ಒಳಚರಂಡಿ ಅವ್ಯವಸ್ಥೆ: ಉಪಯೋಗ ಶೂನ್ಯವಾದ ಬಾವಿ ನೀರು !


Team Udayavani, Apr 2, 2019, 2:28 PM IST

3103PBE1-Drainage
ಸುರತ್ಕಲ್‌: ಇಲ್ಲಿನ ಅಗರಮೇಲು, ಹೊಸಬೆಟ್ಟು, ಗುಡ್ಡಕೊಪ್ಲ ಮತ್ತಿತರ ಪ್ರದೇಶಗಳಲ್ಲಿ ನಿರ್ಮಿಸಿರುವ ಕಳಪೆ, ಅವೈಜ್ಞಾನಿಕ ಒಳಚರಂಡಿಯ ಮಲಿನ ನೀರು ಶುದ್ಧ ಬಾವಿಗಳಿಗೆ ಹರಿಯುತ್ತಿದೆ. ಪರಿಣಾಮ ಇಲ್ಲಿಯ ನೀರು ಬಳ ಸಲು ಆಯೋಗ್ಯವಾಗಿದ್ದು, ನೀರಿನ ಮೂಲವೇ ಹಾಳಾಗುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ಅಗರಮೇಲುವಿನಲ್ಲಿ ಡ್ರೈನೇಜ್‌ ಸಂಪರ್ಕ ಪೂರ್ಣವಾಗಿಲ್ಲ. ಹೀಗಾಗಿ ಇಲ್ಲಿನ ಶೌಚ ನೀರು ಸಹಿತ ಎಲ್ಲ ಮಲಿನ ನೀರನ್ನು ತೋಡಿನಲ್ಲೇ ಹರಿಯಬಿಡುತ್ತಿರುವುದರಿಂದ ತಗ್ಗುಪ್ರದೇಶ ಬಂಟರ ಭವನದ ಮೇಲಿನ ಪ್ರದೇಶದ ಸುತ್ತಮುತ್ತ ದುರ್ವಾಸನೆ ಮತ್ತು ಬಾವಿ ನೀರು ಮಲಿನಕ್ಕೆ ಕಾರಣವಾಗಿದೆ. ಕುಡಿಯುವ ನೀರಿನ ಬಾವಿ ಆಶ್ರಯಿಸಿದ್ದ ಸ್ಥಳೀ ಯರು ಇಂದು ಪಾಲಿಕೆಯ ಸಂಪರ್ಕ ಪಡೆದು ಕ್ಲೋರಿನ್‌ಯುಕ್ತ ನೀರನ್ನು ಅನಿವಾರ್ಯವಾಗಿ ಸೇವಿಸುವಂತಾಗಿದೆ. ಹೊಸಬೆಟ್ಟು, ಗುಡ್ಡೆಕೊಪ್ಲ ಪ್ರದೇಶದ ಹಲವಾರು ಬಾವಿಗಳು ಒಳಚರಂಡಿ ಅವ್ಯವಸ್ಥೆಯಿಂದ ಬಾವಿ ನೀರು ಉಪಯೋಗಕ್ಕೆ ಬಾರದಂತಾಗಿದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳ ಗಮನಸೆಳೆಯಲಾಗಿದೆ.
ಅನಾರೋಗ್ಯಕ್ಕೆ ಕಾರಣ
 ಸುರತ್ಕಲ್‌ ಸುತ್ತಮುತ್ತ ವಾರ್ಡ್‌ನ ವಿವಿಧೆಡೆ ಬಾವಿ ನೀರು ಅಶುದ್ಧವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ಬಳಕೆ ಮಾಡದ ಅಶುದ್ಧ ನೀರು ಒಂದೆಡೆಯಾದರೆ ಈ ಜಲಮೂಲಗಳು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಅನಾರೋಗ್ಯ ಪ್ರಕರಣಗಳು ಕಂಡು ಬರುತ್ತಿವೆ.
ಎರಡನೇ ಹಂತದಲ್ಲಿ ಎಡಿಬಿ ಯೋಜನೆ ?
