ಅಡಿಕೆ ಇಳುವರಿಗೆ ಅಗತ್ಯ ಪೋಷಕಾಂಶಗಳು


Team Udayavani, Sep 8, 2019, 5:30 AM IST

Areca-04

ಕೃಷಿಗೆ ಪೋಷಕಾಂಶದ ನಿರ್ವಹಣೆ ಮಹತ್ವದ್ದು. ಸೂಕ್ತ ಸಮಯದಲ್ಲಿ ಇವುಗಳು ಮಣ್ಣಿಗೆ ದೊರೆತರೆ ಅದು ಬೆಳೆಗೆ ಪೂರಕ. ಹೆಚ್ಚು ಇಳುವರಿ ಬರಲಿ ಎಂದು ಅಧಿಕ ಪೋಷಕಾಂಶ ನೀಡಿದರೆ ಅದು ನೀರಿನಲ್ಲಿ ಕರಗಿ ಹರಿದುಹೋಗುತ್ತದೆ ಇಲ್ಲವೇ ಗಾಳಿಯಲ್ಲಿ ಆವಿಯಾಗಿ ಒಟ್ಟಾರೆ ವ್ಯರ್ಥವಾಗುತ್ತದೆ. ಇಲ್ಲಿ ಅಡಿಕೆ ಇಳುವರಿ ಹೆಚ್ಚಳಕ್ಕೆ ಯಾವ ರೀತಿಯ ಪೋಷಕಾಂಶಗಳು ಮಹತ್ವವಾಗಿವೆ ಎಂದು ವಿವರಿಸಲಾಗಿದೆ.

ಅಡಿಕೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಇದನ್ನು ಸಾಂಪ್ರದಾಯಿಕ ಪ್ರದೇಶದ ಬೆಳೆಗಾರರೂ ಅಲ್ಲದೆ ಅಸಾಂಪ್ರದಾಯಿಕ ಪ್ರದೇಶಗಳಲ್ಲೂ ಬೆಳೆಸುವವರು ಹೆಚ್ಚುತ್ತಿದ್ದಾರೆ. ಇದಕ್ಕೆ ಹೊಸ ಪ್ರದೇಶ ಅದರಲ್ಲೂ ಫ‌ಲವತ್ತತೆ ಕಡಿಮೆ ಇರುವ ಪ್ರದೇಶ ಸೇರ್ಪಡೆಗೊಳ್ಳುತ್ತಿರುವ ಕಾರಣ ಅಲ್ಲಿ ನಮ್ಮ ಸಾಂಪ್ರದಾಯಿಕ ಎನ್‌ಪಿಕೆ ಗೊಬ್ಬರಗಳನ್ನು ಪೂರೈಕೆ ಮಾಡಿದರೆ ಸಾಕಾಗುವುದಿಲ್ಲ. ಹೆಚ್ಚು ಬೆಳೆ ತೆಗೆಯುವಾಗ ಮಣ್ಣಿನ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿ ಉಪಯೋಗವಾಗುವ ಕಾರಣ ಕೆಲವು ಪೋಷಕಾಂಶಗಳ ಕೊರತೆ ಉಂಟಾಗುವುದು ಸಹಜ. ಅತ್ಯಧಿಕ ಇಳುವರಿ ಪಡೆಯುವಾಗ ಅದಕ್ಕೆ ಸಮನಾಗಿ ಗೊಬ್ಬರವ‌ನ್ನು ಒದಗಿಸುತ್ತಲೇ ಇರಬೇಕಾಗುತ್ತದೆ.

ಇಳುವರಿ ಹೆಚ್ಚಳ ವಿಧಾನ
ಸಾಮಾನ್ಯವಾಗಿ ನಾವು ಎನ್‌ಪಿಕೆ ಗೊಬ್ಬರವ‌ನ್ನು ವರ್ಷವೂ ಬಳಕೆ ಮಾಡುತ್ತೇವೆ. ಇದು ಪ್ರಧಾನ ಪೋಷಕಾಂಶವಾಗಿದ್ದು ಇದಷ್ಟೇ ನಾವು ಪಡೆಯಲಿಚ್ಛಿಸುವ ಫ‌ಸಲಿಗೆ ಸಾಕಾಗುವುದಿಲ್ಲ ಎಂಬುದು ಕೆಲವು ರೈತರ ಅನುಭವವಾಗಿದೆ. ಈ ಗೊಬ್ಬರದ ಜತೆಗೆ ಇತರ ಪೋಷಕಾಂಶಗಳನ್ನು ಬಳಕೆ ಮಾಡುವುದರಿಂದ ಇಳುವರಿಯಲ್ಲಿ ಹೆಚ್ಚಳ ನಿರೀಕ್ಷಿಸಬಹುದಾಗಿದೆ.

