ಪರಿಸರ ಸ್ನೇಹಿ ಡ್ರೋನ್
Team Udayavani, Sep 2, 2018, 12:59 PM IST
ಆನ್ ಲೈನ್ ಶಾಪಿಂಗ್ ಆರಂಭವಾದ ಬಳಿಕ ಆಹಾರ, ಔಷಧ ಸಹಿತ ಎಲ್ಲವನ್ನೂ ಈಗ ನಾವಿದ್ದ ಸ್ಥಳಕ್ಕೆ ತರಿಸಿಕೊಳ್ಳಬಹುದು. ಟ್ರಾಫಿಕ್ ಕಿರಿಕಿರಿಯಿಲ್ಲದೆ, ಹೊಗೆ, ಧೂಳು ಮೆತ್ತಿಕೊಳ್ಳುವ ಆತಂಕವಿಲ್ಲದೆ, ಇಂಧನವನ್ನೂ ಉಳಿಸಿ ಹೊಸ ರೀತಿಯ ಪರಿಸರ ಸ್ನೇಹಿ ಸೇವೆಯೊಂದು ಈಗ ಚರ್ಚೆಯಲ್ಲಿದೆ ಅದುವೇ ಡ್ರೋನ್ ಪರಿಸರ ಸ್ನೇಹಿ ಸ್ಮಾರ್ಟ್ ಸೇವೆ. ಫೋಟೋ, ವೀಡಿಯೋ ಶೂಟಿಂಗ್, ಮಕ್ಕಳ ಆಟಿಕೆಗಷ್ಟೇ ಸೀಮಿತವಾಗಿದ್ದ ಡ್ರೋನ್ ಅನ್ನು ಇನ್ನು ಮುಂದೆ ನಗರದ ಸಮಗ್ರ ಚಿತ್ರಣವನ್ನು ಪಡೆಯಲು, ಕಾಮಗಾರಿ ಪರಿಶೀಲಿಸಲು, ಸರ್ವೆ ಕಾರ್ಯಗಳಿಗಾಗಿಯೂ ಬಳಸಬಹುದು. ಅಲ್ಲದೇ ತುರ್ತು ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಬಳಸಬಹುದಾಗಿದೆ.
ಆನ್ ಲೈನ್ ಶಾಪಿಂಗ್ ನಂತೆ ಡ್ರೋನ್ ಮೂಲಕ ಮನೆ ಬಾಗಿಲಿಗೆ ಆರ್ಡರ್ ಮಾಡಿದ ವಸ್ತುವನ್ನು ತಲುಪಿಸಲು ಸಾಧ್ಯ. ಇದರಿಂದ ಮಾಲಿನ್ಯವೂ ಕಡಿಮೆ, ಸಮಯವೂ ಉಳಿತಾಯವಾಗುತ್ತದೆ ಎನ್ನುವ ದೃಷ್ಟಿಯಿಂದ ಇಂಗ್ಲೆಂಡ್, ಝರಿಚ್, ಸ್ವಿಝರ್ ಲ್ಯಾಂಡ್, ರೈಕಾjವಿಕ್, ಐಲ್ಯಾಂಡ್ಗಳಲ್ಲಿ ಈಗಾಗಲೇ ಈ ಪ್ರಯೋಗ ಆರಂಭಗೊಂಡಿದೆ.
ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅವರಿಗೆ ತುರ್ತು ಚಿಕಿತ್ಸೆ ನೀಡುವುದು ಕಷ್ಟ. ಇದರಿಂದ ಸಾಕಷ್ಟು ಮಂದಿ ಈಗಾಗಲೇ ಪ್ರಾಣ ಕಳೆದುಕೊಂಡವರು ಇದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸಲು ಈ ಡ್ರೋನ್ ಡೆಲಿವರಿ ವ್ಯವಸ್ಥೆ ಸಹಕಾರಿಯಾಗಿದೆ. ಇದರ ಮುಖ್ಯ ಧ್ಯೇಯವೇ ಇದು. ವಿದೇಶಗಳಲ್ಲಿ ಹೆಚ್ಚಾಗಿ ಇದನ್ನೇ ಉದ್ದೇಶವಾಗಿಟ್ಟುಕೊಂಡು ಬಳಸುವ ಪ್ರಯತ್ನ ಮಾಡಲಾಗುತ್ತಿದೆ.
ಬಹೂಪಯೋಗಿ
ಡ್ರೋನ್ ಮಕ್ಕಳ ಆಟದ ವಸ್ತುವಲ್ಲ. ಏಕೆಂದರೆ ಹೆಚ್ಚಿನವರಲ್ಲಿ ಡ್ರೋನ್ ಬಗ್ಗೆ ತಪ್ಪು ಕಲ್ಪನೆಗಳಿವೆ. ಆದರೆ ಅದರ ಸರಿಯಾದ ಉಪಯೋಗವನ್ನು ತಿಳಿದರೆ ಅದರ ಆವಶ್ಯಕತೆ ಅರಿವಾಗುತ್ತದೆ. ಈಗಾಗಲೇ ಹಲವೆಡೆ ಡ್ರೋನ್ ಅನ್ನು ಸರ್ವೆ ಕಾರ್ಯಗಳಿಗಾಗಿ, ಸೈಟ್ಗಳ ಕಾಮಗಾರಿ ವೀಕ್ಷಿಸಲು ಉಪಯೋಗಿಸಲಾಗುತ್ತಿದೆ.
ಡ್ರೋನ್ ಹಾಗೂ ವ್ಯಾನ್ ಮೂಲಕ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಿದೆ. ದೊಡ್ಡ ಫ್ಯಾಟ್ ಅಥವಾ ಅಪಾರ್ಟ್ಮೆಂಟ್ಗಳಿಗೆ ಹೋಗಿ ಮನೆ ಮನೆಗೆ ಕೊಡುವುದಕ್ಕಿಂತ ಈ ಡ್ರೋನ್ ಮೂಲಕ ಡೆಲಿವರಿ ಮಾಡುವುದು ಸುಲಭ. ಪಾರ್ಸೆಲ್ ತೆಗೆದುಕೊಳ್ಳಲು ವ್ಯಾನ್ಗೆ ಬಂದರಾಯಿತು. ಈ ರೀತಿಯಲ್ಲೂ ಹಲವು ಪ್ರಯೋಗಗಳು ನಡೆಯುತ್ತಿವೆ.
ಒಟ್ಟಾರೆ ಈ ಬಗ್ಗೆ ಹಲವು ಸಂಶೋಧನೆ ನಡೆಯುತ್ತಿದ್ದು. ಈ ಸೇವೆ ಯಲ್ಲಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಸ್ವಲ್ಪ ಮಟ್ಟಿಗೆ ದುಬಾರಿಯಾದರೂ ಮಹಾನಗರಗಳಿಗೆ ಇದು ಉಪಯುಕ್ತವೆನಿಸುವ ಸೇವೆಯಾಗಲಿದೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು