ತೋಟಕ್ಕೆ ಬೀಳದಿರಲಿ ಇಳಿಸಂಜೆಯ ಬಿಸಿಲು


Team Udayavani, Nov 24, 2019, 4:30 AM IST

mm-16

ಜಗತ್ತಿನ ಶಕ್ತಿಯೇ ಸೂರ್ಯಕಿರಣ. ಇದರ ಕಾಸ್ಮಿಕ್‌ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಕೃಷಿಯಲ್ಲಿ ಇದರ ಸದುಪಯೋಗ ಬಹುಮಹಡಿ ಪದ್ಧತಿಯಿಂದ ದೊರೆಯುತ್ತದೆ. ಎಲ್ಲ ಗಿಡಮರಗಳಿಗೂ ಒಂದೇ ಪ್ರಮಾಣದ ಸೂರ್ಯಶಕ್ತಿ ಅಗತ್ಯ ಇರುವುದಿಲ್ಲ. ಕೆಲವಕ್ಕೆ ಹೆಚ್ಚು; ಕೆಲವಕ್ಕೆ ಕಡಿಮೆ ಬೇಕಾಗುತ್ತದೆ.

ಅನಾದಿ ಕಾಲದಿಂದಲೂ ಭಾರತೀಯ ಕೃಷಿಕರು ಇವುಗಳನ್ನೆಲ್ಲ ಅಧ್ಯಯನ ಮಾಡಿ, ಬಹುಮಹಡಿ ಕೃಷಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಮಲೆನಾಡಿನಲ್ಲಿ ಬಹಳ ಉತ್ತಮವಾಗಿ ಬರುವಂಥವು ಅಡಿಕೆ, ಬಾಳೆ, ಕರಿಮೆಣಸು, ಏಲಕ್ಕಿ ಮತ್ತು ಕೆಲವು ಔಷಧ ಸಸ್ಯಗಳಾದ ಪಚೋಲಿ, ಹಿಪ್ಪಲಿ ಇತ್ಯಾದಿ. ಬಯಲು ಸೀಮೆಯಲ್ಲಿ ಧಾನ್ಯಗಳ ಜೊತೆಗೆ ಹರಳು, ತೋಟಗಾರಿಕೆ ಬೆಳೆಗಳ ಜತೆಗೆ ಧಾನ್ಯದ ಬೆಳೆಗಳನ್ನೂ ಬೆಳೆಯಬಹುದು. ಮಿಶ್ರಬೆಳೆ ಎಂದು ನಾವು ಏನು ಕರೆಯುತ್ತೇವೆಯೋ ಅದು ಕೂಡ ಬಹುಮಹಡಿ ಕೃಷಿ ಪದ್ಧತಿಗೆ ಹೊಂದಿಕೊಂಡಿದೆ.

ಅಶೋಕ ವೃಕ್ಷ ಬೆಳೆಸಿ
ಅಲಂಕಾರಕ್ಕೆ ಬೆಳೆಸುವ ಅಶೋಕ ವೃಕ್ಷವನ್ನು ಬೇಲಿಯಲ್ಲಿ ಬೆಳೆಸುತ್ತಾರೆ. ಇದೊಂದು ರೀತಿಯಲ್ಲಿ ಇಳಿಬಿಸಿಲಿನ ದುಷ್ಪರಿಣಾಮದಿಂದ ಇತರ ಸಸ್ಯಗಳು ಬಳಲದಂತೆ ತಡೆಯುವ ದಟ್ಟವಾದ ಪರದೆ. ಈ ವೃಕ್ಷವನ್ನು ಹತ್ತಿರ ಹತ್ತಿರದಲ್ಲಿ ಬೆಳೆಸಬಹುದು. ಅಡಿಕೆ, ಕಾಫಿ, ಬಾಳೆ ಇತ್ಯಾದಿಗಳಿರುವ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೇಲಿಯಾಗಿ ಬೆಳೆಸಲು ಅಶೋಕ ಗಿಡಗಳು ಸೂಕ್ತ. ಅಡಿಕೆ, ಕಾಫಿ ಬೆಳೆಗಳಿಗೆ ಇಳಿಬಿಸಿಲಿನ ಪ್ರಖರತೆಯಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗುತ್ತದೆ. ಇವುಗಳ ಕಾಂಡ ಕತ್ತರಿಸಿ ತೆಗೆದಂತೆ ಸೀಳುತ್ತದೆ.