ಫ‌ಸಲಿನಲ್ಲಿ ವ್ಯತ್ಯಯ
ದ್ವಿತೀಯ ಪೋಷಕಾಂಶ, ಸೂಕ್ಷ್ಮ ಪೋಷಕಾಂಶದ ಬಳಕೆ ಮಾಡುವ ಬಗ್ಗೆ ಹೆಚ್ಚಿನ ಅಡಿಕೆ ಬೆಳೆಗಾರರಿಗೆ ತಿಳಿದಿರುವುದಿಲ್ಲ. ಇದರಿಂದ ಒಂದು ವರ್ಷ ಉತ್ತಮ ಫ‌ಸಲು ಅನಂತರ ವರ್ಷ ಫ‌ಸಲು ಕಡಿಮೆ ಹೀಗೆ ವ್ಯತ್ಯಾಸವಾಗುತ್ತದೆ. ಬೆಳೆಗಳಿಗೆ ಪ್ರಧಾನವಾಗಿ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವುದು ಇಂಗಾಲ, ಆಮ್ಲಜನಕ ಮತ್ತು ಜಲಜನಕ. ಇದನ್ನು ಪ್ರಕೃತಿ ಉಚಿತವಾಗಿ ನೀಡುತ್ತದೆ. ಇದಕ್ಕೆ ಕೃಷಿಕರು ಸಮರ್ಪಕ ಬಸಿದು ಹೋಗುವ ಕಾಲುವೆ ಮಾಡಿ ಬೇರುಗಳಿಗೆ ಉಸಿರಾಟಕ್ಕೆ ಅನುಕೂಲ ಮಾಡಿಕೊಡಬೇಕು. ನೀರಿನ ಕೊರತೆ ಸಂದರ್ಭ ನೀರಾವರಿ ಮಾಡಿ ಸಲಹಬೇಕು. ಉಳಿದಂತೆ ದ್ವಿತೀಯ ಪೋಷಕಾಂಶ, ಸೂಕ್ಷ್ಮ ಪೋಷಕಾಂಶಗಳನ್ನು ನಾವು ಯಾವುದಾದರೊಂದು ಮೂಲದಲ್ಲಿ ಒದಗಿಸಿಕೊಡಬೇಕು.

ಅಡಿಕೆ ಬೆಳೆಯುವ ರೈತರು ದ್ವಿತೀಯ ಪೋಷಕಾಂಶಗಳಾಗಿ ಬಳಸಬೇಕಾದುದು ಸುಣ್ಣ, ಮೆಗ್ನೆಶಿಯಂ ಮತ್ತು ಗಂಧಕ. ಇವು ಪ್ರಧಾನ ಪೋಷಕಾಂಶಗಳಷ್ಟು ಪ್ರಮಾಣದಲ್ಲಿ ಬೇಕಿಲ್ಲವಾದರೂ ಆವಶ್ಯಕವಾಗಿವೆ. ಕೆಲವು ರಾಸಾಯನಿಕ ಗೊಬ್ಬರಗಳಲ್ಲಿ ಸುಣ್ಣದ ಅಂಶ, ಗಂಧಕ ಅಥವಾ ಮೆಗ್ನಿàಶಿಯಂ ಒಳಗೊಂಡಿದ್ದರೆ ನಾವು ಬಳಕೆ ಮಾಡದೆಯೂ ಅದು ಸಸ್ಯಗಳಿಗೆ ಪೂರೈಕೆಯಾಗಬಹುದು. ಇದಿಲ್ಲದಿದ್ದರೆ ಅದನ್ನು ಕೂಡಲೇ ನೀಡಬೇಕು.

ಎನ್‌ಪಿಕೆ ಅಂದರೇನು?
ಎನ್‌ಪಿಕೆ ಸಸ್ಯದ ಬೆಳವಣಿಗೆಯ ಪ್ರಧಾನ ಪೋಷಕಾಂಶ. ಎನ್‌-ನೈಟ್ರೋಜನ್‌ ಅಂದರೆ ಸಾರಜನಕ (ಯೂರಿಯಾ). ಸಾರಜನಕ ನೀಡಿದರೆ ಗಿಡ ಎತ್ತರ, ಸದೃಢವಾಗಿ ಬೆಳೆಯುತ್ತದೆ. ಪಿ-ಪಾಸ್ಪರಸ್‌ ಅಂದರೆ ರಂಜಕ. ಇದು ಬೇರಿನ ಬೆಳವಣಿಗೆಗೆ ಉತ್ತಮ. ಕಾಳುಕಟ್ಟಲು ಸಹಕಾರಿ. ಕೆ ಎಂದರೆ ಪೊಟ್ಯಾಶಿಯಂ. ಇದರಿಂದ ಪೈರಿಗೆ ರೋಗ ನಿರೋಧಕ ಶಕ್ತಿ ಬರುತ್ತದೆ.

