ಅಂದದ ಮನೆಗೆ ಚಂದದ ನೇಮ್‌ ಪ್ಲೇಟ್


Team Udayavani, May 4, 2019, 5:50 AM IST

24

ಹಿಂದೆ ಮನೆ ಎಂಬುದು ಮನೆ ಮಂದಿಯ ಹೆಸರಿನಿಂದಲೇ ಕರೆಯಲ್ಪಡುತ್ತಿತ್ತು. ಅನಂತರ ಮನೆಗೊಂದು ಹೆಸರಿಡುವ ಪದ್ಧತಿ ಆರಂಭವಾಯಿತು. ಇದನ್ನು ಸಾಮಾನ್ಯವಾಗಿ ಮನೆಯ ಹೊರಾಂಗಣದ ಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಯಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮನೆಯ ಸೌಂದರ್ಯದಷ್ಟೇ ಪ್ರಾಮುಖ್ಯವನ್ನು ಹೆಸರುಗಳೂ ಪಡೆದುಕೊಂಡಿವೆ. ಹೀಗಾಗಿ ಸುಂದರವಾದ ನೇಮ್‌ಪ್ಲೇಟ್‌ನಲ್ಲಿ ಮನೆಯ ಹೆಸರು ಬರೆಯುವುದು ಹೊಸ ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಇದರಿಂದ ಮನೆ ಕಟ್ಟಿದ ಮೇಲೆ ನೇಮ್‌ ಪ್ಲೇಟ್ ಮಾಡಿಸಲು ಆರ್ಡ್‌ರ್‌ ಕೊಡುವವರ ಸಂಖ್ಯೆ ಹೆಚ್ಚಾಗಿದೆ.

ದಶಕಗಳ ಹಿಂದೆ ಎಲ್ಲೋ ಒಂದೋ ಎರಡೋ ಮನೆಯಲ್ಲಿ ನೇಮ್‌ ಪ್ಲೇಟ್‌ಗಳು ಇರುತ್ತಿದ್ದರೆ ಈಗ ಇದು ಮನೆ ಗುರುತಿಸುವ, ಮನೆಯ ಅಂದವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಮನೆಯ ಹೆಸರಿನಷ್ಟೇ ನೇಮ್‌ ಪ್ಲೇಟ್ ಕೂಡ ಮನೆಯ ಅಲಂಕಾರವನ್ನು ಹೆಚ್ಚಿಸುವಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಇದಕ್ಕೆ ಆಧುನಿಕ ಟಚ್ ಸಿಕ್ಕಿದ್ದು, ಒಂದಕ್ಕಿಂತ ಇನ್ನೊಂದು ವಿಭಿನ್ನ ಶೈಲಿಯಲ್ಲಿ ಕಾಣ ಸಿಗುತ್ತಿವೆ.

ಫ‌ಲಕ ಮಾಡುವ ಸಾಮಗ್ರಿಗಳು
ಮರ, ಗಾಜು, ಉಕ್ಕು, ಟೇರಿಕೋಟ್, ಹಿತ್ತಾಳೆ ಸೆಣಬು, ಬಟ್ಟೆ, ಹುಲ್ಲು, ತೆಂಗಿನಕಾಯಿ ಸಿಪ್ಪೆ ಹೀಗೆ ವಿವಿಧ ರೀತಿಯ ಮನೆಯ ಹೆಸರು ಬರೆಯುವ ಫ‌ಲಕಗಳನ್ನು ತಯಾರಿಸಲಾಗುತ್ತಿದ್ದು, ಅಪಾರ್ಟ್‌ಮೆಂಟ್ ಮತ್ತು ಮನೆಗಳಲ್ಲಿ ಆದಷ್ಟು ಪರಿಸರ ಸ್ನೇಹಿ ಫ‌ಲಕಗಳನ್ನು ಬಳಸುವುದು ಉತ್ತಮ. ಇದನ್ನು ಫೈಬರ್‌ನಿಂದ ಕೂಡ ತಯಾರಿಸಲಾಗುತ್ತಿದ್ದು, ಸಿಂಪಲ್ ಮತ್ತು ಗ್ರ್ಯಾಂಡ್‌ ಲುಕ್‌ಗಳನ್ನು ಚೀಪ್‌ ಆ್ಯಂಡ್‌ ಬೆಸ್ಟ್‌ನಲ್ಲಿ ತಯಾರಿಸಬಹುದಾಗಿದೆ. ಅದಕ್ಕಾಗಿಯೇ ಮಾರುಕಟ್ಟೆಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಕೆಲವೊಂದು ಮನೆಗಳಲ್ಲಿ ಗಾಜು ಅಥವಾ ಮರದಿಂದ ಮಾಡಿದ ಫ‌ಲಕವನ್ನು ಬಳಸುತ್ತಿದ್ದು ಇದರಲ್ಲಿ ಹಲವಾರು ರೀತಿಯ ಡಿಸೈನ್‌ಗಳು ಕಾಣಸಿಗುತ್ತಿವೆ.

