ಸಂತೋಷ ಮನಸಲ್ಲಿದೆ


Team Udayavani, Apr 22, 2019, 6:24 AM IST

image_3317

ಮುಂಜಾನೆಯ ಮುಗುಳು ನಗುವಿ ನಲ್ಲಿಯೂ ಒಂದು ಸ್ವಾದವಿದೆ, ಮುಸ್ಸಂಜೆಯ ಮಬ್ಬಿನಲ್ಲಿಯೂ ಒಂದು ಆಹ್ಲಾದವಿದೆ. ಸೂರ್ಯ ಹುಟ್ಟುವಾಗಲೂ ಕಂಪಿದೆ, ಮುಳುಗುವಾಗ ಬಾನಲ್ಲೆಲ್ಲ ಹೊನ್ನಿನ ರಂಗಿದೆ. ಆದರೆ, ಇದನ್ನು ಗಮನಿಸಿ ಸಂತೋಷ ಪಡಬೇಕಾದ ಮನಸ್ಸುಗಳು ಮಾತ್ರ ಮರೆ ಯಾಗುತ್ತಿವೆ. ಜಂಜಾಟದ ಬದುಕೆಂಬ ಚಕ್ರ ವ್ಯೂಹದೊಳಗೆ ಹೊಕ್ಕು, ಹೊರ ಬರಲಾರದೆ ಚಡ ಪಡಿಸುತ್ತಿವೆ. ಯಾಕೆ ಹೀಗೆ? ನಮ್ಮ ಪೂರ್ವಜರಿಗೆ ಸಿಗುತ್ತಿದ್ದ ಈ ನೈಸರ್ಗಿಕ ಆನಂದದಿಂದ ನಾವು ವಂಚಿತರಾಗುತ್ತಿರುವುದು ಯಾವುದರಿಂದಾಗಿ? ಅದಕ್ಕುತ್ತರ ನಮ್ಮ ಚಿಂತನೆ ಮತ್ತು ಯೋಚನಾ ಕ್ರಮ.

ಒಂದು ಪುಟಾಣಿ ಇರುವೆ, ಮಣಭಾರವೆನಿಸುವ ಅನ್ನದ ಅಗುಳನ್ನು ಹೊತ್ತು ಸಾಗುತ್ತದೆ, ತನ್ನ ಒಡನಾಡಿಗಳನ್ನೆಲ್ಲ ಒಟ್ಟು ಸೇರಿಸಿ ಆಹಾರ ಸಂಗ್ರಹಿಸಲು ಮುಂದಾಗುತ್ತದೆ. ಕೊನೆಗೆ ಉಣ್ಣುವ ಸಂದರ್ಭದಲ್ಲಿಯೂ ಹಂಚಿಕೊಂಡು ತಿನ್ನುವ ಮನಸ್ಸು ಅವುಗಳಲ್ಲಿದೆ. ಎಲ್ಲರನ್ನೊಳಗೊಂಡು ಬದುಕುವುದರ ಹಿಂದಿನ ಮಹತ್ವ ಪುಟಾಣಿ ಜೀವರಾಶಿಗಳೇ ಸಾರುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನಿಗೆ ಸದಾ ಕಾಲ ಕೂಡಿಡುವುದು ಮತ್ತು ತನ್ನನ್ನು ತಾನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎನ್ನುವುದರತ್ತಲೇ ಚಿತ್ತ. ಇನ್ನೊಬ್ಬನ ಬೆಳವಣಿಗೆಯನ್ನು ಸಹಿಸಲಾರದ ಸದಾ ಹೊಟ್ಟೆಕಿಚ್ಚಿನ ಜೀವನ. ಅವನಿಂದಲೂ ಮೇಲಕ್ಕೆ ತಾನು ಹೇಗೆ ಏರುವುದು ಎನ್ನುವುದರ ಚಿಂತೆ. ಹೀಗಿರುವಾಗ ಸಿಕ್ಕ‌ ಸಮಯವನ್ನು ಸಂತೋಷದಿಂದ ಕಳೆಯುವುದನ್ನು ಮರೆಯುತ್ತಾನೆ. ಕೂಡಿಡುವುದರಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾನೆ.

