ಸಾಲು ಸಾಲು ಹಬ್ಬಗಳು ಖರೀದಿ ಭರಾಟೆ ಜೋರು


Team Udayavani, Aug 9, 2019, 5:34 AM IST

e-50

ಹಬ್ಬಗಳ ಸೀಸನ್‌ ಬಂದಾಯ್ತು. ಸದ್ಯ ಮಾರುಕಟ್ಟೆಯಲ್ಲಿ ವಿನೂತನ, ವಿಶಿಷ್ಟ, ಆಕರ್ಷಣೀಯ ವಸ್ತುಗಳ ಕಾರುಬಾರು. ಮನೆಯಿಂದ ಹೊರ ಕಾಲಿಟ್ಟರೆ ರಸ್ತೆಯ ಅಕ್ಕಪಕ್ಕದಲ್ಲಿ ಕಾಣಸಿಗುವ ಅಂಗಡಿಗಳಲ್ಲಿ ಕಲರ್‌ಫ‌ುಲ್ ರಾಕಿ, ಹೆಮ್ಮೆ ಹುಟ್ಟಿಸುವ ದೇಶದ ಬಾವುಟ, ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಜಾಗ ಪಡೆದುಕೊಂಡಿವೆ. ಸದ್ಯ ನಗರದಲ್ಲಿ ಹಬ್ಬದ ವಾತಾವರಣ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಈಗೇನಿದ್ದರೂ ಹಬ್ಬಗಳ ಸೀಸನ್‌. ನಾಗರ ಪಂಚಮಿಯಿಂದ ಶುರುವಾಗಿ ಸಾಲು ಸಾಲು ಹಬ್ಬಗಳೇ ನಮ್ಮ ಮುಂದಿವೆ. ವರಮಹಾಲಕ್ಷ್ಮಿ ಹಬ್ಬ, ಬಕ್ರೀದ್‌, ಸ್ವಾತಂತ್ರ್ಯ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳು ಒಂದೇ ತಿಂಗಳ ಅಂತರದಲ್ಲಿದ್ದು, ಹಬ್ಬ ಆಚರಣೆಯ ಸಂಭ್ರಮವನ್ನೂ ಹೆಚ್ಚಿಸಿವೆ.

ಹಬ್ಬವನ್ನು ಕೇವಲ ಆಚರಣೆ ಮಾಡಿದರೆ ಆಯಿತಾ ? ದೇವಸ್ಥಾನಗಳಿಗೆ ತೆರಳುವುದು, ದೇವರಿಗೆ ನಮಸ್ಕರಿಸಿ ಬರುವುದು, ಆಪ್ತೇಷ್ಟರ ಮನೆಗೆ ಹೋಗಿ ಹಬ್ಬದೂಟ ಮಾಡುವುದು ಇಷ್ಟೇ ಆದರೆ ಹಬ್ಬಕ್ಕೆ ಮೆರುಗಿಲ್ಲ. ಹಬ್ಬಕ್ಕೆಂದೇ ಒಂದಷ್ಟು ಖರೀದಿ ಮಾಡಿದರೆ, ಹಬ್ಬದ ವಾತಾವರಣದೊಂದಿಗೆ ಮನಸ್ಸಿನ ಆನಂದವೂ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ. ಹೌದು. ಹಬ್ಬಗಳು ಬಂತೆಂದರೆ ಹೊಸ ಬಟ್ಟೆ, ಹೊಸ ಆಲಂಕಾರಿಕ ವಸ್ತುಗಳ ಖರೀದಿ, ಚಿನ್ನ ಖರೀದಿಯಲ್ಲಿ ಜನ ತೊಡಗಿದ್ದರೆ, ವಾಣಿಜ್ಯ ಸಂಸ್ಥೆಗಳಲ್ಲಿ ರಶೊ ರಶು.

