ಮನಸ್ಸನ್ನೂ ಬುದ್ದಿಯ ಹತೋಟಿಗೆ ಕೊಡಿ


Team Udayavani, Aug 12, 2019, 6:32 AM IST

mind

ಕಾರಣವಿಲ್ಲದೆ ಕೆಲವೊಮ್ಮೆ ಖುಷಿಗಳು ನಮ್ಮ ಬೊಗಸೆಯೊಳಕ್ಕೆ ಬಂದು ಬೀಳುತ್ತವೆ. ಇನ್ನು ನಿರೀಕ್ಷಿಸಿದ ನೋವು ಮನದಲ್ಲಿ ಮಡುಗಟ್ಟಿ ಸಂತೋಷವನ್ನು ಆಸ್ವಾದಿಸುವುದಕ್ಕೂ ಬಿಡುವುದಿಲ್ಲ. ನಮ್ಮೊಳಗಿನ ಪ್ರತಿ ಭಾವಗಳಿಗೂ ಜೀವ ನೀಡುವವರು ನಾವೇ. ನಮ್ಮ ಮೆದುಳನ್ನು ನಿಯಂತ್ರಿಸಿದ ಮೇಲೆ ನಮ್ಮ ಮನಸ್ಸಿನ ಭಾವನೆಗಳು ಉಸಿರಾಡುತ್ತವೆ. ಇದು ಸಂದರ್ಭ ಸೃಷ್ಟಿಸುವಲ್ಲಿ ಕೆಲಸ ಮಾಡುತ್ತವೆ. ಆದ್ದರಿಂದ ಮನಸ್ಸಿನ ಹತೋಟಿಯೇ ನಾವು ಎಷ್ಟರ ಮಟ್ಟಿಗೆ ಔನ್ನತ್ಯಕ್ಕೇರುತ್ತೇವೆ ಅಥವಾ ಪಾತಾಳಕ್ಕಿಳಿಯುತ್ತೇವೆಯೋ ಎಂಬುದನ್ನು ನಿರ್ಧರಿಸುವ ಬಹುಮುಖ್ಯ ಅಂಶ.

ಹಾಗಾದರೆ ಮನಸ್ಸಿನ ನಿಯಂತ್ರಣ ಹೇಗೆ?. ಇದು ಎಲ್ಲರಲ್ಲಿಯೂ ಅನೇಕ ಸಂದರ್ಭಗಳಲ್ಲಿ ಹುಟ್ಟುವ ಪ್ರಶ್ನೆ. ಕೆಲವೊಮ್ಮೆ ಪರಿಸ್ಥಿತಿಗಳ ಆಳಕ್ಕೆ ಕಟ್ಟುಬಿದ್ದು, ಒತ್ತಡಗಳ ಕಾರಣದಿಂದ ನಾವು ನಮ್ಮ ಬುದ್ಧಿಗೆ ಕೆಲಸ ಕೊಡುವುದನ್ನು ನಿಲ್ಲಿಸಿ ಬಿಡುತ್ತೇವೆ. ಮನಸ್ಸಿನ ಮಾತಿಗೆ ಕಿವಿಯಾಗಿ ಪರಿಸ್ಥಿತಿಯ ಅಡಿಯಾಳಾಗುವುದೂ ಸರ್ವೇ ಸಾಮಾನ್ಯ. ಹೀಗಾದಾಗೆಲ್ಲಾ ನಮ್ಮ ಮೇಲಿನ ನಿಯಂತ್ರಣದ ಹಿಡಿತದಿಂದ ಹೊರಕ್ಕೆ ಹೋಗಿರುತ್ತೇವೆ. ಎಮೋಷನ್‌, ಸೆಂಟಿಮೆಂಟ್ ಇತ್ಯಾದಿಗಳ ಸುಳಿಯಲ್ಲಿ ಸಿಲುಕಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವುದೂ ನಡೆದು ಹೋಗುತ್ತದೆ. ಹೀಗಾದಾಗ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದಾದರೂ ಹೇಗೆ ಎನ್ನುವ ಗೊಂದಲದಲ್ಲಿಯೇ ಬದುಕು ಸಾಗಿಸುವ ಬದಲು, ಬುದ್ಧಿಯನ್ನು ಒರೆಗೆ ಹಚ್ಚುವ ಕೆಲಸ ಮಾಡಿದೆವು ಎಂದಾದಲ್ಲಿ ಎಲ್ಲವನ್ನೂ ನಮ್ಮ ಹಿಡಿತದಲ್ಲಿಯೇ ಇರಿಸಿಕೊಳ್ಳುವಲ್ಲಿ ನಾವು ಗೆದ್ದು ಬಿಡುತ್ತೇವೆ. ಯಾವುದು ಸರಿ. ಹೇಗಿರಬಾರದು, ಯಾರನ್ನು ಹೇಗೆ ಸತ್ಕರಿಸಬೇಕು, ಎಂಥವರನ್ನು ತಿರಸ್ಕರಿಸಬೇಕು ಎನ್ನುವುದರ ಜತೆಗೆ ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಬೇಕು ಬೇಡಗಳನ್ನು ನಿರ್ಧರಿಸುವ ಗುಣವನ್ನು ನಾವು ಕಲಿತು ಬಿಟ್ಟೆವು ಎಂದಾದಲ್ಲಿ ಮನಸ್ಸು ಮುಕ್ಕಾಲು ಪಾಲು ನಮ್ಮ ನಿಯಂತ್ರಣಕ್ಕೆ ಬಂದಿದೆ ಎಂದೇ ಅರ್ಥ. ಹೌದು ಕೆಲವೊಮ್ಮೆ ಅಗತ್ಯಕ್ಕೆ ಮೀರಿದ ಆಸೆಗಳು, ಅತಿಯಾದ ನಂಬಿಕೆಗಳೂ ನಮ್ಮನ್ನು ಅವಾಂತರಕ್ಕೆ ತಳ್ಳಿ ಬಿಡುವುದುಂಟು. ಅನಂತರದ ಬದುಕಿನಲ್ಲಿ ಆತ್ಮವಿಶ್ವಾಸ, ಜೀವನ ಪ್ರೀತಿಯನ್ನೇ ಬಲಿಕೊಟ್ಟು ಬದುಕಬೇಕಾಗಿ ಬರುತ್ತದೆ. ಇದಕ್ಕೆ ಇನ್ನೊಬ್ಬರನ್ನು ದೂರಿ ಪ್ರಯೋಜನವಿಲ್ಲ. ಬದಲಾಗಿ ನಮ್ಮ ಯೋಚನೆ, ನಂಬಿಕೆಗಳನ್ನು ನಾವು ಸರಿಯಾದ ರೀತಿಯಲ್ಲಿ ನಾವು ಉಪಯೋಗಿಸಿಲ್ಲ ಎಂಬುದೇ ನಮ್ಮ ದುರಂತಕ್ಕೆ ಕಾರಣ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.