ಪರಿಸರ ಸ್ನೇಹಿಯಾಗಿರಲಿ ಮನೆ


Team Udayavani, Apr 20, 2019, 6:15 AM IST

home2

ಮನೆಯೊಳಗೆ ಹಾಗೂ ಸುತ್ತಮುತ್ತ ತಂಪಾದ ವಾತಾವರಣ ಇರಬೇಕು ಎಂದು ಎಲ್ಲರೂ ಬಯಸುತ್ತಿರುವುದರಿಂದ ಪರಿಸರ ಸ್ನೇಹಿ ಮನೆಗಳಿಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಪರಿಸರ ಸ್ನೇಹಿ ಮನೆಗಳು ಹೇಗಿರಬೇಕು, ಯಾವ ರೀತಿಯಲ್ಲಿರಬೇಕು, ಅದನ್ನು ನಿರ್ಮಿಸುವುದು, ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆ ಹಲವರಲ್ಲಿದೆ. ಆದರೆ ಇದರ ಬಗ್ಗೆ ತಿಳಿದುಕೊಂಡು ನಿರ್ಮಾಣ ಮಾಡಿದರೆ ಮನೆ ಆಕರ್ಷಕವಾಗಿರುವುದರ ಜತೆಗೆ ತಂಪಾಗಿಯೂ ಇರುತ್ತದೆ.

ಮನೆ ಕಟ್ಟುವುದು ಸುಲಭದ ಮಾತಲ್ಲ. ಅದಕ್ಕೆ ಅನುಭವದ ಯೋಜನೆಗಳು ಇಲ್ಲದಿದ್ದರೂ, ಹೊಸ ವಿನ್ಯಾಸದ ಗುರಿಯಿರಬೇಕು. ಅದರಲ್ಲೂ ಈಗ ಎಲ್ಲ ಕಡೆಯಲ್ಲಿಯೂ ಮನೆ ಮಾತಾಗಿರುವ ಪರಿಸರ ಸ್ನೇಹಿ ಮನೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಇಂತಹ ಮನೆಕಟ್ಟಲು ಸ್ವಲ್ಪ ಕ್ರಿಯಾತ್ಮಕ ಯೋಜನೆಗಳು ಅಗತ್ಯ.

ಕೆಲವರಿಗೆ ಇರುವ ಮನೆಯನ್ನು ನವೀಕರಿಸುವ, ಇನ್ನು ಕೆಲವರಿಗೆ ಹೊಸ ಪರಿಸರ ಸ್ನೇಹಿ ಮನೆಗಳನ್ನು ಕಟ್ಟುವ ಹಂಬಲವಿರುತ್ತದೆ. ಅದಕ್ಕಾಗಿ ಪೂರ್ವನಿಯೋಜಿತ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿ ಅದನ್ನು ನಿರ್ವಹಿಸಲಾಗದಿರುವುದಕ್ಕಿಂತ, ಚಿಕ್ಕ ಮನೆಯಾದರೂ ಅನುಕೂಲಕರವಾಗಿರುವಂತೆ ಕಟ್ಟುವುದರಿಂದ ಮನೆಯ ಅಂದ ಹೆಚ್ಚುವುದಲ್ಲದೆ, ಪ್ರತಿದಿನ ಸುಂದರವಾಗಿ ಸಮಯ ಕಳೆಯಲು ನೇರವಾಗುತ್ತದೆ.

ಸೈಟ್ ಆಯ್ಕೆ
ಪರಿಸರ ಸ್ನೇಹಿ ಮನೆ ನಿರ್ಮಿಸಲು ಮೊದಲು ಅತ್ಯಂತ ಅನುಕೂಲವಾದ ಸೈಟ್ ಆಯ್ಕೆ ಮಾಡಿಕೊಳ್ಳಬೇಕು. ಬೆಳಕಿನ ದೃಷ್ಟಿಕೋನ ಮನೆಗೆ ಪೂರಕವಾಗಿರಬೇಕು. ಅದಲ್ಲದೆ ಭೌಗೋಳಿಕ ಲಕ್ಷಣ, ಮನೆಯ ವಿನ್ಯಾಸ ಇವೆಲ್ಲವೂ ಪ್ರಕೃತಿಯ ಆಗುಹೋಗುಗಳಿಗೆ ಸರಿಹೊಂದುವಂತೆ ನಿರ್ಮಿಸಬೇಕು.