ಈ ಬಾರಿಯ ಸಾಲು ಹಬ್ಬಗಳಿಗಾಗಿ ಜನರ ಸಂಭ್ರಮ ಹೇಗಿದೆ, ಜನ ಏನೇನು ಖರೀದಿಯಲ್ಲಿ ತೊಡಗಿದ್ದಾರೆಂಬ ಕುತೂಹಲ. ಮಂಗಳೂರಿನಲ್ಲಿ ವಸ್ತ್ರ ಖರೀದಿ, ಹಬ್ಬಕ್ಕಾಗಿ ಇತರ ವಸ್ತುಗಳ ಖರೀದಿಯೂ ಬಿರುಸಾಗಿದೆ. ಆದರೆ, ವಿಪರೀತ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಂಗಾರ ಖರೀದಿಗೆ ಅಷ್ಟೊಂದು ಒಲವು ತೋರಿಸುತ್ತಿಲ್ಲ ಎಂಬುದು ಚಿನ್ನದಂಗಡಿಗಳ ಮಾಲಕರ ನೋವು.

ಮಂಗಳೂರಿನ ವಿವಿಧ ವಸ್ತ್ರ ಅಂಗಡಿಗಳಲ್ಲಿ ವರ ಮಹಾಲಕ್ಷ್ಮಿಹಬ್ಬದ ಖರೀದಿ ಈಗಾಗಲೇ ಮುಗಿದಿದೆ. ಬಕ್ರಿದ್‌, ಅಷ್ಟಮಿ, ಚೌತಿ ಹಿನ್ನೆಲೆಯಲ್ಲಿ ಜನ ಹೊಸ ಬಟ್ಟೆ ಖರೀದಿಸುತ್ತಿದ್ದಾರೆ. ಸೀರೆ, ಚೂಡಿದಾರ್‌, ಬಿಳಿ ಪಂಚೆ, ಫಾರ್ಮಲ್ ಶರ್ಟ್‌ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ನಗರದ ವಸ್ತ್ರ ಮಳಿಗೆಯೊಂದರ ಸಿಬಂದಿ ಸುಶ್ಮಿತಾ.

ಹಬ್ಬಕ್ಕೆ ದೇವಸ್ಥಾನಗಳಿಗೆ ಹೋಗುವಾಗ ಅಥವಾ ಮನೆಯಲ್ಲೇ ಹಬ್ಬ ಆಚರಿಸುವಾಗ ಹೊಸ ವಸ್ತ್ರಕ್ಕೆ ಮ್ಯಾಚಿಂಗ್‌ ಕಿವಿಯೋಲೆ, ಮಾಲೆ, ರಿಂಗ್‌ಗಳು ಮಾರಾಟವಾಗುತ್ತಿದೆ. ವರ ಮಹಾಲಕ್ಷ್ಮಿಹಬ್ಬದ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಗಾಜಿನ ಬಳೆ ಹೆಚ್ಚು ಮಾರಾಟವಾಗುತ್ತಿದೆ ಎಂಬುದು ಫ್ಯಾನ್ಸಿ ಮಾಲಕರ ಅಭಿಪ್ರಾಯ.

ಚಿನ್ನಕ್ಕಿಲ್ಲ ಬೇಡಿಕೆ
ಪ್ರತಿ ವರ್ಷ ವರ ಮಹಾಲಕ್ಷ್ಮಿ ಹಬ್ಬದ ವೇಳೆ ಹೆಂಗಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಅಕ್ಷಯ ತೃತೀಯಾದಂತೆ ಈ ಹಬ್ಬದಂದು ಚಿನ್ನ ಖರೀದಿಸಿದರೆ ಶುಭವಾಗುತ್ತದೆ, ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆಯೂ ಜನರಲ್ಲಿದೆ. ಅದಕ್ಕಾಗಿಯೇ ಚಿನ್ನದ ಅಂಗಡಿ ತುಂಬಿ ತುಳುಕುತ್ತಿರುತ್ತದೆ. ಆದರೆ ಈ ವರ್ಷದ ವರ ಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನದಾಸೆಗೆ ಬೆಲೆ ಏರಿಕೆ ತಡೆಯೊಡ್ಡಿದೆ. ಒಂದೇ ಸಮನೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಹಬ್ಬದ ಸಡಗರವನ್ನು ಸ್ವಲ್ಪ ಮಟ್ಟಿಗೆ ಕಸಿದಿದೆ. ಮಂಗಳೂರಿನ ಬಹುತೇಕ ಚಿನ್ನದ ಅಂಗಡಿಗಳಲ್ಲಿ ಖರೀದಿಗೆ ಜನರ ಸಂಖ್ಯೆ ಕಡಿಮೆ ಇದ್ದಾರೆ.

