- Monday 09 Dec 2019
ಕಷ್ಟವೆಂಬ ಮಳೆಗೆ ಆತ್ಮಬಲವೇ ಕೊಡೆ…
Team Udayavani, Jun 17, 2019, 6:00 AM IST
ಬಿರುಸಿನ ಗಾಳಿ-ಮಳೆಗೆ ಸಿಕ್ಕ ಪಾದಚಾರಿಯಂತೆ ಬದುಕು. ಕೊಡೆ ಹಿಡಿದು ಸಾಗುವಾಗ ಒಮ್ಮೆ ಹಿಂಬದಿಯಿಂದ, ಮತ್ತೂಮ್ಮೆ ಎಡದಿಂದ, ಬಲದಿಂದ, ಮುಂಬದಿಯಿಂದ-ಹೀಗೆ ಕ್ಷಣಕ್ಕೊಮ್ಮೆ ದಿಕ್ಕು ಬದಲಿಸಿ ಮಳೆ ದಾಳಿ ಇಟ್ಟಿತೆಂದರೆ ಗಮ್ಯ ತಲುಪುವ ವೇಳೆಗೆ ನಾವು ಹೈರಾಣಾಗಿರುತ್ತೇವೆ. ಬದುಕಿನಲ್ಲಿ ಕಷ್ಟಗಳೂ ಹೀಗೆಯೇ. ಒಂದರಿಂದ ಸಾವರಿಸಿಕೊಳ್ಳುವಷ್ಟರಲ್ಲೇ ಇನ್ನೊಂದು ಸಿದ್ಧವಾಗಿರುತ್ತದೆ.
ಹಾಗೆಂದು ಕಷ್ಟವೆಂಬ ಮಳೆಯಿಂದ ದೂರ ಉಳಿಯುವುದೂ ಕಷ್ಟಸಾಧ್ಯ. ಮಳೆಯ ಬಿರುಸು ಕಡಿಮೆಯಾಗುವವರೆಗೆ ಅಲ್ಲೆ ಎಲ್ಲೊ ಒಂದು ಕಡೆ ಆಶ್ರಯ ಪಡೆಯಬಹುದಾದರೂ ಅಲ್ಲಿ ನಮ್ಮ ಸಮಯ ವ್ಯರ್ಥವಾಗುತ್ತದೆ. ಬದುಕಿನಲ್ಲಿ ಸಮಯ ಅತ್ಯಮೂಲ್ಯವಾದ್ದರಿಂದ ಒಂದನ್ನು ಪಡೆಯಬೇಕಾದರೆ ಒಂದನ್ನು ಕಳೆದುಕೊಳ್ಳಬೇಕು ಎಂಬ ಮಾತು ಇಲ್ಲಿ ಜ್ಞಾಪಕಕ್ಕೆ ಬರುತ್ತದೆ. ವ್ಯತಿರಿಕ್ತ ಸನ್ನಿವೇಶದಲ್ಲಿ ಒಂದೊಮ್ಮೆ ಆಶ್ರಯ ಸಿಗದೆಯೂ ಇರಬಹುದು. ಪ್ರವಾಹವೇ ಎದುರಾಗಬಹುದು. ಆಗ ನಮ್ಮ ಜತೆಗಿರುವುದು ಆತ್ಮಬಲವಷ್ಟೆ.
ಕಷ್ಟಗಳಿಗೆ ಕಲ್ಲಾಗುವುದೆಂದರೆ ದೃಢವಾಗಿರುವುದು ಎಂದರ್ಥ. ಕಲ್ಲಿಗಿರುವ ಇನ್ನೊಂದು ಗುಣ ತಾಟಸ್ಥ್ಯ. ಬದುಕು ಎಂದಿಗೂ ಚಲನಶೀಲ.
ತಟಸ್ಥವಾಗಿದ್ದರೆ ಬದುಕಿನ ಓಟದಲ್ಲಿ ನಾವು ಹಿಂದೆ ಬೀಳುತ್ತೇವೆ. ಕಷ್ಟಗಳು ಎದುರಾದಾಗ ದೃಢವಾಗಿರಬೇಕು. ಇದ್ದು ಜೈಸಬೇಕು. ಮಳೆಗೆ ಕರಗದೆ, ಕಷ್ಟಕ್ಕೆ ಕೊರಗದೆ, ಕಲ್ಲಿನ ದೃಢ ಗುಣ, ನೀರಿನ ಚಲನಶೀಲ ಗುಣವನ್ನು ಮೈಗೂಡಿಸಿಕೊಂಡು ಬದುಕನ್ನು ಕಟ್ಟಬೇಕು.