ಇದಕ್ಕೆ ಪೂರಕವೆಂಬಂತೆ ವಿನ್ಯಾಸಕಾರರು ಇದನ್ನು ಸೃಜನಾತ್ಮಕವಾಗಿ ಮಾಡುತ್ತಿದ್ದು ಒಬ್ಬರ ಮನೆಯಲ್ಲಿ ನೋಡಿ ಇನ್ನೊಬ್ಬರು ಅದಕ್ಕಿಂತ ವಿಭಿನ್ನವಾಗಿ ಮಾಡಲು ಮುಂದಾಗುತ್ತಿದ್ದಾರೆ. ಫ‌ಲಕಗಳನ್ನು ನಮಗೆ ಬೇಕಾದಂತೆ ಮಾಡಿಸಿಕೊಳ್ಳಬಹುದು ಅಥವಾ ಈಗ ನಮಗೆ ಬೇಕಾಗಿರುವಂತಹ ರೆಡಿಮೆಡ್‌ ಪ್ಲೇಟ್ಗಳಿದ್ದು ಅದನ್ನು ಬೇಕಾದರೂ ಖರೀದಿಸಬಹುದು.

ವಾಸ್ತು ಪ್ರಕಾರದ ಫ‌ಲಕ
ವಾಸ್ತು ಪ್ರಕಾರ ಮನೆಯ ಮುಖ್ಯ ಕುಟುಂಬದ ಪ್ರವೇಶ ಬಿಂದುವಾಗಿದೆ. ಅದಲ್ಲದೆ ಇದು ಮನೆಯ ಅವಕಾಶಗಳನ್ನು ಸೃಷ್ಟಿಸುವ ಕೇಂದ್ರಬಿಂದು ಎಂದು ಕರೆಯಲಾಗುತ್ತದೆ. ಫ‌ಲಕಗಳನ್ನು ತಯಾರಿಸುವಾಗ ಅದಕ್ಕೆ ಧನಾತ್ಮಕತೆ ಬಿಂಬಿಸುವಂತಹ ವಸ್ತುಗಳನ್ನೇ ಆಯ್ದುಕೊಳ್ಳಿ. ಬಾಗಿಲು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ ಲೋಹದ ಫ್ಲೇಟ್ಗಳನ್ನು ಆಯ್ದುಕೊಳ್ಳಲು ಸೂಚಿಸಲಾಗುತ್ತದೆ. ಬಾಗಿಲು ದಕ್ಷಿಣ ಅಥವಾ ಪೂರ್ವದಿಕ್ಕಿನಲ್ಲಿದ್ದರೆ ಮರದ ಫ‌ಲಕವನ್ನು ಬಳಸುವುದು.

ಮನೆಗಳಲ್ಲಿ ಗಣೇಶನ ಚಿತ್ರಗಳು ಅಥವಾ ಪ್ರತಿಮೆಗಳನ್ನು ಅದಲ್ಲದೆ ಓಂ, ಸ್ವಸ್ತಿಕ ಹಾಗೂ ಶ್ಲೋಕಗಳಿಂದ ಮನೆಯ ಪ್ರವೇಶದ್ವಾರವನ್ನು ಅಲಂಕರಿಸುವುದು ಕೂಡ ಬಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತವೆ.

