ್ಚು ಮಾಡಬೇಡಿ ಎಂದು ಹೇಳಬೇಕಾಗಿದೆ. ನಾವಂತೂ ಉಳಿಸಲಿಲ್ಲ, ನೀವಾದರೂ ಉಳಿಸಿ ಎಂದು ಹೇಳುತ್ತಾರೆ. ನಾವಂತೂ ಭವಿಷ್ಯವನ್ನು ಸರಿಯಾಗಿ ಪ್ಲ್ಯಾನ್ ಮಾಡಲಿಲ್ಲ. ಆದರೆ ನೀವು ಹಾಗೆ ಮಾಡಬೇಡಿ ಎಂದು ಬುದ್ಧಿ ಹೇಳುತ್ತಾರೆ.
ಈಗ ಕಾಲ ಹೇಗೆ ಬದಲಾಗಿದೆ ಎಂದರೆ ಹಳೆಯ ಕಾಲದ ಎಷ್ಟೋ ಆರ್ಥಿಕ ವಿಷಯಗಳು ಬದಲಾವಣೆಯ ಹೊಡೆತದಿಂದ ಈಗ ಸಮರ್ಪಕವಾಗಿ ಆಗದೇ ಇರಬಹುದು. ಬಾಡಿಗೆಗೆ ಮನೆ ಕಟ್ಟಿಸಿ ಕೊಟ್ಟರಾಯಿತು ಬಿಡಿ ಎನ್ನುವ ಮಾತು ಈಗ ಸೂಕ್ತವಾದದ್ದಲ್ಲ. ಇಳಿ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳುತ್ತಾರೆ ಬಿಡು ಎನ್ನುವ ನಿಶ್ಚಿಂತೆ ಈಗ ಹೆಚ್ಚಿನವರಿಗೆ ಇಲ್ಲ. ಮಕ್ಕಳ ಖರ್ಚುಗಳನ್ನು ಅವರು ನಿಭಾಯಿಸಿಕೊಳ್ಳುವುದೇ ಕಷ್ಟವಾಗಿರುವಾಗ ಅವರು ಇಳಿವಯಸ್ಸಿನ ತಂದೆ ತಾಯಿಯರನ್ನು ಆರೈಕೆ ಮಾಡುವ, ನೋಡಿಕೊಳ್ಳುವ ಜವಾಬ್ದಾರಿ ಹೊರುವುದು ವಿರಳ.
ಬ್ಯಾಂಕಿನಿಂದ ಬದುಕುವ ಬಡ್ಡಿ ಹಣದಲ್ಲಿ ಬದುಕಬಹುದಾ? ಎಂದರೆ, ಅದು ಹೇಗೆ ಸಾಕಾಗತ್ತೆ? ಮತ್ತೆ ಮರು ಪ್ರಶ್ನೆ ಏಳುತ್ತದೆ. ಅಂದರೆ ಆಯಾ ಕಾಲದ ಅಗತ್ಯಕ್ಕೆ ಅನುಗುಣವಾಗಿ ಹಣಕಾಸು ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ಉಳಿತಾಯ ಮಾತ್ರ ಎಲ್ಲ ಕಾಲಕ್ಕೂ ಅನ್ವಯಿಸುವ ಪರಮ ಸತ್ಯ.
ಮೇಲ್ನೋಟಕ್ಕೆ ಉಳಿತಾಯ ಎಂದರೆ ದುಡ್ಡು ಉಳಿಸುವುದು ಎನ್ನಿಸುತ್ತದೆ. ನಿಜ ಏನೆಂದರೆ, ಉಳಿತಾಯ ಎನ್ನುವುದು ಒಂದು ಮನೋಭಾವನೆ. ಅಗತ್ಯ, ಅನಗತ್ಯ ಖರ್ಚುಗಳ ಬಗೆಗೆ ಇರುವ ಸ್ಪಷ್ಟ ಅರಿವು. ಈ ಅರಿವು ಮೂಡಲು ಮನಸ್ಸು ಹದಗೊಳ್ಳಬೇಕು. ಹದಗೊಳ್ಳುವುದು ಹೇಗೆ? ವಿವೇಕದಿಂದಲೇ ಹೊರತು ಬೇರೆ ದಾರಿ ಇಲ್ಲ.
ಹಣಕಾಸಿನ ನಿರ್ವಹಣೆಯ ವಿಷಯದಲ್ಲಿಯೂ ಮನೆಯೇ ಮೊದಲ ಪಾಠ ಶಾಲೆ. ಎಷ್ಟು ಚಿಕ್ಕ ಸಂಬಳ, ಒಬ್ಬರ ದುಡಿಮೆ, ಸಣ್ಣ ವ್ಯವಹಾರ ಇದ್ದಾಗಲೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಎಷ್ಟೋ ಉದಾಹರಣೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