ಬದುಕಿನಲ್ಲಿ ಧನಾತ್ಮಕತೆ ಬಹಳ ಮುಖ್ಯ. ಸಾಧನೆಯ ಬೆನ್ನೇರಿ ಹೊರಟವರು ವಾಮಮಾರ್ಗ ತುಳಿಯುವುದು ಸಲ್ಲ. “ಶಾರ್ಟ್ಕಟ್’ ಆಧುನಿಕ ಜಗತ್ತಿನ ಶೈಲಿಯಾದರೂ, ಶೀಘ್ರ ಕಾರ್ಯಸಿದ್ಧಿ ಆಗುವುದಾದರೂ ಎಲ್ಲ ವಿಚಾರಗಳಿಗೂ ಅದನ್ನು ಅನ್ವಯಿಸಬಾರದು. ಕಲಿಕೆ, ಗಳಿಕೆಯಲ್ಲಿ ಶಾರ್ಟ್ಕಟ್ ಅಪಾಯಕಾರಿ. ಮುಖ್ಯವೆಂದರೆ ಬದುಕಿನಲ್ಲಿ ಈ ಎರಡೂ ಅಂಶಗಳು ಬಹುಮುಖ್ಯವಾದುವು.
ಜೀವನ ಎಂಬುದು ನಿರಂತರ ಪ್ರಕ್ರಿಯೆ. ಅದೊಂದು ಕಲಿಕೆ ಎಂಬುದು ಜ್ಞಾನಿಗಳ ಅಭಿಪ್ರಾಯ. ಈ ಬದುಕೆಂಬ ಕಲಿಕೆಯ ಒಳಗೂ ಕಲಿಯುವಿಕೆಗಳಿವೆ. ಇಲ್ಲಿ ಶಾರ್ಟ್ಕಟ್ ಸಲ್ಲದು. ಉದಾಹರಣೆಗೆ ವಿದ್ಯಾಭ್ಯಾಸ ಎಂದುಕೊಂಡರೆ, ವಿದ್ಯೆಯನ್ನು ಪೂರ್ಣ ರೀತಿಯಲ್ಲಿ ಕಲಿಯುವುದು ಉತ್ತಮ. ಪರಿಣತಿ ಹೆಚ್ಚು. ಕೌಶಲವೂ ಒದಗಿ ಬರುತ್ತದೆ. ಹಾಗೆಯೇ ಗಳಿಕೆ ಕೂಡ. ಅಕ್ರಮ ಸಂಪಾದನೆ, ಮೋಸದ ದುಡ್ಡು ನೈಜ ಸಂಪಾದನೆಯಾಗದು.
ಧನಾತ್ಮಕತೆಯಿಂದ ದೇವರ ಪರೀಕ್ಷೆ ಗೆಲ್ಲೋಣ
ಹಾಗೆಯೇ ನೇರ ದಾರಿಯಲ್ಲಿ ನಡೆಯುವುದಕ್ಕೆ ಸಾಕಷ್ಟು ತಾಳ್ಮೆ ಇರಬೇಕು. “ತಾಳುವಿಕೆಗಿಂತ ಅನ್ಯ ತಪವಿಲ್ಲ’ ಎಂದವರು ಹಿರಿಯರು. ತಾಳ್ಮೆ ತಪಸ್ಸಿದ್ದಂತೆ. ತಪಸ್ವಿಗೆ ದೇವರ ಸಾಕ್ಷಾತ್ಕಾರವಾಗುವಂತೆ ಸಾಧಕನಿಗೆ ಯಶಸ್ಸು ನಿಶ್ಚಿತ. ನೇರ ದಾರಿಯಲ್ಲಿ ನಡೆಯುವಾಗ ಹಲವು ಪರೀಕ್ಷೆಗಳು ಎದುರಾಗುತ್ತವೆ.
ಸಾಧಕನನ್ನು ಪರೀಕ್ಷಿಸುವುದು ದೇವರ ರೂಢಿಯಷ್ಟೆ? ನೇರವಾದ ಮರಗಳು ಮೊದಲು ಕತ್ತರಿಸಲ್ಪಡುತ್ತವೆ. ನೇರ ನಡೆ-ನುಡಿ, ವ್ಯಕ್ತಿತ್ವದ ಜನರು ಮೊದಲು ಹಣಿಯಲ್ಪಡುತ್ತಾರೆ ಎಂಬುದು ಕೌಟಿಲ್ಯನ ಹಿತವಚನ. ಹಾಗೆಂದು ಅಡ್ಡದಾರಿ ಹಿಡಿದರೆ ನಮ್ಮತನ ಬಿಟ್ಟಂತೆ. ಹಾಗಾಗಿಯೇ ಬದುಕು ಕತ್ತಿಯ ಅಲಗಿನ ಮೇಲಣ ನಡಿಗೆಯಂತೆ ಕೆಲವೊಮ್ಮೆ ಭಾಸವಾಗುವುದೂ ಇದೆ. ಆದರೂ ಕಷ್ಟ-ಸುಖಗಳ ಮಿಶ್ರಣವಾದ ಬದುಕನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತ ದೇವರ ಪರೀಕ್ಷೆ ಗೆಲ್ಲುವುದು ನಮ್ಮ ಮುಂದಿರುವ ಮಾರ್ಗ.
