ಫಿಕ್ಸೆಡ್‌ ಡೆಪಾಸಿಟ್‌


Team Udayavani, Dec 2, 2019, 5:20 AM IST

Fixed

ಅವಧಿ, ನಿಗದಿತ ಠೇವಣಿ (ಟರ್ಮ್ ಡೆಪಾಸಿಟ್‌)ಯಿಂದ ಕಾಲಕಾಲಕ್ಕೆ ಉದಾಹರಣೆಗೆ-ತಿಂಗಳು, ಮೂರು ತಿಂಗಳು, ವಾರ್ಷಿಕ ಬಡ್ಡಿ ಬರುತ್ತಿದ್ದರೆ ಈ ಠೇವಣಿಯನ್ನು ಫಿಕ್ಸೆಡ್‌ ಡೆಪಾಸಿಟ್‌ ಎಂಬುದಾಗಿ ಕರೆಯುತ್ತಾರೆ. ಬಡ್ಡಿಯ ಹಣದಿಂದಲೇ ಜೀವನ ಸಾಗಿಸುವವರಿಗೆ, ಈ ಠೇವಣಿ ಬಹು ಉಪಯುಕ್ತವಾಗಿದೆ. ಈ ಠೇವಣಿಯನ್ನು ಕನಿಷ್ಠ 15 ದಿವಸಗಳು ಹಾಗೂ ಗರಿಷ್ಠ 10 ವರ್ಷಗಳ ಅವಧಿಗೆ ಮಾಡಬಹುದಾಗಿದೆ. ಈ ಖಾತೆಯನ್ನು ವೈಯಕ್ತಿಕವಾಗಿ, ಜಂಟಿಯಾಗಿ ಕೂಡಾ ಮಾಡಬಹುದು. ಎಲ್ಲ ವರ್ಗದ ಜನರು, ಸಂಸ್ಥೆಗಳು, ಈ ಖಾತೆಯನ್ನು ತೆರೆಯಬಹುದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಎಷ್ಟು ಬೇಕಾದರೂ ಎಫ್.ಡಿ ಖಾತೆಯನ್ನು ಹೊಂದಬಹುದು. ಕಾಲಕಾಲಕ್ಕೆ ಬರುವ ಬಡ್ಡಿಯನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಳ್ಳಬಹುದು ಅಥವಾ ನಗದಾಗಿ ಪಡೆಯಬಹುದು.

ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದದೆ ಕೂಡಾ ಎಫ್.ಡಿ. ಮಾಡಬಹುದು ಹಾಗೂ ಖಾತೆದಾರ ಬೇರೊಂದು ಬ್ಯಾಂಕಿನಲ್ಲಿ ಖಾತೆ ಹೊಂದಿದಲ್ಲಿ ಠೇವಣಿ ಇರಿಸಿದ ಬ್ಯಾಂಕು ಖಾತೆದಾರರು ಬಯಸುವ ಬೇರೆ ಬ್ಯಾಂಕಿನ ಉಳಿತಾಯ ಖಾತೆಗೆ ಆರ್‌.ಟಿ.ಜಿ.ಎಸ್‌.- ನೆಫ್ಟ್ ಮುಖಾಂತರ ಹಣ ಜಮಾ ಮಾಡುತ್ತಾರೆ. ಈ ಸೇವೆ ಶುಲ್ಕರಹಿತವಾಗಿದೆ. ಎಫ್.ಡಿ. ಅವಧಿ ಮುಗಿದು, ಅದೇ ಠೇವಣಿಯನ್ನು ಮುಂದುವರಿಸಲು ಆಟೋ ರಿನೀವಲ್‌ ಕೂಡಾ ಮಾಡುವ ಸೌಲಭ್ಯವಿರುತ್ತದೆ. ಹೀಗೆ ಮಾಡಲು ಠೇವಣಿದಾರ ಬ್ಯಾಂಕಿಗೆ ಬರುವ ಆವಶ್ಯಕತೆ ಇರುವುದಿಲ್ಲ. ಈ ಠೇವಣಿಗೆ ನಾಮನಿರ್ದೇಶನ ಸೌಲಭ್ಯವಿದೆ. ಆದರೆ, ಒಂದು ಠೇವಣಿಗೆ ಒಬ್ಬರನ್ನೇ ನಾಮನಿರ್ದೇಶನ ಮಾಡಬಹುದು.