ಆಧುನಿಕ ಮನೆಗಳಿಗೆ ಮಾಲೀಕರ ವೈಯಕ್ತಿಕ ಹೆಸರನ್ನು ಒಳಗೊಂಡಿರುವ ಪ್ಲೇಟ್ಗಳಿಗೆ ಆದ್ಯತೆ ನೀಡುತ್ತಿದ್ದು, ಇದರ ಪರಿಣಾಮವಾಗಿ ಪ್ಲೇಟ್ ವಿನ್ಯಾಸಗಳಲ್ಲಿ ಹೆಸರು ವ್ಯಕ್ತಿಯ ವೃತ್ತಿಯನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕವಾಗಿ ಹೆಸರಿನ ಪ್ಲೇಟ್ಗಳಲ್ಲಿ ಒಬ್ಬರ ಉಪನಾಮವನ್ನು ಬರೆಯಲು ಈ ಪ್ರವೃತ್ತಿ ಹುಟ್ಟಿಕೊಂಡಿದ್ದು ಅನಂತರ ಜನರು ತಮ್ಮ ಸಂಪೂರ್ಣ ಹೆಸರಿನ ಜತೆಗೆ ಕುಟುಂಬದವರ ಹೆಸರನ್ನು ಬರೆಯಲು ಪ್ರಾರಂಭಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳ ಹೆಸರು ಮತ್ತು ಛಾಯಾಚಿತ್ರಗಳನ್ನು ಹಲಗೆಗಳಲ್ಲಿ ಸೇರಿಸುತ್ತಿದ್ದಾರೆ. ಸಾಲು ಮನೆಗಳು ಅಪಾರ್ಟ್‌ಮೆಂಟ್ ವಿಲ್ಲಾಗಳು ಇರುವ ಕಡೆಗಳಲ್ಲಿ ಇದು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದು , ಪ್ರಾದೇಶಿಕ ಭಾಷಾ ಫ‌ಲಕಗಳು ಕೂಡ ಇದರ ಜತೆಯಲ್ಲಿ ಜನಪ್ರಿಯತೆ ಹೊಂದುತ್ತಿವೆ.

ಚಿನ್ನ ಬೆಳ್ಳಿಯ ನಾಮಫ‌ಲಕ
ಗಾಜು, ಮರಗಳಿಂದ ಫ‌ಲಕಗಳಿರುವುದು ಸಾಮಾನ್ಯ ಆದರೆ ಕೆಲವೊಂದು ಮನೆಗಳಲ್ಲಿ ಈ ಫ‌ಲಕಗಳು ಚಿನ್ನ ಬೆಳ್ಳಿಗಳಿಂದ ಮಾಡಲಾಗುತ್ತಿದ್ದು ಅದರ ಹಿಂದೆ ಚಿಕ್ಕ ಚಿಕ್ಕ ಬಲ್ಬ್ಗಳನ್ನು ಇರಿಸಿ ರಾತ್ರಿಯಲ್ಲಿಯೂ ಅದು ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ.

ನಾಮಫ‌ಲಕಗಳನ್ನು ಮಾಡಿಸುವಾಗ ಆದಷ್ಟು ದೊಡ್ಡದಾಗಿ ಮಾಡಿಸಿ, ಮತ್ತು ಅದಕ್ಕೆ ನೀಡುವ ಬಣ್ಣ ಹಾಗೂ ನಿಮ್ಮ ಮುಖ್ಯ ದ್ವಾರಕ್ಕೆ ನೀಡಲಾದ ಬಣ್ಣ ಸರಿಹೊಂದುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇದನ್ನು ಸರಳವಾಗಿ ತಯಾರಿಸಿಕೊಳ್ಳುವುದು ಉತ್ತಮ ಏಕೆಂದರೆ ಗ್ರ್ಯಾಂಡ್‌ ಲುಕ್‌ಗಳು ಮನೆಗೆ ಕೆಲವೊಮ್ಮೆ ಸರಿಹೊಂದುವುದಿಲ್ಲ. ನೇಮ್‌ ಪ್ಲೇಟ್ಗಳು ಆದಷ್ಟು ನೀರನ್ನು ಬಳಸಿ ಸ್ವಚ್ಛವಾಗಿರಿಸಿಕೊಳ್ಳಬಲ್ಲ ಫ‌ಲಕಗಳನ್ನೇ ಆಯ್ದುಕೊಳ್ಳಿ, ಏಕೆಂದರೆ ಇವುಗಳನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬಹುದು.

