ಆಶಯದ ಬದುಕಲ್ಲಿ ನಿರಾಶೆ ಅನಿರೀಕ್ಷಿತ


Team Udayavani, Feb 10, 2020, 5:55 AM IST

hanidhani2

ಆಶಯಗಳನ್ನು ಬಯಸುವ ಬದುಕಿನಲ್ಲಿ ನಿರಾಶೆಗಳು ಅನಿರೀಕ್ಷಿತ ಅತಿಥಿಗಳಾಗಿ ನೆಮ್ಮದಿಯ ಗೂಡನ್ನು ಕೆಡವಿ ಬಿಡುತ್ತವೆ. ಖುಷಿಯಾಗಿ ಇರುವ ವ್ಯಕ್ತಿ ಖುಷಿಯನ್ನೇ ಶಾಶ್ವತವಾಗಿಸುವ ಕೋರಿಕೆಯನ್ನು ಬೇಡಿಕೊಳ್ಳುವ ಹಾಗಿನ ಬದುಕು ಎಲ್ಲರಿಗೂ ಫ‌ಲಿಸದು.

ನಾವೆಲ್ಲಾ ಹದಿಹರೆಯದ ಹಂತದಲ್ಲಿ ಬೆಳದು ನಿಂತಾಗ ಬದುಕಿನ ಭವಿಷ್ಯಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟು, ತಾನೇನು ಆಗಬೇಕು, ತಾನೇನು ಕಲಿಯಬೇಕು, ತಾನು ಹೇಗೆ ಬೆಳೆಯಬೇಕು, ಯಾರ ಮಾತು ಕೇಳಬೇಕು ಹೀಗೆ ಎಲ್ಲವನ್ನು ನಮ್ಮ ಸ್ವಂತಿಕೆ ಯೋಚನೆಯಿಂದ ನಿರ್ಧರಿಸುವ ಮಟ್ಟಿಗೆ ಬೆಳೆದು ಬಿಡುತ್ತೇವೆ. ಆದರೆ ಈ ಹಂತದಲ್ಲಿ ನಮ್ಮ ಅಪ್ಪ ಅಮ್ಮನ ಆಸರೆಯಂತೆ, ಅವರ ಇಚ್ಛೆಯಂತೆ, ಅವರ ಕನಸಿನ ದಾರಿಯಲ್ಲಿ ನಡೆಯಲು ಹಿಂಜರಿಯುತ್ತೇವೆ. ನಾನು ಮಾಡಿದ್ದೇ ಸರಿ, ನನ್ನ ತೀರ್ಮಾನವೇ ಸೂಕ್ತ ಎಂಬ ವಾದವೇ ನಮ್ಮನ್ನು ಕೆಲವೊಮ್ಮೆ ದಾರಿ ತಪ್ಪಿಸಿಬೀಡುತ್ತದೆ.

ಹದಿಹರೆಯದ ವಯಸ್ಸೇ ಹಾಗೆ. ದೂರದಿಂದ ಕಂಡದ್ದು ಅದ್ಭುತ. ಹತ್ತಿರ ಹೋದಷ್ಟು ಆಕರ್ಷಣೆಯಾಗಿ ಹೊಳೆಯುತ್ತದೆ. ಅದೇ ಆಕರ್ಷಣೆ ಹೊಳಪು ಬದುಕಿನೂದ್ದಕ್ಕೂ ಹಾಗೆಯೇ ಇರಬೇಕೆನ್ನುವ ಮನಸ್ಸು. ಮೂಗಿನ ತುದಿ ಕೆಂಡದಂತೆ ಕೆಂಪು, ಕೋಪ ನೆತ್ತಿಯ ಮೇಲೆ, ಈ ಹಂತದಲ್ಲಿ ಒಳಿಗೆ ಹೇಳುವ ಬುದ್ಧಿ ಮಾತು, ಅನುಭವದ ಆಧಾರದಲ್ಲಿ ಹೇಳುವ ಪಿಸು ಮಾತು ಯಾವುದು ಹದಿಹರೆಯದಲ್ಲಿ ಹಬೆಯಾಡುವ ಭಾವನೆಗಳಿಗೆ ಕೇಳದು.