- ಕುದ್ಯಾಡಿ ಸಂದೇಶ್ ಸಾಲ್ಯಾನ್
ಈ ವಿಭಾಗದಿಂದ ಇನ್ನಷ್ಟು
-
ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ...
-
ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗುತ್ತಿದೆ. ಎಲ್ಲವೂ ಬೆರಳ ತುದಿಯಲ್ಲೇ ದೊರೆಯುತ್ತದೆ ಎನ್ನುವುದೇನೋ...
-
ನೀವು ದಿನಕ್ಕೊಮ್ಮೆಯಾದರೂ ನಿಮ್ಮೊಳಗೆ ನೀವೇ ಮಾತನಾಡಿಕೊಳ್ಳಿ, ಆಗ ನೀವು ಒಬ್ಬ ಅತ್ಯದ್ಭುತ ವ್ಯಕ್ತಿಯನ್ನೇ ಭೇಟಿಯಾಗುತ್ತೀರಿ ಎಂದು ಸ್ವಾಮಿ ವಿವೇಕಾನಂದರು...
-
ನಿನ್ನೆಯ ದಿನ ಒಂದೊಳ್ಳೆಯ ನೆನಪಾಗಿರಬೇಕು..ನಾಳೆ ಎಂಬುದು ಇಂದಿಗೆ ಸ್ಫೂರ್ತಿಯಾಗಿರಬೇಕು. ಆದರೆ ಅದೇ ನಾಳೆಯ ಚಿಂತೆಯಲ್ಲಿ ಇಂದಿನ ಖುಷಿ ಕಳೆದುಕೊಳ್ಳುವಂತಿರಬಾರದು....
-
ಜಪಾನಿನಲ್ಲಿ ಒಮ್ಮೆ ಏಡಿಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್ಲ ದೇಶಗಳ ಏಡಿಗಳನ್ನು ಒಂದು ಡಬ್ಬದಲ್ಲಿ ಹಾಕಲಾಯಿತು. ಅದರಲ್ಲಿ ಯಾವ ಏಡಿ ಬಹುಬೇಗನೆ ಮೇಲೆ ಬರುತ್ತದೆ...
ಹೊಸ ಸೇರ್ಪಡೆ
-
ವಿಶ್ವ ಉತ್ತೇಜಕ ಔಷಧಿ ನಿಗ್ರಹ ಸಂಸ್ಥೆ (ವಾಡಾ) ಇಂದು ರಷ್ಯಾ ದೇಶಕ್ಕೆ ಒಲಂಪಿಕ್ಸ್, ವಿಶ್ವಕಪ್ ಫುಟ್ಬಾಲ್ ಸೇರಿದಂತೆ ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೆ...
-
ವಿಶ್ವಸಂಸ್ಥೆ: ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ (HDI)ದಲ್ಲಿ ಭಾರತ 129ನೇ ಸ್ಥಾನ ಪಡೆದಿ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ)...
-
ಬೆಂಗಳೂರು: ರಾಜ್ಯದ ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಬಿಎಸ್ ಯಡಿಯೂರಪ್ಪ ನೇತೃತ್ವದ...
-
ಮುಂಬಯಿ: ಭಾರತ ನಿಜವಾಗಿಯೂ ವೈವಿಧ್ಯಮಯ ದೇಶ. ಇಲ್ಲಿ ದಿನಂಪ್ರತಿ ಪ್ರಪಂಚದ ಯಾವುದೇ ಕಡೆಯಲ್ಲಿ ನಡೆಯದ ಹಲವಾರು ವಿಸ್ಮಯಗಳು ವಿಶೇಷ ಘಟನೆಗಳು, ವಿಚಿತ್ರ ಸಂಗತಿಗಳು...
-
ಚಿಕ್ಕಮಗಳೂರು: ಹುಟ್ಟುವ ಮಕ್ಕಳು ಆರೋಗ್ಯವಂತ ಹಾಗೂ ಸದೃಢರಾಗಿ ಹುಟ್ಟಬೇಕೆಂಬ ದೃಷ್ಟಿಯಿಂದ ಸರ್ಕಾರ ಮಾತೃವಂದನ, ಮಾತೃಶ್ರೀ, ಭಾಗ್ಯಲಕ್ಷ್ಮೀಯಂತಹ ಮಹತ್ವಪೂರ್ಣ...