ಮನೆಗೊಂದು ಹೆಸರು ಇಡುವುದು ಎಷ್ಟು ಕಷ್ಟವೋ ಸುಂದರವಾದ ಕನಸಿನ ಮನೆಯ ನೇಮ್‌ ಪ್ಲೇಟ್ ಆಯ್ಕೆ ಮಾಡಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ವಿಚಾರ. ಇತ್ತೀಚಿನ ದಿನಗಳಲ್ಲಿ ನೇಮ್‌ ಪ್ಲೇಟ್ ಹೆಚ್ಚು ಪ್ರಾಮುಖ್ಯ ಪಡೆಯುತ್ತಿರುವುದರಿಂದಾಗಿ ವೈವಿಧ್ಯಮಯವಾದ, ಚಿತ್ತಾಕರ್ಷಕವಾದ ನೇಮ್‌ ಪ್ಲೇಟ್‌ಗಳು ಮನೆಯ ಗೇಟ್, ಹೊರಗೋಡೆಯಲ್ಲಿ ಅಲಂಕರಿಸುತ್ತಿವೆ.

ಬಜೆಟ್ ಸ್ನೇಹಿ ಆಯ್ಕೆ
ನಗರ ಹಳ್ಳಿ ಎನ್ನದೆ ಪರಿಸರ ಮಲೀನ ಗೊಳ್ಳುತ್ತಿದ್ದು ಅಂತಹ ಸಂದರ್ಭಗಳಲ್ಲಿ ಆದಷ್ಟು ಎಲ್ಲ ವಿಷಯಗಳನ್ನು ಪರಿಸರ ಸ್ನೇಹಿಯಾಗಿರುವುದನ್ನು ಆಯ್ಕೆ ಮಾಡಬೇಕು. ಅದಲ್ಲದೆ ಇದು ಬಜೆಟ್ ಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕು. ಫ್ಲೈವುಡ್‌, ತೆಳು ಮತ್ತು ಪ್ಲೈನ್‌ ಮರ ಸೂಕ್ತವಾಗಿದ್ದು, ಪ್ರೀಫಾಮ್ರ್ಡ್ ಸಿರಾಮಿಕ್‌ ಅಕ್ಷರಗಳು ಸಹ ಫ್ಲೇಟ್ಗಳನ್ನು ರಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಚಿಕ್ಕ ಚಿಕ್ಕ ಕಲ್ಲುಗಳು, ಅಮೃತಶಿಲೆ, ಕನ್ನಡಿ ಮತ್ತು ಮೆದು ಕಬ್ಬಿಣವು ಸಾಮಾನ್ಯ ಆಯ್ಕೆಗಳಾಗಿವೆ. ಇದು ವೃತ್ತಾಕಾರ, ಆಯತಾಕಾರದ ಚೌಕ ಹೀಗೆ ಹಲವಾರು ರೀತಿಯ ಫ‌ಲಕಗಳು ಲಭ್ಯವಿದ್ದು , ಹೆಸರಿನ ಪ್ಲೇಟ್ಗಳನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಬಹುದಾಗಿದೆ. ಇದಲ್ಲದೆ ದೇವರು, ಹೂವಿನ ಇತ್ಯಾದಿ ಆಕೃತಿಗಳನ್ನು ಕೆತ್ತಬಹುದಾಗಿದೆ.

••ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.