ಠೇವಣಿಯನ್ನು ವಿಂಗಡಿಸಿ ಇಟ್ಟಲ್ಲಿ, ಜೀವನದಲ್ಲಿ ಏನಾದರೂ ತೊಂದರೆಯಾದಾಗ, ಆಗತ್ಯ ಬಿದ್ದಲ್ಲಿ ಯಾವುದಾದರೊಂದು ಠೇವಣಿಯನ್ನು ಅವಧಿಗೆ ಮುನ್ನ ಪಡೆದು, ಉಳಿದ ಠೇವಣಿ ಹಾಗೆಯೇ ಮುಂದುವರಿಸಬಹುದು. ಠೇವಣಿಯ ಮೇಲೆ ಶೇ.90ರಷ್ಟು ಸಾಲ ಪಡೆಯಬಹುದಾದರೂ, ನೀವು ಪಡೆಯುವ ಬಡ್ಡಿಗಿಂತ ಠೇವಣಿ ಸಾಲದ ಬಡ್ಡಿ ಹೆಚ್ಚಿರುವುದರಿಂದ, ವಿಂಗಡಿಸಿಟ್ಟ ಯಾವುದಾದರೊಂದು ಠೇವಣಿಯನ್ನು ಅವಧಿಗೆ ಮುನ್ನ ಪಡೆಯುವುದೇ ಲೇಸು. ಉಳಿತಾಯ ಖಾತೆಯಲ್ಲಿ ಹಣ ಜಮಾ ಆಗುತ್ತಿದ್ದು, ಕಾಲಕಾಲಕ್ಕೆ ಜಮಾ ಆಗುವ ಒಂದು ಭಾಗವನ್ನು ಎಫ್.ಡಿ.ಗೆ ವರ್ಗಾಯಿಸಲು ಬ್ಯಾಂಕಿಗೆ ಮುಂದಾಗಿ ಸ್ಟಾಂಡಿಂಗ್‌ ಇನóಕ್ಷನ್‌ ಕೊಡಬಹುದು. ಹೀಗೆ ಮಾಡಿದಲ್ಲಿ ನಿಮ್ಮ ಹಣಕ್ಕೆ ಹೆಚ್ಚಿನ ಬಡ್ಡಿ ಬಂದಂತಾಗುತ್ತದೆ. ಜತೆಗೆ ಬೇಡವಾದ ಖರ್ಚಿಗೆ ಕಡಿವಾಣ ಹಾಕಿದಂತಾಗುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

ವಿಶೇಷ ಸೂಚನೆ
ಬಡ್ಡಿಯ ಹಣದಿಂದಲೇ ಜೀವಿಸುವವರು ಎಫ್.ಡಿ. ಮೇಲೆ ಪ್ರತೀ ತಿಂಗಳು ಬಡ್ಡಿ ಬಯಸುವುದು ಸಹಜ. ಆದರೆ, ಈ ಮಾರ್ಗದಲ್ಲಿ ನಿಗದಿತ ಬಡ್ಡಿಗಿಂತ ಬ್ಯಾಂಕ್‌ಗಳಲ್ಲಿ ಸ್ವಲ್ಪ ಕಡಿಮೆ ಬಡ್ಡಿ ಕೊಡುತ್ತಾರೆ.ಇದನ್ನು ಡಿಸ್ಕೌಂಟೆಡ್‌ ರೇಟ್‌ ಆಫ್ ಇಂಟರೆಸ್ಟ್‌ (Discounted rate of interest) ಎಂಬುದಾಗಿ ಕರೆಯುತ್ತಾರೆ. ಇದರ ಬದಲು, ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯುವುದೇ ಲೇಸು. ಹೀಗೆ ಮೂರು ತಿಂಗಳ ನಂತರ ಪಡೆಯುವ ಬಡ್ಡಿಯನ್ನು ಉಳಿತಾಯ ಖಾತೆಯಲ್ಲಿ ಜಮಾ ಇರಿಸಿ, ಮುಂದೆ ಅದೇ ಮೊತ್ತದಿಂದ ಪ್ರತೀ ತಿಂಗಳು, ಮುಂದಿನ ಮೂರು ತಿಂಗಳಲ್ಲಿ ಬಡ್ಡಿ ಪಡೆಯಬಹುದು. ಅಷ್ಟರಲ್ಲಿ ಮತ್ತೆ ಮೂರು ತಿಂಗಳ ಬಡ್ಡಿ ಜಮಾ ಆಗುತ್ತದೆ. ಮೊದಲ ಮೂರು ತಿಂಗಳು ಮಾತ್ರ ಬಡ್ಡಿ ಪಡೆಯಲು ಕಾಯಬೇಕಾದರೂ, ಮುಂದಿನ ಅವಧಿಯಲ್ಲಿ ಬಡ್ಡಿಯಲ್ಲಿ ಯಾವ ಕಡಿತ ಇಲ್ಲದೆಯೇ ಪಡೆಯಬಹುದು ಹಾಗೂ ಇದರಿಂದ ಖಾತೆದಾರರ ಉದ್ದೇಶ ಸಫ‌ಲವಾಗುತ್ತದೆ. ಜತೆಗೆ ಗರಿಷ್ಠ ಹಾಗೂ ಸಂಪೂರ್ಣ ಬಡ್ಡಿ ಪಡೆದಂತಾಗುತ್ತದೆ.

-   ಯು. ಪುರಾಣಿಕ್‌

ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.