ಹೊಸ ತಲೆಮಾರಿನಲ್ಲಿ ಹಳೆ ಪೀಠೊಪಕರಣಕ್ಕೆ ಬೇಡಿಕೆ


Team Udayavani, Oct 4, 2019, 5:11 AM IST

c-42

ಮನೆ ಎಂದಮೇಲೆ ಸುಂದರವಾದ ಪೀಠೊಪಕರಣಗಳು ಇರುವುದು ಸಾಮಾನ್ಯ. ಕಾಲ ಬದಲಾದಂತೆ ವಿಭಿನ್ನ ಮಾದರಿಯ ಪೀಠೊಪಕರಣಗಳು ಮಾರುಕಟ್ಟೆಗೆ ಬರುತ್ತವೆ. ಇದೀಗ ಟು ಇನ್‌ ವನ್‌ ಪೀಠೊಪಕರಣಗಳ ಹಾವಳಿ. ಕುಳಿತುಕೊಳ್ಳುವ ಸೋಫಾ ರಾತ್ರಿ ವೇಳೆ ಮಲಗುವ ಬೆಡ್‌ ಆಗಬಹುದು. ಮನೆಗಳಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲದವರು ಈ ಟು ಇನ್‌ ವನ್‌ ಪೀಠೊಪಕರಣಗಳಿಗೆ ಮೊರೆ ಹೋಗುತ್ತಾರೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಸದ್ಯ ಹಳೆಯ ಮಾದರಿ ಪೀಠೊಪಕರಣಗಳಿಗೆ ಬೇಡಿಕೆ ಹೆಚ್ಚು.

ಅಂದದ ಮನೆಯ ಶೃಂಗಾರಕ್ಕೆ ಮನೆಯೊಳಗಿನ ವಿನ್ಯಾಸವೂ ಕಾರಣ. ಅದರಲ್ಲೂ ಮನೆಯೊಳಗೆ ಯಾವ ಬಗೆಯ ಪೀಠೊಪಕರಣಗಳನ್ನು ಜೋಡಿಸಿಡಲಾಗುತ್ತದೆ ಎಂಬ ಅಂಶವೂ ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ನಾನಾ ವಿನ್ಯಾಸದ ಪೀಠೊಪಕರಣಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಬೇಡಿಕೆಯೂ ಹೆಚ್ಚಿದೆ.

ಅನೇಕ ವರ್ಷಗಳ ಹಿಂದೆ ಹಳೆಯ ಕಾಲದ ಮನೆಗಳಲ್ಲಿ ಬಿದಿರಿನಿಂದ ಮಾಡಿದ ಕುರ್ಚಿಗಳು ಸಾಮಾನ್ಯವಾಗಿದ್ದವು. ಬಳಿಕ ಪ್ಲಾಸ್ಟಿಕ್‌ ಕುರ್ಚಿಗಳು ಬಂದ ಮೇಲೆ ಇವುಗಳು ಮೂಲೆ ಸರಿದವು. ಆದರೆ, ಇತ್ತೀಚಿನ ದಿನಗಳಲ್ಲಿ ಮತ್ತೆ ಹಳೆಯ ಸಂಪ್ರದಾಯ ಮರುಕಳಿಸುತ್ತಿದೆ. ಕೆಲವೊಂದು ಮನೆಗಳಲ್ಲಿ ಬಿದಿರಿನ ಕುರ್ಚಿಗಳು ಕಾಣುತ್ತದೆ.

