ಸೋಲು, ಗೆಲುವಿನಲ್ಲಿದೆ ನಾಳೆಯ… ಭರವಸೆ
Team Udayavani, Jun 24, 2019, 5:39 AM IST
ಮನುಷ್ಯನ ಉಗಮವಾದಾಗಿನಿಂದಲೂ ಆತ ಪ್ರತಿ ಹಂತದಲ್ಲೂ ಸೋಲು- ಗೆಲುವೆಂಬ ಎರಡು ಮುಖಗಳ ಮಧ್ಯೆ ಜೀವಿಸುತ್ತಾನೆ. ಈ ಎರಡು ಪದಗಳು ಯುಗಾಂತರಗಳಿಂದ ಬಂದಿವೆ. ತ್ರೇತಾಯುಗದಲ್ಲಿ ರಾಮರಾವಣರ ನಡುವೆ, ದ್ವಾಪರ ಯುಗದಲ್ಲಿ ಪಾಂಡವ- ಕೌರವರ ನಡುವೆ, ಕಲಿಯುಗದಲ್ಲಿ ಸಾವಿರಾರು ಮಂದಿಯ ಈ ಆಟ- ಪರಿಪಾಟ ನಡೆದಿದೆ, ನಡೆಯುತ್ತಿದೆ.
ಹಾಗಾದರೆ ಗೆದ್ದವರ ಪ್ರಾಣ ಉಳಿಯಿತೇ, ಸೋತವರ ಪ್ರಾಣ ಚಿಗುರಿತೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಶ್ರೀರಾಮನು ತನ್ನ ಪತ್ನಿ ಸೀತಾಮಾತೆಯ ಮೇಲೆ ಅನುಮಾನಪಟ್ಟು ಅವರನ್ನು ಅಗ್ನಿಗೆ ಆಹುತಿಯಾಗುವಂತೆ ಮಾಡಿದನು. ಆ ಸೀತಾಮಾತೆಗಾಗಿಯೇ ರಾಮಾಯಣ ನಡೆಯಿತು ಎಂಬುದು ನಮಗೆ ಗೊತ್ತಿರುವ ಸಂಗತಿ.
ಹಾಗೆಯೇ ಮಹಾಭಾರತದಲ್ಲಿ ಮೂರನೇ ವ್ಯಕ್ತಿಯ ಮಾತಿಗೆ ತಲೆಬಾಗಿ ತನ್ನ ಅಣ್ಣ ತಮ್ಮಂದಿರಿಂದಲೇ ಪ್ರಾಣ ಕಳೆದುಕೊಂಡ ಕೌರವರು ಗಳಿಸಿದ್ದು ಸಾವೆಂಬ ಸೋಲು. ಆದರೆ ಪಾಂಡವರಿಗೆ ತಮ್ಮ ಸಹೋದರರನ್ನು ಸಾಯಿಸಿದ ಸಂಕಟವು ಅವರನ್ನು ಕಾಡತೊಡಗುತ್ತದೆ.
ಇನ್ನು ಕಲಿಯುಗದಲ್ಲಿ ವಿಶ್ವವನ್ನೇ ತನ್ನದಾಗಿಸಿಕೊಂಡ ಅಲೆಗಾÕಂಡರ್ ಎಲ್ಲವನ್ನು ಗೆದ್ದ ಅನಂತರ ಅವನಿಗೆ ಗೆಲ್ಲಲು ಉಳಿದದ್ದು ಸಾವು ಒಂದೇ. ಅದು ಮಾತ್ರ ಅವನಿಂದ ಆಗಲಿಲ್ಲ. ಇದನ್ನು ಜಗತ್ತಿಗೆ ತಿಳಿಸಲು ತಾನು ಸಾಯುವ ಮುನ್ನ ತನ್ನ ಕೈಯನ್ನು ಮಣ್ಣಿನಿಂದ ಮುಚ್ಚದೆ ಹೊರಗೆ ಉಳಿಸಲು ಹೇಳುತ್ತಾನೆ. ಅದಕ್ಕೆ ಮನುಷ್ಯ ತಾನೆಷ್ಟು ಎತ್ತರಕ್ಕೆ ಬೆಳೆದರೂ ತನ್ನವರಿಗಾಗಿ ಸೋಲಲೇಬೇಕು. ಗಂಡಸು ತಾನೆಷ್ಟು ಎತ್ತರಕ್ಕೆ ಬೆಳೆದರೂ ಹೆಂಡತಿ ಮತ್ತು ಮಕ್ಕಳಿಗೆ ತಲೆಬಾಗಿಸಲೇಬೇಕು. ತಾನೆಷ್ಟು ಆರ್ಥಿಕವಾಗಿ ಬೆಳೆದರೂ ತನ್ನ ಮಗುವಿನ ಮುಂದೆ ಮಗುವಾಗಲೇಬೇಕು.
ಸೋಲು ಮುಂದಿನ ಗೆಲುವಿಗೆ ದಾರಿ
ಯಾವುದೇ ಸ್ಪರ್ಧೆಯಲ್ಲಿ ಸೋತಾಗ ನಾವು ಜಿಗುಪ್ಸೆ ಹೊಂದುತ್ತೇವೆ. ಮಾನಸಿಕವಾಗಿ ಕೊರಗುತ್ತೇವೆ. ಸೋಲು ಎಂಬುದು ಸಾಮರ್ಥ್ಯಗಳ ಕೊರತೆ. ಆ ಸಾಮರ್ಥ್ಯ ಗಳಿಸಿದಾಗ ನಾವೂ ಗೆಲ್ಲಬಹುದು. ಸೋಲನ್ನು ಬೇರೆಯದೇ ರೀತಿಯಲ್ಲಿ ಅಥೈ ìಸಿಕೊಳ್ಳಬಾರದು. ಆ ಸ್ಪರ್ಧೆಯಲ್ಲಿನ ಸಾಮರ್ಥ್ಯಗಳು ನನಗೆ ಇನ್ನೂ ಕರಗತವಾಗಬೇಕಿದೆ ಎಂದು ತಿಳಿದರಾಯಿತು. ಆಗ ನಮಗೆ ಸೋಲು ಎಂಬ ಭಾವನೆ ಬರುವುದಿಲ್ಲ. ಸೋಲು ಅನುಭವಿಸಿದಷ್ಟು ನಾವು ಮಾಡಿಕೊಳ್ಳಬೇಕಾದ ಸಾಮರ್ಥ್ಯಗಳ ಅರಿವಾಗುತ್ತದೆ. ಆಗ ನಮಗರಿವಿಲ್ಲದ ಹಾಗೆ ನಾವು ಗೆಲ್ಲುತ್ತಾ ಹೋಗುತ್ತೇವೆ. ಸೋಲನ್ನು ಕೊನೆ ಎಂದು ಪರಿಗಣಿಸದೆ ಕಲಿಕೆಯ ಮೆಟ್ಟಿಲು ಎಂದು ಪರಿಗಣಿಸಬೇಕು. ಆಗ ಸೋಲನ್ನು ಮೆಟ್ಟಿ ನಿಲ್ಲಲು ಸಾಧ್ಯ.
ಕಲ್ಪನೆ ಮತ್ತು ವಾಸ್ತವ
ಒಂದೊಂದು ವಯಸ್ಸಿನಲ್ಲಿ ನಮ್ಮ ಕಲ್ಪನೆಗಳು ಬೇರೆಯದೇ ರೀತಿಯಾಗಿರುತ್ತದೆ. ಅದು ಸಮಯಕ್ಕೆ ತಕ್ಕಂತೆ ತನ್ನತನ ಬದಲಾಯಿಸಿರುತ್ತದೆ. ಮೂರ್ನಾಲ್ಕು ವರ್ಷದ ಮಗುವಿಗೆ ತನ್ನದೇ ಆದ ಹೊಸ ಕಲ್ಪನೆಗಳಿರುತ್ತವೆ. ಪಕ್ಕದ ಮನೆಯ ಮಗು ಓಡಿಸುವ ಸೈಕಲ್ ತನ್ನದೆಂಬಂತೆ ತಾನು ಅದರ ಮೇಲೆ ಸವಾರಿ ಮಾಡುವಂತೆ ಕನಸು ಕಟ್ಟುತ್ತದೆ. ಅದಕ್ಕೆ ಅಮ್ಮನೊಂದಿಗೆ ಸೈಕಲನ್ನು ತನಗೂ ಕೊಡಿಸುವಂತೆ ಹಠ ಹಿಡಿಯುತ್ತದೆ.
ಹಲವರು ಈಗಾಗಲೇ ಮಗುಚಿಬಿದ್ದಿರುವ ತಮ್ಮ ಯಶಸ್ಸಿನ ಕಟ್ಟಡದ ಬಗ್ಗೆ ಕನಸು ಕಾಣುತ್ತಾರೆ. ಅದು ಈಗಾಗಲೇ ಮಗುಚಿಬಿದ್ದಾಗಿದೆ ಎಂಬ ಕಟು ವಾಸ್ತವ ಅವರಿಗಿರುವುದಿಲ್ಲ. ನಮಗೆ ಕೆಲವೊಂದು ಸೋಲನ್ನೂ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಅದೇ ವಿಷಯದ ಸುತ್ತಲೇ ನಮ್ಮ ಕಲ್ಪನೆಯ ಹುತ್ತ ಬೆಳೆಯತೊಡಗುತ್ತದೆ.
– ಜಯಾನಂದ ಅಮೀನ್ ಬನ್ನಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ
ಯರಡಾಲ ಗ್ರಾಮ; ಇಲ್ಲಿ ಮೂಲ ಸೌಕರ್ಯಗಳದ್ದೇ ಕೊರತೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