ಮನಪಾ ವ್ಯಾಪ್ತಿಯಲ್ಲಿ ಎರಡನೇ ಹಂತದ ಎಡಿಬಿ ಹಣಕಾಸಿನಿಂದ ಒಳಚರಂಡಿ ಯೋಜನೆ ಈಗಾಗಲೇ ಸಿದ್ಧತೆ ನಡೆದಿದ್ದರೂ ಅನುಷ್ಠಾನಕ್ಕೆ ಬರಲು ಇನ್ನೂ ಒಂದೆರಡು ವರ್ಷ ಕಾಯಬೇಕಿದೆ. ಈಗ ಬಾವಿ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಶುದ್ಧೀಕರಿಸಿದರೂ ಮತ್ತೆ ಮಲಿನ ನೀರು ತುಂಬುವುದರಿಂದಾಗಿ ಅವುಗಳನ್ನು ಆಶ್ರಯಿಸಿದ ಕುಟುಂಬಗಳು ಕೇವಲ ತೋಟಕ್ಕೆ ಮಾತ್ರ ನೀರು ಬಳಕೆ ಮಾಡುತ್ತಿದ್ದಾರೆ.
ಮುಂಜಾಗ್ರತೆ ಕ್ರಮ ಏನು
ಪ್ರತಿ ಗ್ರಾಮ, ವಾರ್ಡ್‌ ಮಟ್ಟದಲ್ಲಿ ಪರಿಸರ ಸ್ವತ್ಛತೆ ಬಗ್ಗೆ ಹೆಚ್ಚು ಗಮನ ಹರಿಸಿ, ಕುಡಿಯುವ ನೀರಿನ ಪ್ರತಿಯೊಂದು ಮೂಲಗಳಿಗೆ ವಾರಕ್ಕೊಮ್ಮೆ ಕ್ಲೋರಿನೇಷನ್‌ ಮಾಡಿಸಬೇಕಿದೆ. ನೀರಿನ ಪೈಪ್‌ಗ್ಳು ಒಡೆದಿರುವ ಬಗ್ಗೆ ಪರಿಶೀಲಿಸಿ ತತ್‌ಕ್ಷಣ ದುರಸ್ತಿ ಮಾಡಿಸಬೇಕು. ನೀರು ಸಂಗ್ರಹಣೆ ಟ್ಯಾಂಕ್‌ಗಳನ್ನು ವಾರಕೊಮ್ಮೆ ಸ್ವತ್ಛಗೊಳಿಸಬೇಕು. ಕೊಳವೆಬಾವಿ, ತೆರೆದ ಬಾವಿಗಳ ಸುತ್ತಲು ನೀರು ನಿಲ್ಲದಂತೆ, ಮಲಿನವಾಗದಂತೆ ನೋಡಿಕೊಳ್ಳಬೇಕು. ಕ್ಲೋರಿನೇಷನ್‌ ಮಾಡಿ 2 ದಿನಗಳ ಅನಂತರ ನೀರನ್ನು ಚೆನ್ನಾಗಿ ಕುದಿಸಿ ಕುಡಿಯಲು ಬಳಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
 ಮಲಿನ ನೀರು ತೋಡಿಗೆ 
ನಮ್ಮ ಬಾವಿಯಲ್ಲಿ ನೀರು ಸದಾ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಸತಿ ನಿವೇಶನಗಳು ಹೆಚ್ಚಾಗುತ್ತಿದ್ದಂತೆ ಒಳಚರಂಡಿಗೆ ಆದ್ಯತೆ ನೀಡದೆ ಮನೆ ಮಾತ್ರ ಕಟ್ಟಲು ಅನುಮತಿ ನೀಡಲಾಗುತ್ತದೆ. ಇದರಿಂದ ಶೌಚ, ಬಟ್ಟೆ ಒಗೆದ‌, ಪಾತ್ರೆ ತೊಳೆದ, ಮಾಂಸಗಳನ್ನು ಶುದ್ಧೀಕರಿಸಿದ ಮಲಿನ ನೀರನ್ನು ತೋಡಿಗೆ ಬಿಡಲಾಗುತ್ತಿದೆ. ಅದು ಸರಿಯಾಗಿ ಹರಿಯದೆ ಒರತೆ ಮೂಲಕ ಬಾವಿಗೆ ಇಳಿಯುತ್ತಿದೆ. ಇದರಿಂದ ನಮ್ಮ ಬಾವಿ ಇಂದು ಉಪಯೋಗಕ್ಕೆ ಬಾರದಂತಾಗಿದೆ.
 - ಅಶೋಕ್‌ ಅಗರಮೇಲು, ಸ್ಥಳೀಯರು
    ಲಕ್ಷ್ಮೀನಾರಾಯಣ ರಾವ್‌

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.