ಹದಿಹರೆಯ ಎಂಬುದು ಉತ್ಸಾಹಗಳು ನಿರಂತರವಾಗಿ ಹರಿಯುವ ಘಟ್ಟ. ಈ ಘಟ್ಟದಲ್ಲಿ ಕೆಲವರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ನೂರಾರು ದಾರಿ, ಅಡ್ಡ ದಾರಿಗಳನ್ನು ಹಿಡಿದು ಬದುಕನ್ನು ಕೂಪಕ್ಕೆ ದೂಡಿಕೊಳ್ಳುವ ದುಡುಕುತನ ಹೀಗೆ ಏನಾದರೂ ಮಾಡಿ ಸಾಧಿಸಲು ಹಾಗೂ ಏನೂ ಇಲ್ಲದೇ ಸುಮ್ಮನೆ ಕೂತು ರೋಧಿಸಲು ಇರುವ ಏಕೈಕ ಹಂತವೇ ಈ ಹದಿಹರೆಯ ಎಂಬ ಮಾಯೆ.

ನಾಯಕ ಆಗುವುದು
ಒಬ್ಬ ವ್ಯಕ್ತಿ ಸೂಫಿ ಗುರುಗಳ ಬಳಿಗೆ ತೆರಳಿದ್ದ. ಅಲ್ಲಿ ಹಲವಾರು ಪ್ರತಿಮೆಗಳಿದ್ದವು. ಅವುಗಳಲ್ಲಿ ಕೆಲವು ಪ್ರತಿಮೆಗಳ ಕಿವಿಗಳು ಜೋಡಣೆಯಾಗಿದ್ದರೆ ಕೆಲವು ದೇಹಗಳು ಅಂಟಿಕೊಂಡಿದ್ದವು. ಆದರೆ ಅಲ್ಲಿ ಏಕ ಪ್ರತಿಮೆಗಳು ಇರಲೇ ಇಲ್ಲ. ಹೋದ ವ್ಯಕ್ತಿಗೆ ಅನುಮಾನ ಶುರುವಾಯಿತು. ಅವನು ಗುರುಗಳ ಬಳಿ ತೆರಳಿ ಈ ಪ್ರತಿಮೆಗಳೆಲ್ಲ ಏಕೆ ಒಂದಕ್ಕೊಂದು ಅಂಟಿಕೊಂಡಿವೆ. ಇಲ್ಲಿ ಏಕ ಪ್ರತಿಮೆಗಳು ಯಾಕೆ ಇಲ್ಲ ಎಂದು ಪ್ರಶ್ನಿಸಿದ ಅದಕ್ಕೆ ಗುರುಗಳು ಇವುಗಳೆಲ್ಲ. ಸಾಮಾನ್ಯ ಮನುಷ್ಯರ ಸ್ವಭಾವ ರೂಪಕಗಳು. ಮನುಷ್ಯರು ಸಾಧಾರಣವಾಗಿ ಗುಂಪಿನಲ್ಲೇ ವಾಸಿಸಲು ಇಷ್ಟಪಡುತ್ತಾರೆ. ಪರಸ್ಪರ ದೂರುಗಳು ಹೇಳಿಕೊಂಡು ಬದುಕುತ್ತಿದ್ದಾರೆ ಎಂಬುದನ್ನು ಈ ಪ್ರತಿಮೆಗಳು ಹೇಳುತ್ತವೆ. ನಾಯಕರಾದಾಗ ಮಾತ್ರ ಮನುಷ್ಯರು ಒಬ್ಬಂಟಿಗರಾಗಿರುತ್ತಾರೆ. ಅವರಲ್ಲಿ ಒಬ್ಬನೇ ಜಗವನ್ನು ಎದುರಿಸುವ ಧೈರ್ಯ ಬರುತ್ತದೆ ಎಂದು ಹೇಳಿದರು. ಇಲ್ಲಿ ಬಂದವರೆಲ್ಲ ಆ ಪಾಠವನ್ನು ಕೇಳಿ ನಾಯಕರಾಗಿ ಮುನುಗ್ಗುವ ಸತತ ಪ್ರಯತ್ನಿಸಬೇಕೆನ್ನುವುದೇ ನನ್ನ ಪ್ರಾರ್ಥನೆ ಎಂದರು.

- ಸುಹಾನ್‌ ಶೇಕ್‌

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.