ಬಿದಿರಿನ ಪೀಠೊಪಕರಣದಿಂದ ಹೆಚ್ಚಾಗಿ ಕಿಟಕಿ ಪರದೆಗಳನ್ನು ರೂಪಿಸಲಾಗುತ್ತಿದೆ. ಮನೆಗಳಲ್ಲಿ ಅಲ್ಲದೆ, ಕಚೇರಿಯ ಒಳಾಂಗಣದಲ್ಲಿ ಬಿದಿರಿನ ಕುರ್ಚಿಗಳನ್ನು ಬಳಕೆ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಕುರ್ಚಿಗಳು, ಸೋಫಾಗಳು ಮಳೆಗಾದಲ್ಲಿ ನೆಂದು ಬಿಟ್ಟರೆ ಹಾಳಾಗುತ್ತವೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬಿದಿರಿನ ಪೀಠೊಪಕರಣಗಳ ಖರೀದಿ ಹೆಚ್ಚಾಗುತ್ತಿದೆ. ಇವುಗಳು ಮಳೆಗೆ ನೆಂದರೂ ಯಾವುದೇ ಸಂರಕ್ಷಣೆಯ ಆವಶ್ಯಕತೆ ಇರುವುದಿಲ್ಲ. ಇದಲ್ಲದೆ ಬಿದಿರಿನಿಂದ ಮಾಡಿದ ಶೆಲ್ಫ್ಗಳು, ಡೈನಿಂಗ್‌ ಸೆಟ್‌ಗಳು, ಮಕ್ಕಳ ಪೀಠೊಪಕರಣಗಳು, ಆರಾಮದಾಯಕ ಕುರ್ಚಿಗಳು, ಡ್ರೆಸ್ಸಿಂಗ್‌ ಟೇಬಲ್‌ಗ‌ಳಿಗೆ ಬೇಡಿಕೆ ಹೆಚ್ಚಾಗಿದೆ.

ಒಂದು ಪೀಠೊಪಕರಣ ಖರೀದಿಸಿದರೆ ಅದರಲ್ಲಿ ಎರಡು ಉಪಯೋಗ ಪಡೆಯಲು ಸಾಧ್ಯ. ಇತ್ತೀಚಿನ ದಿನಗಳ ಲೇಟೆಸ್ಟ್‌ ಟ್ರೆಂಡ್‌ ಎಂಬಂತೆ ವಿಶೇಷ ರೀತಿಯ ಸೋಫಾ ಸೆಟ್‌ ಮಾರುಕಟ್ಟೆಗೆ ಬಂದಿದ್ದು, ಹೆಚ್ಚಾಗಿ ಬಿಕರಿಯಾಗುತ್ತಿದ್ದು, ಇದನ್ನು ಮಲಗಲು ಹಾಸಿಗೆಯಾಗಿಯೂ ಉಪಯೋಗಿಸಿಕೊಳ್ಳಬಹುದು. ನಗರ ಪ್ರದೇಶಗಳಲ್ಲಿ ಮನೆ ಇದ್ದರೆ ಮನೆಯೊಳಗೆ ಹೆಚ್ಚಾದ ಸ್ಥಳಾವಕಾಶ ಇರುವುದಿಲ್ಲ. ಈ ವೇಳೆ ಟು ಇನ್‌ ಒನ್‌ ಸೋಫಾ ಮತ್ತು ಬೆಡ್‌ ಅನ್ನು ಕಡಿಮೆ ಸ್ಥಳಾವಕಾಶದಲ್ಲಿ ಹೊಂದಿಸಲು ಸಾಧ್ಯವಿದೆ. ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 25 ರಿಂದ 35 ಸಾವಿರ ರೂ.ವರೆಗೆ ಬೆಲೆ ಇದೆ.

ಡೈನಿಂಗ್‌ ಟೇಬಲ್‌ಗ‌ಳಲ್ಲಿಯೂ ಹೊಸ ಟ್ರೆಂಡ್‌ ಶುರುವಾಗಿದ್ದು, ಸ್ಟೋರೇಜ್‌ ಸಾಮರ್ಥ್ಯ ಇರುವ ಡೈನಿಂಗ್‌ ಟೇಬಲ್‌ ಹೊಸ ಟ್ರೆಂಡ್‌ ಆಗಿದೆ. ಈ ಡೈನಿಂಗ್‌ ಟೇಬಲ್‌ನ ಎರಡೂ ಬದಿಗಳಲ್ಲಿ ಡ್ರಾಯರ್‌ಗಳನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ 15 ರಿಂದ 25 ಸಾವಿರ ರೂ.ವರೆಗೆ ಮಾರುಕಟ್ಟೆಯಲ್ಲಿ ಬೆಲೆ ಇದೆ.