ಅಡಿಗೆ ಕೋಣೆಯನ್ನು ಸೂರ್ಯನ ಬೆಳಕು ಬೀಳುವ ಕಡೆ ಮಾಡುವುದು ಕೂಡ ಇದೇ ಕಾರಣಕ್ಕಾಗಿ. ಇದರಿಂದ ಸೂರ್ಯನ ಚಲನವಲನಕ್ಕೆ ಅನುಗುಣವಾಗಿ ಮನೆ ಇರುತ್ತದೆ. ಬೆಳಗಿನ ಕೆಲಸಗಳು ಹೆಚ್ಚು ಅಡಿಗೆ ಮನೆಯಲ್ಲಿರುವುದರಿಂದ ಅದಕ್ಕೆ ಪೂರಕವಾದಂತೆ ಬೆಳಕು ಸಹ ಬೇಕಾಗಿರುತ್ತದೆ. ಅದಲ್ಲದೆ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮನೆಯ ಮುಂಭಾಗದ ಬಾಗಿಲುಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಗಾತ್ರ ಮತ್ತು ಆಕಾರ
ಮನೆ ನಿರ್ಮಾಣದಲ್ಲಿ ಗಾತ್ರ ಮತ್ತು ಆಕಾರಗಳು ಕೂಡ ಮುಖ್ಯವಾಗುತ್ತದೆ. ಕೆಲವೊಮ್ಮೆ ಸಣ್ಣ ಮನೆಗಳು ಕೂಡ ತುಂಬಾ ಇಷ್ಟವಾಗುತ್ತದೆ. ಅದಕ್ಕೆ ಬಳಸಲಾದ ವಸ್ತುಗಳು, ಅವುಗಳ ಮಾರ್ಪಾಡು ಎಲ್ಲವೂ ಖುಷಿಕೊಡುತ್ತದೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಕೊಠಡಿಗಳಿಗಿಂತ ಚಿಕ್ಕ ಸ್ಥಳಾವಕಾಶ ಹೆಚ್ಚು ಬೆಳಕನ್ನು ನೀಡುತ್ತದೆ. ಕಿಟಕಿಗಳು ಸಹ ಇದಕ್ಕೆ ಹೊರತಾಗಿಲ್ಲ. ಮನೆಯಲ್ಲಿ ಗಾಳಿ, ಬೆಳಕು ಹೇರಳವಾಗಿ ಬರಲು ಮತ್ತು ಶಾಖದ ಪ್ರಮಾಣವನ್ನು ಕಡಿಮೆ ಮಾಡಲು ಚೌಕ, ಆಯತಾಕಾರದಲ್ಲಿ ಕಿಟಕಿ ಮತ್ತು ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದಲ್ಲದೆ ಮನೆಯ ಛಾವಣಿಗಳಿಗೆ ಮರದಿಂದ ಮಾಡಿದ ಜಂತಿಗಳನ್ನೆ ಬಳಸುವುದರಿಂದ ಪರಿಸರ ಸ್ನೇಹಿ ಮನೆ ನಿರ್ಮಾಣಕ್ಕೆ ಅನುಕೂಲವಾಗುತ್ತದೆ.

ನಿರ್ಮಾಣ ಪ್ರಕ್ರಿಯೆ ಮನೆಯ ಸಂಪನ್ಮೂಲ ಭಾಗವಾಗಿರುವುದರಿಂದ, ಕಟ್ಟಡಗಳನ್ನು ಸುಂದರವಾಗಿ ನಿರ್ಮಿಸಬೇಕು. ಮನೆಯಲ್ಲಿ ಆದಷ್ಟು ಸೌರಶಕ್ತಿಯನ್ನು ಬಳಸುವುದರಿಂದ ಪರಿಸರ ಸ್ನೇಹಿಯಾಗುವುದಲ್ಲದೆ, ನೈಸರ್ಗಿಕವಾಗಿ ಯಾವುದೇ ತೊಡಕುಂಟಾಗದೇ ಪ್ರತಿದಿನ ಕಾರ್ಯ ನಿರ್ವಹಿಸುತ್ತದೆ. ಅದಲ್ಲದೆ ಚಳಿ ಮತ್ತು ಮಳೆಗಾಲದಲ್ಲಿ ಬಿಸಿ ನೀರಿನ ವ್ಯವಸ್ಥೆ ಕೂಡ ಆಗುತ್ತದೆ. ಜಾಗತಿಕ ಮಟ್ಟದಲ್ಲಿ ಕಾರ್ಬನ್‌ ಹೊರಸೂಸುವಿಕೆಯ ಪ್ರಮಾಣ ಹೆಚ್ಚಾಗಿರುವುದರಿಂದ ಸೌರಶಕ್ತಿಯನ್ನು ಪರ್ಯಾಯ ಶಕ್ತಿಯಾಗಿ ಬಳಸಬಹುದಾಗಿದೆ. ಇದಕ್ಕೆ ಪೂರಕವಾಗುವಂತೆ ಪರಿಸರ ಸ್ನೇಹಿ ಬಲ್ಬ್ಗಳು ಬಂದಿರುವುದರಿಂದ ಕೊಠಡಿಗಳಿಗೆ ಇದನ್ನು ಬಳಸಬಹುದಾಗಿದೆ.