ಬಿಳಿ ಬಣ್ಣ: ಶಾಖ ಹೀರುವ ಗುಣ
ನೆರಳು ನೀಡುವಂಥ ಮರಗಳನ್ನು ಪಶ್ಚಿಮ ದಿಕ್ಕಿನಲ್ಲಿ ಬೆಳೆಸಿರದಿದ್ದರೆ ಈ ಸಸ್ಯಗಳ ಕಾಂಡಗಳಿಗೆ ದಟ್ಟವಾಗಿ ಬಿಳಿಸುಣ್ಣ ಹಚ್ಚುವುದು ಕೂಡ ಪರಿಹಾರ ಕ್ರಮ. ಬಿಳಿ ಬಣ್ಣಕ್ಕೆ ಶಾಖ ಹೀರಿಕೊಳ್ಳದೆ ಇರುವ ಗುಣ ಇದೆ. ಬೇರೆ ಯಾವ ಬಣ್ಣ ಬಳಿದರೂ ಪ್ರಯೋಜನ ಇಲ್ಲ. ಗೋಣಿ ಮರವನ್ನು ಜಮೀನಿನ ತೋಟದ ಪಶ್ಚಿಮ ದಿಕ್ಕಿನಲ್ಲಿ ಬೆಳೆಸುವುದರಿಂದಲೂ ಇಳಿ ಬಿಸಿಲಿನ ಪ್ರಖರತೆ ತಡೆಯಬಹುದು. ಸಿಲ್ವರ್‌ ಓಕ್‌ ಮರ, ಗಾಳಿಮರ ಕೂಡ ಸೂಕ್ತ. ಗಾಳಿಮರದಿಂದ ಮತ್ತಷ್ಟು ಪ್ರಯೋಜನ ಇದೆ. ಇದರ ಎಲೆಗಳಲ್ಲಿ ಪೊಟ್ಯಾಷ್‌ ಅಂಶ ಇದೆ. ಆದ್ದರಿಂದ ಈ ಮರದಿಂದ ಉದುರಿದ ಎಲೆಗಳನ್ನು ಇತರ ಸಸ್ಯಗಳಿಗೆ ಮುಚ್ಚಿಗೆಯಾಗಿ ನೀಡಿದಾಗ ಅವುಗಳಿಗೆ ಸಹಜವಾಗಿ ಪೊಟ್ಯಾಷ್‌ ದೊರೆತಂತೆ ಆಗುತ್ತದೆ.

ಕಾಸ್ಮಿಕ್‌ ಕಿರಣ
ಪಪ್ಪಾಯಿ, ಸಪೋಟಾ, ಮಾವು, ಸೀಬೆ ಬೆಳೆಗಳ ಮಧ್ಯೆ ಸಹ ಬೇರೆಬೇರೆ ಬೆಳೆಗಳನ್ನು ಬೆಳೆಯಬಹುದು. ಮುಖ್ಯವಾಗಿ ನಾವು ನೋಡಬೇಕಾದ್ದು ಹಲವು ಹಂತಗಳಲ್ಲಿ ಕಾಸ್ಮಿಕ್‌ ಕಿರಣಗಳ ಪ್ರಯೋಜನ ಪಡೆಯುವುದು ಸಾಧ್ಯ ಆಗದೇ ಇದ್ದಾಗ ಈ ಕಿರಣಗಳು ಗರಿಷ್ಠ ಪ್ರಮಾಣದಲ್ಲಿ ಮಣ್ಣಿಗೆ ನೇರವಾಗಿ ತಾಕುತ್ತವೆ. ಇದರಿಂದ ಇವುಗಳ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ. ಇದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಎಷ್ಟೇ ಪ್ರಯತ್ನಿಸಿದರೂ ನೂರಕ್ಕೆ ನೂರರಷ್ಟು ತಡೆಯಲು ಆಗುವುದಿಲ್ಲ. ಮಣ್ಣಿಗೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಈ ಕಿರಣಗಳ ಅಗತ್ಯ ಇರುತ್ತದೆ.

ಬಹುಮಹಡಿ ಪದ್ಧತಿ
ಬಹುಮಹಡಿ ಕೃಷಿ ಪದ್ಧತಿ ಅನುಸರಿಸಿದ ಸಂದರ್ಭದಲ್ಲಿ ಕಾಸ್ಮೆಟಿಕ್‌ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯ ಆಗುತ್ತದೆ. ಏಕಬೆಳೆ ಪದ್ಧತಿ ಅನುಸರಿಸಿದಾಗ ಇದರ ಬಳಕೆ ಸಾಧ್ಯ ಆಗುವುದಿಲ್ಲ. ಪೂರ್ವಾಹ್ನದ ಸೂರ್ಯ ಕಿರಣಗಳಿಂದ ದೊರೆಯುವ ಪ್ರಯೋಜನ ಸಂಜೆ ಅಥವಾ ಇಳಿ ಬಿಸಿಲಿನ ಕಿರಣಗಳಿಂದ ದೊರೆಯುವುದಿಲ್ಲ. ಇವುಗಳ ದುಷ್ಪರಿಣಾಮ ಸಸ್ಯಗಳ ಮೇಲೆ ಆಗುತ್ತದೆ. ಈ ಕಾರಣದಿಂದಲೇ ಭಾರತೀಯ ಕೃಷಿಕರು ಪಶ್ಚಿಮ ದಿಕ್ಕಿನಲ್ಲಿ ಗಿಡಮರಗಳನ್ನು ಬೆಳೆಸುತ್ತಿದ್ದರು. ವಿಶೇಷವಾಗಿ ಕೆಲವಾರು ಗಿಡ-ಮರಗಳಿಗೆ ಇಳಿ ಬಿಸಿಲಿನ ದುಷ್ಪರಿಣಾಮ ತಡೆಗಟ್ಟುವ ಶಕ್ತಿ ಇದೆ.

-  ಕುಮಾರ ರೈತ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.