ಪೀಠೊಪಕರಣ ಕ್ಷೇತ್ರದಲ್ಲಿ ಟ್ರೆಂಡ್‌ಬದಲಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮೆತ್ತನೆಯ ಪೀಠೊಪಕರಣಕ್ಕೆ ಬೇಡಿಕೆ ಬಂದಿದೆ. ಇವುಗಳ ನಿರ್ವಹಣೆ ಸುಲಭ. ಶೈಲಿ, ಅಲಂಕಾರ ವಿಶೇಷವಾಗಿದೆ. ಮರದ ಪೀಠೊಪಕರಣಗಳಿಗೆ ಮೆತ್ತನೆಯ ಬಟ್ಟೆ ಬಳಸಿ ಉಬ್ಟಾಗಿ ವಿನ್ಯಾಸ ಮಾಡಲಾಗುತ್ತಿದೆ. ಪ್ರಿಂಟೆಡ್‌ ಬಟ್ಟೆಗಳ ಫರ್ನಿಚರ್‌ಗಳತ್ತ ಅಭಿರುಚಿ ಹೆಚ್ಚಾಗುತ್ತಿದೆ.

ಆಫರ್‌ಗಳ ಸುರಿಮಳೆ
ಹೆಚ್ಚಿನ ಫರ್ನಿಚರ್‌ ಅಂಗಡಿ ಗಳಲ್ಲಿ ದಸರಾ-ನವರಾತ್ರಿ ಮತ್ತು ದೀಪಾವಳಿ ಹಬ್ಬದ ಆಫರ್‌ಗಳು ಈಗಾಗಲೇ ಆರಂಭಗೊಂಡಿವೆ. ವಿವಿಧ ವಿನ್ಯಾಸದ ಫರ್ನಿಚರ್‌ಗಳಿಗೆ ಮೂಲ ದರದಲ್ಲಿ ವಿಶೇಷ ರಿಯಾಯಿತಿ, ಖರೀದಿಗೆ ವಿಶೇಷ ಕೊಡುಗೆಗಳನ್ನು ನೀಡುತಿವೆೆ. ಇನ್ನು ಆನ್‌ಲೈನ್‌ ಶಾಪಿಂಗ್‌ನಲ್ಲೂ ಭರ್ಜರಿ ಆಫರ್‌ಗಳಿವೆ. ಇನ್ನು, ಒಂದು ಪೀಠೊಪಕರಣ ಖರೀದಿಗೆ ಮತ್ತೂಂದು ಉಚಿತ, ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಕೂಡ ಇದೆ.

ಹೆಚ್ಚಿದ ಬೇಡಿಕೆ
ಇತ್ತೀಚಿನ ದಿನಗಳಲ್ಲಿ ಮರದ ಪೀಠೊಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಶೇ.25ರಷ್ಟು ಬೇಡಿಕೆ ಬಂದಿದೆ. ಅತ್ಯಾಧುನಿಕ ಪೀಠೊಪಕರಣಗಳು ಹಾಳಾದರೆ ಅವುಗಳನ್ನು ಸರಿಪಡಿಸುವುದು ತುಸು ಕಷ್ಟ. ಇದೇ ಕಾರಣಕ್ಕೆ ಹಳೆಯ ಕಾಲದ ಪೀಠೊಪಕರಣದತ್ತ ಜನ ಆಸಕ್ತಿ ತೋರುತ್ತಿದ್ದಾರೆ.
– ಸುಂದರ್‌ ಕೆ. ಗೌಡ , ವುಡ್‌ಲೈಫ್‌ ಫರ್ನಿಚರ್ ಪಡೀಲ್‌

- ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.