ಡಿಸ್ಕೌಂಟ್ ಭರಾಟೆ
ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳು, ಚಿನ್ನದಂಗಡಿಗಳೆಲ್ಲ ವಿಶೇಷ ದರ ಕಡಿತ ಮಾರಾಟವನ್ನೂ ಹಮ್ಮಿಕೊಂಡಿದ್ದು, ಖರೀದಿದಾರರಿಗೆ ವರವಾಗಿ ಪರಿಣಮಿಸಿದೆ. ಕೆಲವು ಬಟ್ಟೆ ಅಂಗಡಿಗಳಲ್ಲಿ ಶೇ. 20-50 ತನಕವೂ ರಿಯಾಯಿತಿ ದರ ಪ್ರಕಟಿಸಲಾಗಿದ್ದು, ಚಿನ್ನ ಕೊಳ್ಳುವವರಿಗೆ ಗ್ರಾಂಗೆ 100 ರೂ.ಗಳಷ್ಟು ಕಡಿತ ಆಫರ್‌ಗಳನ್ನು ನೀಡಿವೆ. ಆಫರ್‌ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲಿಯೂ ಜನಜಂಗುಳಿ ಇದೆ.

ಮೊಬೈಲ್ ಆಫರ್‌ಗಳು
ಹಬ್ಬಕ್ಕೆಂದೇ ಮೊಬೈಲ್ ಖರೀದಿಗಾರರಿಗೂ ಶುಭ ಸುದ್ದಿಗಳು ಸಾಲಾಗಿ ಲಭಿಸುತ್ತಿವೆ. ಮೊಬೈಲ್ಗಳ ನಿಗದಿತ ಬೆಲೆಗಿಂತ 1,000, 1,500 ರೂ.ಗಳಷ್ಟು ಆಫರ್‌ ನೀಡಲಾಗುತ್ತಿದೆ. ಆಫರ್‌ ದರದಲ್ಲಿ ಮೊಬೈಲ್ ನೀಡುವಿಕೆಯೊಂದಿಗೆ ಆಕರ್ಷಕ ಬಹುಮಾನಗಳನ್ನೂ ಕೆಲ ಸಂಸ್ಥೆಗಳು ನೀಡುತ್ತಿದ್ದು, ಜನಾಕರ್ಷಣೆಯಲ್ಲಿ ತೊಡಗಿವೆೆ. ಒಟ್ಟಿನಲ್ಲಿ ಸಾಲು ಹಬ್ಬಗಳನ್ನು ಸಾಲು ಸಂಭ್ರಮದೊಂದಿಗೆ ಆಚರಿಸಿಕೊಳ್ಳುವುದು, ಆಪ್ತರಿಗೆ ಉಡುಗೊರೆ ನೀಡಿ ಸಂಭ್ರಮಿಸು ವುದು, ಆ ಮೂಲಕ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸುವುದು ಈ ಹಬ್ಬದ ಸಮಯದಲ್ಲಿ ನಮ್ಮ ಮುಂದಿರುವ ಖುಷಿ ಕ್ಷಣಗಳು.

ಧನ್ಯಾ ಬಾಳೆಕಜೆ

 

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.