ಈ ಮಧ್ಯೆ ಸೂರ್ಯೋದಯ ನೋಡುವ, ಸಂಜೆಯ ಸವಿಯನ್ನು ಸವಿಯುವುದಕ್ಕೆ ಸಮಯವಾದರೂ ಎಲ್ಲಿಂದ. ಹಿಂದೆ ರಾತ್ರಿ 9 ಗಂಟೆಗೆ ನಿದ್ದೆಗೆ ಶರಣಾಗುವ, ಬೆಳಗ್ಗೆ 5 ರಿಂದ 6 ಗಂಟೆಯ ಹೊತ್ತಿಗಗಲೇ ಎದ್ದು ಪ್ರಕೃತಿಯ ಜತೆ ಸೇರಿ ಕೆಲಸ ಮಾಡುವ ವಾತಾವರಣ ಈಗಿಲ್ಲ. ಪ್ರಸ್ತುತ ಜನತೆ ನಿದ್ರಾದೇವಿಯ ಮುಖ ನೋಡುವುದೇ ಮಧ್ಯರಾತ್ರಿ. ಇನ್ನು ಮುಂಜಾನೆಯ ಮುಖ ನೋಡುವುದು ಬಿಡಿ, ಕೆಲವರಿಗಂತೂ ಸೂರ್ಯ ನೆತ್ತಿಯ ಮೇಲೆ ಬಂದರೂ ಬೆಳಗಾಗುವುದಿಲ್ಲ. ಹೀಗಿರುವಾಗ ನೆಮ್ಮದಿಯ ಮಾತೆಲ್ಲಿ. ಹಣ ಸಂಪಾದಿಸುವ, ಸಂಪತ್ತು ಕ್ರೋಡೀಕರಣದ ಧಾವಂತವೂ ನಮ್ಮನ್ನು ಸಂತೋಷದಿಂದ ವಿಮುಖರಾಗುವಂತೆ ಮಾಡುತ್ತಿದೆ ಎಂದರೂ ಸುಳ್ಳಲ್ಲ.

ಕೂಡಿಡುವುದೇ ಬದುಕು ಎಂದು ತಿಳಿದುಕೊಂಡರೆ ನಾವು ಕೂಡಿಟ್ಟದ್ದನ್ನು ಉಣ್ಣುವ ಫ‌ಲವೂ ನಮ್ಮದಾಗದೆ ಹೋಗಬಹುದು. ಹಾಗಾಗಿ ಇಂದಿನ ಸುಖಗಳನ್ನು ಬದಿಗೆ ತಳ್ಳಿ, ಕಾಣದ ನಾಳೆಗಳಿಗಾಗಿ ಕಾಯುವುದಿದೆಯಲ್ಲ ಅದಕ್ಕಿಂತ ಮೂರ್ಖತನ ಮತ್ತೂಂದಿಲ್ಲ, ನಾಳೆಯ ಚಿಂತೆಯನ್ನು ನಾಳೆಗೆ ಬಿಟ್ಟು ಇದ್ದುದನ್ನು ಅನುಭವಿಸಿಕೊಂಡು ಇಂದಿನ ಖುಷಿಯ ಆಸ್ವಾದನೆಯೇ ಬದುಕಿನ ಪರಮೋಚ್ಚ ಗುಟ್ಟು.ಇದನ್ನು ಅರಿತವ‌ ಬಂಗಾರದ ಬದುಕು ಕಟ್ಟಿಕೊಳ್ಳಬಲ್ಲ.

– ಭುವನ ಬಾಬು,ಪುತ್ತೂರು

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.