ಕಳೆದುಕೊಂಡಲ್ಲೇ ಹುಡುಕಿ


Team Udayavani, Feb 24, 2020, 5:44 AM IST

G1

ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ ಮಗು ಅದನ್ನು ಎಲ್ಲ ಕಡೆಗಳಲ್ಲೂ ಹುಡುಕಿ- ಹುಡುಕಿ ಕೊನಗೆ ಸುಸ್ತಾಗಿ ಮನೆಗೆ ಹೋಗಲು ಅಂಜಿ ಅಲ್ಲೇ ಕುಳಿತುಕೊಳ್ಳುತ್ತದೆ.

ಆಗ ಅದೇ ದಾರಿಯಲ್ಲಿ ಬಂದ ಒಬ್ಬ ಸಂತ ಮಕ್ಕಳೇ ಯಾಕೆ ಇಲ್ಲಿ ಕುಳಿತಿದ್ದೀರಿ, ಕತ್ತಲಾಗುತ್ತ ಬಂತು. ಮನೆಗೆ ತೆರಳಿ ಎಂದರು. ಆಗ ಮಗುವು ಅಮ್ಮ ಕೊಟ್ಟ ಹಣವನ್ನು ಕಳೆದುಕೊಂಡಿರುವುದಾಗಿ ಮತ್ತು ಎಲ್ಲ ಕಡೆ ಹುಡುಕಿದರೂ ಅದು ಸಿಗಲಿಲ್ಲ ಎಂದು ಅಳುಮುಖದಿಂದ ಹೇಳುತ್ತದೆ. ಆಗ ಆ ಸಂತ ಒಮ್ಮೆ ನಕ್ಕು, ನೀನು ಕಳೆದುಕೊಂಡಲ್ಲೇ ಹುಡುಕು ಅದು ದೊರೆಯುತ್ತದೆ ಎಂದು ಹೇಳಿ ತೆರಳುತ್ತಾನೆ. ಮಕ್ಕಳಿಗೇ ಅದೇನೂ ಅರ್ಥವಾಯಿತೋ ಆದರೆ ಎಲ್ಲಿ ಕಳೆದುಕೊಂಡರೋ ಅಲ್ಲೇ ಹುಡುಕುತ್ತಾರೆ. ಹಣ ದೊರೆಯುತ್ತದೆ. ಆದರೆ ಆ ಸಂತ ಹೇಳಿದ ಮಾತಿನ ಗೂಡಾರ್ಥ ಅಗಾಧವಾದುದು.

ಎಲ್ಲೋ ಕಳೆದುಕೊಂಡಿರುತ್ತೇವೆ, ಇನ್ನೆಲ್ಲೋ ಹುಡುಕುತ್ತೇವೆ. ಮನುಷ್ಯ ತಾನೇನೂ ಕಳೆದುಕೊಂಡಿದ್ದೇನೆ ಎಂದು ನಕಾರಾತ್ಮವಾಗಿ ಯೋಚಿಸುತ್ತಾನೆ. ಜತೆಗೆ ಕಳೆದುಕೊಂಡಲ್ಲಿ ಹುಡುಕದೆ ಬೇರೆಲ್ಲಾ ಕಡೆಗಳಲ್ಲೂ ಹುಡುಕಲಾರಂಭಿಸುತ್ತಾನೆ. ಕಳೆದುಕೊಂಡದ್ದು ವಸ್ತು, ಖುಷಿ, ನೆಮ್ಮದಿ, ಯಶಸ್ಸು ಏನೇ ಆದರೂ ಕಳೆದುಕೊಂಡಲ್ಲೇ ಹುಡುಕಿದರೆ ಖಂಡಿತ ಕಳೆದುಕೊಂಡದ್ದು ದೊರೆಯುತ್ತದೆ. ಕಳೆದುಕೊಂಡದ್ದು ಮನೆಯಲ್ಲಿ ಆದರೆ ಹುಡುಕುವುದು ಊರೆಲ್ಲಾ ಎಂದರೆ ಕಳೆದುಕೊಂಡದ್ದು ಸಿಗಲು ಸಾಧ್ಯವೇ?

ಕಳೆದುಕೊಂಡಲ್ಲೇ ಹುಡುಕಿದರೆ ಕಳೆದುಕೊಂಡದ್ದು ದೊರೆಯಲು ಸಾಧ್ಯ. ಮನುಷ್ಯ ಎಲ್ಲೋ ಖುಷಿಯನ್ನು ಕಳೆದುಕೊಳ್ಳುತ್ತಾನೆ. ಮತ್ತೆ ಖುಷಿಯನ್ನರಸಿ ಇನ್ನೆಲ್ಲೋ ಹುಡುಕುತ್ತಾನೆ. ಆದರೆ ಖುಷಿ ಖಂಡಿತ ದೊರೆಯಲು ಸಾಧ್ಯವಿಲ್ಲ. ಕಳೆದುಕೊಂಡಲ್ಲೇ ಮತ್ತೆ ಖುಷಿಯನ್ನು ಹುಡುಕಿ ಜೀವನ ಸುಂದರವಾಗಿರುತ್ತದೆ.

ಜೀವನದಲ್ಲಿ ಏನೋ ಗುರಿ ಇಟ್ಟುಕೊಂಡು ಸಾಧಿಸಲು ಹೊರಟ ನಮಗೆ ಸೋಲು ದೊರೆತರೆ ಅದನ್ನು ಅಲ್ಲೇ ಬಿಟ್ಟುಬಿಟ್ಟರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲಿ ಸೋಲು ಕಂಡೆವೋ ಅಲ್ಲೇ ಮತ್ತೆ ಗೆಲುವನ್ನು ಹುಡುಕಬೇಕು. ಒಂದು ಸೋಲು ಗುರಿಯ ದಾರಿಯನ್ನು ಬದಲಿಸುವ ಬದಲು ಸಾಧನೆಗೆ ಮೆಟ್ಟಿಲನ್ನಾಗಿ ಬದಲಿಸಬೇಕು. ಆಗ ಜೀವನದಲ್ಲಿ ಯಶಸ್ಸು ದೊರೆಯಲು ಸಾಧ್ಯ.

ಜೀವನದಲ್ಲಿ ಖುಷಿಯಲ್ಲಿರುವವರೂ, ಸಾಧಿಸಿದವರೂ ನೋವು ಅನುಭವಿಸಿಲ್ಲ, ಸೋಲು ಅನುಭವಿಸಿಲ್ಲ ಎಂದಲ್ಲ. ಅವರು ಸೋತಲ್ಲೆ ಗೆಲುವನ್ನು ಹುಡುಕಿದ್ದಾರೆ. ನೋವು ದೊರೆತಲ್ಲೇ ಖುಷಿಯನ್ನು ಹುಡುಕಿದ್ದಾರೆ. ಜೀವನವೆಂದರೆ ಅಷ್ಟೇ ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲೇ ಹುಡುಕುವುದು…

- ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.