ಜಲ ಸಂರಕ್ಷಣೆ
ನೀರು ಒಂದು ಪ್ರಮುಖ ಸಂಪನ್ಮೂಲವಾಗಿರುವುದರಿಂದ ಹಸಿರು ಮನೆಯಲ್ಲಿ ನೀರಿನ ಬಳಕೆ ಅತಿಮುಖ್ಯವಾಗಿರುತ್ತದೆ. ಮಳೆಗಾಲದಲ್ಲಿ ಮಳೆ ನೀರು ಕೊಯ್ಲು ಗಳನ್ನು ಮಾಡಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡುವುದ ಮತ್ತು ಮನೆಗಳಲ್ಲಿ ಒಮ್ಮೆ ಬಳಕೆಯಾದ ನೀರನ್ನು ಪುನಃ ಬಳಸುವ ವ್ಯವಸ್ಥೆ ಮಾಡಿಕೊಂಡಲ್ಲಿ ಮನೆಗೆ ಅನೂಕೂಲವಾಗುತ್ತದೆ.

ಜಗತ್ತಿನಾದ್ಯಂತ ಅನೇಕ ಪರಿಸರ ಸ್ನೇಹಿ ಮನೆಗಳಿದ್ದು ಕೆಲವು ಮನೆಗಳು ಎಲ್ ಆಕೃತಿಯಲ್ಲಿ ನಿರ್ಮಾಣಗೊಂಡಿದ್ದು , ಕೆಲವು ಕಾಂಕ್ರೀಟ್ ಗೋಡೆಗಳು ಬೇಸಗೆಯಲ್ಲಿ ತಂಪಾಗಿ ಮತ್ತು ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣವನ್ನು ಮನೆಯೋಳಗೆ ನೀಡುತ್ತವೆ. ಅಲ್ಲದೆ ಸೌರಶಕ್ತಿಗಳನ್ನು ಬಳಸುವುದರಿಂದ ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡಬಹುದು.

ಗೋಡೆಗಳನ್ನು ಹಸುರಾಗಿಸಿ
ಮನೆಯ ಹೊರಗಿನ ಗೋಡೆಗಳಿಗೆ ಬಣ್ಣ ಬ¡ಣ್ಣದ ಪೇಂಟ್ ಮಾಡುವ ಬದಲು ತರಕಾರಿ, ಹೂವಿನ ಬಳ್ಳಿಗಳನ್ನು ಗೋಡೆಗಳಿಗೆ ಹರಿಯ ಬಿಡುವುದು ಒಳ್ಳೆಯದು. ಇವುಗಳು ತನ್ನಷ್ಟಕ್ಕೆ ತಾನೇ ಹಬ್ಬಿಕೊಂಡು ಗೋಡೆಗಳು ಹಸಿರು ಮಯವಾಗುವುದಲ್ಲದೆ, ಸುಂದರವಾಗಿ ಕಾಣುತ್ತದೆ. ಮನೆಗೆ ಪೇಂಟ್ ಮಾಡುವುವಾಗಲೂ ಕೂಡ ಕೆಮಿಕಲ್ ಬಳಸಿದ ಪೇಂಟ್ಗಳ ಬಳಕೆ ಕಡಿಮೆ ಮಾಡಬೇಕು, ನೈಸರ್ಗಿಕವಾಗಿ ಸಿಗುವ ಮರಳು, ಕಲ್ಲುಗಳಿಂದ ವಿನೂತನ ಮಾದರಿಯ ಗೋಡೆಗಳಿಗೆ ಆದ್ಯತೆ ನೀಡಬೇಕು.

– ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.