ದ್ವಿತೀಯ ಪೋಷಕಾಂಶ
ಕ್ಯಾಲ್ಸಿಯಂ (ಕೋಶ ವಿಭಜನೆಗೆ ಪೂರಕ), ಮೆಗ್ನೇಶಿಯಂ (ಪತ್ರ ಹರಿತ್ತು, ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಪೂರಕ), ಸಲ#ರ್‌ ( ಎಣ್ಣೆ ಅಂಶ ಜಾಸ್ತಿಯಾಗಲು ಕಾರಣ).

ಕಿರು ಪೋಷಕಾಂಶಗಳು
ಕಬ್ಬಿಣ, ಸತು, ಬೋರಾನ್‌,ಕ್ಲೋರಿನ್‌, ಮಾಲಿಬಿxನಂ, ಸಿಲಿಕಾ, ತಾಮ್ರ ಇವು ಕಿರು ಪೋಷಕಾಂಶಗಳು. ಈ ಪೈಕಿ ಕೆಲವು ಜಾಸ್ತಿ ಇರಬೇಕು. ಇನ್ನು ಕೆಲವು ಗ್ರಾಂಗಳಲ್ಲಿ ಸಾಕಾಗುತ್ತದೆ. ಆರೋಗ್ಯವಂತ ಮಣ್ಣಿನಲ್ಲಿ ಮಾತ್ರ ಸೂಕ್ಷ್ಮಾಣುಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ.

ಸುಣ್ಣದಿಂದ ಸಸ್ಯದ ಬೆಳವಣಿಗೆ ವೃದ್ಧಿ
ಸಸ್ಯಗಳಿಗೆ ಪೋಷಕಾಂಶ ಕೊಡುವ ಮುಂಚೆ ಸುಣ್ಣದ ಅಂಶ ಕೊಟ್ಟರೆ ಉಳಿದ ಯಾವುದೇ ಗೊಬ್ಬರ ಕೊಡದಿದ್ದರೂ ಸಸ್ಯದ ಬೆಳವಣಿಗೆ ಒಮ್ಮೆಲೆ ವೃದ್ಧಿಯಾಗುತ್ತದೆ. ಮಣ್ಣಿನ ಧಕ್ಕೆ ಸಹನೆ (ಪಿ.ಎಚ್‌. ಮೌಲ್ಯ) ಗುಣದ ಮೇಲೆ ಕೆಲವು ಪೋಷಕಾಂಶಗಳು ಅಲಭ್ಯ ಸ್ಥಿತಿಯಲ್ಲಿದ್ದರೆ ಅದನ್ನು ಸುಣ್ಣ ಲಭ್ಯವಾಗುವಂತೆ ಮಾಡುತ್ತದೆ. ಮಣ್ಣಿನ ಅಜೀರ್ಣ ಸ್ಥಿತಿಯನ್ನು ಸಮಸ್ಥಿತಿಗೆ ತರಲು ಇದು ಸಹಕಾರಿ. ಸುಣ್ಣವನ್ನು ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಮಾತ್ರ ಬಳಸುವುದಿಲ್ಲ, ಇದು ಎಲ್ಲ ಬೆಳೆಗಳಿಗೂ ಅಗತ್ಯ ಪೋಷಕಾಂಶವಾದ ಕಾರಣ ಪ್ರಮಾಣ ಮತ್ತು ವ್ಯತ್ಯಾಸದಲ್ಲಿ ಬಳಕೆ ಮಾಡಬೇಕು. ಸಾಂಪ್ರದಾಯಿಕವಾಗಿ ನಾವು ಖನಿಜ ಸುಣ್ಣವಾಗಿ ಚಿಪ್ಪು, ಡೋಲೋಮೈಟ್‌ ಬಳಕೆ ಮಾಡುತ್ತೇವಾದರೂ ಈ ಸುಣ್ಣದ ಸಾರವಾದ ಕ್ಯಾಲ್ಸಿಯಂ ನೈಟ್ರೇಟ್‌, ಚಿಲ್ಗೇಟೆಡ್‌ ಕ್ಯಾಲ್ಸಿಯಂ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಹೆಚ್ಚು ತೀಕ್ಷ್ಮವಾದ ಸಸ್ಯಗಳು ಇದನ್ನು ಬೇಗನೆ ಪಡೆದುಕೊಳ್ಳುತ್ತವೆೆ. ಇದನ್ನು ಬೆಳೆಗೆ ಹಾಕುವುದರಿಂದ ಮುಖ್ಯ ಪೋಷಕಾಂಶಗಳಲ್ಲದೆ ಸೂಕ್ಷ್ಮ ಪೋಷಕಾಂಶಗಳೂ ಲಭ್ಯವಾಗುತ್ತವೆ. ಸುಣ್ಣವನ್ನು ಅತಿಯಾಗಿ ಹಾಕದೆ ಮಣ್ಣಿನ ಪಿ.ಎಚ್‌. 7ಕ್ಕಿಂತ ಕಡಿಮೆ ಬಂದಲ್ಲಿ ಹಾಕಿದರೆ ಸಾಕು.

-   ಜಯಾನಂದ ಅಮೀನ್‌, ಬನ್ನಂಜೆ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.